ನನ್ನ ಪುಟಗಳು

18 ಮೇ 2021

ಪದ್ಯ-4 ಕೌರವೇಂದ್ರನ ಕೊಂದೆ ನೀನು_ಪ್ರಶ್ನೋತ್ತರಗಳು (Notes)

******


ಪದ್ಯ-೪ ಕೌರವೇಂದ್ರನ ಕೊಂದೆ ನೀನು(ವ್ಯಾಕರಣಾಂಶಗಳು: ಛಂದಸ್ಸು)

 ಛಂದಸ್ಸು

        ಶುದ್ಧ ಹಾಗೂ ಅರ್ಥಪೂರ್ಣವಾಗಿ ಮಾತನಾಡಲು, ಬರೆಯಲು ವ್ಯಾಕರಣ ಶಾಸ್ತ್ರವು ಹೇಗೆ ಅಗತ್ಯವೋ ಹಾಗೆಯೇ ಪದ್ಯರಚನೆ ಮಾಡಲೂ ಕೆಲವು ನಿಯಮಗಳಿರುತ್ತವೆ. ಇಂತಹ ಪದ್ಯರಚನಾ ನಿಯಮವನ್ನು ಛಂದಸ್ಸು ಎಂದು ಕರೆಯಲಾಗಿದೆ. ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು ನೀಡಿದ್ದಾನೆ. ಹಳಗನ್ನಡದ ಮತ್ತು ನಡುಗನ್ನಡದ ಪದ್ಯಕಾವ್ಯಗಳು ಈ ಶಾಸ್ತ್ರವನ್ನು ಅನುಸರಿಸಿಯೇ ಬರೆಯಲ್ಪಟ್ಟವು.
ಛಂದಶ್ಶಾಸ್ತ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳನ್ನು ಪ್ರಾಸ, ಯತಿ, ಗಣಗಳೆಂದು ಕರೆಯಲಾಗಿದೆ.
        

 ಪ್ರಾಸ : ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸ ವೆಂತಲೂ ಪ್ರತಿ ಪಾದದ ಕೊನೆಯಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸವೆಂತಲೂ ಕರೆಯುತ್ತಾರೆ. ಕೆಲವೊಮ್ಮೆ ಅಪರೂಪಕ್ಕೆ ಸಾಲಿನ ಮಧ್ಯದಲ್ಲಿ ಪ್ರಾಸಾಕ್ಷರಗಳು ಬರುವುದುಂಟು ಅದನ್ನು ಒಳಪ್ರಾಸ ಅಥವಾ ಮಧ್ಯಪ್ರಾಸ ಎಂದು ಕರೆಯಲಾಗಿದೆ. 

  • ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎಂತಲೂ 
  • ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎಂತಲೂ 
  • ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎಂತಲೂ 
  • ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎಂತಲೂ 
  • ಬೇರೆಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ ಎಂತಲೂ 
  • ಒಂದೇಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ ಎಂತಲೂ ಕರೆಯಲ್ಪಡುವ ಆರು ವಿಧದ ಪ್ರಾಸಗಳನ್ನು ಕಾಣಬಹುದು. 

ಯತಿ : ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳವನ್ನು ಯತಿ ಎಂದು ಕರೆಯಲಾಗಿದೆ. ಹಾಗೆಂದ ಮಾತ್ರಕ್ಕೆ ನಮಗೆ ಇಷ್ಟ ಬಂದಲ್ಲಿ ನಿಲ್ಲಿಸುವ ಸ್ವಾತಂತ್ರ್ಯವಿಲ್ಲ. ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲಿಸಬೇಕಾದ ಅನಿವಾರ‍್ಯತೆಯಿದೆ. ಹೀಗೆ_
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದಂತೆ ನಿಲ್ಲಿಸುವ ಸ್ಥಳವನ್ನು ’ಯತಿ’ ಎಂದು ಗುರುತಿಸಲಾಗಿದೆ. ಕೆಲವು ಕವಿಗಳು ಯತಿಯ ಸ್ಥಾನವನ್ನು ಕೆಲವು ಸಂಕೇತಗಳೊಂದಿಗೆ ತಮ್ಮ ಕಾವ್ಯಗಳಲ್ಲಿ ಗುರುತಿಸಿದ್ದು ಕಂಡುಬರುತ್ತದೆ. ಕನ್ನಡ ಕಾವ್ಯಗಳಲ್ಲಿ ಯತಿಯ ಬಳಕೆ ಅತ್ಯಂತ ಕಡಿಮೆಯಾಗಿದ್ದು ಸಂಸ್ಕೃತ ಕಾವ್ಯಗಳಲ್ಲಿ ಬಹಳ? ಇರುವುದನ್ನು ಗಮನಿಸಬಹುದು.
 

ಗಣ : ’ ಗಣ’ ಎಂದರೆ ’ಗುಂಪು’ ಅಥವಾ ’ಸಮೂಹ’ ಎಂದರ್ಥ. ಛಂದಶ್ಶಾಸ್ತ್ರದಲ್ಲಿ ’ಗಣ’ ಎಂದರೆ ಪದ್ಯದ ಪ್ರತಿ ಸಾಲಿನಲ್ಲೂ ವಿಭಾಗಿಸಲ್ಪಡುವ ಮಾತ್ರೆ ಅಥವಾ ಅಕ್ಷರ ಅಥವಾ ಅಂಶಗಳ ಗುಂಪು ಎಂದರ್ಥ. 

ಗಣಗಳಲ್ಲಿ ಮೂರು ವಿಧ: ೧) ಅಂಶಗಣ, ೨) ಮಾತ್ರಾಗಣ, ೩) ಅಕ್ಷರಗಣ

ಅಂಶಗಣ: ಮಾತ್ರೆಗಳ ಲೆಕ್ಕಾಚಾರದೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಮಾತ್ರಾಗಣ ಎಂತಲೂ ಅಕ್ಷರಗಳ ಲೆಕ್ಕಾಚಾರಗಳೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಅಕ್ಷರಗಣ ಎಂತಲೂ ಅಂಶಗಳ ಆಧಾರದಿಂದ ವಿಭಾಗಿಸಲ್ಪಡುವ ಗಣವನ್ನು ಅಂಶಗಣ ಎಂತಲೂ ಕರೆಯಲಾಗಿದೆ.
ಅಂಶಗಣದಲ್ಲಿ ಬ್ರಹ್ಮ, ವಿಷ್ಣು ಮತ್ತು ರುದ್ರ ಎಂಬ ಮೂರು ವಿಧದ ಗಣಗಳಿವೆ. (ಇವುಗಳ ಬಗ್ಗೆ ಹೆಚ್ಚಿನ ವಿವರವನ್ನು ಮುಂದಿನ ತರಗತಿಗಳಲ್ಲಿ ತಿಳಿದುಕೊಳ್ಳಬಹುದು.)
 

ಮಾತ್ರಾಗಣ : ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ’ಮಾತ್ರೆ’ ಎಂಬ ಮಾನದಿಂದ ಅಳೆಯಲಾಗುವುದು. ಈ ಮಾತ್ರೆಗಳ ಆಧಾರದಿಂದ ’ಗಣ’ ವಿಭಾಗ ಮಾಡಿದರೆ ಅದನ್ನು ’ಮಾತ್ರಾಗಣ’ ಎಂದು ಕರೆಯುತ್ತಾರೆ. ಹೀಗೆ ಗಣಗಳಾಗಿ ವಿಂಗಡಿಸುವಾಗ ಮೂರು, ನಾಲ್ಕು ಅಥವಾ ಐದು ಮಾತ್ರೆಗಳ ಗಣಗಳನ್ನು ಮಾಡಲಾಗುವುದು, ಪದ್ಯದ ಪ್ರತಿ ಸಾಲಿನಲ್ಲಿರುವ ಎಲ್ಲ ಅಕ್ಷರಗಳ ಮಾತ್ರೆಗಳನ್ನು ನಿಶ್ಶೇಷವಾಗಿ ಗಣಗಳನ್ನಾಗಿ ವಿಂಗಡಿಸಬೇಕು.
ಅಂದರೆ ಯಾವ ಸಾಲಿನಲ್ಲೂ ಗಣ ವಿಂಗಡಣೆ ಆದ ಬಳಿಕ ಮಾತ್ರೆ ಉಳಿಯಬಾರದು. (ಷಟ್ಪದಿಯ ಮೂರು ಮತ್ತು ಆರನೆಯ ಪಾದಗಳ ಕೊನೆಯ ಅಕ್ಷರವನ್ನು ಬಿಟ್ಟು).

ಅಕ್ಷರಗಣ : ಪ್ರತಿಗಣವನ್ನು ಮೂರು ಮೂರು ಅಕ್ಷರಗಳಾಗಿ ವಿಂಗಡಿಸುವುದನ್ನು ಅಕ್ಷರಗಣ ಎನ್ನಲಾಗುವುದು.

ಮಾತ್ರೆ, ಗುರು, ಲಘುಗಳು
ಮಾತ್ರೆ:- ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾ ಕಾಲಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವುಲಘುವನ್ನು ‘U' ಹೀಗೆ ಗುರುತಿಸುವುದು ವಾಡಿಕೆ.
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು:-
        ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವು. ಲಘುಗಳಾಗಿರುವ ಅಕ್ಷರಗಳ ಮೇಲೆ ‘U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.
ಉದಾಹರಣೆಗೆ:-
U U U U U U

U U U U U U
ಕಿ ಕು

U U U U U U
ಕೆ ಕೊ ಸು ಸೊ ಸೃ ಕೃ
ಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ    ಹೀಗೆ ಗುರುತು ಮಾಡಿದೆ.

ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವುಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.

ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು.

ಉದಾಹರಣೆಗೆ:
(i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ-

 

(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು-

ಕಾಕೀಚೇಚೈಸೈನಾರೋಸೌ
ಕ್ಕಾಸ್ನೇತ್ರೇಪ್ರೈಕ್ರೋಧ್ಯಾ ಲೋ

 

(iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು-

ಅಂ ಅಃ ತಂ ತಃ ಸಂ ಸಃ ಕಂ




 

(iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-

—U —U —U —UU
ಕಲ್ಲು ಮಣ್ಣು ನಿಲ್ಲು ಮೆತ್ತಗೆ



(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)

(v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
ಕಲ್ ನಿಲ್ ಪಣ್ ತಿನ್ ಮೇಣ್ ಕಾಲ್ ಮೇಲ್ ತಾಯ್
ಮೇಲೆ ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುಗಳಾಗಿರುವುದನ್ನು ಗಮನಿಸಿರಿ.  ‘ಮೇಣ್‘ ಎಂಬಲ್ಲಿ ‘ಮೇ‘ ಎಂಬುದೂ, ‘ಕಾಲ್‘ ಎಂಬಲ್ಲಿ ‘ಕಾ‘ ಎಂಬುದೂ, ‘ಮೇಲ್‘ ಎಂಬಲ್ಲಿ ‘ಮೇ‘ ಎಂಬುದೂ, ‘ತಾಯ್‘ ಎಂಬಲ್ಲಿ ‘ತಾ‘ ಎಂಬುದೂ ದೀರ್ಘಾಕ್ಷರಗಳಾಗಿದ್ದರಿಂದ ಸಹಜವಾಗಿ ಅವು ಗುರುಗಳೇ ಆಗಿದ್ದರೂ, ವ್ಯಂಜನಾಕ್ಷರಗಳು ಹಿಂದಿರುಗುವುದರಿಂದಲೂ ಅವು ಗುರುಗಳು.  ಹೀಗೆ ಅವು ಗುರುಗಳಾಗುವುದಕ್ಕೆ ಎರಡು ಕಾರಣಗಳಿದ್ದರೂ ಒಂದೇ ಗುರು.  ಮೇಲಿನ ಉದಾಹರಣೆಗಳಲ್ಲಿ ವ್ಯಂಜನಾಕ್ಷರಗಳಾದ ಲ್, ಣ್, ಯ್ ಮೊದಲಾದವು ಲಘುಗಳೂ ಅಲ್ಲ, ಗುರುಗಳೂ ಅಲ್ಲ.  ಅವಕ್ಕೆ ಯಾವ ಚಿಹ್ನೆಯನ್ನು ಹಾಕಬಾರದು.  ಒಂದು ಅಕ್ಷರ ಗುರುವಾಗಲು ಎರಡು ಮೂರು ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು.
ಉದಾಹರಣೆಗೆ:-
—U —U
ಶಾಸ್ತ್ರ ಕಾಂಕ್ಷೆ

     ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ.  ಅದು ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು.  ಕಾ ಎಂಬುದು ಮೂರು ಕಾರಣ ಹೊಂದಿದೆ.  ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು; ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.
(vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕ-ಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.

ಷಟ್ಟದಿ
ಆರು ಜಾತಿಯ ಷಟ್ಪದಿಗಳ ಲಕ್ಷಣಗಳನ್ನು ಕ್ರಮವಾಗಿ ತಿಳಿಯೋಣ.  (ಷಟ್=ಆರು, ಪದಿ=ಪಾದಗಳುಳ್ಳದ್ದು ಎಂದು ಅರ್ಥ).

 ಷಟ್ಪದಿಗಳ ಲಕ್ಷಣಗಳು
ಆರು ಪಾದಗಳುಳ್ಳ ಪದ್ಯವನ್ನು ‘ಷಟ್ಪದಿ’ ಎಂದು ಕರೆಯುತ್ತಾರೆ. ಇದರ ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳು ಮಾತ್ರಾ ಸಂಖ್ಯೆಯಲ್ಲಿ ಒಂದಕ್ಕೊಂದು ಸಮಾನವಾಗಿರುತ್ತವೆ. ಮೂರು ಮತ್ತು ಆರನೆಯ ಪಾದಗಳು ಪರಸ್ಪರ ಸಮವಾಗಿರುತ್ತವೆ. ಒಂದನೆಯ ಪಾದದಲ್ಲಿರುವ ಮಾತ್ರೆಗಳ ಒಂದೂವರೆಯಷ್ಟು ಮತ್ತು ಒಂದು ಗುರು ಮೂರನೆಯ ಮತ್ತು ಆರನೆಯ ಪಾದಗಳಲ್ಲಿರುತ್ತವೆ. ದ್ವಿತೀಯಾಕ್ಷರವು ಪ್ರಾಸಾಕ್ಷರವಾಗಿರುತ್ತದೆ. ಷಟ್ಪದಿಗಳಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ವಿಧಗಳಿರುತ್ತವೆ. 

() ಶರಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ

ಮೇಲಿನ ಪದ್ಯವು ಆರು ಸಾಲುಗಳಿಂದ ಕೂಡಿದೆ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿವೆ ಮತ್ತು ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿವೆಮೂರು ಮತ್ತು ಆರನೆಯ ಸಾಲುಗಳ ಕೊನೆಯಕ್ಷರ ಲಘುವಾಗಿದ್ದರೂ ಗುರುವೆಂದೇ ತಿಳಿಯಬೇಕು ಜಾತಿಯ ಪದ್ಯದಲ್ಲಿ ಮಧ್ಯಗುರುವುಳ್ಳ “U _ U” ರೀತಿಯ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣದಿಂದ ಕೂಡಿದ ಪದ್ಯಗಳು ಶರಷಟ್ಪದಿಗಳೆಂದು ತಿಳಿಯಬೇಕು.

() ಕುಸುಮಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಎರಡು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಮೂರು ಗಣಗಳಿಂದಲೂ ಮೇಲೆ ಒಂದು ಗುರುವಿನಿಂದಲೂ ಕೂಡಿವೆ ಮತ್ತು ನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು ಜಾತಿಯ ಪದ್ಯದಲ್ಲಿ “U_UU ” ಹೀಗಿರುವ ಮತ್ತು ” U_ _” ಹೀಗಿರುವ ಗಣವು ಬರಕೂಡದು ಲಕ್ಷಣಗಳಿಂದ ಕೂಡಿದ ಪದ್ಯಗಳೇ ಕುಸುಮ ಷಟ್ಪದಿಗಳೆನಿಸುವುವು.

() ಭೋಗಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಸಾಲುಗಳಿಂದ ಕೂಡಿದ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮಾತ್ರೆಗಳ ಆರಾರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುವುದು ಜಾತಿಯ ಛಂದಸ್ಸಿನ ಪದ್ಯದಲ್ಲಿ ” U_ ” ಹೀಗೆ ಇರುವ ಮಾತ್ರಾಗಣ ಬರಕೂಡದುಇಂಥ ಲಕ್ಷಣಗಳಿಂದ ಕೂಡಿದ ಪದ್ಯವೇ ಭೋಗಷಟ್ಪದಿಎನಿಸುವುದು.

() ಭಾಮಿನೀ ಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುತ್ತವೆ.  (ಮೊದಲು ಮೂರು ಮಾತ್ರೆಯ ಗಣ ಅನಂತರ ಮಾತ್ರೆಯ ಗಣ ಕ್ರಮದಲ್ಲಿ ಒಟ್ಟು ನಾಲ್ಕು ಗಣಗಳಿರುತ್ತವೆ.)  ೩ನೆಯ ೬ನೆಯ ಸಾಲುಗಳು ಒಂದು ಸಮನಾಗಿದ್ದು, ಮೂರು ಮತ್ತು ನಾಲ್ಕು ಮಾತ್ರೆಗಳ ಆರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆ ಜಾತಿಯ ಪದ್ಯದಲ್ಲಿ “U _ U” ರೀತಿಯ ಮಧ್ಯ ಗುರುವುಳ್ಳ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣವುಳ್ಳವು ಭಾಮಿನೀ ಷಟ್ಪದಿಗಳೆನಿಸುವುವು.

() ಪರಿವರ್ಧಿನೀಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು, ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ ಮತ್ತು ೬ನೆಯ ಸಾಲುಗಳು ಒಂದು ಸಮನಾಗಿದ್ದು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ ಪದ್ಯದಲ್ಲಿ ” U _ U ” ರೀತಿಯಿರುವ ಗಣವು ಎಲ್ಲಿಯೂ ಬರಕೂಡದುಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆನಿಸುವುದು ಲಕ್ಷಣದಿಂದ ಕೂಡಿದ ಪದ್ಯವು ಪರಿವರ್ಧಿನೀಷಟ್ಪದಿಯೆನಿಸುವುದು.
() ವಾರ್ಧಕಷಟ್ಪದಿ
ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ
ಆರುಪಾದಗಳುಳ್ಳ ಪದ್ಯ, , , ನೆಯ ಪಾದಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿದೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಆರುಗಣ ಮತ್ತು ಮೇಲೊಂದು ಗುರುವಿನಿಂದ ಕೂಡಿರುತ್ತವೆ, ನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆಇಂಥ ಲಕ್ಷಣಗಳುಳ್ಳ ಪದ್ಯಗಳೇ ವಾರ್ಧಕಷಟ್ಪದಿಗಳೆನಿಸುವುವು.

 

************

 *************

 

ಪದ್ಯ-೪ ಕೌರವೇಂದ್ರನ ಕೊಂದೆ ನೀನು (ಭಾಷಾ ಚಟುವಟಿಕೆ, ವ್ಯಾಕರಣಾಂಶಗಳು)

 ಭಾಷಾ ಚಟುವಟಿಕೆ

೧.  ಅಲಂಕಾರವನ್ನು ಹೆಸರಿಸಿ, ಸಮನ್ವಯಗೊಳಿಸಿ.

ಮಾರಿಗೌತನವಾಯ್ತು ನಾಳಿನ ಭಾರತವು

ಅಲಂಕಾರ: ರೂಪಕಾಲಂಕಾರ ಲಕ್ಷಣ: ಉಪಮೇಯ ಮತ್ತು ಉಪಮಾನಗಳ ನಡುವೆ ಅಭೇದ ಕಲ್ಪಿಸುವುದನ್ನು ರೂಪಕಾಲಂಕಾರ ಎನ್ನುವರು.

ಉಪಮೇಯ: ಭಾರತ ಯುದ್ಧ, ಉಪಮಾನ: ಮಾರಿಯ ಔತಣ

ಸಮನ್ವಯ: ಇಲ್ಲಿ ಉಪಮೇಯವಾಗಿರುವ ಭಾರತ ಯುದ್ಧಕ್ಕೂ ಉಪಮಾನವಾರಿರುವ ಮಾರಿಯ ಔತಣಕ್ಕೂ ಅಭೇದ

  ಕಲ್ಪಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರವಾಗಿದೆ.

 

೨. ವಿಗ್ರಹಿಸಿ, ಸಮಾಸದ ಹೆಸರನ್ನು ತಿಳಿಸಿ.

೧) ಇನತನೂಜ = ಇನನ ತನೂಜನು ಯಾರೋ ಅವನೇ (ಸೂರ್ಯ) - ಬಹುವ್ರೀಹಿಸಮಾಸ

೨) ದನುಜರಿಪು = ದನುಜರಿಗೆ ರಿಪು(ವೈರಿ) ಆಗಿರುವವನು ಯಾರೋ ಅವನೇ (ವಿಷ್ಣು ಅಥವಾ ಕೃಷ್ಣ) - ಬಹುವ್ರೀಹಿಸಮಾಸ

೩) ಮುರಾರಿ = ಮುರನಿಗೆ ಅರಿ (ಶತ್ರು) ಆದವನು ಯಾರೋ ಅವನೇ (ವಿಷ್ಣು ಅಥವಾ ಕೃಷ್ಣ) - ಬಹುವ್ರೀಹಿ ಸಮಾಸ

೪) ಮೇದಿನೀಪತಿ = ಮೇದಿನಿಗೆ (ಭೂಮಿಗೆ) ಪತಿಯಾದವನು (ಒಡೆಯನಾದವನು) ಯಾರೋ ಅವನೇ - ಬಹುವ್ರೀಹಿಸಮಾಸ

೫) ಕೈಯಾನು = ಕೈಯನ್ನು + ಆನು - ಕ್ರಿಯಾಸಮಾಸ.

೬) ಮಾದ್ರಮಾಗಧಯಾದವರು = ಮಾದ್ರರೂ + ಮಾಗಧರೂ + ಯಾದವರೂ - ದ್ವಂದ್ವಸಮಾಸ

೭) ಹೊಗೆದೋರು = ಹೊಗೆಯನ್ನು + ತೋರು - ಕ್ರಿಯಾಸಮಾಸ

೮) ರಾಜೀವಸಖ = ರಾಜೀವನಿಗೆ (ತಾವರೆಗೆ) ಸಖನಾದವನು ಯಾರೋ ಅವನೇ (ಸೂರ್ಯ) - ಬಹುವ್ರೀಹಿಸಮಾಸ

 

೩. ಪ್ರಸ್ತಾರ ಹಾಕಿ, ಗಣವಿಂಗಡಿಸಿ, ಛಂದಸ್ಸಿನ ಹೆಸರು ತಿಳಿಸಿ.
 

  3         4           3        4
_  U   _   _    _  U    _ _ 
ಏ ನು | ಹೇ ಳೈ | ಕ ರ್ಣ | ಚಿ ತ್ತ |

    3            4           3         4
_    U  _    U  U   U U U    _   _

ಗ್ಲಾ ನಿ | ಯಾ ವು ದು | ಮ ನ ಕೆ | ಕುಂ ತೀ |
 
     3            4           3         4
_    U   U U U U  _  U    _    U   U   _  U   _  U U  _
ಸೂ ನು | ಗ ಳ ಬೆ ಸ | ಕೈ ಸಿ | ಕೊಂ ಬು ದು | ಸೇ ರ | ದೇ ನಿ ನ | ಗೆ

                                                    ಛಂದಸ್ಸು :- ಭಾಮಿನಿಷಟ್ಪದಿ

೪. ಮೊದಲೆರಡು ಪದಗಳಿಗಿರುವ ಸಂಬಂಧವನ್ನು ಗುರುತಿಸಿ ಮೂರನೇ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ.

೧. ತನುಜ       : ಮಗ            :: ಸಖ                : ಸ್ನೇಹಿತ(ಗೆಳೆಯ)

೨. ಯುದ್ಧ        : ಜುದ್ದ            :: ಪ್ರಸಾದ            : ಹಸಾದ

೩. ಭೇದವಿಲ್ಲ    : ಆಗಮ ಸಂಧಿ   :: ನಿಮ್ಮಡಿಗಳಲಿ     : ಲೋಪಸಂಧಿ

೪. ಕಂದ         : ನಾಲ್ಕು ಸಾಲು  :: ಷಟ್ಪದಿ            : ಆರು ಸಾಲು

ಹೆಚ್ಚುವರಿ ಪ್ರಶ್ನೆಗಳು

ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರನ್ನು ಆರಿಸಿ ಬರೆಯಿರಿ.
೧. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ಹೀಗೆ ಕರೆಯುತ್ತೇವೆ :
ಎ) ಪ್ಲುತ ಬಿ) ಗುರು ಸಿ) ಲಘು ಡಿ) ಗಣ

೨. ಕೈಯಾನು - ಪದವು ಈ ಸಮಾಸವಾಗಿದೆ :
ಎ) ಕ್ರಿಯಾಸಮಾಸ ಬಿ) ದ್ವಂದ್ವಸಮಾಸ ಸಿ) ಬಹುವ್ರೀಹಿಸಮಾಸ ಡಿ) ತತ್ಪುರುಷಸಮಾಸ

೩. ಮಾದ್ರಮಾಗಧಯಾದವರು - ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ಅಂಶಿಸಮಾಸ ಬಿ) ತತ್ಪರುಷಸಮಾಸ ಸಿ) ದ್ವಿಗುಸಮಾಸ ಡಿ) ದ್ವಂದ್ವಸಮಾಸ.

೪. ಹಸಾದ - ಪದದ ತತ್ಸಮ ರೂಪ :
ಎ) ವಿಷಾದ ಬಿ) ಹಸನಾದ ಸಿ) ಪಸಾದ ಡಿ) ಪ್ರಸಾದ.

೫. ದೃಗುಜಲ - ಪದದ ಅರ್ಥ ಇದಾಗಿದೆ :
ಎ) ಕಣ್ಣನೀರು ಬಿ) ತಿಳಿನೀರು ಸಿ) ಮೃಗಗಳನೀರು ಡಿ) ಬಿಸಿನೀರು.

೬. ಬಹುವ್ರೀಹಿ ಸಮಾಸಕ್ಕೆ ಈ ಪದವು ಉದಾಹರಣೆಯಾಗಿದೆ :
ಎ) ಹೊಗೆದೋರು ಬಿ) ಕೈಯಾನು ಸಿ) ರಾಜೀವಸಖ ಡಿ) ಬಾಯ್ದಂಬುಲ

೭. ಭಾಮಿನಿ ಷಟ್ಪದಿಯಲ್ಲಿನ ಒಟ್ಟು ಮಾತ್ರೆಗಳ ಸಂಖ್ಯೆ :
ಎ) ೧೦೮ ಬಿ) ೧೦೨ ಸಿ) ೬೪ ಡಿ) ೧೪೪

೮. ದನುಜರಿಪು - ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ಕ್ರಿಯಾಸಮಾಸ ಬಿ)ಬಹುವ್ರೀಹಿಸಮಾಸ ಸಿ) ದ್ವಂದ್ವಸಮಾಸ ಡಿ) ತತ್ಪುರುಷಸಮಾಸ

೯. ಉಪಮಾನ ಉಪಮೇಯಗಳ ನಡುವೆ ಅಭೇದ ಸಂಬಂಧ ಕಲ್ಪಿಸುವ ಅಲಂಕಾರ :
ಎ) ಉಪಮಾಲಂಕಾರ ಬಿ) ರೂಪಕಾಲಂಕಾರ ಸಿ) ದೃಷ್ಟಾಂತಾಲಂಕಾರ ಡಿ) ಉತ್ಪ್ರೇಕ್ಷಲಾಂಕಾರ

೧೦. ಗುರು-ಲಘು ಮೂರಿರಲು ಈ ಗಣವಾಗುತ್ತದೆ :
ಎ) ’ಭ-ಯ’ಗಣ ಬಿ) ’ಜ-ರ’ಗಣ ಸಿ) ’ಮ-ನ’ಗಣ ಡಿ) ’ಸ-ತ’ಗಣ

೧೧. ಷಟ್ಪದಿಯಲ್ಲಿರುವ ವಿಧಗಳು :
ಎ) ಆರು ಬಿ) ಎಂಟು ಸಿ) ನಾಲ್ಕು ಡಿ) ಮೂರು

೧೨. ’ಕೌಂತೇಯ’ - ಪದವು ಈ ಅಕ್ಷರಗಣಕ್ಕೆ ಉದಾಹರಣೆಯಾಗಿದೆ :
ಎ) ’ಯ’ಗಣ ಬಿ) ’ಸ’ಗಣ ಸಿ) ’ತ’ಗಣ ಡಿ) ’ಭ’ಗಣ
 

೧೩. ಒಂದು ಅಕ್ಷರವನ್ನು ಉಚ್ಛರಿಸುವ ಅವಧಿಗೆ ಹೀಗೆನ್ನುತ್ತಾರೆ :
ಎ) ಗಣ ಬಿ) ಮಾತ್ರೆ ಸಿ) ಯತಿ ಡಿ) ಪ್ರಾಸ

೧೪. ಮೂರು-ನಾಲ್ಕು ಮಾತ್ರೆಗಳಿಂದ ಗಣವಿಭಜನೆಯನ್ನು ಮಾಡುವ ಷಟ್ಪದಿ :
ಎ) ವಾರ್ಧಕ ಬಿ) ಕುಸುಮ ಸಿ) ಭೋಗ ಡಿ) ಭಾಮಿನಿ

೧೫. ಉರವಣಿಸು - ಈ ಪದದ ಅರ್ಥ :
ಎ) ಹೆಚ್ಚಾಗು ಬಿ) ಅವಸರ ಸಿ) ಮನಸ್ಸು ಡಿ) ಕಡಿಮೆಯಾಗು.

[ ಉತ್ತರಗಳು : ೧. ಬಿ. ಗುರು ೨. ಎ. ಕ್ರಿಯಾಸಮಾಸ ೩. ಡಿ. ದ್ವಂದ್ವಸಮಾಸ ೪.ಡಿ. ಪ್ರಸಾದ ೫. ಎ. ಕಣ್ಣೀರು ೬. ಸಿ. ರಾಜೀವಸಖ ೭. ಬಿ. ೧೦೨ ೮. ಬಿ. ಬಹುವ್ರೀಹಿಸಮಾಸ ೯. ಬಿ. ರೂಪಕಾಲಂಕಾರ ೧೦. ಸಿ. ಮ-ನ ಗಣ ೧೧. ಎ. ಆರು
೧೨. ಸಿ. `ತ’ಗಣ ೧೩. ಬಿ. ಮಾತ್ರೆ ೧೪. ಖ. ಭಾಮಿನಿ ೧೫. ಎ. ಹೆಚ್ಚಾಗು ]

ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ :

೧. ಕಂದಪದ್ಯ : ನಾಲ್ಕುಸಾಲು : : ಷಟ್ಪ್ಟದಿ : ___________
೨. ಋಣ : ಹಂಗು : : ರಣ : ___________
೩. ಲಕ್ಷ್ಮೀಶ : ವಾರ್ಧಕಷಟ್ಪದಿ : : ಕುಮಾರವ್ಯಾಸ : ___________
೪. ಷಟ್ಪದಿ : ಮಾತ್ರಾಗಣ : : ಚಂಪಕಮಾಲಾವೃತ್ತ : ___________
೫. ಇನತನೂಜ : ಬಹುವ್ರೀಹಿಸಮಾಸ : : ಮಾದ್ರಮಾಗಧಯಾದವರು : ___________
೬. ಲಕ್ಷ್ಮೀಶ : ಉಪಮಾಲೋಲ : : ಕುಮಾರವ್ಯಾಸ : ____________
೭. ಉರ್ವಿಯೊಳ್ : ಸಪ್ತಮಿವಿಭಕ್ತಿ : : ಸುವಾಜಿಯಂ : _____________
೮. ಲಘು : ಒಂದುಮಾತ್ರೆ : : ಗುರು : _____________
೯. ಮುರಾರಿ : ಕೃಷ್ಣ : : ರವಿಸುತ : _____________
೧೦. ಹಸಾದ : ಪ್ರಸಾದ : : ದಾತಾರ : ______________

[ ಉತ್ತರಗಳು : ೧. ಆರುಸಾಲು ೨. ಯುದ್ಧ ೩. ಭಾಮಿನಿಷಟ್ಪದಿ ೪. ಅಕ್ಷರಗಣ ೫. ದ್ವಂದ್ವಸಮಾಸ ೬.ರೂಪಕಸಾಮ್ರಾಜ್ಯಚಕ್ರವರ್ತಿ ೭. ದ್ವಿತೀಯ ೮. ಎರಡು ಮಾತ್ರೆ ೯. ಕರ್ಣ ೧೦. ದಾತೃ ] 

 

************

*************

14 ಮೇ 2021

ಭಕ್ತಿ ಭಂಡಾರಿ ಬಸವಣ್ಣ

  
ಶ್ರೀ ಬಸವೇಶ್ವರರು 
 
 ಬಾಲ್ಯ ಜೀವನ :

ಬಸವಣ್ಣನವರು ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿನಾಂಕ: ಎಪ್ರಿಲ್ 30, 1134) ರೋಹಿಣಿ ನಕ್ಷತ್ರದಲ್ಲಿ, ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳ ಮಗನಾಗಿ ಜನಿಸಿದರು.

ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾರೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಎಂದು ಹೇಳಿದಾಗ, ಬಸವಣ್ಣ ಪುರುಷ-ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.

ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕುಂಡಲಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು. ನಂತರ ಸಂಗಮೇಶ್ವರದಲ್ಲಿದ್ದ ಲಕುಲಿಶಾ-ಪಾಶುಪತ ಸಂಪ್ರದಾಯದ ಒಂದು ಶೈವ ಗುರುಕುಲದಲ್ಲಿ ಶಿಕ್ಷಣವನ್ನು ಮುಗಿಸಿದರು. ಜಾತವೇದಮುನಿ(ಈಶಾನ್ಯಗುರು) ಎಂಬುವವರು ಅವರ ಗುರುಗಳೆಂದು ಹೇಳಲಾಗುತ್ತದೆ. ಅವರು ತಮ್ಮ ಸೋದರ ಮಾವನ ಮಗಳು ನೀಲಾ೦ಬಿಕೆಯನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಳು,

ಬಸವಣ್ಣನವರ ಸಾಮಾಜಿಕ ಮತ್ತು ಧಾರ್ಮಿಕ ಮನೋಧೋರಣೆಗಳು :

ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವನಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ.

ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ.

ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು.

ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾವಾದಿ ಎಂದೂ ಕರೆಯಲಾಗುತ್ತದೆ. “ಮಾನವೀಯತೆ ಹಾಗೂ ಕಾಯಕ ನಿಷ್ಠೆ ಇವು ಧರ್ಮದ ಬುನಾದಿಯಾಗಬೇಕು” ಎಂದು ಬಲವಾಗಿ ನಂಬಿದ್ದರು.

ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅಂತರ್ಜಾತಿ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು. ಇವರು ಷಟ್‌ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.

ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.

 ಅನುಭವ ಮಂಟಪ:

ಅನುಭವ ಮಂಟಪ ರಚಿಸಿ ಧರ್ಮ ಪ್ರಚಾರ ಮಾಡಿದರು. ಅಲ್ಲಮಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಅದರ ನೇತೃತ್ವ ವಹಿಸಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಎಲ್ಲ ಶರಣ ಬಂಧುಗಳನ್ನು ಸಮಾನಭಾವದಿಂದ ಕಂಡರು. ಅನುಭವ ಮಂಟಪವೆಂಬುದು ಮಂಟಪವಲ್ಲ, ಅದು ಎಲ್ಲಾ ಜಾತಿ-ಧರ್ಮ, ಸ್ತ್ರಿ-ಪುರುಷ, ಬಡವ-ಶ್ರೀಮಂತ, ಆಳು-ಒಡೆಯ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಭೇದಭಾವಗಳಿಲ್ಲದೆ ಎಲ್ಲರನ್ನೂ ಒಳಗೊಂಡಿದ್ದ ಮಹಾವೇದಿಕೆ. ಅಲ್ಲಿ ಸಮಾಜೋದ್ಧಾರದ ವಿಚಾರ ಮಂಥನ ನಡೆಯುತ್ತಿತ್ತು. ಅವರವರ ಅನುಭವವನ್ನು ವಚನಗಳ ಮೂಲಕ ಅಭಿವ್ಯಕ್ತಪಡಿಸುತ್ತಿದ್ದರು.

ಅನುಭವ ಮಂಟಪ
    ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು.

ಅಣ್ಣನವರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ, ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ.

 ಇಷ್ಟಲಿಂಗದ ಪರಿಕಲ್ಪನೆ ಮತ್ತು ಅದರ ಮಹತ್ವ ಹಾಗೂ ಶಕ್ತಿ ವಿಶಿಷ್ಟಾದ್ವೈತ

ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ' ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರೇ ಇಷ್ಟಲಿಂಗದ ಜನಕರು ಎಂಬುದನ್ನು ಅಲ್ಲಮಪ್ರಭು, ಸಿದ್ದರಾಮ, ಅಕ್ಕಮಹಾದೇವಿ ಮುಂತಾದವರು ಸೂಚಿಸಿದ್ದಾರೆ. ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದವನ್ನು ಕಳೆದು ಸಮರತಿ, ಸಮಕಳೆ ಮತ್ತು ಸಮಸುಖದ ಅರಿವು ಮೂಡಿಸಲಿಕ್ಕಾಗಿಯೇ ಇರುವಂಥದ್ದು ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. 

     ಬಸವಣ್ಣನವರು ಸ್ಥಾವರ ಲಿಂಗ, ಮೂರ್ತಿ ಪೂಜೆ ಹಾಗೂ ಬಹುದೇವೋಪಾಸನೆಯನ್ನು ತಿರಸ್ಕರಿಸಿ, ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಅವರು ತ್ರಿಮೂರ್ತಿಗಳಿಗಿಂತ ಸೃಷ್ಟಿಯೇ ಶ್ರೇಷ್ಠವೆಂದು ಪ್ರತಿಪಾದಿಸಿದರು. ಸಕಲ ಜೀವ ಕೋಟಿ, ಗ್ರಹತಾರಾದಿಗಳಿಗೆಲ್ಲ ಆಗರವಾದ ಇಡೀ ಬ್ರಹ್ಮಾಂಡವೇ ದೇವರೆಂದೂ ಅದನ್ನೇ ದೇವರೆಂದು ಪೂಜಿಸಬೇಕೆಂದು ಹೇಳಿದ ಅವರು ಇಡೀ ಬ್ರಹ್ಮಾಂಡವನ್ನು ಅಂಗೈಯಲ್ಲಿಟ್ಟು ಪೂಜಿಸುವ ಕಲ್ಪನೆಯಿಂದ ಬ್ರಹ್ಮಾಂಡದಂತೆ ಅಂಡಾಕಾರದ ಸ್ವರೂಪದಲ್ಲಿರುವ ಇಷ್ಟಲಿಂಗವನ್ನು ಪರಿಚಯಿಸಿದರು. ಅವರ ಈ ಸಿದ್ಧಾಂತವನ್ನು ‘ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ’ ಎಂದು ಕರೆಯಲಾಗುತ್ತದೆ.

ಇಷ್ಟಲಿಂಗ ಪೂಜೆಯು ಮಾನವನಲ್ಲಿ ಏಕತೆಯ ಅರಿವನ್ನು ಮೂಡಿಸುತ್ತದೆ ಎಂದು ಹೇಳುತ್ತಾರೆ. ಭೂಮಿಯ ಮೇಲಿನ ಎಲ್ಲ ಮಾನವರು ನದಿಯೊಳಗೆ ನದಿ ಬೆರೆತಾಗ ಉಂಟಾಗುವ ಐಕ್ಯಭಾವವನ್ನು ತಮ್ಮ ನಿಜಜೀವನದಲ್ಲಿ ಹೊಂದಿರಬೇಕು. ಲಿಂಗಭೇದ, ಜಾತಿ-ವರ್ಣಭೇದ, ವರ್ಗಭೇದ ಹಾಗೂ ಮಾನವ ಸಮಾಜಗಳ ಭೇದವನ್ನು ಅಳಿದು ಸಮತೆಯ ಬದುಕನ್ನು ಬದುಕುವ ಅರಿವು ಮೂಡಿದಾಗ ಜಗತ್ತು ಯುದ್ಧ ಮತ್ತು ಎಲ್ಲ ತೆರನಾದ ಹಿಂಸೆಗಳಿಂದ ಮುಕ್ತವಾಗುತ್ತದೆ. ಬಸವಣ್ಣನವರ ಇಷ್ಟಲಿಂಗ ಸೃಷ್ಟಿಯ ಉದ್ದೇಶ, ಮಾನವನನ್ನು ವಿಶ್ವಮಾನವನನ್ನಾಗಿ ಮಾಡುವುದೇ ಆಗಿದೆ.

 ವಚನ ಸಾಹಿತ್ಯ :

’ವಚನ’ ಎಂಬ ವಿಶಿಷ್ಟವಾದ ಗದ್ಯ ಮತ್ತು ಪದ್ಯದ ಲಕ್ಷಣಗಳನ್ನು ಹೊಂದಿರುವ ಸಾಹಿತ್ಯ ಪ್ರಕಾರ ಶರಣರು ವಿಶ್ವಕ್ಕೆ ನೀಡಿದ ವಿಶಿಷ್ಟವಾದ ಕಾಣಿಕೆ. ಯಾವುದೇ ಪ್ರಚಾರ, ಪ್ರಶಸ್ತಿ, ರಾಜರ ಮೆಚ್ಚುಗೆಗಳಿಸಲು ರಚನೆಯಾಗದೆ ಸಮಾಜದ ಉದ್ಧರಕ್ಕಾಗಿ ರಚಿತವಾದ ವಿಶ್ವದ ಏಕೈಕ ಸಾಹಿತ್ಯ ಪ್ರಕಾರವಿದ್ದರೆ ಅದು ‘ವಚನ ಸಾಹಿತ್ಯ’. ಈ ವಚನಾಂದೋಲನದಲ್ಲಿ ನೂರಾರು ಶರಣರು ಭಾಗವಹಿಸಿ, ಸಾವಿರಾರು ವಚನಗಳ ಕೊಡುಗೆ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಶರಣರ ವಚನಗಳನ್ನು ಮೊದಲಿಗೆ ಬೃಹತ್ತಾಗಿ ಸಂಗ್ರಹಿಸಿ ಸಂಪಾದಿಸಿದ ಮೊದಲಿಗರು ಫ.ಗು.ಹಳಕಟ್ಟಿ. ಅವರ ಮಹತ್ವಪೂರ್ಣವಾದ ವಚನ ಸಂಪಾದನೆಯ ಕೃತಿ ‘ವಚನ ಸಾಹಿತ್ಯ ಸಾರ’ ಅಪೂರ್ವವಾದ ವಚನಗಳ ಸಂಗ್ರಹವಾಗಿದೆ.

ಬಸವಣ್ಣನವರ 1500 ಕ್ಕೂ ಹೆಚ್ಚು ವಚನಗಳು ದೊರೆತಿವೆ. ಅವರು ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದರೆ ನರಕ ಎಂದು ಸಾರುವ ಮೂಲಕ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅವರ ಕೊಡುಗೆ ಅಪಾರ.

 
ಬಸವಣ್ಣನವರ ಕೆಲವು ಪ್ರಸಿದ್ಧ ವಚನಗಳು
1. ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ!!
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ!!
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

2. ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯೂ !!

3. ಆನು ಒಬ್ಬನು; ಸುಡುವರೈವರು.
ಮೇಲೆ ಕಿಚ್ಚು ಘನ, ನಿಲಲು ಬಾರದು.
ಕಾಡುಬಸವನ ಹುಲಿ ಕೊಂಡೊಯ್ದರೆ
ಆರೈಯಲಾಗದೆ ಕೂಡಲಸಂಗಮದೇವ ?

4. ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.

5. ಕಳ್ಳ ನಾಗರ ಕಂಡರೆ ಹಾಲನೆರೆ ಎಂಬುದು
ದಿಟದ ನಾಗರ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದರೆ ನಡೆಯೆಂಬುದು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ
ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯ

6. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ,
ನೀವೇ ಬಲ್ಲಿರಿ ಕೂಡಲಸಂಗಮದೇವಾ.

7. ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.

8. ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು
ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ
ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು
ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.

9. ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ

10. ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ

ಬಸವಣ್ಣನವರ ಜೀವನವನ್ನಾಧರಿಸಿದ ಪ್ರಮುಖ ಕೃತಿಗಳು:

  • ಬಸವ ಪುರಾಣಮು (ತೆಲುಗು) – ಪಾಲ್ಕುರಿಕೆ ಸೋಮನಾಥ
  • ಬಸವ ಪುರಾಣ (ಕನ್ನಡ) – ಭೀಮಕವಿ
  • ಬಸವರಾಜದೇವರ ರಗಳೆ (ಕನ್ನಡ) - ಹರಿಹರ
ಬಸವಣ್ಣನವರ ಅಂಚೆ ಚೀಟಿ ಮತ್ತು ನಾಣ್ಯ



ಗುರು ಬಸವಣ್ಣವರ ೮೦೦ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ತ ಭಾರತ ಸರಕಾರದ ಅಂಚೆ ಇಲಾಖೆಯು ೧೧ನೇ ಮೇ ೧೯೬೭ರಲ್ಲಿ ೧೫ ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿ ಯನ್ನು ಮುದ್ರಿಸಿತು. ಮತ್ತೊಮ್ಮೆ ೧೯೯೭ರಲ್ಲಿ ೨ ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು. ಗುರು ಬಸವಣ್ಣವರ ಭಾವಚಿತ್ರವುಳ್ಳ ೫ ರೂಪಾಯಿ ಮತ್ತು ೧೦೦ ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗ ರಾಗಿದ್ದಾರೆ. ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು.

    ಇಂತಹ ಮಹಾನ್ ನೇತಾರರಾದ ಬಸವಣ್ಣನವರು 62 ವರ್ಷ 3 ತಿಂಗಳು 2 ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ 30, 1196) ಉರಿಯುಂಡ ಕರ್ಪೂರದಂತೆ ಲಿಂಗೈಕ್ಯರಾದರು.