ನನ್ನ ಪುಟಗಳು

13 ಸೆಪ್ಟೆಂಬರ್ 2019

ಮರೆಯಾದ ಮಾಣಿಕ್ಯ ಶಿವಕುಮಾರರು ಶಿವೈಕ್ಯ

                            ಕನ್ನಡ ನಾಡಿನ ದೇವ ಪುರುಷನೆ
                            ನಿಮಗಿದೆನ್ನ ನುಡಿನಮನ
                            ಅನಾಥ ಮಕ್ಕಳ ಪಾಲಿಗೆ , ನಿಮ್ಮದೆ ಕರುಣಾ||
ಅನ್ನ ಅಕ್ಷರ ಆಶ್ರಯದ ಹರಿಕಾರ
ಹೊಳೆಯಂತೆ ಹರಿಸಿದೆ ಶ್ರೀ ಶಿವಕುಮಾರ
ಗಂಗೆಯ ಉದರದಲ್ಲಿ ಜನಿಸಿದ ಕುವರ
ಇವರೇ ನಮ್ಮ ಸಿದ್ದಗಂಗಾದ ಶ್ರೀ ಶಿವುಕುಮಾರ
                            ಶಿವಣ್ಣನೆಂದು ಬೆಳೆದವರೆ
                            ತಂದೆ ತಾಯಿ ಪ್ರೀತಿಯಿಂದ ಅಕ್ಷರ ಕಲಿತವರೆ
                            ಬಾಲ್ಯದಲ್ಲಿ ತಾಯಿಯಿಂದ ದೂರವಾಗಿ
                            ಅಕ್ಕನ ಆಶ್ರಯ ಪಡೆದ ಪ್ರತಿಭಾನ್ವಿತರೆ
ಉದ್ದಾನ ಸ್ವಾಮಿಗಳ ಒಡನಾಡಿಯಾದವರೆ
ಮಠದಲ್ಲಿ ಮನೆ ಮಾಡಿದವೆರೆ
ಉದ್ದಾನ ಶ್ರೀಗಳ ಆಶ್ರಯದಿ ಸನ್ಯಾಸ ಧಿಕ್ಷೆ ಪಡೆದವರೆ
ಶ್ರೀಗಳು ಲಿಂಗೈಕ್ಯರಾದಾಗ ಮಠದ ಉತ್ತರಾಧಿಕಾರಿಯಾದವರೆ
                            ಮಠದ ಒಳಿತಿಗೆ ಶ್ರಮವಹಿಸಿ ದುಡಿದವರೆ
                            ಪ್ರತಿ ಮಕ್ಕಳ ಮನದಲ್ಲಿ ಸಂಸ್ಕಾರದ ಮನೆ ಮಾಡಿದವರೆ
                            ಜಾತಿ ಭೇದವ ಮಾಡದೆ
                            ವಿಧ್ಯೇಯನ್ನು ಬೇಡಿ ಬಂದ ಮಕ್ಕಳಿಗೆ ತ್ರೀವಿಧಿಯಾದವರೆ
ತಂದೆ ತಾಯಿ ಮರೆತು ಬಂದ ಮಕ್ಕಳು
ನಿನ್ನೋಳು ಎಲ್ಲವ ಕಂಡವರು
ಅನ್ನ ಅಕ್ಷರ ಆಶ್ರಯ ನಿಡಿದವರೆ
ಸಿಧ್ಧಗಂಗೆಯಲ್ಲಿ ಶ್ರೀ ಪುರುಷರದವರೆ 
                            ಕಾಯಕದ ಅಡಿಯಲ್ಲಿ
                            ಹಗಲಿರುಳು ದುಡಿದು
                            ಬಸವಣ್ಣವರ ತತ್ವದಲ್ಲಿ ಕಾಯಕಯೋಗಿಯಾದವರೆ
                            ಶಾಲಾ ಕಾಲೇಜುಗಳ ಸ್ಥಾಪನೆಗೆ ಆರಂಭs ನಿಡಿದವರೆ
                            ಲಕ್ಷಾಂತರ ವಿಧ್ಯಾರ್ಥಿಗಳ ಬಾಳಿಗೆ ಜ್ಯೋತಿಯಾದವರೆ
ಯಾರೆ ಬರಲಿ ,ಎಷ್ಟೆ ಬರಲಿ
ನಿಲ್ಲದು ಅಗ್ನಿಯ ಅಲೆಗಳು
ನಿರಂತರವಾಗಿ ನಡೆಯುತಿದೆ
ನಡೆದಾಡುವ ದೇವರ ಪವಾಡಗಳು
                            ಎಷ್ಟು ಸಂದಿವೆ ತಿಳಿಯದು ಪ್ರಶಸ್ತಿ ಪುರಸ್ಕಾರಗಳು
                            ಕರ್ನಾಟಕ ರತ್ನವು ಡಾಕ್ಟರೇಟ್ ಪದವಿಯು
                            ಹರಿದು ಬರುವ ಭಕ್ತರ ಸಾಗರದಿಂದ
                            ಶತಮಾನ ಕಂಡ ಸಂತರಿಗೆ ಎಂದೊ ಸಮದಿದೆ ಭಕ್ತರ ಭಾರತ ರತ್ನ
     ಸಾರ್ಥಕ ಬದುಕಿನ ಶ್ರೀಗಳು
     ಕಾಯಕಯೋಗಿ ಕರುಣಾಮಯಿ
     ಹೆಜ್ಜೆ ಹೆಜ್ಜೆಗು ಬಸವತತ್ವದ ನುಡಿಗಳು
     ತಾಯಿಯಂತೆ ಮಕ್ಕಳ ನೋಡುವ ಶತಾಯುಷಿಗಳು
                            ಆಡಂಬರವಿಲ್ಲದ ಆಧ್ಯಾತ್ಮಜೀವಿ
                            ಶಿವನಿಚ್ಚೆಯಂತೆ ಶಿವಲೋಕಕ್ಕೆ ನಡೆದೆ
                            ಅನಾಥ ಮಕ್ಕಳ ಎದೆಗೆ ಗುದ್ದಿ ಗದ್ದುಗೆಯಾದವರೆ
                            ನಾನೆಂದೆ ದೇವರ ಯಾತ್ರೆ , ದೇವರ ಕಡೆಗೆ
     ಗುರುವೆ ಶ್ರೀ ಗುರುವೆ ಶಿವಕುಮಾರ ಸದ್ಗುರುವೆ
     ನಿಮಗಿದೆನ್ನ ಭಕ್ತಿ ಪೂರ್ವ ನುಡಿನಮನ

                   
                            -:ರಚನೆ:-
                        ಮಂಜುನಾಥ ಚನ್ನಬಸಪ್ಪ ಘಾಳಿ
                      ಸಾ| ಯಾವಗಲ್ಲ   ಮೋ||೮೧೦೫೮೫೦೭೧೨



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ