ನನ್ನ ಪುಟಗಳು

10 ಜುಲೈ 2020

ವಾದಿರಾಜರು

ವಾದಿರಾಜರು

Sameer Bharadwaj on Twitter: "Today is #Vadiraja Jayanti ...

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ.

 ವಾದಿರಾಜರು ನೂರಾ ಇಪ್ಪತ್ತು ವರ್ಷಗಳವರೆಗೆ ಕಣ್ಣಿಗೆ ಗೋಚರರಾಗಿದ್ದಂತಹವರುಹಯವದನ ವಾದಿರಾಜರ ಆರಾದ್ಯ ದೈವ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ ಸನ್ಯಾಸ ಜೀವನದ ಅವಧಿ ೧೧೨ ವರ್ಷಗಳು. ಶಿರಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಇವರ ಬೃಂದಾವನವಿದೆ.

 ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ವಾದಿರಾಜರು ಕೃತಿಗಳನ್ನು ರಚಿಸಿದ್ದಾರೆ. ಹಯವದನ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಈವರೆಗೆ ವಾದಿರಾಜರು ರಚಿಸಿರುವ ೩೪೩ ಕೀರ್ತನೆಗಳು ಲಭ್ಯವಾಗಿದ್ದುಅದರಲ್ಲಿ ೯ ದೀರ್ಘ ಕೃತಿಗಳು. ವಾದಿರಾಜರು ರಚಿಸಿರುವ ಲಕ್ಷೀಶೋಭಾನ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆಕಾರಣವಾಗಿರಬಹುದು -

 "ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು

ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ"

 ಇತರ ವಿವರಗಳು

ವಾದಿರಾಜರು ಬ್ರಾಹ್ಮಣ ಮನೆತನಕ್ಕೆ ಸೇರಿದವರು. ತಮ್ಮ ಪಾಂಡಿತ್ಯದಿಂದಾಗಿ ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟಿದ್ದರು. "ಕುಡುಮ" ಎಂದು ಕರೆಯಲಾಗುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳವೆಂದು ಹೆಸರಿಸಿದವರು ವಾದಿರಾಜರು.

**** ಮಾಹಿತಿ ಕೃಪೆ: ವಿಕಿಪೀಡಿಯಾ ****

- ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಲೇಖನ

ವಾದಿರಾಜರು ಕನ್ನಡ ಹರಿದಾಸ ಸಾಹಿತ್ಯದ ಧೀಮಂತ ಶ್ರೇಷ್ಠರು. ಉಡುಪಿಯ ಶ್ರೀಕೃಷ್ಣನ ಪೂಜಾ ಪರಿಸರದಲ್ಲಿ ಕನ್ನಡದ ಸರಳ ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕ ಮನೀಷಿಗಳು ವಾದಿರಾಜರು. ಭಗವಂತನ ದಶಾವತಾರದ ವರ್ಣನೆಯನ್ನು ವೈವಿಧ್ಯಪೂರ್ಣವಾಗಿ ವಿಶಿಷ್ಟಶೈಲಿಯಲ್ಲಿ ಬಿತ್ತರಿಸುವ ವಾದಿರಾಜರ ಕೃತಿಗಳ ಚಮತ್ಕಾರ ಅಪೂರ್ವ. ಲೀಲಾಜಾಲವಾಗಿ ಹೊಸ ಬೀಸಿನಲ್ಲಿ ಸುಂದರ ಸಮನೋಹರವಾಗಿ ಕಾವ್ಯಕಲೆಯನ್ನು ಅವರು ಅರಳಿಸುವ ಪರಿ ಅನನ್ಯ.

ಪುರಂದರದಾಸರುವ್ಯಾಸರಾಜರುಕನಕದಾಸರು ಮುಂತಾದವರ ಸಮಕಾಲೀನರಾಗಿದ್ದು ಉಡುಪಿಯ ಶ್ರೀಕೃಷ್ಣನ ಸೇವೆಯಲ್ಲಿ ಪರಿವ್ರಾಜಕರಾಗಿ ಪರಮ ಪೂಜ್ಯರೆನಿಸಿದರು. ತಾವಿದ್ದ ಪರಿಸರದಲ್ಲೆಲ್ಲಾ ಧಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿ ದಾರ್ಶನಿಕ ಧೃವತಾರೆಗಳೆನಿಸಿದರು. ಉಪಾಸ್ಯಮೂರ್ತಿ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು 'ಹಯವದನಅಂಕಿತದಿಂದ ಸಹಸ್ರ ಸಹಸ್ರ ಕೀರ್ತನೆಗಳನ್ನು ಕನ್ನಡ ಜನರಭಗವದ್ಭಕ್ತರ ಒಡಲಿಗೆ ಹಾಕಿದ ಪುಣ್ಯಪುರುಷರು ಶ್ರೀ ವಾದಿರಾಜರು.

 

ದಿವ್ಯಭಾವಗೀತೆಯ ಸಂಚಾರಿ

ದಾಸ-ವ್ಯಾಸ ಪರಂಪರೆಗಳ ಅದ್ಭುತ ಪ್ರತಿಭೆ ಪಾಂಡಿತ್ಯಗಳ ಮಹಾನ್‌ ಪ್ರತೀಕವಾಗಿದ್ದ ವಾದಿರಾಜರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೀರ್ತನೆ ಹಾಗೂ ಪಾಡ್ದನಗಳನ್ನು ಜನಸಾಮಾನ್ಯರ ಆತ್ಮೋದ್ಧಾರಕ್ಕಾಗಿ ರಚಿಸಿತಾವೇ ಅವನ್ನು ಹಾಡಿಹಾಡಿಸಿಶತಮಾನಗಳ ಕಾಲ ಜನಸಮುದಾಯವನ್ನು ತಣಿಸುತ್ತಿರುವ ಯತಿಶ್ರೇಷ್ಠರು. ಇವರ ಸುಳಾದಿಉಗಾಭೋಗದೇವರನಾಮಗಳು ದಿವ್ಯಭಾವಗೀತೆಯ ಸೊಬಗಿನಲ್ಲಿ ಸಂಚಾರಿಯಾಗುತ್ತವೆ. ತತ್ವಭೋದಕ ದಿವ್ಯಾಮೃತವಾಗಿ ಅವು ಪರಿಣಮಿಸಿವೆ. ತಪಸ್ಸುವಿದ್ಯೆವಿರಕ್ತಿಭಗವದ್ಭಕ್ತಿಹಾಗೂ ವಾತ್ಸಲ್ಯಗಳಿಂದ ಯತಿಶ್ರೇಷ್ಠರೆನ್ನಿಸಿದ ವಾದಿರಾಜರು ಕನ್ನಡ ಸಂಸ್ಕೃತಿಗೆಸಾಹಿತ್ಯ ಸಂಗೀತಗಳಿಗೆದರ್ಶನಕ್ಕೆಸಮಾಜದ ಸಂಘಟನೆಗೆಸದಾಚಾರದ ಸಾಮೂಹಿಕ ಪುನರುದ್ದೀಪನಕ್ಕೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯ.

ದಶಾವತಾರದ ಕಲ್ಪನೆ

ಸಾಮಾಜಿಕ ಪ್ರಜ್ಞೆ ಹಾಗೂ ಸಮಾಜದ ಬಗೆ ಅಪಾರ ಕಳಕಳಿಯನ್ನು ತಮ್ಮ ಕೃತಿಗಳಿಂದಕಾರ್ಯಗಳಿಂದ ಮೆರೆದಿರುವ ವಾದಿರಾಜರು ವಾಸ್ತವ ಪ್ರಜ್ಞೆಯೆಡೆಗೆ ಜನರನ್ನು ಕರೆದೊಯ್ಯುವುದರಲ್ಲಿ ನಿಷ್ಣಾತರು. ಭಗವನ್ನಾಮಸ್ಮರಣೆ ಮನುಷ್ಯನಿಗೆ ಉತ್ತಮ ಹಿನ್ನೆಲೆಯನ್ನು ನಿರ್ಮಿಸಬಲ್ಲುದೆಂದು ಹೇಳಿ 'ಪ್ರಾತಃಕಾಲದಲ್ಲೆದ್ದು ಪಾರ್ಥಸಾರಥಿಯನು ಪ್ರೀತೀಲಿ ನೆನೆದರೆ ಪ್ರೀತನಾಗುವ ಹರಿಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆಎಂಬ ಸಂದೇಶ ನೀಡಿದವರು. ಅವರ ದಶಾವತಾರ ವರ್ಣನೆಗಳಂತೂ ಭಗವಂತನ ಹತ್ತವತಾರಗಳ ಮುತ್ತಿನ ಮಣಿಹಾರ. ದಶಾವತಾರದ ಕಾವ್ಯರಚನೆಗೆ ಕೈಯಿಟ್ಟೊಡನೆಯೇ ಸ್ವಾದಿಯ ವಾದಿರಾಜರು ಮೈಮರೆಯುತ್ತಾರೆ. ಕಾವ್ಯಸರಸ್ವತಿ ಗೆಜ್ಜೆ ಕಟ್ಟಿಕೊಂಡು ಅವರ ಭಾವಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನರ್ತಿಸುವ ನಾದವೈಖರಿ ಅಸಾಧಾರಣ.

 

ಸಂಸ್ಕೃತಿಯ ಪುನರುತ್ಥಾನ

ವೈದಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ವಾದಿರಾಜರ ಪಾತ್ರ ಬಹಳ ಹಿರಿದು. ತತ್ವಜ್ಞಾನದ ಪ್ರಸಾರ. ವೈಷ್ಣವ ಸಿದ್ಧಾಂತದ ಪ್ರಬಲ ಪ್ರತಿಷ್ಠಾಪನೆಯಲ್ಲಿ ಅದ್ಭುತ ಕ್ರಿಯಾಶಕ್ತಿಯಾದವರು ವಾದಿರಾಜರು. ತಪಶ್ಯಕ್ತಿಮಂತ್ರಸಿದ್ಧಿ ಹಾಗೂ ನಿಶ್ಚಿತ ತತ್ವಜ್ಞಾನಗಳ ತ್ರಿವೇಣಿ ಸಂಗಮವಾಗಿದ್ದ ವಾದಿರಾಜರಿಗೆ ರಾಜ ಮಹಾರಾಜರುಗಳೇ ನಾ ಮುಂದು ತಾ ಮುಂದು ಎಂದು ಬಂದು ಸೇವೆ ಮಾಡುತ್ತಿದ್ದರು. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ವಾದಿರಾಜರನ್ನು ಅನೇಕ ಸಾಮ್ರಾಟ ಸಾಮಂತರುಗಳು ಪ್ರಸಂಗಾಭರಣತೀರ್ಥಷಡ್ದರ್ಶನ ಷಣ್ಮುಖಸರ್ವಜ್ಞಕಲ್ಪಕವಿಕುಲತಿಲಕ ಮುಂತಾದ ಮಹತ್ವದ ಪ್ರಶಸ್ತಿ ಗೌರವಗಳನ್ನು ನೀಡಿ ಗೌರವಿಸಿದರು. ಗೋವೆಯ ದೈವಜ್ಞ ಬ್ರಾಹ್ಮಣರನ್ನು ಅವರ ಸ್ವರೂಪ ಗ್ರಹಿಸಿ ಮುದ್ರಾಧಾರಣೆ ಮಾಡಿ ಚಕ್ರಾಂಕನ ನೀಡಿ ಮಾಧ್ವ ತತ್ವಜ್ಞಾನದ ಮುಮುಕ್ಷ ುಗಳಾಗುವಂತೆ ಅವರನ್ನು ಅನುಗ್ರಹಿಸಿದರು. ಧರ್ಮಸ್ಥಳ ಮುಂತಾದೆಡೆಗಳಲ್ಲಿ ಈಶ್ವರನನ್ನು ಅರ್ಚಿಸಿ ಪ್ರತಿಷ್ಠಾಪನೆ ಮಾಡಿದ ಇವರ ಸಾಧನೆಯು ವೈಷ್ಣವರು ಶಿವದ್ವೇಷಿಗಳೆಂಬ ಭ್ರಮೆಯನ್ನು ಸಂಪೂರ್ಣ ನಿವಾರಿಸಿತು. ಇವರು ಪಾಠ ಪ್ರವಚನಗಳನ್ನು ನಿರಂತರ ನಡೆಸಿ ಸಿದ್ಧಾಂತ ಪರಂಪರೆಯನ್ನು ಮುಂದುವರೆಸಬಲ್ಲ ಅನೇಕ ಶಿಷ್ಯರನ್ನು ಅರಳಿಸಿದರು. ಇವರ ಸೋದರರೂ ಆನಂತರ ಭಂಡಾರಕೇರಿ ಪೀಠವನ್ನಲಂಕರಿಸಿದವರೂಇವರ ಯುಕ್ತಿಮಲ್ಲಿಕಾ ಗ್ರಂಥಕ್ಕೆ ಟೀಕೆ ಬರೆದವರೂ ಆದ ಸುರೋತ್ತಮತೀರ್ಥರುಇವರ ರುಕ್ಮಿಣೀಶವಿಜಯತೀರ್ಥಪ್ರಬಂಧಗಳಿಗೆ ಉತ್ಕೃಷ್ಟ ವ್ಯಾಖ್ಯಾನಗಳನ್ನು ಬರೆದಿರುವ ನಾರಾಯಣಾಚಾರ್ಯರುಇವರ ಜೀವನಚರಿತ್ರೆಯನ್ನು ಹೃದಯಂಗಮವಾಗಿ ಚಿತ್ರಿಸಿರುವ ವೃತ್ತರತ್ನ ಸಂಗ್ರಹಕಾರ ರಘುನಾಥಾಚಾರ್ಯರೂ ಈ ಪರಂಪರೆಯಲ್ಲಿ ಪಲ್ಲವಿಸಿದರು.

 

ಕನಕದಾಸರ ಅಭಿಮಾನ

ಕನಕದಾಸರಿಗೆ ವಾದಿರಾಜರ ಮೇಲೆವಾದಿರಾಜರಿಗೆ ಕನಕದಾಸರ ಮೇಲೆ ವಿಶೇಷ ಅಭಿಮಾನ. ಕನಕದಾಸರು ತಮ್ಮ ಮೋಹನತರಂಗಿಣಿಯಲ್ಲಿ ತಾನೂ 'ತ್ರಿವಿಕ್ರಮದಾಸರ ದಾಸಎಂದು ಅವರನ್ನು ಸ್ತುತಿಸಿದ್ದಾರೆ. ಅನ್ಯಜಾತಿಯವರಾದರೂ ಹರಿದಾಸರಾಗಿದ್ದ ಕನಕದಾಸರ ಮೇಲೆ ತೋರಿದ ಅಭಿಮಾನಸಂಸ್ಕೃತ ಬಾರದ ಸಾಮಾನ್ಯರಿಗಾಗಿ ತುಳುವಿನಲ್ಲಿ ದಶಾವತಾರ ರಚಿಸಿದ ಔದಾರ್ಯವಾದಿರಾಜರ ಘನತೆಗೆ ದ್ಯೋತಕ. ವಾದಿರಾಜರು ಕನ್ನಡಹರಿದಾಸಸಾಹಿತ್ಯದ ಸವ್ಯಸಾಚಿಗಳು. ಸೊಬಗುಲಾಲಿತ್ಯವೇದಾಂತ ಭಾವಗಳಸಾಮಾಜಿಕ ತತ್ವಗಳ ಅಪೂರ್ವ ಕೃತಿಗಳನ್ನು ಅವರು ನೀಡಿದ್ದಾರೆ. ವೈಕುಂಠವರ್ಣನೆ,ಲಕ್ಷ್ಮೀಶೋಭಾನೆ,ಸ್ವಪ್ನಪದಗುಂಡಕ್ರಿಯೆತತ್ವಸುವ್ವಾಲಿಭ್ರಮರಗೀತೆನಾರದಕೊರವಂಜಿ ಮುಂತಾದ ಕೃತಿಗಳು ಅವರ ಲೋಕಾನುಭವಕ್ಕೆಅನುಭಾವಕ್ಕೆಸಾಹಿತ್ಯ ಸಾಮರ್ಥ್ಯ‌ಗಳಿಗೆ ನಿಚ್ಚಳವಾದ ನಿದರ್ಶನವಾಗಿವೆ.

 

ಪೂಜಾಪದ್ಧತಿಯಲ್ಲಿ ಸುಧಾರಣೆ

ವಾದಿರಾಜರು ಉಡುಪಿಯ ಕೃಷ್ಣನ ಪೂಜಾಪದ್ಧತಿಯಲ್ಲಿ ಸುಧಾರಣೆಯನ್ನು ತಂದರು. ಎರಡು ತಿಂಗಳ ಪೂಜಾಪದ್ಧತಿಯನ್ನು ಎರಡು ವರ್ಷಗಳ ಪರ್ಯಾಯ ಪದ್ಧತಿಯನ್ನಾಗಿ ಪುನವ್ರ್ಯವಸ್ಥೆ ಮಾಡಿದರು. ಅಷ್ಟಮಠಗಳಿಗೆ ಅರಸರುಗಳ ಸಹಕಾರದಿಂದ ಉತ್ತಮ ಭೂಸ್ಥಿತಿಗಳನ್ನೇರ್ಪಡಿಸಿದರು. ತಮ್ಮ ಕನ್ನಡದ ಹಾಡು 'ಲಕುಮಿನಾರಾಯಣ ಜಯ ಲಕುಮಿನಾರಾಯಣ'ವನ್ನು ಎಲ್ಲರೂ ಯತಿಗಳ ಸಹಿತವಾಗಿ ಪ್ರತಿರಾತ್ರಿಯ ಪೂಜಾಕಾಲದಲ್ಲಿ ಭಜನ ರೀತಿಯಿಂದ ಹಾಡುತ್ತಾ ತಾಳ ಬಾರಿಸುತ್ತಾನರ್ತನಸೇವೆಯ ಹೊಸ ಭಜನ ಸಂಪ್ರದಾಯವೊಂದನ್ನು ಬಳಕೆಗೆ ತಂದರು. ಪೂರ್ಚುಗೀಸರ ಮತಾಂತರ ಉಪಟಳ ತಾಳದೇ ಕರಾವಳೀ ಕನ್ನಡದ ಕಡೆಗೆ ಬಂದು ನೆಲೆಸಿದ್ದ ಗೋವಾ ಜನರ ಸ್ವರೂಪಗತವಾಗಿದ್ದ ಬ್ರಾಹ್ಮಣಸಂಸ್ಕಾರವನ್ನು ಗ್ರಹಣ ಮಾಡಿದ ವಾದಿರಾಜರು ಅವರಿಗೆಲ್ಲಾ ಚಕ್ರಾಂಕನದ ಮೂಲಕ ಭಾಗವತ ಧರ್ಮದ ದೀಕ್ಷೆ ನೀಡಿ ತಮ್ಮ ಮಠದ ಮುಖ್ಯ ಶಿಷ್ಯರನ್ನಾಗಿ ಪರಿಗಣಿಸಿದರು. ಅದೇ ಮೇರೆಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಕೆಲವು ಸಾರಸ್ವತರಿಗೆ ಮಾಧ್ವಮತ ದೀಕ್ಷೆ ಕೊಟ್ಟು ಪುರಸ್ಕರಿಸಿದರು.

 

ಕುಡುಮ ಎಂದು ಕರೆಯುತ್ತಿದ್ದ ತೀರ್ಥಕ್ಷೇತ್ರವನ್ನು ವಾದಿರಾಜರು 'ಧರ್ಮಸ್ಥಳಎಂದು ಹೆಸರಿಟ್ಟು ಅಲ್ಲಿ ಆಗ ಮಂಜುನಾಥನ ಪ್ರತಿಷ್ಠಾಪನೆಯ ಕಾರ್ಯ ನೆರವೇರಿಸಿದರು. ಸಕಲ ಹರಿದಾಸರಿಂದಲೂ ವಾಯುಪದಾರ್ಹ ಋುಜುಗಣಸ್ತರೆಂದೇ ಕೊಂಡಾಡಲ್ಪಟ್ಟ ವಾದಿರಾಜರು ಬದರಿಕಾಶ್ರಮಕ್ಕೆ ಹೋಗಿ ತ್ರಿವಿಕ್ರಮೂರ್ತಿಯನ್ನು ಪಡೆದು ಭೂತರಾಜರ ಮೂಲಕ ಪುಣ್ಯಕ್ಷೇತ್ರ ಸ್ವಾದಿಯಲ್ಲಿ ಅದನ್ನು ಪ್ರತಿಷ್ಠಾಪಿಸಿದರು.

 

ಕನ್ನಡ ಯಶೋಡಿಂಡಿಮ

ಕಲಿಯುಗದಲ್ಲಿ ಭಗವಂತನನ್ನು ಕಂಡು ಆತ್ಮಾನುಭವವನ್ನು ಉಂಡ ಕೆಲವೇ ಪ್ರಭಾವಿಗಳಾದ ಅನುಭಾವಿಗಳಲ್ಲಿ ಅಗ್ರಗಣ್ಯರು ವಾದಿರಾಜರು. ವಾದಿರಾಜರ ಬದುಕೇ ಚತುರ್ಮುಖ ಬ್ರಹ್ಮನಂತೆ. ಅವರು ಸರ್ವಸಂಗ ಪರಿತ್ಯಾಗ ಮಾಡಿದ ಪರಿವ್ರಾಹಕ ಪ್ರಭುಗಳಾದರೂ ರಾಜರೆಂದೇ ವಿಖ್ಯಾತರಾಗಿದ್ದಾರೆ. ಸದ್ಗ್ರಂಥ - ಉದ್ಗ್ರಂಥಗಳನ್ನು ರಚಿಸಿ ದರ್ಶನ ಜಗತ್ತಿನ ಗೌರೀಶಂಕರವೆನ್ನಿಸಿಕೊಂಡರೂಮಾಘನ ಶಿಶುಪಾಲವಧವನ್ನು ಮೀರಿಸುವ ರಸಕಾರಂಜಿ ರುಕ್ಮಿಣೀಶ ವಿಜಯವನ್ನು ರಚಿಸಿ ಕವಿರಾಜರೂ ಆಗಿದ್ದಾರೆ. ಅವರ ಅಶ್ವಧಾಟಿಯಂತೂ ಕಾವ್ಯದಲ್ಲಿ ಹೆಜ್ಜೆಹೆಜ್ಜೆಗೂ ಕುಣಿಯುತ್ತಾ ಪ್ರಾಸಾಲಂಕಾರಗಳ ಕಿಂಕಿಣಿನಾದವನ್ನು ನಿನದಿಸುತ್ತದೆ. ಭಾವದ ರಿಂಗಣಗುಣಿತಕ್ಕೆ ತಾಳಹಾಕಿ ರಸಮೇಳ ನಿರ್ಮಿಸಿರುವ ಅವರ ರುಕ್ಮಿಣೀಶವಿಜಯ ಕಲ್ಪನಾ ಸೌಂದರ್ಯಕ್ಕೊಂದು ಸುಂದರ ದೃಷ್ಟಾಂತ. ರುಕ್ಮಿಣೀಶವಿಜಯದ 'ಕುಂಡಲೀಕೃತ ಮನೋರಮರಾಮಾಖಂಡಿತಾನನ ಸರೋರುಹಧಾಮಾಗಂಡಚುಂಬನ ಕುತೂಹಲಕಾಮಾ|| ಶಂಭ್ವಾದ್ಯೈಃ ಪರಿಷೇವಿತಾಂ ಸುವಸನಾಂ ಜಾಂಬೂನದಾಲಂಕೃತಾಂ ಅಂಬಾಂ ತಾಂ ಪ್ರಣತೋಸ್ಮಿ ಕೃಷ್ಣರಮಣೀಂ ಲಂಬಾಲಕಾಂ ರುಕ್ಮಿಣೀಂಎನ್ನುವ ಪದಪುಂಜಗಳಲ್ಲಿಶಬ್ದಕುಂಜಗಳಲ್ಲಿ ಪುಟಿಯುವ ರಸಾಕಾರಂಜಿಯನ್ನು ಕಂಡು ಪುಣೆಯ ವಿದ್ವಜ್ಜನರು ವಿಸ್ಮಯಗೊಂಡಿದ್ದೇನೂ ಆಶ್ಚರ್ಯವೇನಲ್ಲ. ತಮ್ಮ ಕೃತಿಕೌಶಲ್ಯದಿಂದ ಹೊರನಾಡಿನಲ್ಲಿಯೂ ಕನ್ನಡಿಗರ ವಿಜಯಧ್ವಜವನ್ನು ಹಿಡಿದೆತ್ತಿ ಯಶೋಡಿಂಡಿಮವನ್ನು ಮೊಳಗಿಸಿದ ರಾಜರೆಂದರೆ ವಾದಿರಾಜರೊಬ್ಬರೇ.

 

ಸರಳತೆಯ ಸಾಕ್ಷಾತ್ಕಾರ

ಶಾಸ್ತ್ರೀಯ ಸಾಹಿತ್ಯದ ಇತಿಹಾಸದಲ್ಲಿ ಮುಖ್ಯ ಮೈಲಿಗಲ್ಲಾಗಿರುವ 'ಯುಕ್ತಿಮಲ್ಲಿಕಾವಾದಿರಾಜರ ಶಾಸ್ತ್ರಪ್ರಭುತ್ವ ಹಾಗೂ ಸಾಹಿತ್ಯಪಟುತ್ವಗಳ ಎತ್ತರ - ಬಿತ್ತರಗಳನ್ನು ದಿಟ್ಟವಾಗಿ ಮೂಡಿಸುವ ಕೃತಿ. ಶ್ರೀಮನ್ನ್ಯಾಯಸುಧಾ ಹಾಗೂ ತತ್ವಪ್ರಕಾಶಿಕಾ ಕೃತಿಗಳಿಗೆ ವಾದಿರಾಜರು ಬರೆದಿರುವ 'ಗುರ್ವರ್ಥದೀಪಿಕೆಎಂಬ ಟೀಕಾಗ್ರಂಥ ವೇದಾಂತಸಾರದ ರಹಸ್ಯಗಳನ್ನೆಲ್ಲಾಸುಧಾ ಪ್ರಮೇಯಗಳನ್ನೆಲ್ಲಾ ಸಂಪೂರ್ಣ ತಿಳಿಸಿಕೊಡುವ ಸುಂದರ ಗ್ರಂಥ. ಅನಂದತೀರ್ಥರ ಜ್ಞಾನ ದಿಗಂತಗಳಿಗೆ ಹಿಡಿದಿಟ್ಟ ಕನ್ನಡಿಯಂತೆ ಕಂಗೊಳಿಸುತ್ತಿರುವ ವಾದಿರಾಜರ 'ಮಹಾಭಾರತ ತಾತ್ಪರ್ಯನಿರ್ಣಯ'ದ ಟಿಪ್ಪಣಿ ಸರಳತೆಯ ಸಾಕ್ಷಾತ್ಕಾರ. ವಾದಿರಾಜರ ವೇದವೇದಾಂತಗಳ ವಿಕ್ರಮದ ಬೌದ್ಧಿಕ ಹಿರಿಮೆಗೆ ಹಾಗೂ ಅವರ ವಾದಕೌಶಲ್ಯ ವಾಗ್ವೈಖರೀವಿಷಯವಿನ್ಯಾಸಪಾಟವಗಳಿಗೆ ನಿತ್ಯನಿದರ್ಶನವೆನ್ನಿಸುವಂತಹ ಕೃತಿಗಳು - 'ಸರಸಭಾರತೀವಿಲಾಸಹಾಗು 'ತೀರ್ಥಪ್ರಬಂಧ'.

ವಾದಿರಾಜರು ಪ್ರಯಾಗದಲ್ಲಿರುವ ಬ್ರಹ್ಮದೇವರ ಸಂಧ್ಯಾಮಂಟಪದಲ್ಲಿ ಧ್ಯಾನಪುಳಕಿತಮೂರ್ತಿಗಳಾಗಿ ಮೈಮರೆತು ಕುಳಿತಿದ್ದಾಗ ವೇದವ್ಯಾಸದೇವರೇ ಅವರಿಗೆ ದರ್ಶನವಿತ್ತು ವಾದಿರಾಜರ ತಾಯಿ ಹರಿಸಿಕೊಂಡಿದ್ದ ಲಕ್ಷಾಲಂಕಾರವನ್ನು ಹೇಳಿಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರಿದಂತಾಗುವುದೆಂದು ನುಡಿದರು. ಆಗ ವಾದಿರಾಜರು ವ್ಯಾಸಭಾರತದ ಹಿನ್ನೆಲೆಯಲ್ಲಿ ಕೋಶಗಳನ್ನು ತಮ್ಮದೇ ಆದ ನಿರೂಪಣ ನೈಪುಣ್ಯದಿಂದ 'ಲಕ್ಷಾಲಂಕಾರ'ವಾಗಿ ರಚಿಸಿ ಸಮರ್ಪಣ ಮಾಡಿದ ವಾದಿರಾಜರು ಪ್ರಾತಃಸ್ಮರಣೀಯರಾಗಿದ್ದಾರೆ.

**** ಮಾಹಿತಿ ಕೃಪೆ: ವಿಜಯ ಕರ್ನಾಟಕ ****

ರತ್ನಾಕರವರ್ಣಿ

ರತ್ನಾಕರವರ್ಣಿ
ರತ್ನಾಕರ ವರ್ಣಿಯ ಕಾಲ್ಪನಿಕ ಚಿತ್ರ (ಕೃಪೆ: www.icarelive.com)
  • ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿ ಕಾಲ ಸುಮಾರು ಕ್ರಿ.೧೫೫೭. (೯ನೇ ತರಗತಿ ಪಠ್ಯಪುಸ್ತಕದಲ್ಲಿ ಈತನ ಕಾಲ ಸು.ಕ್ರಿ..೧೫೬೦ ಎಂದಿದೆ)
  • ಈತನ ತಂದೆಯ ಹೆಸರು ದೇವರಾಜದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ
  • ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.
  • ರತ್ನಾಕರವರ್ಣಿ ರಚಿಸಿದ ಕೃತಿಗಳು:
  • ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು  ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ)
  • ಅಣ್ಣನ ಪದಗಳು

ಘಟನೆ
ಕಾಲ
ಜನನ
೧೫೩೨
ತ್ರಿಲೋಕಶತಕದ ರಚನೆ
೧೫೫೭
ಭರತೇಶವೈಭವದ ರಚನೆ
೧೫೬೭
ವೀರಶೈವನಾದುದು
೧೫೭೨
ಮತ್ತೆ ಜೈನನಾದುದು
೧೫೭೫
ರತ್ನಾಕರಶತಕದ ರಚನೆ
೧೫೭೭
ಅಪರಾಜಿತಶತಕದ ರಚನೆ
೧೫೮೨
ಅಧ್ಯಾತ್ಮಗೀತದ ರಚನೆ
೧೫೮೭
ಮರಣ
೧೬೦೦ರ ಮೇಲೆ
              ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿಇದು ರತ್ನಾಕರವರ್ಣಿಯ ಮೇರು ಕೃತಿಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
 ************************

ಸರ್ವಜ್ಞ

ಸರ್ವಜ್ಞ

ಸರ್ವಜ್ಞ  (ಚಿತ್ರ ಕೃಪೆ: ಗೂಗಲ್ ಚಿತ್ರಗಳು)

(ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎಂದರ್ಥ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.

ಜನನ ಮತ್ತು ಬಾಲ್ಯ

ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ. ಇದು ಈಗ ಸರ್ವಜ್ಞನ ಅಬಲೂರ ಎಂದೇ ಪ್ರಸಿದ್ಧಿ ಪಡೆದಿದೆ.

ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.

ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು.

ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು.

ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.

ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.

ಸರ್ವಜ್ಞ - ತನ್ನ ಬಗೆಗೆ ಹೇಳಿರುವ ತ್ರಿಪದಿಗಳು

೧. ಮುನ್ನ ಪೂರ್ವದಲಾನು ಪನ್ನಗಧರನಾಳು

 ಎನ್ನಯ ಪೆಸರು ಪುಷ್ಪದತ್ತನು-ಎಂದು

ಮನ್ನಿಪರು ನೋಡ ಸರ್ವಜ್ಞ

 

೨. ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ

ಮುಂ ದೇವಸಾಲೆ ಸರ್ವಜ್ಞ – ನೆಂದೆನಿಸಿ

ನಿಂದವನು ತಾನೇ ಸರ್ವಜ್ಞ

 

೩. ಮಕ್ಕಳಿಲ್ಲವು ಎಂದು  ಅಕ್ಕಮಲ್ಲಮ್ಮನು

ದುಕ್ಕದಿ ಬಸವ ಗರಿಪಲ್ಲವ - ಕಾಶಿಯ

ಮುಕ್ಕಣ್ಣಗೆ ಹೋದ ಸರ್ವಜ್ಞ

 

೪. ಮಾಸನೂರ ಬಸವರಸ ಕೊಸನಿಶನ ಕೇಳಲು

ಕಾಶಿಯೀಶನೊಳು ಪಡೆದ ವರ - ವಧು ನಡುವೆ

ಸೂಸಿತೆಂತಲು ಸರ್ವಜ್ಞ

 

೫. ಗಂಡಾಗಬೇಕೆಂದು ಪಿ0ಡವ ನುಂಗಲು

ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು

ಕಂಡುದನೆ ಪೇಳ್ವೆ ಸರ್ವಜ್ಞ

 

೬. ಗಡಿಗೆ-ಮಡಕೆಯ ಕೊಂಡು ಅಡುವಡಾವಿಗೆಯೊಳಗೆ

ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು

ತಡೆ ಬಿಡಲಾಯ್ತು ಸರ್ವಜ್ಞ

 

೭. ಅಂಬಲೂರೊಳಗೆಸೆವ ಕುಂಬಾರಸಾಲೆಯಲಿ

ಇಂದಿನ ಕಳೆಯ ಮಾಳಿಯೊಳು - ಬಸವರಸ

ನಿಂಬಿಟ್ಟನೆನ್ನ ಸರ್ವಜ್ಞ

 

೮. ಬಿಂದುವ ಬಿಟ್ಟು ಹೋದಂದು ಬಸುರಾದಳವ

ಳಂದದಿಯಷ್ಟಾದಶ ಮಾಸ - ಉದರದಲಿ

ನಿಂದು ನಾ ಬೆಳೆದೆ ಸರ್ವಜ್ಞ

 

೯. ಹೆತ್ತವಳು ಮಾಳಿ ಎನ್ನನೊತ್ತಿ ತೆಗೆದವಳು ಕೇಶಿ

ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ

ಬತ್ತಲಿರಿಸಿದಳು ಸರ್ವಜ್ಞ

 

೧೦. ಬೆಳೆದೆನವರಿಂದೆನ್ನ ಕಳೆಯ ಕಂಡವರೆಲ್ಲ

ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ

ತಿಳಿದವರರೆಗು ಸರ್ವಜ್ಞ

 

೧೧. ಗಂಡ ತನ್ನಯದೆಂಬ ಲಂಡೆ ತನ್ನಯದೆಂಬ

ಖಂಡಪರಶುವಿನ ವರಪುತ್ರ - ನಾನು ನೆರೆ

ಕಂಡುದನೆ ಪೇಳ್ವೆ ಸರ್ವಜ್ಞ

 

೧೨. ಮಾಳನು ಮಾಳಿಯು ಕೊಳ್ ತಿಂದ ಹೆಮ್ಮೆಯಲಿ

ಕೇಳೆ ನೀನಾರ ಮಗನೆಂದು - ನಾ ಶಿವನ

ಮೇಳದಣುಗೆಂಬೆ ಸರ್ವಜ್ಞ

 

 

ತ್ರಿಪದಿಗಳು

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.

 

ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು:

 

ಮಾಸೂರ ಬಸವರಸ । ಕೂಸನೀಶನ ಕೇಳೆ।

ಕಾಶಿಯ ಅಭವನೊಳು । ಪಡೆದ ವರವದುವೇ ।

ಸೂಸಿತೆಂತೆನಲು ಸರ್ವಜ್ಞ ॥

 

ಸರ್ವಜ್ಞನೆಂಬುವನು ಗರ್ವದಿಂದಾದವನೇ?

ಸರ್ವರೊಳು ಒಂದೊಂದು ನುಡಿಗಲಿತು

ವಿದ್ಯೆಯ ಪರ್ವತವೆ ಆದ ಸರ್ವಜ್ಞ.

 

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು

ಗೋರ್ಕಲ್ಲಮೇಲೆ ಮಳೆಗರೆದರೆ

ಆಕಲ್ಲು ನೀರುಕುಡಿವುದೆ ಸರ್ವಜ್ಞ?

 

ಸಾಲವನು ಕೊಂಬಾಗ ಹಾಲೋಗರುಂಡಂತೆ

ಸಾಲಿಗರು ಕೊಂಡು ಎಳೆವಾಗ

ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ.

 

ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ

ಏಳು ಸಾವಿರದ ಎಪ್ಪತ್ತು ವಚನಗಳ

ಹೇಳಿದನು ಕೇಳ ಸರ್ವಜ್ಞ."

 

ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ

ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ

ಕಿಚ್ಚು ಹಚ್ಚೆಂದ ಸರ್ವಜ್ಞ

*****ಮಾಹಿತಿ ಕೃಪೆ: ವಿಕಿಪೀಡಿಯಾ*****

ಸಾಳ್ವ ಕವಿ

ಸಾಳ್ವ ಕವಿ 

ಈತ ೧೬ನೆಯ ಶತಮಾನದ ಜೈನಕವಿ. ಸಾಳ್ವಭಾರತ, ರಸರತ್ನಾಕರ, ಶಾರದಾವಿಲಾಸ, ವೈದ್ಯಸಾಂಗತ್ಯ ಎಂಬ ಗ್ರಂಥಗಳ ಕರ್ತೃ. ಈತನ ತಂದೆ ಧರ್ಮಚಂದ್ರ. ಗುರು ದೇಶೀಗಣದ ಶ್ರುತಕೀರ್ತಿ. ವಿಜಯನಗರದ ಅರಸರ ಮಹಾಮಾಂಡಲಿಕರಾಗಿ ನಗಿರೆ ರಾಜ್ಯದಲ್ಲಿ ಆಳುತ್ತಿದ್ದವರ ಪೀಳಿಗೆಯಲ್ಲಿ ಸಾಳ್ವಮಲ್ಲ ಸು.೧೫೫೦ರಲ್ಲಿ ಆಧಿಪತ್ಯ ನಡೆಸುತ್ತಿದ್ದನೆಂದು ಕೆಲವು ಶಾಸನಗಳಿಂದ ತಿಳಿಯುತ್ತದೆ. ಕನ್ನಡ ಭಾಷೆಗೆ ವಿಶೇಷವಾಗಿ ಪ್ರೋತ್ಸಾಹ ನೀಡಿದ್ದ ಈತ ಕವಿಸರೋವರರಾಜಹಂಸ ಎಂಬ ಬಿರುದನ್ನೂ ಪಡೆದಿದ್ದ. ಸಾಳ್ವ ಈತನ ಆಸ್ಥಾನದಲ್ಲಿ ಕವಿಯಾಗಿದ್ದ. ಸಂಸ್ಕಂತ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣತನಾಗಿದ್ದ. ಭಾರತ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದೆ. ಇದರಲ್ಲಿ ಸು. ೮೦೦೦ಪದ್ಯಗಳೂ ೧೬ ಆಶ್ವಾಸಗಳೂ ಇವೆ. ಇದು ಜೈನ ಸಂಪ್ರದಾಯಕ್ಕೆ ಅನುಸಾರವಾಗಿ ರಚಿತವಾಗಿದೆ. ನೇಮೀಶ್ವರಚರಿತ್ರೆ ಎಂಬುದು ಇದಕ್ಕಿರುವ ಮತ್ತೊಂದು ಹೆಸರು. ಇದೊಂದು ಪಾಡುಗವಿತೆ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಕವಿಯ ಪ್ರತಿಭೆ, ಪ್ರೌಢಿಮೆ, ಕಾವ್ಯರಚನಾ ಸಾಮಥ್ರ್ಯವನ್ನು ಸಮರ್ಥಿಸುವ ಅನೇಕ ಸಂದರ್ಭಗಳು ಈ ಕಾವ್ಯದಲ್ಲಿವೆ.

ರಸರತ್ನಾಕರ ರಸ ವಿವೇಚನೆಯನ್ನು ಸಮಗ್ರವಾಗಿ ಒಳಗೊಂಡಿರುವ ಕನ್ನಡದ ಮೊತ್ತ ಮೊದಲ ಲಕ್ಷಣಗ್ರಂಥ. ಇದರಲ್ಲಿ ಒಟ್ಟು ನಾಲ್ಕು ಪ್ರಕರಣಗಳಿವೆ. ಮೊದಲನೆಯ ಪ್ರಕರಣದಲ್ಲಿ ಶೃಂಗಾರ ರಸ ವಿಚಾರ, ಎರಡನೆಯ ಪ್ರಕರಣದಲ್ಲಿ ಉಳಿದ ಎಂಟು ರಸಗಳ ವಿಚಾರ, ಮೂರನೆಯ ಪ್ರಕರಣದಲ್ಲಿ ನಾಯಕ-ನಾಯಿಕಾ ವಿಚಾರ ಮತ್ತು ನಾಲ್ಕನೆಯ ಪ್ರಕರಣದಲ್ಲಿ ವ್ಯಭಿಚಾರೀಭಾವ ಮತ್ತು ಸಾತ್ವಿಕ ಭಾವಗಳ ವಿಚಾರವೆ ವರ್ಣಿತವಾಗಿವೆ. ಸಂಸ್ಕøತದ ಅಲಂಕಾರಿಕರಾದ ಅಮೃತಾನಂದಿ, ರುದ್ರಭಟ್ಟ ವಿದ್ಯಾನಾಥ ಇವರ ಮಾರ್ಗವನ್ನು ಅಲ್ಲಲ್ಲೆ ಅನುಸರಿಸಿದ್ದರೂ ಹೇಮಚಂದ್ರನ ಮತವನ್ನೇ ವಿಶೇಷವಾಗಿ ಈ ಕೃತಿಯಲ್ಲಿ ಅನುಸರಿಸಿರು ವುದು ಕಾಣಬರುತ್ತದೆ. ಲಕ್ಷ್ಯಪದ್ಯಗಳಲ್ಲಿ ಹಲವನ್ನು ಕವಿ ಕಾಮನ ಶೃಂಗಾರ ರತ್ನಾಕರ, ನಾಗವರ್ಮನ ಕಾವ್ಯಾವಲೋಕನ, ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ, ಅಗ್ಗಳ ಇವರ ಗ್ರಂಥಗಳಿಂದಲೂ ಆರಿಸಿಕೊಂಡಿದ್ದಾನೆ. ಇದಲ್ಲದೆ ಉದಯಾದಿತ್ಯ, ಗಣೇಶ್ವರಾಗ್ನಿ ಎಂಬಿಬ್ಬರ ಮತವನ್ನೂ ವಿರುದ್ಧ ರಸ ಪ್ರತಿಪಾದನ ಸಂದರ್ಭದಲ್ಲಿ ಸಂಗ್ರಹಿಸಿದ್ದಾನೆ.

ಶಾರದಾವಿಲಾಸ ಕೃತಿ ಕನ್ನಡದಲ್ಲಿ ಧ್ವನಿ ವಿಚಾರವನ್ನು ಕಂದ, ವೃತ್ತಗಳಲ್ಲಿ ಹೇಳಿರುವ ಮೊದಲ ಗ್ರಂಥ. ಸಂಪೂರ್ಣ ಗ್ರಂಥ ಉಪಲಬ್ಧ ವಿಲ್ಲ. ದೊರೆತಿರುವ ಎರಡನೆಯ ಆಶ್ವಾಸದಲ್ಲಿ ವ್ಯಂಗ್ಯ ವಿಷಯ ವರ್ಣಿತವಾಗಿದೆ.

ವೈದ್ಯಸಾಂಗತ್ಯ ಒಂದು ವೈದ್ಯಗ್ರಂಥ. ಇದು ಸಾಂಗತ್ಯದಲ್ಲಿ ರಚಿತವಾಗಿದೆ. ಪೂರ್ಣಗ್ರಂಥ ದೊರೆತಿಲ್ಲ.

(ಎಸ್.ಎನ್.ಕೆ.)

*******ಮಾಹಿತಿ ಕೃಪೆ: ಮೈಸೂರು ವಿ.ವಿ. ವಿಶ್ವಕೋಶ*******


ಅಭಿನವವಾದಿ ವಿದ್ಯಾನಂದ

ಅಭಿನವವಾದಿ ವಿದ್ಯಾನಂದ

ಕಾವ್ಯಸಾರವೆಂಬ ಸಂಕಲನದ ಸಂಪಾದಕ. ಸಂಕಲನವೆಂದರೆ ಇಲ್ಲಿ ಯಾವುದೇ ಒಂದು ಕಾವ್ಯದ ಸಾರಸಂಗ್ರಹವಲ್ಲ. ಅಂಥ ಅನೇಕಾನೇಕ ಕಾವ್ಯಗಳಲ್ಲಿನ ರಸವತ್ತಾದ ಬಿಡಿ ಪದಗೇಯಗಳ ಸಂಗ್ರಹವಷ್ಟೆ. ಯಾವುದೇ ಸಾಹಿತ್ಯದಲ್ಲಿ ಸಂಕಲನೆ ಗ್ರಂಥಗಳು ಕಾಣಿಸಿಕೊಂಡರೆ, ಆ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆಯೆಂದರ್ಥ, ಕನ್ನಡದಲ್ಲಿ ಬಹಳ ಹಿಂದೆಯೇ ಇಂಥ ಕೃತಿಗಳು ತಲೆದೋರಿದುವು. ಅವುಗಳಲ್ಲಿ ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ ಮತ್ತು ಅದರ ಮಾದರಿಯನ್ನೇ ಅನುಸರಿಸಿ ಬಂದ ಕಾವ್ಯಸಾರ ಬಹಳ ಗಣ್ಯವಾಗಿವೆ. ಇವು ಚಂಪೂ ಗ್ರಂಥಗಳಿಂದ ಆಯ್ದ ಮುಕ್ತಕಗಳ ಸಂಕಲನಗಳು.

ಅಭಿನವವಾದಿ ವಿದ್ಯಾನಂದನ ಕಾಲದೇಶಗಳು ಸರಿಯಾಗಿ ಗೊತ್ತಿಲ್ಲ. ಈತ ಜೈನಕವಿಯೆಂಬುದು ಮಾತ್ರ ನಿಶ್ಚಯ. ಕಾವ್ಯಸಾರದ ಅಂತ್ಯದಲ್ಲಿ ವಿಜಯ ಸಂವತ್ಸರದ ಭಾದ್ರಪದ ಬಹುಳ 3ರಲ್ಲೂ ಶ್ರೀಮದಭಿನವವಾದಿ ವಿದ್ಯಾನಂದ ಸ್ವಾಮಿಗಳು ಭಲ್ಲಾತಕೀಪುರವರಾಧೀಶ್ವರ ಬೈರಾಗಿಗೆ ಬರೆಸಿಕೊಟ್ಟ ಕಾವ್ಯಸಾರಕ್ಕೆ ಮಂಗಳ ಮಹಾಶ್ರೀ ಎಂದಿದೆ. ಇದರಿಂದ ಈ ಸಂಕಲನಕಾರ ಭಲ್ಲಾತಕೀಪುರದವನೆಂದು ತಿಳಿಯುತ್ತದೆ. ಗೇರುಸೊಪ್ಪೆಗೆ ಭಲ್ಲಾತಕೀಪುರವೆಂಬ ಬೇರೊಂದು ಹೆಸರುಂಟಾದ್ದರಿಂದ ಇವನು ಗೇರುಸೊಪ್ಪೆಯವನೆಂದು ಉಹಿಸಬಹುದು. ಕಾವ್ಯಸಾರದಲ್ಲಿ ಚಂದ್ರಶೇಖರನ (ಸು. ೧೪೩೦) ಗುರುಮೂರ್ತಿಶಂಕರಶತಕದಿಂದ ಪದ್ಯಗಳನ್ನು ಉದ್ಧರಿಸಿರುವುದರಿಂದ ವಿದ್ಯಾನಂದ ೧೪೩೦ಕ್ಕಿಂತ ಈಚಿನವನಿರಬೇಕು. ನಗರ ತಾಲ್ಲೂಕಿನ ೪೬ನೆಯ ಶಾಸನದಲ್ಲಿ (೧೫೮೦) ಒಬ್ಬ ವಾದಿವಿದ್ಯಾನಂದನ ಸ್ತುತಿ ಬರುತ್ತದೆ; ಅವನು ಉಪನ್ಯಾಸ, ವಾದಗಳಲ್ಲಿ ಗಟ್ಟಿಗನೆಂದೂ ಅನೇಕ ದೊರೆಗಳ ಅಸ್ಥಾನಗಳಲ್ಲೂ ಗೇರುಸೊಪ್ಪೆಯಲ್ಲೂ ವಾದಿಗಳನ್ನು ಗೆದ್ದು ಸ್ವಮತಸ್ಥಾಪನೆ ಮಾಡಿದನೆಂದೂ ಆ ಶಾಸನದಲ್ಲಿ ಉಕ್ತವಾಗಿದೆ. ಅವನನ್ನು ಪ್ರೋತ್ಸಾಹಿಸಿದ ರಾಜರಲ್ಲಿ ವಿಜಯನಗರದ ಕೃಷ್ಣದೇವರಾಯನ (೧೫೦೯-೧೫೨೯) ಹೆಸರು ಬರುವುದರಿಂದ, ವಿದ್ಯಾನಂದ ಆ ರಾಜನ ಸಮಕಾಲೀನನೆಂದೂ ಹಾಗಿದ್ದಲ್ಲಿ ಗ್ರಂಥಾಂತ್ಯದಲ್ಲಿ ಹೇಳಿರುವ ವಿಜಯ ಸಂವತ್ಸರ ೧೫೨೩ ಆಗಬೇಕೆಂದೂ ಕವಿಚರಿತಕಾರರು ಅಭಿಪ್ರಾಯ ಪಡುತ್ತಾರೆ.

ಕಾವ್ಯಸಾರದಲ್ಲಿ ೪೫ ಅಧ್ಯಾಯಗಳೂ ೧೧೪೩ ಪದ್ಯಗಳೂ ಇವೆ. ಆರಿಸಿಕೊಟ್ಟ ಪದ್ಯಗಳ ಆಕರವನ್ನು ಅಥವಾ ಕರ್ತೃವನ್ನು ಸಂಕಲನಕಾರ ಹೆಸರಿಸಿರುವುದು ಮುಖ್ಯವಾದ ಸಂಗತಿ. ಈಗ ಉಪಲಬ್ಧವಿಲ್ಲದ ಒಂದನೆಯ ಗುಣವತ್ಮನ ಶೂದ್ರಕ, ಹರಿವಂಶಗಳಿಂದ ಅನೇಕ ಪದ್ಯಗಳನ್ನು ಎತ್ತಿಕೊಟ್ಟು ವಿದ್ಯಾನಂದ ಬಹಳ ಉಪಕಾರ ಮಾಡಿದ್ದಾನೆ. ಕೇವಲ ಪದ್ಯಗಳನ್ನಲ್ಲದೆ ಗದ್ಯ ಭಾಗಗಳನ್ನೂ ಉದ್ಧರಿಸಿರುವುದು ಇವನ ಸಂಕಲನಗ್ರಂಥದ ವೈಶಿಷ್ಟ್ಯ. ಕೆಲವು ಚಾಟುಪದ್ಯ, ಮುಕ್ತಕಗಳೂ ಇಲ್ಲಿ ಸೇರಿವೆ.

ಚಂಪೂಕಾವ್ಯಗಳಲ್ಲಿ ಬರುವ ಸಮುದ್ರ, ದೇಶ, ನಗರ, ಋತು, ವಿರಹ, ಯುದ್ಧ ಮುಂತಾದ ನಲವತ್ತೈದು ವಿಷಯಗಳ ವರ್ಣನೆಗಳಿಗೆ ಸಂಬಂಧಿಸಿದ ಪದ್ಯಗಳನ್ನು ಕಾವ್ಯಸಾರದಲ್ಲಿ ನೋಡುತ್ತೇವೆ. ಇವುಗಳನ್ನು ಆಯುವಲ್ಲಿ ವಿದ್ಯಾನಂದನ ಪಾಂಡಿತ್ಯ ಉತ್ತಮ ಅಭಿರುಚಿ, ರಸಿಕತೆ, ಗೋಚರವಾಗುತ್ತವೆ. ಕನ್ನಡ ಸಾಹಿತ್ಯದ ಶ್ರೀಮಂತಿಗೆಯನ್ನು ಈ ಸಂಕಲನಗ್ರಂಥ ನಿರ್ದೇಶಿಸುತ್ತದೆ.

(ಸಿ.ಪಿ.ಕೆ.) 

 

******ಮಾಹಿತಿ ಕೃಪೆ: ಮೈಸೂರು ವಿ.ವಿ. ವಿಶ್ವಕೋಶ******