ನನ್ನ ಪುಟಗಳು

ಛಂದಸ್ಸು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಛಂದಸ್ಸು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

18 ಮೇ 2021

ಪದ್ಯ-೪ ಕೌರವೇಂದ್ರನ ಕೊಂದೆ ನೀನು(ವ್ಯಾಕರಣಾಂಶಗಳು: ಛಂದಸ್ಸು)

 ಛಂದಸ್ಸು

        ಶುದ್ಧ ಹಾಗೂ ಅರ್ಥಪೂರ್ಣವಾಗಿ ಮಾತನಾಡಲು, ಬರೆಯಲು ವ್ಯಾಕರಣ ಶಾಸ್ತ್ರವು ಹೇಗೆ ಅಗತ್ಯವೋ ಹಾಗೆಯೇ ಪದ್ಯರಚನೆ ಮಾಡಲೂ ಕೆಲವು ನಿಯಮಗಳಿರುತ್ತವೆ. ಇಂತಹ ಪದ್ಯರಚನಾ ನಿಯಮವನ್ನು ಛಂದಸ್ಸು ಎಂದು ಕರೆಯಲಾಗಿದೆ. ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು ನೀಡಿದ್ದಾನೆ. ಹಳಗನ್ನಡದ ಮತ್ತು ನಡುಗನ್ನಡದ ಪದ್ಯಕಾವ್ಯಗಳು ಈ ಶಾಸ್ತ್ರವನ್ನು ಅನುಸರಿಸಿಯೇ ಬರೆಯಲ್ಪಟ್ಟವು.
ಛಂದಶ್ಶಾಸ್ತ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳನ್ನು ಪ್ರಾಸ, ಯತಿ, ಗಣಗಳೆಂದು ಕರೆಯಲಾಗಿದೆ.
        

 ಪ್ರಾಸ : ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸ ವೆಂತಲೂ ಪ್ರತಿ ಪಾದದ ಕೊನೆಯಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸವೆಂತಲೂ ಕರೆಯುತ್ತಾರೆ. ಕೆಲವೊಮ್ಮೆ ಅಪರೂಪಕ್ಕೆ ಸಾಲಿನ ಮಧ್ಯದಲ್ಲಿ ಪ್ರಾಸಾಕ್ಷರಗಳು ಬರುವುದುಂಟು ಅದನ್ನು ಒಳಪ್ರಾಸ ಅಥವಾ ಮಧ್ಯಪ್ರಾಸ ಎಂದು ಕರೆಯಲಾಗಿದೆ. 

  • ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎಂತಲೂ 
  • ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎಂತಲೂ 
  • ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎಂತಲೂ 
  • ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎಂತಲೂ 
  • ಬೇರೆಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ ಎಂತಲೂ 
  • ಒಂದೇಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ ಎಂತಲೂ ಕರೆಯಲ್ಪಡುವ ಆರು ವಿಧದ ಪ್ರಾಸಗಳನ್ನು ಕಾಣಬಹುದು. 

ಯತಿ : ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳವನ್ನು ಯತಿ ಎಂದು ಕರೆಯಲಾಗಿದೆ. ಹಾಗೆಂದ ಮಾತ್ರಕ್ಕೆ ನಮಗೆ ಇಷ್ಟ ಬಂದಲ್ಲಿ ನಿಲ್ಲಿಸುವ ಸ್ವಾತಂತ್ರ್ಯವಿಲ್ಲ. ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲಿಸಬೇಕಾದ ಅನಿವಾರ‍್ಯತೆಯಿದೆ. ಹೀಗೆ_
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದಂತೆ ನಿಲ್ಲಿಸುವ ಸ್ಥಳವನ್ನು ’ಯತಿ’ ಎಂದು ಗುರುತಿಸಲಾಗಿದೆ. ಕೆಲವು ಕವಿಗಳು ಯತಿಯ ಸ್ಥಾನವನ್ನು ಕೆಲವು ಸಂಕೇತಗಳೊಂದಿಗೆ ತಮ್ಮ ಕಾವ್ಯಗಳಲ್ಲಿ ಗುರುತಿಸಿದ್ದು ಕಂಡುಬರುತ್ತದೆ. ಕನ್ನಡ ಕಾವ್ಯಗಳಲ್ಲಿ ಯತಿಯ ಬಳಕೆ ಅತ್ಯಂತ ಕಡಿಮೆಯಾಗಿದ್ದು ಸಂಸ್ಕೃತ ಕಾವ್ಯಗಳಲ್ಲಿ ಬಹಳ? ಇರುವುದನ್ನು ಗಮನಿಸಬಹುದು.
 

ಗಣ : ’ ಗಣ’ ಎಂದರೆ ’ಗುಂಪು’ ಅಥವಾ ’ಸಮೂಹ’ ಎಂದರ್ಥ. ಛಂದಶ್ಶಾಸ್ತ್ರದಲ್ಲಿ ’ಗಣ’ ಎಂದರೆ ಪದ್ಯದ ಪ್ರತಿ ಸಾಲಿನಲ್ಲೂ ವಿಭಾಗಿಸಲ್ಪಡುವ ಮಾತ್ರೆ ಅಥವಾ ಅಕ್ಷರ ಅಥವಾ ಅಂಶಗಳ ಗುಂಪು ಎಂದರ್ಥ. 

ಗಣಗಳಲ್ಲಿ ಮೂರು ವಿಧ: ೧) ಅಂಶಗಣ, ೨) ಮಾತ್ರಾಗಣ, ೩) ಅಕ್ಷರಗಣ

ಅಂಶಗಣ: ಮಾತ್ರೆಗಳ ಲೆಕ್ಕಾಚಾರದೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಮಾತ್ರಾಗಣ ಎಂತಲೂ ಅಕ್ಷರಗಳ ಲೆಕ್ಕಾಚಾರಗಳೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಅಕ್ಷರಗಣ ಎಂತಲೂ ಅಂಶಗಳ ಆಧಾರದಿಂದ ವಿಭಾಗಿಸಲ್ಪಡುವ ಗಣವನ್ನು ಅಂಶಗಣ ಎಂತಲೂ ಕರೆಯಲಾಗಿದೆ.
ಅಂಶಗಣದಲ್ಲಿ ಬ್ರಹ್ಮ, ವಿಷ್ಣು ಮತ್ತು ರುದ್ರ ಎಂಬ ಮೂರು ವಿಧದ ಗಣಗಳಿವೆ. (ಇವುಗಳ ಬಗ್ಗೆ ಹೆಚ್ಚಿನ ವಿವರವನ್ನು ಮುಂದಿನ ತರಗತಿಗಳಲ್ಲಿ ತಿಳಿದುಕೊಳ್ಳಬಹುದು.)
 

ಮಾತ್ರಾಗಣ : ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ’ಮಾತ್ರೆ’ ಎಂಬ ಮಾನದಿಂದ ಅಳೆಯಲಾಗುವುದು. ಈ ಮಾತ್ರೆಗಳ ಆಧಾರದಿಂದ ’ಗಣ’ ವಿಭಾಗ ಮಾಡಿದರೆ ಅದನ್ನು ’ಮಾತ್ರಾಗಣ’ ಎಂದು ಕರೆಯುತ್ತಾರೆ. ಹೀಗೆ ಗಣಗಳಾಗಿ ವಿಂಗಡಿಸುವಾಗ ಮೂರು, ನಾಲ್ಕು ಅಥವಾ ಐದು ಮಾತ್ರೆಗಳ ಗಣಗಳನ್ನು ಮಾಡಲಾಗುವುದು, ಪದ್ಯದ ಪ್ರತಿ ಸಾಲಿನಲ್ಲಿರುವ ಎಲ್ಲ ಅಕ್ಷರಗಳ ಮಾತ್ರೆಗಳನ್ನು ನಿಶ್ಶೇಷವಾಗಿ ಗಣಗಳನ್ನಾಗಿ ವಿಂಗಡಿಸಬೇಕು.
ಅಂದರೆ ಯಾವ ಸಾಲಿನಲ್ಲೂ ಗಣ ವಿಂಗಡಣೆ ಆದ ಬಳಿಕ ಮಾತ್ರೆ ಉಳಿಯಬಾರದು. (ಷಟ್ಪದಿಯ ಮೂರು ಮತ್ತು ಆರನೆಯ ಪಾದಗಳ ಕೊನೆಯ ಅಕ್ಷರವನ್ನು ಬಿಟ್ಟು).

ಅಕ್ಷರಗಣ : ಪ್ರತಿಗಣವನ್ನು ಮೂರು ಮೂರು ಅಕ್ಷರಗಳಾಗಿ ವಿಂಗಡಿಸುವುದನ್ನು ಅಕ್ಷರಗಣ ಎನ್ನಲಾಗುವುದು.

ಮಾತ್ರೆ, ಗುರು, ಲಘುಗಳು
ಮಾತ್ರೆ:- ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾ ಕಾಲಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವುಲಘುವನ್ನು ‘U' ಹೀಗೆ ಗುರುತಿಸುವುದು ವಾಡಿಕೆ.
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು:-
        ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವು. ಲಘುಗಳಾಗಿರುವ ಅಕ್ಷರಗಳ ಮೇಲೆ ‘U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.
ಉದಾಹರಣೆಗೆ:-
U U U U U U

U U U U U U
ಕಿ ಕು

U U U U U U
ಕೆ ಕೊ ಸು ಸೊ ಸೃ ಕೃ
ಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ    ಹೀಗೆ ಗುರುತು ಮಾಡಿದೆ.

ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವುಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.

ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು.

ಉದಾಹರಣೆಗೆ:
(i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ-

 

(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು-

ಕಾಕೀಚೇಚೈಸೈನಾರೋಸೌ
ಕ್ಕಾಸ್ನೇತ್ರೇಪ್ರೈಕ್ರೋಧ್ಯಾ ಲೋ

 

(iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು-

ಅಂ ಅಃ ತಂ ತಃ ಸಂ ಸಃ ಕಂ




 

(iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-

—U —U —U —UU
ಕಲ್ಲು ಮಣ್ಣು ನಿಲ್ಲು ಮೆತ್ತಗೆ



(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)

(v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
ಕಲ್ ನಿಲ್ ಪಣ್ ತಿನ್ ಮೇಣ್ ಕಾಲ್ ಮೇಲ್ ತಾಯ್
ಮೇಲೆ ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುಗಳಾಗಿರುವುದನ್ನು ಗಮನಿಸಿರಿ.  ‘ಮೇಣ್‘ ಎಂಬಲ್ಲಿ ‘ಮೇ‘ ಎಂಬುದೂ, ‘ಕಾಲ್‘ ಎಂಬಲ್ಲಿ ‘ಕಾ‘ ಎಂಬುದೂ, ‘ಮೇಲ್‘ ಎಂಬಲ್ಲಿ ‘ಮೇ‘ ಎಂಬುದೂ, ‘ತಾಯ್‘ ಎಂಬಲ್ಲಿ ‘ತಾ‘ ಎಂಬುದೂ ದೀರ್ಘಾಕ್ಷರಗಳಾಗಿದ್ದರಿಂದ ಸಹಜವಾಗಿ ಅವು ಗುರುಗಳೇ ಆಗಿದ್ದರೂ, ವ್ಯಂಜನಾಕ್ಷರಗಳು ಹಿಂದಿರುಗುವುದರಿಂದಲೂ ಅವು ಗುರುಗಳು.  ಹೀಗೆ ಅವು ಗುರುಗಳಾಗುವುದಕ್ಕೆ ಎರಡು ಕಾರಣಗಳಿದ್ದರೂ ಒಂದೇ ಗುರು.  ಮೇಲಿನ ಉದಾಹರಣೆಗಳಲ್ಲಿ ವ್ಯಂಜನಾಕ್ಷರಗಳಾದ ಲ್, ಣ್, ಯ್ ಮೊದಲಾದವು ಲಘುಗಳೂ ಅಲ್ಲ, ಗುರುಗಳೂ ಅಲ್ಲ.  ಅವಕ್ಕೆ ಯಾವ ಚಿಹ್ನೆಯನ್ನು ಹಾಕಬಾರದು.  ಒಂದು ಅಕ್ಷರ ಗುರುವಾಗಲು ಎರಡು ಮೂರು ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು.
ಉದಾಹರಣೆಗೆ:-
—U —U
ಶಾಸ್ತ್ರ ಕಾಂಕ್ಷೆ

     ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ.  ಅದು ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು.  ಕಾ ಎಂಬುದು ಮೂರು ಕಾರಣ ಹೊಂದಿದೆ.  ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು; ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.
(vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕ-ಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.

ಷಟ್ಟದಿ
ಆರು ಜಾತಿಯ ಷಟ್ಪದಿಗಳ ಲಕ್ಷಣಗಳನ್ನು ಕ್ರಮವಾಗಿ ತಿಳಿಯೋಣ.  (ಷಟ್=ಆರು, ಪದಿ=ಪಾದಗಳುಳ್ಳದ್ದು ಎಂದು ಅರ್ಥ).

 ಷಟ್ಪದಿಗಳ ಲಕ್ಷಣಗಳು
ಆರು ಪಾದಗಳುಳ್ಳ ಪದ್ಯವನ್ನು ‘ಷಟ್ಪದಿ’ ಎಂದು ಕರೆಯುತ್ತಾರೆ. ಇದರ ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳು ಮಾತ್ರಾ ಸಂಖ್ಯೆಯಲ್ಲಿ ಒಂದಕ್ಕೊಂದು ಸಮಾನವಾಗಿರುತ್ತವೆ. ಮೂರು ಮತ್ತು ಆರನೆಯ ಪಾದಗಳು ಪರಸ್ಪರ ಸಮವಾಗಿರುತ್ತವೆ. ಒಂದನೆಯ ಪಾದದಲ್ಲಿರುವ ಮಾತ್ರೆಗಳ ಒಂದೂವರೆಯಷ್ಟು ಮತ್ತು ಒಂದು ಗುರು ಮೂರನೆಯ ಮತ್ತು ಆರನೆಯ ಪಾದಗಳಲ್ಲಿರುತ್ತವೆ. ದ್ವಿತೀಯಾಕ್ಷರವು ಪ್ರಾಸಾಕ್ಷರವಾಗಿರುತ್ತದೆ. ಷಟ್ಪದಿಗಳಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ವಿಧಗಳಿರುತ್ತವೆ. 

() ಶರಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ

ಮೇಲಿನ ಪದ್ಯವು ಆರು ಸಾಲುಗಳಿಂದ ಕೂಡಿದೆ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿವೆ ಮತ್ತು ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿವೆಮೂರು ಮತ್ತು ಆರನೆಯ ಸಾಲುಗಳ ಕೊನೆಯಕ್ಷರ ಲಘುವಾಗಿದ್ದರೂ ಗುರುವೆಂದೇ ತಿಳಿಯಬೇಕು ಜಾತಿಯ ಪದ್ಯದಲ್ಲಿ ಮಧ್ಯಗುರುವುಳ್ಳ “U _ U” ರೀತಿಯ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣದಿಂದ ಕೂಡಿದ ಪದ್ಯಗಳು ಶರಷಟ್ಪದಿಗಳೆಂದು ತಿಳಿಯಬೇಕು.

() ಕುಸುಮಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಎರಡು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಮೂರು ಗಣಗಳಿಂದಲೂ ಮೇಲೆ ಒಂದು ಗುರುವಿನಿಂದಲೂ ಕೂಡಿವೆ ಮತ್ತು ನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು ಜಾತಿಯ ಪದ್ಯದಲ್ಲಿ “U_UU ” ಹೀಗಿರುವ ಮತ್ತು ” U_ _” ಹೀಗಿರುವ ಗಣವು ಬರಕೂಡದು ಲಕ್ಷಣಗಳಿಂದ ಕೂಡಿದ ಪದ್ಯಗಳೇ ಕುಸುಮ ಷಟ್ಪದಿಗಳೆನಿಸುವುವು.

() ಭೋಗಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಸಾಲುಗಳಿಂದ ಕೂಡಿದ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮಾತ್ರೆಗಳ ಆರಾರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುವುದು ಜಾತಿಯ ಛಂದಸ್ಸಿನ ಪದ್ಯದಲ್ಲಿ ” U_ ” ಹೀಗೆ ಇರುವ ಮಾತ್ರಾಗಣ ಬರಕೂಡದುಇಂಥ ಲಕ್ಷಣಗಳಿಂದ ಕೂಡಿದ ಪದ್ಯವೇ ಭೋಗಷಟ್ಪದಿಎನಿಸುವುದು.

() ಭಾಮಿನೀ ಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುತ್ತವೆ.  (ಮೊದಲು ಮೂರು ಮಾತ್ರೆಯ ಗಣ ಅನಂತರ ಮಾತ್ರೆಯ ಗಣ ಕ್ರಮದಲ್ಲಿ ಒಟ್ಟು ನಾಲ್ಕು ಗಣಗಳಿರುತ್ತವೆ.)  ೩ನೆಯ ೬ನೆಯ ಸಾಲುಗಳು ಒಂದು ಸಮನಾಗಿದ್ದು, ಮೂರು ಮತ್ತು ನಾಲ್ಕು ಮಾತ್ರೆಗಳ ಆರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆ ಜಾತಿಯ ಪದ್ಯದಲ್ಲಿ “U _ U” ರೀತಿಯ ಮಧ್ಯ ಗುರುವುಳ್ಳ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣವುಳ್ಳವು ಭಾಮಿನೀ ಷಟ್ಪದಿಗಳೆನಿಸುವುವು.

() ಪರಿವರ್ಧಿನೀಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು, ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ ಮತ್ತು ೬ನೆಯ ಸಾಲುಗಳು ಒಂದು ಸಮನಾಗಿದ್ದು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ ಪದ್ಯದಲ್ಲಿ ” U _ U ” ರೀತಿಯಿರುವ ಗಣವು ಎಲ್ಲಿಯೂ ಬರಕೂಡದುಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆನಿಸುವುದು ಲಕ್ಷಣದಿಂದ ಕೂಡಿದ ಪದ್ಯವು ಪರಿವರ್ಧಿನೀಷಟ್ಪದಿಯೆನಿಸುವುದು.
() ವಾರ್ಧಕಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರುಪಾದಗಳುಳ್ಳ ಪದ್ಯ, , , ನೆಯ ಪಾದಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿದೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಆರುಗಣ ಮತ್ತು ಮೇಲೊಂದು ಗುರುವಿನಿಂದ ಕೂಡಿರುತ್ತವೆ, ನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆಇಂಥ ಲಕ್ಷಣಗಳುಳ್ಳ ಪದ್ಯಗಳೇ ವಾರ್ಧಕಷಟ್ಪದಿಗಳೆನಿಸುವುವು.

 

************

 *************

 

24 ನವೆಂಬರ್ 2013

ಛಂದಸ್ಸು

ರಗಳೆ

ರಗಳೆ
ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಶಬ್ದದ ತದ್ಭವ ಪದ.  ಕನ್ನಡದಲ್ಲಿ ಸಾಮಾನ್ಯವಾಗಿ ಉತ್ಸಾಹರಗಳೆ, ಮಂದಾನಿಲರಗಳೆ, ಲಲಿತರಗಳೆ ಎಂದು ಮೂರು ವಿಧವಾದ ರಗಳೆಗಳು ಪ್ರಸಿದ್ಧವಾಗಿವೆ.  ರಗಳೆಯ ಪದ್ಯಗಳಲ್ಲಿ ಇದುವರೆಗೆ ಹೇಳಿದ ನಾಲ್ಕು ಅಥವಾ ಆರು ಸಾಲುಗಳ ಪದ್ಯಗಳಂತೆ, ಇಷ್ಟೇ ಸಾಲುಗಳಿರಬೇಕೆಂಬ ನಿಯಮವೇ ಇಲ್ಲ.  ಎಷ್ಟು ಬೇಕಾದರೂ ಸಾಲುಗಳು ಹಾಗೆಯೇ ಬೆಳೆಯುತ್ತ ಹೋಗಬಹುದು.  ಆದರೆ ಎಲ್ಲ ಸಾಲುಗಳೂ ಸಮಾನವಾದ ಮಾತ್ರಾಗಣಗಳಿಂದ ಕೂಡಿರುತ್ತವೆ.  ಮತ್ತು ಎರಡೆರಡು ಸಾಲುಗಳಲ್ಲಿ ಪ್ರಾಸದ ನಿಯಮವಿರು ತ್ತದೆ.  ಅಂತ್ಯಪ್ರಾಸವೂ ಇರುವುದುಂಟು.

() ಉತ್ಸಾಹರಗಳೆಯ ಲಕ್ಷಣ
(i)
ನಾಲ್ಕುಸಾಲುಗಳುಳ್ಳ ಈ ಉತ್ಸಾಹರಗಳೆಯಲ್ಲಿ ಪ್ರತಿಯೊಂದು ಸಾಲಿನಲ್ಲೂ ಮೂರು ಮಾತ್ರೆಯ ನಾಲ್ಕು ಗಣಗಳುಂಟು. ಮೊದಲಿನ ಎರಡು ಸಾಲುಗಳಲ್ಲಿ ಆದಿಪ್ರಾಸವೂ ಇದೆ, ಅಂತ್ಯಪ್ರಾಸವೂ ಇದೆ. ಇನ್ನೆರಡು ಸಾಲುಗಳಲ್ಲಿ ಆದಿಪ್ರಾಸವಿಲ್ಲ, ಅಂತ್ಯಪ್ರಾಸವಿದೆ. ಕೆಲವು ಕಡೆ ಹೀಗೂ ಇರುವುದುಂಟು. ಆದರೆ ಆದಿಪ್ರಾಸವಿರುವುದೇ ಹೆಚ್ಚು. ಹೀಗೆ-

(೧೧೪) ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ಸಾಹರಗಳೆಯೆನಿಸುವುದು.

(ii) ಈ ಉತ್ಸಾಹರಗಳೆಯಲ್ಲಿ ಇನ್ನೂ ಒಂದು ವಿಧವುಂಟು.  ಕೆಳಗಿನ ಪದ್ಯವನ್ನು ನೋಡಿರಿ:-
ಮೇಲಿನ ಎರಡನೆಯ ರೀತಿಯ ಉತ್ಸಾಹರಗಳೆಯಲ್ಲಿ ಎಲ್ಲ ಸಾಲುಗಳೂ ಮೂರು ಮಾತ್ರೆಯ ಮೂರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿವೆ.  ಮೊದಲೆರಡು ಸಾಲುಗಳಲ್ಲಿ ಆದಿಪ್ರಾಸ ಅಂತ್ಯಪ್ರಾಸಗಳೆರಡೂ ಇವೆ.  ಕೊನೆಯ ಎರಡು ಸಾಲುಗಳಲ್ಲಿ ಅಂತ್ಯಪ್ರಾಸ ಮಾತ್ರ ಇದೆ.
ಹೀಗೆ ಮೂರು ಮಾತ್ರೆಯ ಮೂರುಗಣ ಮೇಲೊಂದು ಗುರುವಿನಿಂದ ಕೂಡಿದ ವ್ಯವಸ್ಥೆಯಿಂದಲೂ ಉತ್ಸಾಹರಗಳೆಯ ಛಂದಸ್ಸಿನ ಪದ್ಯಗಳಿರುತ್ತವೆಂದು ತಿಳಿಯಬೇಕು.

() ಮಂದಾನಿಲರಗಳೆಯ ಲಕ್ಷಣ
ಮೇಲಿನ ಮಂದಾನಿಲರಗಳೆಯ ಪದ್ಯದಲ್ಲಿ ಪ್ರತಿಯೊಂದು ಪಾದದಲ್ಲೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿವೆ.  ಮೊದಲೆರಡು ಸಾಲುಗಳಲ್ಲಿ ‘ಡ್’ ಪ್ರಾಸಾಕ್ಷರವೂ, ಉಳಿದೆರಡು ಸಾಲುಗಳಲ್ಲಿ ‘ಖ್’ ಪ್ರಾಸಾಕ್ಷರವೂ ಇದೆ.  ಅಂತ್ಯ ಪ್ರಾಸವೂ ಎರಡೆರಡು ಸಾಲುಗಳಲ್ಲಿ ಬೇರೆ ಬೇರೆ ಇದೆ.  ಹೀಗೆ-

ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿಪಾದದಲ್ಲೂ ಬಂದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರುಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.

(ii) ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವುಂಟು.  ಈ ಕೆಳಗಣ ಪದ್ಯ ನೋಡಿರಿ.
ಮೇಲೆ ವಿವರಿಸಿದಂತೆ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ನಾಲ್ಕು ಗಣ (ಒಟ್ಟು ೧೬ ಮಾತ್ರೆಗಳು) ಗಳ ಲೆಕ್ಕದಿಂದಲೂ ಮಂದಾನಿಲರಗಳೆಯ ಪದ್ಯಗಳಿರುವುದೂ ಉಂಟು.  ಮೊದಲೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವಿಲ್ಲ.  ಆದರೆ ಬಿರಯಿಯಿಂ ಸುರಯಿಯಿಂ ಎಂದು ಅಂತ್ಯಪ್ರಾಸವಿದೆ.  ಕೊನೆಯೆರಡು ಸಾಲುಗಳಲ್ಲಿ ಆದಿಪ್ರಾಸವೂ ಅಂತ್ಯಪ್ರಾಸವೂ ಇದೆ.  ಹೀಗೆ-

ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸವಾಗಲಿ ಅಂತ್ಯ ಪ್ರಾಸವಾಗಲಿ, ಅಥವಾ ಎರಡು ಕಡೆಗೂ ಪ್ರಾಸ ನಿಯಮವಿರುವ ಪದ್ಯ ಜಾತಿಯೂ ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ.

() ಲಲಿತರಗಳೆಯ ಲಕ್ಷಣ
ಮೇಲಿನ ಈ ಲಲಿತರಗಳೆಯ ಪದ್ಯದ ಪ್ರತಿಯೊಂದು ಸಾಲಿನಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿವೆ.  ಎರಡೆರಡು ಸಾಲುಗಳಲ್ಲಿ ಆದಿಪ್ರಾಸನಿಯಮವಿದೆ.  ಅಂತ್ಯಪ್ರಾಸವೂ ಎರಡೆರಡು ಸಾಲುಗಳಿಗೆ ಬೇರೆ ಬೇರೆಯಾಗಿಯೇ ಇದೆ.
ರೀತಿಯಲ್ಲಿ ಪಾದ (ಸಾಲು)ಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲದೆ, ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳನ್ನಿಟ್ಟು ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವನ್ನು ಮುಖ್ಯವಾಗಿ ಆದಿಯಲ್ಲಿ ಪಾಲಿಸಿಕೊಂಡು ಬರೆಯಲ್ಪಟ್ಟ ಪದ್ಯಗಳುಲಲಿತರಗಳೆ’ಗಳೆನಿಸುವುವುಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದುಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದುಇಂಥ ಉದಾಹರಣೆಗಳು ತೀರ ಕಡಿಮೆ.

ಕಂದಪದ್ಯ

ಕಂದ ಪದ್ಯ
ಮಾತ್ರಾಗಣಗಳು ಎಂದರೆ ಮೂರು, ನಾಲ್ಕು, ಐದು ಮಾತ್ರೆಗಳು ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು ಮಾತ್ರಾಗಣಗಳೆನಿಸುವುದೆಂದು ಈ ಹಿಂದೆ ವಿವರಿಸಿದೆ.
ಪದ್ಯದಲ್ಲಿನ ಸಾಲುಗಳನ್ನು ಗುರುಲಘುಗಳಿಂದ ಗುರುತಿಸಿದ ಮೇಲೆ ಗುರುವಿಗೆ ಎರಡು ಮಾತ್ರೆ, ಮತ್ತು ಲಘುವಿಗೆ ಒಂದು ಮಾತ್ರೆಯ ಲೆಕ್ಕಹಾಕಿ ಮೂರು, ನಾಲ್ಕು, ಐದು ಮಾತ್ರೆಗಳ ಗುಂಪುಗಳನ್ನು ಒಂದೊಂದು ಗಣವಾಗಿ ವಿಂಗಡಿಸುವ ಗಣಗಳೆಲ್ಲ ಮಾತ್ರಾಗಣಗಳೆನಿಸುವುವು.  ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತುಮಾಡುವುದಕ್ಕೆ ಪ್ರಸ್ತಾರ ಎಂದು ಹೆಸರು.
ಮಾತ್ರಾಗಣಗಳಿಂದ ಕೂಡಿದ ಪದ್ಯಜಾತಿಗಳೆಂದರೆ-ಕಂದ, ಷಟ್ಪದಿಗಳು, ರಗಳೆ ಮೊದಲಾದವುಗಳು.  ಈಗ ಒಂದೊಂದಾಗಿ ಮಾತ್ರಾಗಣದ ಪದ್ಯಗಳ ಲಕ್ಷಣವನ್ನು ತಿಳಿಯಿರಿ.

() ಕಂದ ಪದ್ಯದ ಲಕ್ಷಣ
ಕಂದ ||

ಮೇಲಿನ ಈ ಕಂದ ಪದ್ಯಕ್ಕೆ ಪ್ರಸ್ತಾರ ಹಾಕಿ ಗಣಗಳನ್ನು (ಮಾತ್ರಾಗಣಗಳನ್ನು) ವಿಂಗಡಿಸಿದೆ.  ಈ ಪದ್ಯದಲ್ಲಿ ಮೂರು ಮಾತ್ರೆಯ ಅಥವಾ ಐದು ಮಾತ್ರೆಯಗಣಗಳನ್ನು ವಿಂಗಡಿಸಲು ಬರುವಂತಿಲ್ಲ.  ಇದರಲ್ಲಿ ನಾಲ್ಕು ನಾಲ್ಕು ಮಾತ್ರೆಯ ಗಣಗಳನ್ನೇ ವಿಂಗಡಿಸಬೇಕು.

(೧೦೭) ಲಕ್ಷಣ:- ನಾಲ್ಕು ಸಾಲುಗಳಿಂದ ಕೂಡಿದ ಪದ್ಯ; ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿವೆಎರಡನೆಯ, ನಾಲ್ಕನೆಯ ಸಾಲುಗಳು ಸಮನಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿವೆ.
ಪೂರ್ವಾರ್ಧದಲ್ಲಿ ಎಂಟು ಗಣಗಳೂ, ಉತ್ತರಾರ್ಧದಲ್ಲಿ ಎಂಟು ಗಣಗಳೂ ಇವೆ. ಪೂರ್ವಾರ್ಧ ಉತ್ತರಾರ್ಧಗಳ ವಿಷಮ ಸ್ಥಾನಗಳಲ್ಲಿ ಎಂದರೆ ೧, , , ೭ನೆಯ ಗಣಗಳ ಸ್ಥಾನದಲ್ಲಿ “U _ U” ಈ ರೀತಿಯ ಮಧ್ಯ ಗುರುವುಳ್ಳ ಗಣವು ಬರಕೂಡದು. ಪೂರ್ವಾರ್ಧ ಉತ್ತರಾರ್ಧಗಳ ೬ನೆಯ ಗಣವು ಮಾತ್ರ ನಾಲ್ಕು ಮಾತ್ರೆಗಳ UUUU ಹೀಗಿರುವ ಗಣವಾಗಲಿ, ಮಧ್ಯ ಗುರುವುಳ್ಳ U _ U ಹೀಗಿರುವ ಗಣವಾಗಲಿ ಬರಬೇಕು. ಪೂರ್ವಾರ್ಧ ಉತ್ತರಾರ್ಧಗಳಲ್ಲಿ ಕೊನೆಗೆ ಗುರು ಬರುವ “_ _” ಇಂಥ ಗಣವಾಗಲಿ, ” U _ U “ ಇಂಥ ಗಣವಾಗಲಿ ಬರಬೇಕು.
ಮೇಲಿನ ಕಂದ ಪದ್ಯದಲ್ಲಿ ಮೇಲೆ ಹೇಳಿರುವ ಲಕ್ಷಣಗಳೆಲ್ಲ ಬಂದಿರುವುದನ್ನು ಗಮನಿಸಿರಿ.

ಛಂದಸ್ಸಿನ ಪ್ರಕಾರಗಳು

ಮಾತ್ರೆ-ಲಘು-ಗುರು

ಮಾತ್ರೆ, ಗುರು, ಲಘುಗಳು
ಮಾತ್ರೆ:- ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾ ಕಾಲಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವುಲಘುವನ್ನು ‘U' ಹೀಗೆ ಗುರುತಿಸುವುದು ವಾಡಿಕೆ.
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು:-
        ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವು. ಲಘುಗಳಾಗಿರುವ ಅಕ್ಷರಗಳ ಮೇಲೆ ‘U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.
ಉದಾಹರಣೆಗೆ:-
U U U U U U
U U U U U U
ಕಿ ಕು
U U U U U U
ಕೆ ಕೊ ಸು ಸೊ ಸೃ ಕೃ
ಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ    ಹೀಗೆ ಗುರುತು ಮಾಡಿದೆ.

ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವುಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.

ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು.

ಉದಾಹರಣೆಗೆ:
(i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ-

(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು-
ಕಾಕೀಚೇಚೈಸೈನಾರೋಸೌ
ಕ್ಕಾಸ್ನೇತ್ರೇಪ್ರೈಕ್ರೋಧ್ಯಾ ಲೋ
iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು-
ಅಂ ಅಃ ತಂ ತಃ ಸಂ ಸಃ ಕಂ



(iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
—U —U —U —UU
ಕಲ್ಲು ಮಣ್ಣು ನಿಲ್ಲು ಮೆತ್ತಗೆ



(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)

(v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
ಕಲ್ ನಿಲ್ ಪಣ್ ತಿನ್ ಮೇಣ್ ಕಾಲ್ ಮೇಲ್ ತಾಯ್
ಮೇಲೆ ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುಗಳಾಗಿರುವುದನ್ನು ಗಮನಿಸಿರಿ.  ‘ಮೇಣ್‘ ಎಂಬಲ್ಲಿ ‘ಮೇ‘ ಎಂಬುದೂ, ‘ಕಾಲ್‘ ಎಂಬಲ್ಲಿ ‘ಕಾ‘ ಎಂಬುದೂ, ‘ಮೇಲ್‘ ಎಂಬಲ್ಲಿ ‘ಮೇ‘ ಎಂಬುದೂ, ‘ತಾಯ್‘ ಎಂಬಲ್ಲಿ ‘ತಾ‘ ಎಂಬುದೂ ದೀರ್ಘಾಕ್ಷರಗಳಾಗಿದ್ದರಿಂದ ಸಹಜವಾಗಿ ಅವು ಗುರುಗಳೇ ಆಗಿದ್ದರೂ, ವ್ಯಂಜನಾಕ್ಷರಗಳು ಹಿಂದಿರುಗುವುದರಿಂದಲೂ ಅವು ಗುರುಗಳು.  ಹೀಗೆ ಅವು ಗುರುಗಳಾಗುವುದಕ್ಕೆ ಎರಡು ಕಾರಣಗಳಿದ್ದರೂ ಒಂದೇ ಗುರು.  ಮೇಲಿನ ಉದಾಹರಣೆಗಳಲ್ಲಿ ವ್ಯಂಜನಾಕ್ಷರಗಳಾದ ಲ್, ಣ್, ಯ್ ಮೊದಲಾದವು ಲಘುಗಳೂ ಅಲ್ಲ, ಗುರುಗಳೂ ಅಲ್ಲ.  ಅವಕ್ಕೆ ಯಾವ ಚಿಹ್ನೆಯನ್ನು ಹಾಕಬಾರದು.  ಒಂದು ಅಕ್ಷರ ಗುರುವಾಗಲು ಎರಡು ಮೂರು ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು.
ಉದಾಹರಣೆಗೆ:-
—U —U
ಶಾಸ್ತ್ರ ಕಾಂಕ್ಷೆ
ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ.  ಅದು ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು.  ಕಾ ಎಂಬುದು ಮೂರು ಕಾರಣ ಹೊಂದಿದೆ.  ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು; ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.
(vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕ-ಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.

[1] (i) ಗುಬ್ಬಿಯ ಚಿಕ್ ಎನ್ನುವ ಕಾಲವನ್ನು ೧ ಮಾತ್ರಾಕಾಲವೆಂದೂ ಕಾಗೆಯು ಕಾ ಕಾ – ಎಂದು ಕೂಗುವ ಕಾಲವನ್ನು ೨ ಮಾತ್ರಾಕಾಲವೆಂದೂ, ನವಿಲು ಒಂದು ಸಲ ಕೂಗುವ ಕಾಲವನ್ನು ೩ ಮಾತ್ರಾಕಾಲವೆಂದು ಮುಂಗುಲಿಯು ಧ್ವನಿಮಾಡುವ ಕಾಲವನ್ನು ಳಿ ಮಾತ್ರಾಕಾಲವೆಂದೂ ಸ್ಥೂಲವಾಗಿ ತಿಳಿಯುತ್ತಾರೆ ಅಥವಾ ಕೋಳಿಯು ಪ್ರಾತಃಕಾಲದಲ್ಲಿ ಕೂಗುವ-
    (ii) ಕೂ ಕೂ ಕೂ –ಎಂಬಲ್ಲಿ ಮೊದಲನೆಯ ಕೂಗು ಏಕಮಾತ್ರಾಕಾಲ, ಎರಡನೆಯದು ದ್ವಿಮಾತ್ರಾಕಾಲ, ಮೂರನೆಯದು ತ್ರಿಮಾತ್ರಾಕಾಲ (ಪ್ಲುತ) ಎಂದು ಸಾಮಾನ್ಯವಾಗಿ ಗ್ರಹಿಸುತ್ತಾರೆ.
[2] ಲಘುವಿನ ಚಿಹ್ನೆಯನ್ನು “” ಹೀಗೂ, ಗುರುವಿನ ಚಿಹ್ನೆಯನ್ನು “” ಹೀಗೂ ಪ್ರಾಚೀನಕಾಲದಿಂದಲೂ ಗುರುತಿಸುವ ಪದ್ಧತಿಯಿತ್ತು.  ಇತ್ತೀಚೆಗೆ ಅದು ಸ್ವಲ್ಪ ವ್ಯತ್ಯಾಸವಾಗಿ ಗುರುವನ್ನು “” ಹೀಗೂ ಲಘುವನ್ನು “” ಹೀಗೂ ಗುರುತಿಸುವುದು ವಾಡಿಕೆಯಲ್ಲಿ ಬಂದಿದೆ.


**********

ಛಂದಸ್ಸು-ಪೀಠಿಕೆ

ಛಂದಸ್ಸು-ಮಾತ್ರೆಗಳು ಮತ್ತು ಗಣಗಳು
     ಪದ್ಯಗಳನ್ನು ಹೇಗೆ ರಚಿಸಬೇಕು? ಅಲ್ಲಿ ಯಾವ ನಿಯಮಗಳನ್ನು ಕವಿಗಳು ಅನುಸರಿಸುತ್ತಾರೆ? ಎಂಬ ವಿಷಯವನ್ನು ತಿಳಿಯಬೇಕಾದರೆ ಅವಶ್ಯವಾಗಿ ಛಂದಶ್ಯಾಸ್ತ್ರದ ಪರಿಚಯ ಮಾಡಿಕೊಳ್ಳಬೇಕಾಗುವುದು.  ನಮ್ಮ ವಿದ್ಯಾರ್ಥಿಗಳು ತಾವು ಓದುತ್ತಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅದೆಷ್ಟೋ ಬಗೆಯ ಪದ್ಯಗಳನ್ನು ಓದುತ್ತಾರೆ.  ಆ ಎಲ್ಲ ಪದ್ಯಗಳನ್ನು ರಚನೆ ಮಾಡಿದ ಕವಿಗಳು ಹಲಕೆಲವು ನಿಯಮಗಳನ್ನನುಸರಿಸಿ ಆ ಪದ್ಯಗಳನ್ನು ರಚಿಸಿರುತ್ತಾರೆ.  ಯಾವ ನಿಯಮವನ್ನು ಅನುಸರಿಸಿ ಈ ಪದ್ಯಗಳು ರಚಿತವಾಗಿವೆ, ಎಂಬುದನ್ನು ತಿಳಿಯದೆ ಅವುಗಳನ್ನು ಓದಿದರೆ ಸಾಕಾದಷ್ಟು ಪ್ರಯೋಜನವಾಗಲಿಕ್ಕಿಲ್ಲ.  ಆದುದರಿಂದ ನಮ್ಮ ಮಕ್ಕಳು ಛಂದಶ್ಯಾಸ್ತ್ರದ ಸ್ಥೂಲವಾದ ಪರಿಚಯ ಮಾಡಿಕೊಳ್ಳಬೇಕಾ ಗುವುದು.  ಈ ದೃಷ್ಟಿಯಿಂದ ಮುಂದೆ ಸಂಗ್ರಹವಾಗಿ ಈ ವಿಷಯವನ್ನು ತಿಳಿಸಲಾಗಿದೆ.
     ವ್ಯಾಕರಣ ಶಾಸ್ತ್ರವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದ ಶಾಸ್ತ್ರವಾದರೆ, ಛಂದಸ್ಸು ಕೇವಲ ಪದ್ಯಗಳಿಗೆ ಮಾತ್ರ ಸಂಬಂಧಿಸಿದ ಶಾಸ್ತ್ರವಾಗಿದೆ.  ನಾವು ಓದುವ ಪದ್ಯಗಳು ನಾನಾ ತರವಾಗಿವೆ.  ಕೆಲವು ನಾಲ್ಕು ಸಾಲಿನವು, ಕೆಲವು ಆರು ಸಾಲಿನವು, ಕೆಲವು ಮೂರು ಸಾಲಿನವು, ಕೆಲವು ಸಾಲುಗಳು ಉದ್ದ, ಕೆಲವು ಚಿಕ್ಕವು.  ಹೀಗೆ ನಾನಾ ಬಗೆಯು ಪದ್ಯಗಳಲ್ಲಿ ಕಂಡುಬರುತ್ತವೆ.  ಅವುಗಳೆಲ್ಲವುಗಳ ಸ್ವರೂಪವನ್ನು ತಿಳಿಯದಿದ್ದರೂ ಮುಖ್ಯವಾದ ಕೆಲವು ಪದ್ಯಗಳ ರೀತಿನೀತಿ ಗಳನ್ನು ತಿಳಿಯಬೇಕು.
       ಪದ್ಯಗಳು ವಿಸ್ತಾರವಾದ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಲೂ, ರಸವತ್ತಾದ ಅಂತಗಳನ್ನು ಸ್ವಾರಸ್ಯ ಮಾತುಗಳಿಂದ ವರ್ಣಿಸಲೂ, ಮತ್ತು ಅವುಗಳನ್ನು ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲೂ ಅನುಕೂಲವಾದವು.  ಅಲ್ಲದೆ ರಾಗವಾಗಿ ಹಾಡಿ, ತಾವೂ ಆನಂದ ಪಡಬಹುದು.  ಇತರರನ್ನೂ ಆನಂದಗೊಳಿಸಬಹುದು.  ಇಂಥ ಮಹತ್ವದ ಕಾವ್ಯಭಾಗಗಳಾದ ಪದ್ಯಗಳ ರಚನಾಕ್ರಮದ ಬಗೆಗೆ ಲಕ್ಷಣವನ್ನು ತಿಳಿಸುವ ಗ್ರಂಥವೆಂದರೆ ಮುಖ್ಯವಾಗಿ ‘ಛಂದೋಂಬುಧಿ‘ ಎಂಬುದು.  ಇದು ಹಳಗನ್ನಡ ಪದ್ಯಗಳಲ್ಲಿ ರಚಿಸಲ್ಪಟ್ಟಿದೆ.  ಇದೇ ಕನ್ನಡ ಛಂದಸ್ಸನ್ನು ವಿಶದವಾಗಿ ತಿಳಿಸುವ ಗ್ರಂಥವಾಗಿದೆ.

I – ಛಂದೋಂಬುಧಿ ಗ್ರಂಥ ಕರ್ತೃವಿನ ವಿಚಾರ
ಛಂದೋಂಬುಧಿ ಎಂಬ ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ೧ನೆಯ ನಾಗವರ್ಮನೆಂಬುವನು ಬರೆದನು.  ಇವನು ಕರ್ನಾಟಕ ಕಾದಂಬರಿಯೆಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾನೆ.  ವೆಂಗಿ ವಿಷಯದಲ್ಲಿನ ಸಪ್ತ ಗ್ರಾಮಗಳಲ್ಲಿ ಮನೋಹರವಾದ ವೆಂಗಿಪಳುವಿನಲ್ಲಿದ್ದ ಕೌಂಡಿನ್ಯ ಗೋತ್ರ ದ ವೆಣ್ಣಮಯ್ಯ ಎಂಬ ಬ್ರಾಹ್ಮಣನ ಮಗ; ತಾಯಿ ಹೋಕಳವ್ವೆ.  ಇವನಿಗೆ ಕವಿರಾಜಹಂಸ, ಬುಧಾಬ್ಜವನಕಳ ಹಂಸ, ಕಂದಕಂದರ್ಪ-ಇತ್ಯಾದಿ ಅನೇಕ ಬಿರುದುಗಳಿದ್ದವು.  ಈತನು ಯುದ್ಧವೀರನಾಗಿದ್ದ ಹಾಗೆಯೂ ತೋರುವುದು.  ಶ್ರವಣಬೆಳ್ಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿ ಪ್ರಸಿದ್ಧನಾಗಿರುವ ಚಾವುಂಡರಾಯನೆಂಬುವನು ಇವನ ಆಶ್ರಯದಾತನು.  ಅಜಿತಸೇನದೇವ ನೆಂಬುವರು ಇವನಿಗೆ ಗುರುಗಳು.
ಛಂದೋಂಬುಧಿ ಎಂಬ ಗ್ರಂಥದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಹೇಳಲ್ಪಟ್ಟಿವೆ.

[1] ನಾಗವರ್ಮನೆಂಬ ಹೆಸರಿನ ಕವಿಗಳಿಬ್ಬರು.  ಮೊದಲನೆಯ ನಾಗವರ್ಮ (ಕ್ರಿ.ಶ. ೯೯೦) ನು ಛಂದೋಂಬುಧಿಯನ್ನೂ, 'ಕರ್ನಾಟಕ ಕಾದಂಬರಿ' ಎಂಬ ಚಂಪೂ ಗ್ರಂಥವನ್ನೂ ರಚಿಸಿದನು.  ಎರಡನೆಯ ನಾಗವರ್ಮನೆಂಬುವನು ಕ್ರಿ.ಶ. ೧೧೪೫ ರ ದವನು.  ಇವನು ಕಾವ್ಯಾವಲೋಕನ, ಕರ್ನಾಟಕ ಭಾಷಾಭೂಷಣ, ವಸ್ತುಕೋಶಗಳೆಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆಂದು ಕವಿ ಚರಿತ್ರೆಕಾರರು ತಿಳಿಸಿದ್ದಾರೆ.


ಕನ್ನಡ ಕಾವ್ಯಗಳು
ಕನ್ನಡ ಭಾಷೆಯಲ್ಲಿ ಕಾವ್ಯಗಳು ಪಂಪಕವಿ (ಕ್ರಿ.ಶ. ೯೪೧) ಗಿಂತಲೂ ಮೊದಲೇ ರಚಿತವಾಗಿದ್ದವು.  ಆದರೆ ಆ ಕಾಲದ ಸಮಗ್ರ ಕಾವ್ಯಗಳು ನಮಗೆ ಸಿಕ್ಕಿಲ್ಲ.  ಪಂಪಮಹಾಕವಿ ಬರೆದ ವಿಕ್ರಮಾರ್ಜುನವಿಜಯ, ಆದಿ ಪುರಾಣಗಳೇ ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಮೊದಲಿನವು.  ಪೂರ್ವದ ಗ್ರಂಥಗಳು ಸಿಗದಿದ್ದರೂ ಕ್ರಿ.ಶ. ೯ನೆಯ ಶತಕದಲ್ಲಿ ನೃಪತುಂಗನಿಂದ ರಚಿತವಾದ ‘ಕವಿರಾಜಮಾರ್ಗದಲ್ಲಿ ಉತ್ತಮ ಕಾವ್ಯಮಯವಾದ ಪದ್ಯಗಳನ್ನು ಉದಾಹರಿಸಿದ್ದಾನೆ.  ಇದರಿಂದ ನೃಪತುಂಗನಿಗಿಂತಲೂ ಮೊದಲು ಉತ್ತಮವಾದ ಕನ್ನಡ ಪದ್ಯ ಕಾವ್ಯಗಳು ಇದ್ದುವೆಂದು ತಿಳಿಯಬಹುದು.  ಮತ್ತು ಕಲ್ಲುಗಳ ಮೇಲೆ ಕೆತ್ತಿದ ಅನೇಕ ಪದ್ಯಗಳು ಸಿಗುತ್ತವೆ.  ಇವುಗಳ ಮೇಲಿಂದ ಕ್ರಿ.ಶ. ೬ನೆಯ ಶತಮಾನದ ಹೊತ್ತಿನಲ್ಲಿಯೇ ಛಂದೋಬದ್ಧವಾದ ಪದ್ಯಗಳನ್ನು ನಮ್ಮ ಕವಿಗಳು ಬರೆಯುತ್ತಿದ್ದರೆಂದು ಹೇಳಬಹುದು.  ಪಂಪ (ಕ್ರಿ.ಶ. ೯೪೧), ರನ್ನ (ಕ್ರಿ.ಶ. ೯೯೩), ಅಭಿನವ ಪಂಪ (ಕ್ರಿ.ಶ. ೧೧೦೦), ಜನ್ನ (ಕ್ರಿ.ಶ. ೧೨೦೯) ಇತ್ಯಾದಿ ಮಹಾಕವಿಗಳು ಸಂಸ್ಕೃತ ವೃತ್ತ ಜಾತಿಯ ಛಂದಸ್ಸನ್ನು ಬಳಸಿ ದೊಡ್ಡ ದೊಡ್ಡ ಚಂಪೂಕಾವ್ಯಗಳನ್ನು ಬರೆದರು.  ಚಂಪೂಕಾವ್ಯಗಳೆಂದರೆ ಗದ್ಯಪದ್ಯಗಳಿಂದ ಕೂಡಿದ ಕಾವ್ಯಗಳು.  ಕ್ರಿ.ಶ.ಸು. ೧೨೧೬ ರ ಸುಮಾರಿನಲ್ಲಿದ್ದ ಹರಿಹರೇಶ್ವರನೆಂಬ ಕವಿ ರಗಳೆಗಳ ಛಂದಸ್ಸಿನಲ್ಲಿ ಅನೇಕ ಕಾವ್ಯ ಬರೆದನು.  ಇವನ ಅಳಿಯನಾದ ರಾಘವಾಂಕನು (ಕ್ರಿ.ಶ. ೧೨೧೬) ಷಟ್ಪದಿಗಳ ಛಂದಸ್ಸಿನಲ್ಲಿ ಅನೇಕ ಕಾವ್ಯಗಳನ್ನು ಬರೆದನು.  ಷಟ್ಪದಿಯನ್ನು ಬಳಸಿ ಮುಂದೆ ಗದುಗಿನ ನಾರಣಪ್ಪ (ಕ್ರಿ.ಶ. ೧೪೩೦) ನೇ ಮೊದಲಾದವರು ಕಾವ್ಯ ಬರೆದರು.  ರತ್ನಾಕರವರ್ಣಿ (ಕ್ರಿ.ಶ. ೧೫೫೭) ಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು.  ಹೀಗೆ ಅನೇಕಾನೇಕ ಛಂದೋಬದ್ಧವಾದ ಸಾಹಿತ್ಯರಾಶಿ ಕನ್ನಡಕ್ಕೆ ಇದೆ.  ಈ ಎಲ್ಲ ಛಂದಸ್ಸುಗಳ ಲಕ್ಷಣವನ್ನು ತಿಳಿಯುವುದು ಅವಶ್ಯವಾದರೂ ಪ್ರೌಢಶಾಲೆಗಳಲ್ಲಿ ವ್ಯಾಸಂಗಮಾಡುವ ನಮ್ಮ ಮಕ್ಕಳು, ಮುಖ್ಯವಾಗಿ ಕನ್ನಡದಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ ಉತ್ಪಲಮಾಲಾ, ಚಂಪಕಮಾಲ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ-ಇತ್ಯಾದಿ ವೃತ್ತಗಳ ಲಕ್ಷಣಗಳನ್ನೂ, ಷಟ್ಪದಿಗಳು, ರಗಳೆಗಳು ಕಂದ ಪದ್ಯಗಳೇ ಮೊದಲಾದವುಗಳ ಲಕ್ಷಣಗಳನ್ನು ತಿಳಿಯಬೇಕಾದುದು ಅವಶ್ಯಕ.  ಅಂತೆಯೇ ಸಂಕ್ಷೇಪವಾಗಿ ಮುಂದೆ ಆ ವಿಷಯವನ್ನು ಹೇಳಲಾಗಿದೆ.


ಪದ್ಯ
ಒಂದು ಗೊತ್ತಾದ ಸಾಲುಗಳ (ಪಾದಗಳು) ನಿಯಮದಿಂದ ಬರೆದವುಗಳೇ ಪದ್ಯಗಳು.  ಅಂದರೆ ಪದ್ಯಗಳು ಪಾದ (ಸಾಲು) ಗಳಿಂದಲೂ, ಪ್ರತಿಯೊಂದು ಪಾದವೂ ಪ್ರಾಸ, ಯತಿ, ಗಣಗಳ ನಿಯಮದಿಂದಲೂ ಕೂಡಿರುತ್ತವೆ.  ಈಗ ಈ ವಿಚಾರವಾಗಿ ಒಂದೊಂದಾಗಿ ತಿಳಿಯೋಣ.
() ಪ್ರಾಸ
ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಪ್ರಾಸವೆನ್ನುತ್ತಾರೆ ಪ್ರಾಸವನ್ನು ಕೆಲವರು ಸಾಲುಗಳ (ಪಾದಗಳ) ಕೊನೆಯಲ್ಲೂ ಬರುವಹಾಗೆ ಪದ್ಯ ರಚಿಸುತ್ತಾರೆಪಾದಾಂತದಲ್ಲಿ ಬರುವ ಪ್ರಾಸದ ನಿಯಮವು ಕೇವಲ ರಗಳೆಗಳಲ್ಲಿ ಮಾತ್ರ ಕಂಡು ಬರುತ್ತದೆ.
ಈ ಪ್ರಾಸಾಕ್ಷರದ ಹಿಂದೆ ಹ್ರಸ್ವಸ್ವರವಿದ್ದರೆ ಎಲ್ಲ ಸಾಲುಗಳಲ್ಲಿ ಹ್ರಸ್ವಸ್ವರವೂ ದೀರ್ಘಸ್ವರವಿದ್ದರೆ ಎಲ್ಲ ಕಡೆಗೆ ದೀರ್ಘಸ್ವರವೂ, ಅನುಸ್ವಾರ ವಿಸರ್ಗಗಳಿದ್ದರೆ ಎಲ್ಲ ಕಡೆಗೆ ಅನುಸ್ವಾರ ವಿಸರ್ಗಗಳೂ ಬಂದಿರಬೇಕು.
ಉದಾಹರಣೆಗೆ:-
ಭವದನುಜನರುಣ ಜಲಮಂ |
ಸವಿನೋಡಿದೆನಿಂತು ನಿನ್ನ ಬಲಜಲನಿಧಿಯಂ |
ಸವಿನೋಡಿದೆನೀ ಕೊಳನಂ |
ತವೆಪೀರ್ದು ಬಳಿಕ್ಕೆ ನಿನ್ನ ಸವಿಯಂ ನೋಳ್ಪೆಂ ||
ಈ ಪದ್ಯದಲ್ಲಿ ಮೊದಲನೆಯ ಸ್ವರ-‘ಭ‘ ಕಾರದ ಮುಂದಿರುವ ಅಕಾರ, ೨ನೆಯ ಸ್ವರ ‘ವ‘ ಕಾರದ ಮುಂದಿರುವ ಅಕಾರ.  ಇವೆರಡರ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿದೆ.  ಇದರಂತೆ ೨ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ವ್ಯಂಜನವಿದೆ.  ೩ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ನಾಲ್ಕನೆಯ ಸಾಲಿನಲ್ಲಿ ಅಕಾರ ಎಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ಹೀಗೆ ನಾಲ್ಕು ಸಾಲುಗಳಲ್ಲಿಯೂ ಇರುವ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿರುವುದು ಗೊತ್ತಾಗುವುದು.  ಈ ‘ವ‘ ಕಾರವೇ ಪ್ರಸಾಕ್ಷರವೆನಿಸುವುದು.  ಅಲ್ಲದೆ ಪ್ರಾಸಾಕ್ಷರದ ಹಿಂದೆ ಎಲ್ಲ ಕಡೆಗೂ ಹ್ರಸ್ವಸ್ವರವೇ ಇರುವುದು.  ಈಗ ಒಂದಕ್ಕಿಂತ ಹೆಚ್ಚು ವ್ಯಂಜನಗಳ ಪ್ರಾಸಾಕ್ಷರವಾಗಿರುವುದನ್ನು ಗಮನಿಸಿರಿ.
ಉದಾಹರಣೆಗೆ:-
ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು||
ಪುಲ್ಗಳಪಸುರ್ಗೆಳಸಿ ಪೊಕ್ಕೊಡಾ ತೋಟಗಾ- |
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆಮಿಗೆ |
ಬಿಲ್ಗೊಂಡು ನಡೆತಂದನಂ ಕಂಡನರ್ಚಿತ ಸುವಾಜಿಯಂ ವೀರಲವನು ||
೧ನೆಯ ಸಾಲು-ಬಲ್ಗಯ್ಯ    ………………………… ಅ + ಲ್ ಗ್ + ಅ
೨ನೆಯ ಸಾಲು-ಸೊಲ್ಗೇಳಿ  ………………………… ಒ + ಲ್ ಗ್ + ಏ
೩ನೆಯ ಸಾಲು-ನಲ್ಗುದುರೆ  ………………………… ಅ + ಲ್ ಗ್ + ಉ
೪ನೆಯ ಸಾಲು-ಪುಲ್ಗಳ      ………………………… ಉ + ಲ್ ಗ್ + ಅ
೫ನೆಯ ಸಾಲು-ವಲ್ಗೆತನ್ನೊ          ………………………… ಅ + ಲ್ ಗ್ + ಎ
೬ನೆಯ ಸಾಲು-ಬಿಲ್ಗೊಂಡು          ………………………… ಇ + ಲ್ ಗ್ + ಒ
ಎಲ್ಲ ಸಾಲುಗಳಲ್ಲೂ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿ ವ್ಯಂಜನಗಳನ್ನು ನೋಡಿರಿ.
ಮೇಲಿನ ಈ ಪದ್ಯದಲ್ಲಿ ‘ಲ್ ಗ್‘ ಈ ಎರಡು ವ್ಯಂಜನಗಳು ಆರೂ ಸಾಲುಗಳಲ್ಲಿ ಪ್ರಾಸಾಕ್ಷರಗಳಾಗಿ ಬಂದಿರುವುದನ್ನು ಗಮನಿಸಿರಿ.  ಮತ್ತು ಪ್ರಾಸಾಕ್ಷರಗಳ ಹಿಂದೆ ಅ, , , , , ಇ – ಇತ್ಯಾದಿ ಹ್ರಸ್ವಸ್ವರಗಳೇ ಬಂದಿರುವುದನ್ನೂ ಗಮನಿಸಿರಿ.  ಇದರ ಹಾಗೆಯೇ ಕೆಲವು ಕಡೆ ಪ್ರಸಾಕ್ಷರಗಳು ಮೂರು ವ್ಯಂಜನಗಳಿಂದಲೂ ಕೂಡಿರುವುದುಂಟು.  ಕೆಲವು ಸಜಾತೀಯ ಸಂಯುಕ್ತಾಕ್ಷರಗಳಿಂದಲೂ ಕೂಡಿರುವುದುಂಟು.
ಒಮ್ಮೊಮ್ಮೆ ದೊಡ್ಡ ದೊಡ್ಡ ಕವಿಗಳೂ ಈ ಪ್ರಾಸದ ನಿಯಮದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿರುವುದೂ ಉಂಟು.  ಹಾಗಾಗಿರುವುದು ಎಲ್ಲೋ ಕೆಲವು ಕಡೆ ಮಾತ್ರ.  ಆದರೆ ಎಲ್ಲ ಕಡೆಗೂ ಪ್ರಾಸದ ನಿಯಮವನ್ನು ಪ್ರಾಚೀನ ಕವಿಗಳು ಪಾಲಿಸಿಕೊಂಡೇ ಬಂದಿದ್ದಾರೆ.  ರಗಳೆಗಳಲ್ಲಿ ಇದುವರೆಗೆ ಹೇಳಿದ ಆದಿ ಪ್ರಾಸದ ಜೊತೆಗೆ ಅಂತ್ಯದಲ್ಲಿಯೂ ಈ ಪ್ರಾಸದ ನಿಯಮವನ್ನು ಪಾಲಿಸಿರುವುದುಂಟು.-
ಉದಾಹರಣೆಗೆ:-
ಆಡುವ ಗಂಡಯ್ಯನ ಹೊಸ ನೃತ್ಯಂ
ನೋಡುವ ಶಿವನಂ ಮುಟ್ಟಿತು ಸತ್ಯಂ
ಇಲ್ಲಿ ಮೊದಲ ಸಾಲಿನ ಕೊನೆಯ ಎರಡು ಸ್ವರಗಳಾದ (ನ್ ಋ + ತ್ ಯ್ + ಅಂ) ಋಕಾರ ಅಕಾರಗಳ ಮಧ್ಯದಲ್ಲಿ ತ್ ಯ್ ಎಂಬುವು ಪ್ರಾಸಾಕ್ಷರಗಳು ೨ನೆಯ ಸಾಲಿನಲ್ಲಿ ಕೊನೆಯ ಎರಡು ಸ್ವರಗಳಾದ (ಸ್ ಅ + ತ್ ಯ್ + ಅಂ) ಅಕಾರ ಮತ್ತು ಅಕಾರಗಳ ಮಧ್ಯದಲ್ಲಿ ‘ತ್ ಯ್‘ ಎಂಬಿವು ಪ್ರಾಸಾಕ್ಷರಗಳಾಗಿವೆ.
ಮೇಲಿನ ಎರಡು ಸಾಲುಗಳ ರಗಳೆಯ ಛಂದಸ್ಸಿನಲ್ಲಿ ಆದಿಪ್ರಾಸವು ಡ್ ವ್ಯಂಜನವಾಗಿದ್ದರೆ, ಅಂತ್ಯ ಪ್ರಾಸವು ‘ತ್ ಯ್‘ ಎಂಬೆರಡು ವ್ಯಂಜನಗಳಾಗಿವೆ.  ಈ ತರದಲ್ಲಿ ಅಂತ್ಯಪ್ರಾಸದ ನಿಯಮವನ್ನು ರಗಳೆಯಲ್ಲಲ್ಲದೆ ಬಹುಶಃ ಉಳಿದ ಕಡೆಗೆ ಕಾಣುವುದು ಅಪರೂಪ.

() ಯತಿ
ಯತಿ ಯೆಂದರೆ ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.  ಹೀಗೆ ನಿಲ್ಲಿಸುವುದಕ್ಕೆ ಗೊತ್ತಾದ ಸ್ಥಳಗಳಲ್ಲಿ ನಿಲ್ಲಿಸಿದರೆ ಅರ್ಥ ಕೆಡುವಂತಿರಬಾರದು.  ಅಲ್ಲಿಗೆ ಪದ ಮುಗಿದಿರಬೇಕು.  ಕನ್ನಡ ಕವಿಗಳು ಪ್ರಾಸ ನಿಯಮವನ್ನೂ ಪಾಲಿಸಿ ಯತಿಯ ನಿಯಮವನ್ನು ಪಾಲಿಸುವುದು ಕಷ್ಟವೆಂದು ಪ್ರಾಸಕ್ಕೇ ಪ್ರಾಧಾನ್ಯತೆ ಕೊಟ್ಟು, ಯತಿಯ ನಿಯಮವನ್ನು ಮಿಕ್ಕಿದ್ದಾರೆ.  ಸಂಸ್ಕೃತ ಕವಿಗಳು ಪ್ರಾಸನಿಯಮವನ್ನು ಪಾಲಿಸದೆ ಯತಿಯ ನಿಯಮವನ್ನು ಎಲ್ಲ ಕಡೆಗೂ ಪಾಲಿಸಿದ್ದಾರೆ.  ಆದ್ದರಿಂದ ಯತಿಯ ನಿಯಮವು ಕನ್ನಡ ಕಾವ್ಯಗಳಲ್ಲಿ ಅಷ್ಟು ಮುಖ್ಯವಲ್ಲ.  ಅದರ ವಿಷಯವಾಗಿ ಹೆಚ್ಚಿಗೆ ತಿಳಿಯಬೇಕಾದ ಅವಶ್ಯಕತೆಯಿಲ್ಲ.

() ಗಣಗಳು
(೧೦೨) ಗಣ ಎಂದರೆ ಗುಂಪು ಸಮೂಹ ಎಂದು ಅರ್ಥಛಂದಶ್ಯಾಸ್ತ್ರದಲ್ಲಿ ಗಣ ಎಂದರೆ-ಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರೆಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.
ಮಾತ್ರೆಗಳ ಲೆಕ್ಕದಿಂದ-ಮೂರುಮಾತ್ರೆ ಅಥವಾ ನಾಲ್ಕುಮಾತ್ರೆ ಮತ್ತು ಐದುಮಾತ್ರೆಗಳ ಗುಂಪುಗಳು ಕೆಲವು ಪದ್ಯಗಳಲ್ಲಿ ಬರುತ್ತವೆ.  ಅವೆಲ್ಲ ಮಾತ್ರಾಗಣಗಳು.  ಕೆಲವು ಪದ್ಯಗಳಲ್ಲಿ ಮೂರು ಅಕ್ಷರಗಳ ಗುಂಪುಗಳನ್ನು ವಿಭಾಗಿಸುವರು.  ಅವೆಲ್ಲ ಅಕ್ಷರಗಣಗಳು.  ಕೆಲವು ಪದ್ಯಗಳಲ್ಲಿ ಒಂದೊಂದು ಅಂಶಕ್ಕೆ ಒಂದೊಂದು ಗಣವನ್ನು ವಿಂಗಡಿಸುವರು.  ಅವೆಲ್ಲ ಅಂಶಗಣಗಳು.  ಮುಖ್ಯವಾಗಿ ಈಗ ಮಾತ್ರಾಗಣ, ಅಕ್ಷರಗಣಗಳ ವಿಷಯವನ್ನು ತಿಳಿದರೆ ಸಾಕು.

[1] (i) ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಸಿಂಹಪ್ರಾಸ.  ಇದರ ಹಾಗೆಯೇ ಪ್ರಸಾಕ್ಷರದ ಪ್ರಾಸಾಕ್ಷರಗಳ-
(ii) ಹಿಂದಿನ ಸ್ವರವು ದೀರ್ಘವಾಗಿದ್ದರೆ ಗಜಪ್ರಾಸ.
(iii) ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ವೃಷಭಪ್ರಾಸ.
(iv) ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ಅಜಪ್ರಾಸ.
(v) ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ.
(vi) ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ.  ಹೀಗೆ ಪ್ರಾಸದಲ್ಲಿ ಆರು ವಿಧಗಳನ್ನು ಹೇಳುವುದುಂಟು.  ಈ ಆರು ಪ್ರಾಸಗಳನ್ನು ನೆನಪಿನಲ್ಲಿಡಲು ಈ ಕೆಳಗಿನ ಪದ್ಯ ಸಹಕಾರಿ.
ನಿಜದಿಂ ಒಂದೊಡೆಸಿಂಹಂ || ಗಜದೀರ್ಘಂ ಬಿಂದುವೃಷಭ ವ್ಯಂಜನಶರಭಂ ||
ಅಜನು ವಿಸರ್ಗಂ ಹಯನಂ || ಬುಜಮುಖಿದಡ್ಡಕ್ಕರಂಗಳಿವು ಷಟ್ ಪ್ರಾಸಂ||
ಸಿಂಹ, ಗಜ, ವೃಷಭ, ಶರಭ, ಅಜ, ಹಯ-ಈ ಆರೂ ಪ್ರಾಸಗಳ ಸಂಕ್ಷೇಪ ಲಕ್ಷಣ ಈ ಪದ್ಯದಲ್ಲಿ ಇದೆ.


**********

ಛಂದಸ್ಸು-ಸಾರಾಂಶ

ಸಾರಾಂಶ
() ಪದ್ಯರಚನಾಕ್ರಮವನ್ನು ತಿಳಿಸುವ ಶಾಸ್ತ್ರ ಛಂದಶ್ಯಾಸ್ತ್ರ.
() ಪದ್ಯವು ಪಾದಗಳಿಂದ, ಪಾದಗಳು ಯತಿಗಣ ಪ್ರಾಸಗಳಿಂದ ಕೂಡಿರುತ್ತವೆ.
() ಯತಿ ಎಂದರೆ ಪದ್ಯ ಹೇಳುವಾಗ ಗೊತ್ತಾದ ಸ್ಥಳದಲ್ಲಿ ನಿಲ್ಲಿಸುವುದು. ಕನ್ನಡ ಪದ್ಯಗಳಲ್ಲಿ ಯತಿ ಮುಖ್ಯವಲ್ಲ.
() ಗಣಗಳು ಮುಖ್ಯವಾಗಿ ಮಾತ್ರಾಗಣ-ಅಕ್ಷರಗಣಗಳೆಂದು ಎರಡು ಬಗೆ.
() ಪ್ರಾಸವೆಂದರೆ ಪದ್ಯದ ಪ್ರತಿಸಾಲಿನ ಒಂದನೆಯ, ಎರಡನೆಯ ಸ್ವರಗಳ ನಡುವೆ ಒಂದೇ ರೀತಿಯ ವ್ಯಂಜನ ಬರುವಿಕೆ.
() ಮಾತ್ರಾಗಣಗಳು ಕಂದ, ರಗಳೆ, ಷಟ್ಪದಿಗಳಲ್ಲಿ ಬಳಸಲ್ಪಡುತ್ತವೆ. ಕೆಲವು ಕಡೆ ಮೂರು, ನಾಲ್ಕು, ಐದು ಮಾತ್ರೆಗಳ ಗಣಗಳನ್ನು ವಿಂಗಡಿಸುತ್ತಾರೆ.
() ವರ್ಣಗಣಗಳು ಒಟ್ಟು ಎಂಟು; ಅವು ವೃತ್ತಗಳಲ್ಲಿ ಬಳಸಲ್ಪಡುತ್ತವೆ.
() ಕನ್ನಡದಲ್ಲಿ ಮುಖ್ಯವಾಗಿ ವೃತ್ತಗಳು ಹೆಚ್ಚು ಬಳಕೆಯಲ್ಲಿವೆ.
() ಒಂದು ಮಾತ್ರಾಕಾಲದಲ್ಲಿ ಹೇಳುವ ಅಕ್ಷರಗಳೆಲ್ಲ ಲಘುಗಳು.
(೧೦) ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳು.
(೧೧) ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರ ಒತ್ತಕ್ಷರದ ಹಿಂದಿನ ಅಕ್ಷರ, ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು ವ್ಯಂಜನಾಕ್ಷರದ ಹಿಂದಿನ ಅಕ್ಷರ, ಷಟ್ಪದಿಯ ಮೂರನೆಯ ಆರನೆಯ ಸಾಲಿನ ಕೊನೆಯ ಅಕ್ಷರಗಳೆಲ್ಲ ಗುರುಗಳು; ಉಳಿದುವೆಲ್ಲ ಲಘುಗಳು. ಗುರು ಲಘುಗಳನ್ನು ಕ್ರಮವಾಗಿ ಛಂದಸ್ಸಿನಲ್ಲಿ ಚಿಹ್ನೆಗಳಿಂದ ಗುರುತಿಸುವರು.

ಅಭ್ಯಾಸ ಪ್ರಶ್ನೆಗಳು

(೧) ಯತಿಯೆಂದರೇನು? ಕನ್ನಡ ಪದ್ಯಗಳಲ್ಲಿ ಯತಿಯ ನಿಯಮಕ್ಕೆ ಪ್ರಾಧಾನ್ಯತೆಯಿಲ್ಲ ಏಕೆ?
(೨) ಪ್ರಾಸವೆಂದರೇನು? ಉದಾಹರಣೆಯೊಡನೆ ವಿವರಿಸಿ.
(೩) ಗುರುಗಳಾಗುವ ಅಕ್ಷರಗಳು ಯಾವುವು?
(೪) ಅಕ್ಷರಗಣಗಳೆಷ್ಟು ಬಗೆ? ಅವುಗಳ ವಿನ್ಯಾಸ ಕ್ರಮವನ್ನು ವಿವರಿಸಿರಿ.
(೫) ವಾರ್ಧಕ ಷಟ್ಪದಿಯಲ್ಲಿ ಬಳಸಲ್ಪಡುವ ಗಣಗಳಾವುವು? ಇದರ ಲಕ್ಷಣ ವಿವರಿಸಿರಿ.
(೬) ಈ ಕೆಳಗಣ ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಕಡೆ ಸರಿಯಾದ ಪದ ಹಾಕಿ ವಾಕ್ಯವನ್ನು ಅರ್ಥವತ್ತಾಗಿ ಮಾಡಿರಿ.
(i) ಕಂದ ಪದ್ಯದಲ್ಲಿ .. .. .. .. ಸಾಲುಗಳು ಒಂದು ಸಮ; .. .. .. .. ಸಾಲುಗಳು ಇನ್ನೊಂದು ಸಮ.
(ii) ಷಟ್ಪದಿಗಳಲ್ಲೆಲ್ಲ ೧, ೨, ೩, ೪ ನೆಯ ಪಾದಗಳು .. .. .. .. .. ಇರುತ್ತವೆ.
(iii) ಪದ್ಯದ ಪ್ರತಿ ಪಾದದ .. .. .. ..  ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನ ಬರುವುದಕ್ಕೆ .. .. .. ..  ಎನ್ನುವರು.
(iv) ರಗಳೆಗಳಲ್ಲಿ ಎರಡೆರಡು ಸಾಲುಗಳಲ್ಲಿ .. .. .. .. ನಿಯಮವು ಕಂಡುಬರುತ್ತದೆ.
(v) ರಗಳೆಗಳಲ್ಲಿ ಇಂತಿಷ್ಟೇ .. .. .. .. ಗಳಿರಬೇಕೆಂಬ ನಿಯಮವಿಲ್ಲ.
(vi) ಕಂದ ಪದ್ಯದ ವಿಷಮಸ್ಥಾನದಲ್ಲಿ .. .. .. .. ಗಣವು ಬರಕೂಡದು.
(vii) ಭಾಮಿನೀಷಟ್ಪದಿಯಲ್ಲಿ ಎಲ್ಲಿಯೂ .. .. .. .. ಈ ರೀತಿಯ ಗಣ ಬರಕೂಡದು.
(viii) ಕಂದಪದ್ಯದ ಪೂರ್ವಾರ್ಧದ ಆರನೆಯ ಗಣ ಮತ್ತು ಉತ್ತರಾರ್ಧದ ಆರನೆಯ ಗಣವು.. .. .. .. .. ಈ ವಿನ್ಯಾಸದ ಗಣವಾಗಲಿ ಅಥವಾ .. .. .. ..  ಈ ವಿನ್ಯಾಸದ ಗಣವಾಗಲಿ ಆಗಿರಬೇಕು.
(ix) ಲಲಿತರಗಳೆಯ ಪ್ರತಿಪಾದವೂ .. .. .. ..  ಮಾತ್ರೆಗಳ .. .. .. .. ಗಣಗಳಿಂದ ಕೂಡಿರುತ್ತದೆ.
(೭) ಈ ಕೆಳಗೆ ಬಿಟ್ಟಿರುವ ಸ್ಥಳಗಳಲ್ಲಿ ಆವರಣದಲ್ಲಿ ಕೊಟ್ಟಿರುವ ಒಂದು ಸರಿಯುತ್ತರವನ್ನು ಆರಿಸಿ ಬರೆಯಿರಿ.
(i) ಷಟ್ಪದಿಗಳಲ್ಲಿ .. .. .. .. ಗಳನ್ನು ಬಳಸುತ್ತಾರೆ. (ಮಾತ್ರಾಗಣ, ಅಕ್ಷರಗಣ, ಅಂಶಗಣ)
(ii) ಕಂದ ಪದ್ಯದಲ್ಲಿ .. .. .. .. ಗಣಗಳನ್ನು ಬಳಸುತ್ತಾರೆ. (೩ ಮಾತ್ರೆಯ, ೪ ಮಾತ್ರೆಯ, ೫ ಮಾತ್ರೆಯ)
(iii) ಉತ್ಪಲಮಾಲಾವೃತ್ತವು .. .. .. .. ಅಕ್ಷರಗಳ ವೃತ್ತವು. (೧೯, ೨೦, ೨೧)
(iv) ಅಕ್ಷರಗಣಗಳು ಒಟ್ಟು .. .. .. .. ಬಗೆ. (ಏಳು, ಎಂಟು, ಆರು)
(v) ಗುರುವಿಗೆ .. .. .. .. ಮಾತ್ರೆಗಳು. (ಒಂದು, ಎರಡು, ಮೂರು)
(vi) ಪ್ರಾಸವೆಂದರೆ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ಬರುವ ಒಂದೇ ರೀತಿಯ .. ..  (ಸ್ವರ, ಪ್ಲುತಸ್ವರ, ವ್ಯಂಜನ ಅಥವಾ ವ್ಯಂಜನಗಳು)
(vii) ರಗಳೆಯ ಛಂದಸ್ಸಿನಲ್ಲಿ .. .. .. .. ನಿಯಮವಿಲ್ಲ. (ಅಕ್ಷರಗಳ, ಪ್ರಾಸಗಳ, ಪಾದಗಳ)
(viii) ವೃತ್ತಗಳು .. .. .. .. ಗಣಗಳ, ನಿಯಮದಿಂದ ಕೂಡಿರುತ್ತವೆ. (ಮಾತ್ರಾಗಣ, ಅಂಶಗಣ, ಅಕ್ಷರಗಣ)
(೮) ಈ ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ.  ಅವನ್ನು ಸರಿಪಡಿಸಿರಿ.
(i) ವರ್ಣಗಳು ಮೂರು ಮಾತ್ರೆಗಳ ಲೆಕ್ಕದಿಂದ ವಿಂಗಡಿಸಲ್ಪಡುತ್ತವೆ.
(ii) ಮೂರು ಗುರುಗಳ ವಿನ್ಯಾಸವುಳ್ಳ ಗಣವು ನಗಣವೆನಿಸುವುದು.
(iii) ಆದಿಗುರು ಅನಂತರ ಎರಡು ಲಘುಗಳಿಂದ ಕೂಡಿದ ಅಕ್ಷರಗಣವು ಯಗಣವೆನಿಸುವುದು.
(iv) ರಗಳೆಗಳಲ್ಲಿ ಅಕ್ಷರಗಣಗಳು ಬಳಸಲ್ಪಡುತ್ತವೆ.
(v) ವಾರ್ಧಕಷಟ್ಪದಿಯಲ್ಲಿ ಮೂರು ಮತ್ತು ನಾಲ್ಕು ಮಾತ್ರೆಯ ಗಣಗಳು ಬಳಸಲ್ಪಡುತ್ತವೆ.

ಅಕ್ಷರಗಣ-ಖ್ಯಾತಕರ್ಣಾಟಕಗಳು

ಅಕ್ಷರಗಣಗಳು
 ಅಕ್ಷರಗಣಗಳೆಂದರೆ ಮೂರು ಮೂರು ಅಕ್ಷರಗಳ ಗುಂಪುಗಳನ್ನು ಒಂದೊಂದು ಗಣವೆಂದು ತಿಳಿಯುವ ಗಣಗಳುಮೂರು ಮೂರು ಅಕ್ಷರಗಳ ಗುಂಪಿನಲ್ಲಿ ಮಾತ್ರೆಗಳು ಮೂರೆ ಇರಬಹುದು, ನಾಲ್ಕು, ಐದು, ಆರು ಮಾತ್ರೆಗಳೂ ಇರಬಹುದುಅದು ಮುಖ್ಯವಲ್ಲಇಲ್ಲಿ ಮೂರು ಮೂರು ಅಕ್ಷರಗಳು ಮುಖ್ಯಹೀಗೆ ಮೂರು ಮೂರು ಅಕ್ಷರಗಳ ಲೆಕ್ಕದಿಂದ ಗಣಗಳನ್ನು ವಿಂಗಡಿಸುವುದು ವೃತ್ತಜಾತಿಯ ಛಂದಸ್ಸುಗಳಲ್ಲಿ ಮಾತ್ರವೃತ್ತಗಳು ಹಲವಾರು ವಿಧಗಳುಂಟುಅವುಗಳೊಡನೆ ಕನ್ನಡದಲ್ಲಿ ಮುಖ್ಯವಾಗಿ ಬರುವ 
ಉತ್ಪಲಮಾಲವೃತ್ತ,  
ಚಂಪಕಮಾಲಾವೃತ್ತ
ಶಾರ್ದೂಲವಿಕ್ರೀಡಿತವೃತ್ತ
ಮತ್ತೇಭವಿಕ್ರೀಡಿತವೃತ್ತ
ಸ್ರಗ್ಧರಾವೃತ್ತ,  
ಮಹಾಸ್ರಗ್ಧರಾವೃತ್ತ ಗಳೆಂಬ ಆರು ಜಾತಿಯ ವೃತ್ತಗಳ ಪರಿಚಯವನ್ನು ಪ್ರೌಢಶಾಲೆಯ ಮಕ್ಕಳು ತಿಳಿದರೆ ಸಾಕುಆದ್ದರಿಂದ ಮೊದಲು ಅಕ್ಷರಗಣಗಳ ಪರಿಚಯವನ್ನು ಮಾಡಿಕೊಂಡು ವೃತ್ತಗಳಲ್ಲಿ ಅವು ಹೇಗೆ ಬಳಸಲ್ಪಡುತ್ತವೆಂಬುದನ್ನು ತಿಳಿಯಿರಿ.
ಅಕ್ಷರಗಣಗಳು ಒಟ್ಟು ೮ ವಿಧ.  ಅವುಗಳ ವಿನ್ಯಾಸವು ಈ ಕೆಳಗಿನಂತೆ ಇದೆ-

ಮೇಲೆ ವಿವರಿಸಿದಂತೆ ಮೂರು ಗುರುಗಳು ಬರುವ ಮೂರು ಅಕ್ಷರದ ಗಣ ಮಗಣ.  ಮೂರು ಲಘು ಬರುವ ಮೂರಕ್ಷರದ ಗಣ ನಗಣ.  ಗುರು ಮೊದಲು ಬಂದು ಎರಡು ಲಘು ಬರುವ ಗಣವೇ ಭಗಣ.  ಲಘು ಮೊದಲು ಬಂದು ಎರಡು ಗುರುಗಳು ಬರುವ ಗಣವೇ ಯಗಣ.  ಗುರು ನಡುವೆ ಬರುವುದು ಜಗಣ.  ಲಘು ನಡುವೆ ಬರುವುದು ರಗಣ.  ಗುರು ಕೊನೆಯಲ್ಲಿ ಬರುವ ಗಣ ಸಗಣ.  ಲಘು ಕೊನೆಯಲ್ಲಿ ಬರುವ ಗಣ ತಗಣ.  ಹೀಗೆ ಎಂಟು ಪ್ರಕಾರದಲ್ಲಿ ಈ ಅಕ್ಷರ ಗಣದ ವಿನ್ಯಾಸಗಳಿವೆ.  ಈ ಎಂಟೂ ಗಣಗಳ ವಿನ್ಯಾಸವನ್ನು ಸುಲಭವಾಗಿ ತಿಳಿಯಲು ಈ ಕೆಳಗಣ ಪದ್ಯವನ್ನು ಕಂಠಪಾಠ ಮಾಡಿದರೆ ಅನುಕೂಲವಾಗುವುದು:-
ಗುರು-ಲಘು ಮೂರಿರೆ ಮ-ನಗಣ |
ಗುರು-ಲಘು ಮೊದಲಲ್ಲಿ ಬರಲು ಧ-ಯಗಣಮೆಂಬರ್ |
ಗುರು-ಲಘು ನಡುವಿರೆ ಜ-ರಗಣ |
ಗುರು-ಲಘು ಕೊನೆಯಲ್ಲಿ ಬರಲು ಸ-ತಗಣಮಕ್ಕುಂ ||
ಗುರು ಮೂರಿರೆ ಮಗಣ; ಲಘು ಮೂರಿರೆ ನಗಣ; ಗುರು ಮೊದಲಲ್ಲಿ ಬರಲು ಭಗಣ; ಲಘು ಮೊದಲಲ್ಲಿ ಬರಲು ಯಗಣ; ಗುರು ನಡುವಿರೆ ಜಗಣ; ಲಘು ನಡುವಿರೆ ರಗಣ; ಗುರು ಕೊನೆಯಲ್ಲಿ ಬರಲು ಸಗಣ; ಲಘು ಕೊನೆಯಲ್ಲಿ ಬರಲು ತಗಣ-ಎಂದು ಈ ಪದ್ಯದ ಅರ್ಥ.  ಅಥವಾ ಈ ಎಂಟೂ ಗಣಗಳ ತಿಳಿವಳಿಕೆಗೆ ಇನ್ನೂ ಒಂದು ರೀತಿಯ ವಿಧಾನವುಂಟು.  ಕೆಳಗಣ ಈ ಸೂತ್ರ ನೋಡಿರಿ:-

“ಯಮಾತಾರಾಜಭಾನಸಲಗಂ”
ಈ ಸೂತ್ರದಿಂದ ಗಣಗಳ ಗುರು ಲಘು ವಿನ್ಯಾಸವನ್ನು ಹೇಗೆ ತಿಳಿಯಬೇಕೆಂದರೆ – ‘ಯ, ಮ, ತ, ರ, ಜ, ಭ, ನ, ಸ’ ಎಂಟು ಗಣಗಳಲ್ಲಿ ನಮಗೆ ಯಾವ ಗಣದ ವಿನ್ಯಾಸ ಬೇಕಾದಾಗಲೂ ಯಮಾತಾರಾಜಭಾನಸಲಗಂ ಈ ಸೂತ್ರದಲ್ಲಿ ಆಯಾ ಅಕ್ಷರದಿಂದ ಮೊದಲ್ಗೊಂಡು ಮೂರು ಅಕ್ಷರಗಳಿಗೆ ಪ್ರಸ್ತಾರ ಹಾಕಿಕೊಂಡರೆ ಆ ಗಣದ ವಿನ್ಯಾಸ ಬರುತ್ತದೆ.  ಉದಾಹರಣೆಗೆ ಯಗಣಕ್ಕೆ ಸೂತ್ರದಲ್ಲಿಯ ಯಕಾರದಿಂದ ಮೂರಕ್ಷರ ತೆಗೆದುಕೊಳ್ಳಬೇಕು.

ಲ ಎಂದರೆ ಲಘು (U); ಗು ಎಂದರೆ ಗುರು ( _ ) ಎಂದು ತಿಳಿಯಬೇಕು.

ಇದುವರೆಗೆ ಎಂಟು ವಿಧವಾದ ಅಕ್ಷರ ಗಣಗಳ ವಿನ್ಯಾಸ ಕ್ರಮವನ್ನು ತಿಳಿದಿರಿ. ಇನ್ನು ಈ ಎಂಟೂಗಣಗಳ ನಿಯಮದಿಂದ ರಚಿಸಲ್ಪಟ್ಟ ವೃತ್ತ ಜಾತಿಯ ಛಂದಸ್ಸಿನ ಲಕ್ಷಣ ತಿಳಿಯೋಣ.

() ವೃತ್ತಜಾತಿಯ ಛಂದಸ್ಸಿನ ಲಕ್ಷಣಗಳು
ಖ್ಯಾತಕರ್ಣಾಟಕ ವೃತ್ತಗಳು

() ಉತ್ಪಲಮಾಲಾವೃತ್ತದ ಲಕ್ಷಣ

ನಾಲ್ಕು ಸಮಾನ ಸಾಲುಗಳುಳ್ಳ ಪದ್ಯಪ್ರತಿಸಾಲಿನಲ್ಲೂ ೨೦ ಅಕ್ಷರಗಳಿವೆ.  (ವ್ಯಂಜನವರ್ಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಕೂಡದು.)  ಪ್ರತಿ ಸಾಲಿನಲ್ಲೂ , , , , , ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಹೀಗೆ ಬರುವ ವೃತ್ತವೇ ಉತ್ಪಲಮಾಲಾವೃತ್ತವೆನಿಸುವುದು.
ಲಕ್ಷಣವನ್ನು ಸುಲಭವಾಗಿ ನೆನಪಿನಲ್ಲಿಡಲು ಕೆಳಗಿನ ಸೂತ್ರವನ್ನು ಹೇಳಬಹುದು.

ಸೂತ್ರ:- ಉತ್ಪಲಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಳ್ದಿರಲ್

() ಚಂಪಕಮಾಲಾವೃತ್ತದ ಲಕ್ಷಣ

ನಾಲ್ಕು ಸಮಾನಪಾದಗಳುಳ್ಳ ಪದ್ಯಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆಪ್ರತಿ ಪಾದದಲ್ಲಿಯೂ , , , , , , - ಎಂಬ ಏಳು ಗಣಗಳಿರುತ್ತವೆಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು.
ಚಂಪಕಮಾಲಾವೃತ್ತದ ಕೆಳಗಣ ಸೂತ್ರವನ್ನು ಕಂಠಪಾಠಮಾಡಿರಿ.
ಸೂತ್ರ:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್
() ಶಾರ್ದೂಲವಿಕ್ರೀಡಿತವೃತ್ತದ ಲಕ್ಷಣ


 ನಾಲ್ಕು ಸಮಾನಪಾದಗಳುಳ್ಳ ಪದ್ಯಪ್ರತಿ ಪಾದವೂ ೧೯ ಅಕ್ಷರಗಳಿಂದ ಕೂಡಿದೆಪ್ರತಿ ಪಾದದಲ್ಲೂ , , , , , - ಎಂಬ ಆರು ಗಣಗಳೂ ಮೇಲೆ ಒಂದು ಗುರುವೂ ಇರುತ್ತವೆಇಂಥ ವೃತ್ತಗಳಿಗೆಲ್ಲ ಶಾರ್ದೂಲವಿಕ್ರೀಡಿತವೃತ್ತಗಳೆನ್ನು ವರುಇದರ ಸೂತ್ರವನ್ನು ಕೆಳಗೆ ಕೊಟ್ಟಿದೆಕಂಠಪಾಠ ಮಾಡಿರಿ.
ಸೂತ್ರ:- ಕಣ್ಗೊಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ

() ಮತ್ತೇಭವಿಕ್ರೀಡಿತವೃತ್ತದ ಲಕ್ಷಣ

ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿ ಪಾದದಲ್ಲೂ ಇಪ್ಪತ್ತು ಅಕ್ಷರಗಳಿವೆಪ್ರತಿಪಾದವೂ , , , , , ಗಣಗಳಿಂದಲೂ ಮೇಲೊಂದು ಲಘು ಮತ್ತು ಒಂದುಗುರುವಿನಿಂದಲೂ ಕೂಡಿದ ಪದ್ಯಜಾತಿಯು ಮತ್ತೇಭವಿಕ್ರೀಡಿತವೃತ್ತ ವೆನಿಸುವುದು ವೃತ್ತ ಲಕ್ಷಣವನ್ನು ತಿಳಿಸುವ ಸೂತ್ರವನ್ನು ಕಂಠಪಾಠ ಮಾಡಿರಿ.
ಸೂತ್ರ:- ಸಭರಂನಂದುಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ

() ಸ್ರಗ್ಧರಾವೃತ್ತ ಲಕ್ಷಣ

ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿಪಾದದಲ್ಲಿಯೂ ಇಪ್ಪತ್ತೊಂದು ಅಕ್ಷರಗಳಿರುತ್ತವೆಪ್ರತಿಯೊಂದು ಪಾದದಲ್ಲೂ , , , , , , ಗಣಗಳಿರುತ್ತವೆ ರೀತಿಯ ವೃತ್ತ ಜಾತಿಗೆಸ್ರಗ್ಧರಾವೃತ್ತ’ವೆನ್ನುವರುಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಸೂತ್ರ:-ತೋರಲ್ ಮಂರಂಭನಂಮೂಯಗಣಮುಮದೆ ತಾಂ ಸ್ರಗ್ಧರಾವೃತ್ತಮಕ್ಕುಂ.

() ಮಹಾಸ್ರಗ್ಧರಾವೃತ್ತ ಲಕ್ಷಣ

 ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿ ಸಾಲಿನಲ್ಲೂ ೨೨ ಅಕ್ಷರಗಳಿವೆಪ್ರತಿ ಸಾಲೂ , , , , , , ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತದೆಇದರ ಸೂತ್ರವು ಕೆಳಗೆ ಇದೆಅದನ್ನು ಕಂಠಪಾಠ ಮಾಡಿರಿ.
ಸೂತ್ರ:- ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ
ಮುಖ್ಯವಾಗಿ ಕನ್ನಡದಲ್ಲಿ ಬರುವ ಆರು ವೃತ್ತಗಳಾದ ಉತ್ಪಲಮಾಲಾ, ಚಂಪಕಮಾಲಾ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾವೃತ್ತಗಳ ಲಕ್ಷಣವನ್ನು ಇದುವರೆಗೆ ತಿಳಿದಿದ್ದೀರಿ.  ಉತ್ಪಲಮಾಲೆಯು ೨೦ ಅಕ್ಷರಗಳಿಂದಲೂ ಚಂಪಕಮಾಲೆಯು ೨೧ ಅಕ್ಷರಗಳಿಂದಲೂ ಶಾರ್ದೂಲವಿಕ್ರೀಡಿತವು ೧೯ ಅಕ್ಷರಗಳಿಂದಲೂ ಮತ್ತೇಭವಿಕ್ರೀಡಿತವು ೨೦ ಅಕ್ಷರಗಳಿಂದಲೂ ಸ್ರಗ್ಧರೆಯು ೨೧ ಅಕ್ಷರಗಳಿಂದಲೂ ಮಹಾಸ್ರಗ್ಧರೆಯು ೨೨ ಅಕ್ಷರಗಳಿಂದಲೂ (ಪ್ರತಿಸಾಲಿನಲ್ಲಿ) ಕೂಡಿರುತ್ತವೆ.  ಈ ಆರೂ ವೃತ್ತಗಳನ್ನು ಸುಲಭವಾಗಿ ಸ್ಥೂಲವಾಗಿ ಗುರುತಿಸುವುದಕ್ಕೆ ಒಂದು ಪದ್ಯವಿದೆ.  ಅದನ್ನು ತಿಳಿದರೆ ಸ್ಥೂಲವಾಗಿ ಈ ಆರೂ ವೃತ್ತಗಳನ್ನು ಗುರುತಿಸಬಹುದು.  ಆದರೆ ಇದು ಅಷ್ಟೊಂದು ನಿಖರಸಾಧನವಲ್ಲ.  ಸ್ಥೂಲಸಾಧನವೆಂಬುದನ್ನು ನೆನಪಿನಲ್ಲಿಡಬೇಕು.
ಗುರುವೊಂದಾದಿಯೊಳುತ್ಪಲಂ ಗುರುಮೊದಲ್ ಮೂರಾಗೆಶಾರ್ದೂಲಮಾ |
ಗುರುನಾಲ್ಕಾಗಿರಲಂತು ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ |
ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ |
ಪರಿಣಾಕ್ಷೀ, ಲಘು ನಾಲ್ಕು ಚಂಪಕಮಿವಾರುಂ[7] ಖ್ಯಾತಕರ್ನಾಟಕಂ ||

ಅರ್ಥ:- ಆದಿಯಲ್ಲಿ ಒಂದು ಗುರು ಬಂದುದೇ ಉತ್ಪಲಮಾಲಾ; ಆದಿಯಲ್ಲಿ ಮೂರು ಗುರುಗಳು ಬಂದುದು ಶಾರ್ದೂಲ ವಿಕ್ರೀಡಿತ; ಆದಿಯಲ್ಲಿ ಕ್ರಮವಾಗಿ ನಾಲ್ಕು ಗುರುಗಳು ಬಂದರೆ ಸ್ರಗ್ಧರೆ; ಆದಿಯಲ್ಲಿ ಎರಡು ಲಘು ಬಂದು ಅನಂತರ ಎರಡು ಗುರು ಬಂದರೆ ಮತ್ತೇಭವಿಕ್ರೀಡಿತ; ಆದಿಯಲ್ಲಿ ಮೊದಲು ಎರಡು ಲಘು ಬಂದು ಮುಂದೆ ಮೂರು ಗುರುಗಳು ಬಂದರೆ ಮಹಾಸ್ರಗ್ಧರಾವೃತ್ತ; ನಾಲ್ಕು ಲಘುಗಳು ಕ್ರಮವಾಗಿ ಬಂದರೆ ಚಂಪಕಮಾಲಾವೃತ್ತ.  ಹೀಗೆ ಆರೂ ವೃತ್ತಗಳ ಸ್ಥೂಲ ಪರಿಚಯವು ಈ ಪದ್ಯದಿಂದಾಗುವುದು.
ಇದುವರೆಗೆ ವರ್ಣಗಳ ವಿಚಾರವಾಗಿ ತಿಳಿದು, ಅವುಗಳ ನಿಯಮದಿಂದ ಪದ್ಯ ರಚಿಸುವ ಆರು ಮುಖ್ಯವಾದ ವೃತ್ತಗಳ ವಿಚಾರ ತಿಳಿದಿದ್ದೀರಿ.  ವರ್ಣಗಣ ಮತ್ತು ಮಾತ್ರಾಗಣಗಳಿಗಿಂತ ಭಿನ್ನವಾದ ಇನ್ನೊಂದು ರೀತಿಯ ಗಣಗಳ ಲೆಕ್ಕದಿಂದ ಪದ್ಯ ರಚನೆ ಮಾಡುವುದುಂಟು.  ಅವೇ ಅಂಶಗಣ ಎಂಬ ಹೆಸರಿನ ಗಣಗಳು.


[1]


[2]

[3]


[4]


[5]


[6]


[7] ಇಲ್ಲಿಯ ರಕಾರವು ಶಕಟರೇಪವೇ ಆಗಿದೆ.  ಇದುವರೆಗೆ ಛಂದಸ್ಸಿನಲ್ಲಿ ಉದಾಹರಿಸಿದ ಪದ್ಯಗಳಲ್ಲಿ ಬರುವ ಶಕಟರೇಫಗಳ ಸ್ಥಾನದಲ್ಲಿ ರಕಾರವನ್ನೂ, ರಳಾಕ್ಷರಗಳ ಸ್ಥಾನದಲ್ಲೆಲ್ಲ ಳಕಾರವನ್ನೂ ಬಳಸಿದೆ.  ವಿದ್ಯಾರ್ಥಿಗಳಿಗೆ ತೊಡಕಾಗಬಾರದೆಂಬುದೇ ಇದರ ಉದ್ಧೇಶ.

ಷಟ್ಪದಿ

ಷಟ್ಟದಿ
ಆರು ಜಾತಿಯ ಷಟ್ಪದಿಗಳ ಲಕ್ಷಣಗಳನ್ನು ಕ್ರಮವಾಗಿ ತಿಳಿಯೋಣ.  (ಷಟ್=ಆರು, ಪದಿ=ಪಾದಗಳುಳ್ಳದ್ದು ಎಂದು ಅರ್ಥ).

 ಷಟ್ಪದಿಗಳ ಲಕ್ಷಣಗಳು
ಆರು ಪಾದಗಳುಳ್ಳ ಪದ್ಯವನ್ನು ‘ಷಟ್ಪದಿ’ ಎಂದು ಕರೆಯುತ್ತಾರೆ. ಇದರ ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳು ಮಾತ್ರಾ ಸಂಖ್ಯೆಯಲ್ಲಿ ಒಂದಕ್ಕೊಂದು ಸಮಾನವಾಗಿರುತ್ತವೆ. ಮೂರು ಮತ್ತು ಆರನೆಯ ಪಾದಗಳು ಪರಸ್ಪರ ಸಮವಾಗಿರುತ್ತವೆ. ಒಂದನೆಯ ಪಾದದಲ್ಲಿರುವ ಮಾತ್ರೆಗಳ ಒಂದೂವರೆಯಷ್ಟು ಮತ್ತು ಒಂದು ಗುರು ಮೂರನೆಯ ಮತ್ತು ಆರನೆಯ ಪಾದಗಳಲ್ಲಿರುತ್ತವೆ. ದ್ವಿತೀಯಾಕ್ಷರವು ಪ್ರಾಸಾಕ್ಷರವಾಗಿರುತ್ತದೆ. ಷಟ್ಪದಿಗಳಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ವಿಧಗಳಿರುತ್ತವೆ. 

() ಶರಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ

ಮೇಲಿನ ಪದ್ಯವು ಆರು ಸಾಲುಗಳಿಂದ ಕೂಡಿದೆ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿವೆ ಮತ್ತು ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿವೆಮೂರು ಮತ್ತು ಆರನೆಯ ಸಾಲುಗಳ ಕೊನೆಯಕ್ಷರ ಲಘುವಾಗಿದ್ದರೂ ಗುರುವೆಂದೇ ತಿಳಿಯಬೇಕು ಜಾತಿಯ ಪದ್ಯದಲ್ಲಿ ಮಧ್ಯಗುರುವುಳ್ಳ “U _ U” ರೀತಿಯ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣದಿಂದ ಕೂಡಿದ ಪದ್ಯಗಳು ಶರಷಟ್ಪದಿಗಳೆಂದು ತಿಳಿಯಬೇಕು.

() ಕುಸುಮಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಎರಡು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಮೂರು ಗಣಗಳಿಂದಲೂ ಮೇಲೆ ಒಂದು ಗುರುವಿನಿಂದಲೂ ಕೂಡಿವೆ ಮತ್ತು ನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು ಜಾತಿಯ ಪದ್ಯದಲ್ಲಿ “U_UU ” ಹೀಗಿರುವ ಮತ್ತು ” U_ _” ಹೀಗಿರುವ ಗಣವು ಬರಕೂಡದು ಲಕ್ಷಣಗಳಿಂದ ಕೂಡಿದ ಪದ್ಯಗಳೇ ಕುಸುಮ ಷಟ್ಪದಿಗಳೆನಿಸುವುವು.

() ಭೋಗಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಸಾಲುಗಳಿಂದ ಕೂಡಿದ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮಾತ್ರೆಗಳ ಆರಾರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುವುದು ಜಾತಿಯ ಛಂದಸ್ಸಿನ ಪದ್ಯದಲ್ಲಿ ” U_ ” ಹೀಗೆ ಇರುವ ಮಾತ್ರಾಗಣ ಬರಕೂಡದುಇಂಥ ಲಕ್ಷಣಗಳಿಂದ ಕೂಡಿದ ಪದ್ಯವೇ ಭೋಗಷಟ್ಪದಿಎನಿಸುವುದು.

() ಭಾಮಿನೀ ಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುತ್ತವೆ.  (ಮೊದಲು ಮೂರು ಮಾತ್ರೆಯ ಗಣ ಅನಂತರ ಮಾತ್ರೆಯ ಗಣ ಕ್ರಮದಲ್ಲಿ ಒಟ್ಟು ನಾಲ್ಕು ಗಣಗಳಿರುತ್ತವೆ.)  ೩ನೆಯ ೬ನೆಯ ಸಾಲುಗಳು ಒಂದು ಸಮನಾಗಿದ್ದು, ಮೂರು ಮತ್ತು ನಾಲ್ಕು ಮಾತ್ರೆಗಳ ಆರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆ ಜಾತಿಯ ಪದ್ಯದಲ್ಲಿ “U _ U” ರೀತಿಯ ಮಧ್ಯ ಗುರುವುಳ್ಳ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣವುಳ್ಳವು ಭಾಮಿನೀ ಷಟ್ಪದಿಗಳೆನಿಸುವುವು.

() ಪರಿವರ್ಧಿನೀಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು, ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ ಮತ್ತು ೬ನೆಯ ಸಾಲುಗಳು ಒಂದು ಸಮನಾಗಿದ್ದು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ ಪದ್ಯದಲ್ಲಿ ” U _ U ” ರೀತಿಯಿರುವ ಗಣವು ಎಲ್ಲಿಯೂ ಬರಕೂಡದುಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆನಿಸುವುದು ಲಕ್ಷಣದಿಂದ ಕೂಡಿದ ಪದ್ಯವು ಪರಿವರ್ಧಿನೀಷಟ್ಪದಿಯೆನಿಸುವುದು.
() ವಾರ್ಧಕಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರುಪಾದಗಳುಳ್ಳ ಪದ್ಯ, , , ನೆಯ ಪಾದಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿದೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಆರುಗಣ ಮತ್ತು ಮೇಲೊಂದು ಗುರುವಿನಿಂದ ಕೂಡಿರುತ್ತವೆ, ನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆಇಂಥ ಲಕ್ಷಣಗಳುಳ್ಳ ಪದ್ಯಗಳೇ ವಾರ್ಧಕಷಟ್ಪದಿಗಳೆನಿಸುವುವು.
******