ನನ್ನ ಪುಟಗಳು

05 ಆಗಸ್ಟ್ 2018

ಬಾಲಕಾರ್ಮಿಕ ಪದ್ಧತಿ ನಿಷೇಧ

ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು

  • ಬಾಲದುಡಿಮೆ (ನಿಷೇಧ ಮತ್ತು ನಿಯಂತ್ರಣ ವಿನಿಯಮ) ಅಧಿಸೂಚನೆ 1986 ರಂತೆ 15 ಉದ್ಯೋಗಗಳು ಮತ್ತು 57 ಸಂಸ್ಕರಣಾ ಉದ್ಯಮಗಳಲ್ಲಿ ಬಾಲದುಡಿಮೆಯನ್ನು ನಿಷೇಧ ಮಾಡಲಾಗಿದೆ. ಈ ವಿಷಯವಾಗಿ ಕಾರ್ಮಿಕ ಇಲಾಖೆಯು ಉದ್ಯೋಗ ನೀಡುವ ಎಲ್ಲರಿಗೂ ಹಾಗೂ ಉದ್ಯಮಿಗಳಾಗ ಬಯಸುವವರಿಗೆ ಬಿಗಿಯಾದ ಎಚ್ಚರಿಕೆ ನೀಡಬೇಕು. ಕ್ಷೇತ್ರವಾರು, ಚಲಿಸುವ ಕಾರ್ಮಿಕ ನ್ಯಾಯಾಲಯಗಳ ಮೂಲಕ ಇದನ್ನು ಒಂದು ಆಂದೋಲನದ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು ಮತ್ತು ಈಗಾಗಲೇ ದಾಖಲಿಸಿರುವ ಪ್ರಕರಣಗಳನ್ನು ಸೂಕ್ತವಾಗಿ ಮುನ್ನಡೆಸಲು ಒಂದು ಕಾರ್ಯಯೋಜನೆಯನ್ನು ರೂಪಿಸಬೇಕು.
  • ಬಾಲ ನ್ಯಾಯಾಲಯ ಅಧಿನಿಯಮ 2006 ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು ಇವನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಿದ್ದು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
  • ವಿಭಾಗ 2(d) (ia) ರಂತೆ, ’ದುಡಿಯುವ ಮಗು’, ’ರಕ್ಷಣೆ ಮತ್ತು ಪೋಷೆಯ ಅಗತ್ಯವಿರುವ ಒಂದು ಮಗು’ ವಿನ ಪರಿಭಾಷಯಲ್ಲಿ ಸೇರುತ್ತದೆ. ಜೆ.ಜೆ ಅಧಿನಿಯಮದ ವಿಭಾಗ 2(k) ದಲ್ಲಿ ’ಮಗು’ವನ್ನು ’ 18 ವರ್ಷಗಳನ್ನು ಪೂರೈಸದ ವ್ಯಕ್ತಿ’ ಎಂದು ಪರಿಭಾಷಿಸಲಾಗಿದೆ. ಇದರಿಂದಾಗಿ, 14 ವರ್ಷದವರೆಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ್ಳುವುದನ್ನು ನಿಷೇಧಿಸುವ ಬಾಲದುಡಿಮೆ ಅಧಿನಿಯಮಕ್ಕಿಂತ ಈ ನಿಯಮದ ವ್ಯಾಪ್ತಿ ಹೆಚ್ಚಾಗಿದ್ದು 18 ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ರಕ್ಷಣೆ ಪೋಷಣೆ ನೀಡುವುದನ್ನು ಒಳಗೊಂಡಿದೆ. ಅಂದರೆ ಬಾಲದುಡಿಮೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗದ ಬಾಲದುಡಿಮೆ, ಜೆ.ಜೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗಿದೆ.
  • ಜೀತಪದ್ಧತಿಯ ನಿಷೇಧ ಅಧಿನಿಯಮ 1976 ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಳಸಲೇಬೇಕು. ಬಹಳಷ್ಟು ಮಕ್ಕಳನ್ನು ಒತ್ತೆಯಿಟ್ಟು ಅವರ ಕುಟುಂಬಗಳು ಮುಂಗಡ ಪಡೆದಿರುವ ಪ್ರಕರಣಗಳ್ನು ಗಮನಿಸಲಾಗಿದೆ. ಅಂತಹ ಮಕ್ಕಳು ಬಹುತೇಕವಾಗಿ ವಲಸಿಗರಾಗಿ ದುಡಿಯುತ್ತಿದ್ದಾರೆ. ಈ ಅಧಿನಿಯಮದ ಅಡಿಯಲ್ಲಿ ಬರುವ ಕಣ್ಗಾವಲು ಸಮಿತಿಗಳನ್ನು ಕ್ರಿಯಾಶೀಲಗೊಳಿಸಬೇಕಲ್ಲದೆ, ಕಂದಾಯ ಹಾಗೂ ಕಾರ್ಮಿಕ ಇಲಾಖೆಗಳು ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಈ ಅಧಿನಿಯಮದಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲದಿರುವುದನ್ನು ಗುರುತಿಸಿಕೊಳ್ಳಬೇಕು ಮತ್ತು ಮುಂಗಡವಾಗಿ ಯಾವ ಸಾಲವನ್ನೂ ನೀಡಿಲ್ಲ ಎಂಬ ಪುರಾವೆಯನ್ನು ಒದಗಿಸುವ ಭಾರ ಉದ್ಯಮದಾರನದಾಗಿರುತ್ತದೆ.
  • ಜತೆಗೆ ಒಬ್ಬ ಗುತ್ತಿದೆದಾರನ ಮೂಲಕ ಬಾಲಕರನ್ನು ದುಡಿಮೆಗೆ ಹಚ್ಚಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ದಿಮೆದಾರನನ್ನು ಬಾಲದುಡಿಮೆಯ ಗುತ್ತಿಗೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮ 1970 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು. ಗುತ್ತಿಗೆದಾರರ ಮೂಲಕ ಮಕ್ಕಳನ್ನು ದುಡಿಮೆಗೆ ದೂಡುವ ಈ ಚಾಳಿಯು ಸಾಮಾನ್ಯವಾಗಿದ್ದು ಅನೇಕ ಉದ್ಯಮಿ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಈ ಮಾರ್ಗವನ್ನು ಅನುಸರಿಸುತ್ತವೆ. ಈ ಅಧಿನಿಯಮವು ’ಬದಲಿ ಹೊಣೆಗಾರಿಕೆಯ’ ನೀತಿಯನ್ನಾಧರಿಸುತ್ತವೆ ಮತ್ತು ಉದ್ಯಮ ಸಂಸ್ಥೆಗಳು ಮತ್ತು ಗುತ್ತಿದೆದಾರರನ್ನು ಬಾಲದುಡಿಮೆ ಕೈಗೊಳ್ಳದಂತೆ ನಿರ್ಬಂಧಿಸಲು ಈ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಬಳಸಬಹುದು..

         ಈ ಮೇಲೆ ಹೇಳಿದ ಎಲ್ಲ ಅಧಿನಿಯಮಗಳನ್ನು ಒಟ್ಟಾಗಿ ಸೇರಿಸಿ ಗಮನಿಸಿದಾಗ ಬೇಸಾಯ ವೃತ್ತಿ ಮತ್ತು ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಒಳಗೊಂಡಂತೆ, ಕಾರ್ಮಿಕ ಬಲದಲ್ಲಿರುವ ಬಹುತೇಕ ಮಕ್ಕಳನ್ನು ಆವರಿಸುತ್ತವೆ ಮತ್ತು ಸಂಬಂಧಿಸಿದ ಉದ್ಯಮದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಬಳಸಲೇಬೇಕಾಗುತ್ತದೆ. ನಿಯಮಾವಳಿಗಳನ್ನು ಕಠಿಣವಾಗಿ ಜಾರಿಗೊಳಿಸುವುದೇ ಉದ್ಯಮದಾರರು ಅದರಿಂದ ವಿಮುಖರಾಗಲು ಕಾರಣವಾಗುವುದೆಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಮಕ್ಕಳು ಅಗ್ಗದ ದುಡಿಮೆಗೆ ಲಭ್ಯರು ಮತ್ತು ಅವರನ್ನು ಹೆಚ್ಚು ಅವಧಿಯವರೆಗೆ ದುಡಿಸಿಕೊಳ್ಳಲು ಸಾಧ್ಯ ಎಂಬ ಅಂಶಗಳೇ ಬಾಲದುಡಿಮೆಗೆ ಕಾರಣವಾಗಿದೆ. ಇದು ಮಕ್ಕಳಿಗೆ ಉದ್ಯಮದಾರರು ಮಾಡುತ್ತಿರುವ ಉಪಕಾರವೇನೂ ಅಲ್ಲ. ಬದಲಿಗೆ ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳುವ ಒಂದು ಮಾರ್ಗ. ಇದಲ್ಲದೆ, ಸಾರ್ವಜನಿಕ ವಲಯದ ಎಲ್ಲ ಸಂಸ್ಥೆಗಳು, ಸರ್ಕಾರದ ಅಧೀನ ಸಂಸ್ಥೆಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳು ತನ್ನೆಲ್ಲ ಸಿಬ್ಬಂದಿಗೆ ಮಕ್ಕಳನ್ನು ಮನೆ ಕೆಲಸಕ್ಕೆ ನೇಮಿಸದಂತೆ ಅಥವಾ ತಮ್ಮ ಕಾರ್ಯಸ್ಥಳದಲ್ಲಿ ಯಾವುದೇ ತರಹದಲ್ಲಿ ಬಾಲದುಡಿಮೆಯನ್ನು ಪ್ರೋತ್ಸಾಹಿಸದಂತೆ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಘೋಷಿಸ ಬೇಕು. ಮೇಲೆ ಹೇಳಿದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಅನುವಾಗುವಂತೆ ನಿರ್ದಿಷ್ಟ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಲು NCPCR ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದೂರದರ್ಶನ ಕಾರ್ಯಕ್ರಮಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಭಾಗವಹಿಸುವ ಮಕ್ಕಳ ವಿಷಯಕ್ಕೆ ಸಂಬಂಧಿಸಿದ ಹಾಗೆ NCPCR ಗೆ ಒಂದು ಕಾರ್ಯಸಮೂಹವನ್ನು ನೇಮಕಮಾಡಿದೆ. ಹಿಂದಿನ ಬಾಲತಾರೆ ಸಚಿನ್ ಪಿಲಗಾಂವ್ ಕರ್ ಮತ್ತು ಜಾಹೀರಾತು ತಜ್ಞ ಪ್ರಲ್ಹಾದ ಕಕ್ಕರ್ ಅಲ್ಲದೆ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಂದ ಪ್ರತಿನಿಧಿಗಳು ಈ ಕಾರ್ಯ ಸಮೂಹದಲ್ಲಿ ಸೇರಿದ್ದಾರೆ. ದೂರದರ್ಶನದ ಸರಣಿಗಳು, ರಿಯಾಲಿಟಿಷೋಗಳು ಮತ್ತು ಜಾಹೀರಾತುಗಳಲ್ಲಿ ಪಾಲ್ಗೊಳ್ಳುವ ಮಕ್ಕಳ ಹಕ್ಕುಗಳ ಆಬಾಧಿತ ಉಲ್ಲಂಘನೆಯನ್ನು ನಿಯಂತ್ರಿಸುವ ಅಗತ್ಯವನ್ನು ಈ ಸದಸ್ಯರು ಚರ್ಚಿಸಿದ್ದಾರೆ. NCPCR ನ ಸದಸ್ಯೆ ಸಂಧ್ಯಾ ಬಜಾಜ್ ಇಂತಹ ಮಕ್ಕಳ ಕಾರ್ಯಸ್ಥಿತಿಗಳನ್ನು ನಿಯಂತ್ರಿಸಲು ಮಾರ್ಗಸೂಚಿಕೆಗಳನ್ನು ಸಿದ್ಧಪಡಿಸಲು ಒಂದು ಪ್ರಸ್ತಾಪವನ್ನಿಟ್ಟಿದ್ದಾರೆ. ಎಲ್ಲ ದೂರದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಪ್ರತೀ ದಿನ ಕೆಲಸಮಾಡಬೇಕಾದ ಒಟ್ಟು ಗಂಟೆಗಳು ಹಾಗೂ ಒಂದು ವರ್ಷದಲ್ಲಿ ಮಾಡಬಹುದಾದ ಒಟ್ಟು ಅವಧಿಯನ್ನು ನಿರ್ದಿಷ್ಟಗೊಳಿಸಬೇಕು. ಮಕ್ಕಳು ಮತ್ತವರ ಕುಟುಂಬಗಳು ದಾಖಲಿಸಿದ ದೂರುಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ಅಳವಡಿಸಲು ಸಹ ನಿರ್ಧರಿಸಲಾಯಿತು; ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ದೂರದರ್ಶನ ಚಾನೆಲ್ ಗಳು / ನಿರ್ಮಾಣ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ನಿರೂಪಿಸುವುದು; ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ದೂರದರ್ಶನ ಕಾರ್ಯಕ್ರಮಗಳ ಆಯೋಜಕರು ಹಾಗೂ ಮಕ್ಕಳ ಪೋಷಕರ ಜವಾಬ್ದಾರಿಗಳನ್ನು ನಿರೂಪಿಸುವುದು: ಮಕ್ಕಳಿಗೆ ಸಂದಾಯವಾಗ ಬೇಕಾದ ಹಣಕ್ಕೆ ಸೂಕ್ತ ವ್ಯವಸ್ಥೆ – ಉದಾಹರಣೆಗೆ ಶೈಕ್ಷಣಿಕ ಬಾಂಡ್ ಗಳೂ/ ಸರ್ಟಿಫಿಕೇಟ್ ಗಳು ಮತ್ತು ಕೊನೆಯದಾಗಿ ಈ ಮಾರ್ಗಸೂಚಿಕೆಗಳ ಪರಿಷ್ಕರಣೆಗೆ ಒಂದು ವ್ಯವಸ್ಥೆ ರೂಪಿಸುವುದು. ಕಾರ್ಯಪಡೆಯು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳನ್ನು ಮುಂದಿನ ಕ್ರಮಗಳಿಗಾಗಿ ಭೇಟಿಮಾಡುವರು.

ಬಾಲ ಕಾರ್ಮಿಕತೆ ನಿಷೇಧ

     ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಯುನಿಸೆಫ್ ಮತ್ತು ಐಎಲ್‌ಒ ಸಹಯೋಗದೊಂದಿಗೆ ಎಲ್ಲ ರೀತಿಯ ಬಾಲಕಾರ್ಮಿಕತೆಯನ್ನ್ನುನಿಷೇದಿಸಲು ಮತ್ತು ಪ್ರತಿ ಮಗುವೂ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಲು ರಾಜ್ಯ ಮಟ್ಟದ ಸಲಹಾ ಸಭೆಗಳ ಸರಣಿಗಳನ್ನು ನಡೆಸಲಿದೆ. ಹಕ್ಕು ಆಧಾರಿತ ದೃಷ್ಟಿಕೋನವನ್ನು ಅಳವಡಿಸಿಕೊಂಡು, ಬಾಲಕಾರ್ಮಿಕತೆಯ ಪೂರ್ಣ ನಿಷೇದ ಮತ್ತು ಔಪಚಾರಿಕ ಶಾಲೆಗಳಲ್ಲಿನ ಪೂರ್ಣಾವಧಿಯ ಶಿಕ್ಷಣದ ನಡುವಿನ ಬಿಡಿಸಿಕೊಳ್ಳಲಾಗದ ಬಂಧವನ್ನು ಎತ್ತಿ ಹಿಡಿದಿವೆ.
     ಅದು ಬಾಲ ಕಾರ್ಮಿಕತೆ ವ್ಯಾಖ್ಯೆಯಲ್ಲಿ ಬಾಲಕಾರ್ಮಿಕತೆ ಮತ್ತು ಮಕ್ಕಳ ಕೆಲಸ, ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಬಾಲಕಾರ್ಮಿಕತೆಯ ನಡುವೆ ಔಪಚಾರಿಕವಾಗಿ ವ್ಯತ್ಯಾಸ ಮಾಡದಿರುವ ಅಂಶವನ್ನು ಒತ್ತಿ ಹೇಳಿತು. ಅದು ಮಕ್ಕಳು ಮನೆಯಲ್ಲಿ ಮಾಡುವ ಕೆಲಸವನ್ನು, ಕೃಷಿ ಕೆಲಸವನ್ನು ಮತ್ತು ಅವರನ್ನು ಶಾಲೆಯಿಂದ ದೂರವಿಡುವ ಎಲ್ಲ ಚಟುವಟಿಕೆಗಳನ್ನು ಬಾಲ ಕಾರ್ಮಿಕತೆ ಎಂದೆ ಗುರುತಿಸಲು ಬಯಸಿತು. ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ (UNCRC) ದ ನಿರ್ಧಾರ ಮತ್ತು 18 ವರ್ಷದ ಒಳಗಿನ ಎಲ್ಲರೂ ಮಕ್ಕಳೇ ಎಂಬ ನಿರ್ಣಯಕ್ಕೆ ಅನುಗುಣವಾಗಿರಬೇಕು.
       ಈ ವರೆಗೆ ಜೈಪುರ, ಲಕ್ನೋ ಮತ್ತು ಬೆಂಗಳೂರುಗಳಲ್ಲಿ ಮೂರು ಸಮಾಲೋಚನೆಗಳನ್ನು ನಡೆಸಲಾಗಿದೆ. ದೇಶದ ಇತರ ಭಾಗಗಳಲ್ಲಿ ಇನ್ನೂ 9 ಸಮಾಲೋಚನೆಗಳನ್ನು ನಡೆಸಲಾಗುವುದು.ಅದರ ಅಂತಿಮ ಸಮಾವೇಶವು ಡಿಸೆಂಬರ್‌ ೧೧-೧೨ ರಂದು ನ್ಯಾಷನಲ್‌ ಫೋರಂ ನವದೆಹಲಿಯಲ್ಲಿ ಬಾಲ ಕಾರ್ಮಿಕತೆಯ ಮತ್ತು ಮಕ್ಕಳ ಶಿಕ್ಷಣದ ಹಕ್ಕಿನ ಸಾಧನೆಗಾಗಿ ನಡೆಸಲಾಗುವುದು.
      ಈ ವರೆಗೆ ನಡೆದ ಸಮಾಲೋಚನೆಗಳಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಆಸಕ್ತ ನಾಗರೀಕ ಸಂಘಟನೆಗಳ ಪ್ರತಿನಿಧಿಗಳು, ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಬಾಲ ಕಾರ್ಮಿಕತೆಯನ್ನು ನಿಷೇದಿಸಲು ಮತ್ತು ಮಕ್ಕಳ ಶಿಕ್ಷಣ ಹಕ್ಕನ್ನು ನೈಜವಾಗಿಸಲು ಬಯಸಿದರು. ಮಕ್ಕಳೂ ತಾವು ಕಲ್ಲುಗಣಿಗಳಿಂದ, ಸೀರೆ ನೇಯವ ಮಗ್ಗಗಳಿಂದ ಮತ್ತು ಇತರ ಕಠಿನ ಪರಿಶ್ರಮ ಬಯಸುವ ಕೆಲಸಗಳಿಂದ ಹೊರಬಂದ ತರುವಾಯ ತಮಗೆ ದೊರಕಿದ ಅತಿ ಹೆಚ್ಚಿನ ಅವಕಾಶಗಳನ್ನು ಕುರಿತು ಮಾತನಾಡಿದರು. ಹೆತ್ತವರೂ ಕೂಡಾ ತಮ್ಮಮಕ್ಕಳಿಗೆ ದೊರೆತ ಅಪಾರ ಅವಕಾಶಗಳ ಬಗ್ಗೆ ಮಕ್ಕಳ ಅಭಿಪ್ರಾಯವನ್ನು ಅನುಮೋದಿಸಿದರು.. ವ್ಯಾಪಕವಾಗಿ ನಡೆಸಿದ ಸತತ ಸಾಮಾಜಿಕ ಕ್ರೋಢೀಕರಣದ ಪರಿಣಾಮವಾಗಿ ಬಾಲ ಕಾರ್ಮಿಕತೆಯನ್ನು ಭಾರತದಲ್ಲಿ ನಿಷೇದಿಸುವ ಅಭಿಯಾನವು ಮೊದಲಾಗಿದೆ. ಈ ಉಪಕ್ರಮಗಳು ಶಿಕ್ಷಣ ಕೇಂದ್ರಿಕೃತವಾಗಿರುವುದೆ ಮಕ್ಕಳನ್ನು ದುಡಿಮೆಯಿಂದ ದೂರವಿಡುವ ಅತಿ ಪರಿಣಾಮಕಾರಿ ತಂತ್ರವಾಗಿದೆ ಮತ್ತು ಇದು ಮಕ್ಕಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಿಸುವುದನ್ನು ನಿವಾರಿಸುವುದು. ಶಿಕ್ಷಣವು ಅನೇಕರಿಗೆ ದೌರ್ಜನ್ಯದಿಂದ ಬಿಡುಗಡೆ ಮಾಡಿ ಅವರಿಗೆ ಆತ್ಮಗೌರವವನ್ನು ನೀಡಿದೆ.
      2001 ರಲ್ಲಿ ನಡೆದ ಜನಗಣತಿಯ ಪ್ರಕಾರ ಐದು ವರ್ಷದ ಒಳಗಿನ 500,000 ಕ್ಕೂ ಹೆಚ್ಚು ಮಕ್ಕಳು ಮನೆಗೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಬಡಜನರಿಂದ ಬಂದ ಶಿಕ್ಷಣದ ಸಲುವಾಗಿನ ಅಭೂತ ಪೂರ್ವ ಬೇಡಿಕೆಯ ಹೊರತಾಗಿಯೂ, ಲಕ್ಷಾಂತರ ಮಕ್ಕಳು ಹೊಲಗದ್ದೆಗಳಲ್ಲಿ , ಸಿರಿವಂತರ ಮನೆಗಳಲ್ಲಿ, ಹೋಟೆಲುಗಳಲ್ಲಿ , ಖಾನಾವಳಿ ಮೊದಲಾದ ಕಡೆ ಕೆಲಸದಲ್ಲಿ ತೊಡಗಿದ್ದಾರೆ.
        ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಅಧ್ಯಕ್ಷರಾದ ಶಾಂತಾ ಸಿನ್ಹರ ಪ್ರಕಾರ ಮಕ್ಕಳು ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ಮತ್ತು ದೇಶದಲ್ಲೆ ಇರುವ ವರ್ಗ ವ್ಯತ್ಯಾಸದಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಮಕ್ಕಳು ಅಭದ್ರತೆ ಮತ್ತು ಹತಾಶೆಯಿಂದ ತುಂಬಿ ತುಳುಕುವ ವಾತಾವರಣದಲ್ಲಿ ಬದುಕುವುದರಿಂದ ಕುಟುಂಬದ ಒಳಗೆ ಮತ್ತು ಹೊರಗೆ ದುರ್ಬಳಕೆಗೆ ಒಳಗಾಗುವ ವರದಿಗಳು ಹೆಚ್ಚುತ್ತಿವೆ. ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸದಲ್ಲಿ ತೊಡಗಲು ಒತ್ತಡಕ್ಕೆ ಸಿಲುಕುವರು ಮತ್ತು ಅವರಿಗೆ ಬಿಡುವು ಅಥವ ಮನರಂಜನೆಗೆ ಸಮಯ ಇರುವುದೆ ಇಲ್ಲ. ಈ 

ಕೆಳಗೆ ಕಾಣಿಸಿದವು ಅರಿಯಲೆ ಬೇಕಾದ ಮೂರು ವಿಷಯಗಳಾಗಿವೆ..
  • ಶಾಲೆಬಿಟ್ಟ ಯಾವುದೆ ಮಗುವೂ ಬಾಲ ಕಾರ್ಮಿಕನೆ
  • ಎಲ್ಲ 18 ವರ್ಷದ ವರೆಗಿನ ಮಕ್ಕಳು ಪೂರ್ಣಾವಧಿ ಸಾಂಪ್ರದಾಯಿಕ ಶಾಲೆಗಳಿಗೆ ಹೋಗಬೇಕು.
  • ಎಲ್ಲ ಶಾಲೆಗಳೂ ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟದ ಹೊಂದಿರಬೇಕು.
  • ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ನಿಷೇದಿಸಬೇಕು.




ಕೃಪೆ:- http://kn.vikaspedia.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ