ನನ್ನ ಪುಟಗಳು

13 ಸೆಪ್ಟೆಂಬರ್ 2019

ಗೋವಿನ ಅಂತರಾಳದ ಮಾತು....


ಸವೆದೆ ನಾ ನನ್ನ ಜೀವನವ ನಿಮಗಾಗಿ
ಅಲೆದೆ ಮನೆ ಮನೆಗಳನು ಬದುಕಿಗಾಗಿ
ನೀ ಎನ್ನ ಕೊರಳಿಗೆ  ಉರುಳು ಬಿಗಿವಾಗ
ನಾ ನಿನ್ನ ಪಾದವ ನೆಕ್ಕಿ ಪ್ರೀತಿ ತೋರಿಸಿದೆ
ನೀನಿತ್ತ ತಂಗಳ ಜೊತೆ ಕಸಕಡ್ಡಿ ತಿನ್ನುತಲಿ
ನನ್ನ ಕಂದನಿಗಿರಿಸಿದ ಅಮೃತವ ನೀನು ಕಸಿದು
ನಿನ್ನ ಮಕ್ಕಳ ಒಡಲ ತುಂಬಿಸುತ ಹಿಗ್ಗಿನಲಿದೆ
ನನ್ನಿಂದ ಸಿಗುವ ಪ್ರತಿಯೊಂದನ್ನು ಬಳಸುತಲಿ
ನಿನ್ನ ಸಹನೆಯನು ಕಳೆದಾಗ ನನಗೆ ಬರೆ ಎಳೆದೆ
ಲಾಭವದು ನನ್ನಿಂದ ಕಡಿಮೆಯಾಗಲು ತೊಡಗೆ
ಕರೆದುಕಟುಕನಿಗೆ ನನ್ನ ಮಾರಲು ಮುಂದಾದೆ
ಹಗ್ಗದಲ್ಲಿ ಬಿಗಿದವನು  ನನ್ನನೆಳೆವಾಗ
ಹಣ ಎಣಿಸುವುದರಲಿ ಮಗ್ನನಾದೆ
ಕೊನೆಯಲ್ಲಿ ನಿನ್ನ ಮನೆ-ಮನ ಬಿಟ್ಟು ಹೋಗಲು ಮನವಿರದೆ ನಡೆದಾಗ 
ಎಲೆ ಧಣಿಯೆ ನನ್ನ ಕಣ್ಣ ನೀರನು ನೀನು ಗುರುತಿಸದಾದೆ!!!

-'ಕಣಿಪುರೇಶ ಪ್ರಿಯ

ಕೃಷ್ಣಪ್ರದೀಪ (ಕಾವ್ಯನಾಮ 'ಕಣಿಪುರೇಶ ಪ್ರಿಯ)
ಶೇಡಿಗುಮ್ಮೆ ಮನೆ,  
ಅಂಚೆ :- ಕುಂಬಳೆ,  
ಕಾಸರಗೋಡು ಜಿಲ್ಲೆ,  
ಕೇರಳ ರಾಜ್ಯ, ಪಿನ್ ಕೋಡು :-671321
         

********************************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ