ನನ್ನ ಪುಟಗಳು

13 ಸೆಪ್ಟೆಂಬರ್ 2019

""ಕಳೆದು ಹೋಯಿತು ಒಂದು ರತ್ನ""

ಕಳೆದು ಹೋಯಿತು
ಒಂದು ರತ್ನ ನಮ್ಮದು
ಆ ರತ್ನ ಇಲ್ಲಿಗೆ
ಮರಳಿ ಬಾರದು||||

ಭುವನೇಶ್ವರಿ ಮಡಿಲಲ್ಲಿ ಜನಿಸಿದ ರತ್ನವು
ನಮಗೆಲ್ಲಾ ಬೇಕಾದ ಬೆಲೆಯುಳ್ಳ ರತ್ನವು
ಬಡವರ ಪಾಲಿಗೆ ಬಂಧುವಾದ ರತ್ನವು
ತ್ರಿವಿಧ ದಾಸೋಹ ನೀಡಿದ ರತ್ನವು||||

ಬಸವನ ಹಾದಿಯಲಿ ಸಾಗಿದ ರತ್ನ
ನಾಡಿನ ಜನರ ಸೇವೆಗೈದ ರತ್ನ
ಜ್ಞಾನದ ಅಮೃತ ಉಣಸಿದ ರತ್ನ
ಬಡ ಜನರ ಉದ್ದಾರ ಮಾಡಿದ ರತ್ನ||||

ಮತ್ತೊಮ್ಮೆ ಹುಟ್ಟಿ ಬರಲಿ ಈ ಪುಣ್ಯ ರತ್ನ
ಸುಕ್ಷೇತ್ರ ತುಮಕೂರು ಸಿದ್ದಗಂಗೆಯ ರತ್ನ
ನಾಡಿನ ಜನಕೆಲ್ಲಾ ಆಶ್ರೀತ ರತ್ನ
ಶಿವಕುಮಾರವೆಂಬ ಈ ಶ್ರೀ ರತ್ನ||||

ಎಂದೆಂದೂ ಕೇಳಬ್ಯಾಡ್ರಿ ಭಾರತರತ್ನ
ಶ್ರೀಗಳಿಗೇ ಇರಲಿಲ್ಲ ಅದರ ಮೇಲೆ ಕಣ್ಣ
ರತ್ನಕ್ಕೆ ಭಾರತರತ್ನ ಏತಕೆ ಅಣ್ಣಾ
ರತ್ನಕ್ಕೆ ರತ್ನವೇ ಸರಿಸಾಟಿಯಣ್ಣಾ||||


- ಅರವಿಂದ ಸಜ್ಜನ 
ಮು/ಪೋ-ನರಸಲಗಿ 
ತಾ/ಬ.ಬಾಗೇವಾಡಿ 
ಜಿ/ವಿಜಯಪುರ 
ಪಿನ್ ಕೋ-586203

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ