ನನ್ನ ಪುಟಗಳು

30 ಮಾರ್ಚ್ 2016

ವಿಜ್ಞಾನ-ಸಾಮಾನ್ಯ ಜ್ಞಾನ

ಕ್ಷಮಿಸಿ!! ಮಾಹಿತಿ ಇನ್ನೂ ನೀಡಿಲ್ಲ. ಈ ಪುಟವನ್ನು ಶೀಘ್ರದಲ್ಲೇ ಪ್ರದರ್ಶಿಸಲಾಗುವುದು.

ಭಾರತದ ಇತಿಹಾಸ-ಸಾಮಾನ್ಯ ಜ್ಞಾನ

ಇತಿಹಾಸ'ದ ಕಿರು ಪರಿಚಯ

    ಇತಿಹಾಸ(ಹಿಸ್ತೋರಿ) ಪದವು ಗ್ರೀಕ್'ನ "ಹಿಸ್ತೋರಿಯ" ಎಂಬ ಪದದಿಂದ ಬಂದಿದೆ.
    "ಹಿಸ್ತೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದ ಜ್ಞಾನ".
    ಇತಿಹಾಸ ಪದದ ಅರ್ಥ ಇತಿ ಅಂದರೆ ಹೀಗೆ, ಹ ಅಂದರೆ ಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).
    ಇತಿಹಾಸದ ಪಿತಾಮಹ ಹೆರೋದೊತಸ್.
    ಹೆರೋದೊತಸ್ ಬರೆದ ಗ್ರಂಧ ಪೆರ್ಸಿಯನ್ ಯುದ್ಧಗಳು.

ಇತಿಹಾಸ - ಭಾರತದ ಶಿಲಾಯುಗ


    ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದ ಕಿ.ಪೂ. ೫೦೦೦
     ೫೦೦,೦೦೦ ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.
    ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.
    ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.
    ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.
    ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು
    ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.
    ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.
    ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.
    ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ
    ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.
    ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, ಜಲನಹಳ್ಳಿ, ಸಂಗನಕಲ್ಲು.
    ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦
    ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.
    ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.
    ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.
    ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರುಡಿಗೆ ಬಂತು.
    ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.
    ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.
    ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.
    ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.
    ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.
    ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.
    ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.
    ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.
    ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.
    ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.
    ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.
    ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.

ಇತಿಹಾಸ - ಸಿಂದು ನಾಗರೀಕತೆ

     ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು ಪತ್ತೆಯಾಗಿದ್ದು ಹರಪ್ಪ.
    ಹರಪ್ಪ ನಗರವನ್ನು ಪತ್ತೆಹಚ್ಚಿದವರು ದಯಾರಾಮ್ ಸಾಹನಿ - ೧೯೨೦ ರಲ್ಲಿ
    ಮೊಹೆಂಜದರೋವನ್ನು ಪತ್ತೆಹಚ್ಚಿದವರು ಅರ.ದಿ. ಬ್ಯಾನರ್ಜಿ - ೧೯೨೨ ರಲ್ಲಿ
    ಹರಪ್ಪ ಸ್ವ0ಸ್ಕ್ರತಿ ಸಂಭಂದಿಸಿದ ಸಿಕ್ಕಿರೋವ ಒಟ್ಟು ನೆಲೆಗಳು ೧೫೦೦
    ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.
    ಹರಪ್ಪ ಇರುವುದ ಪಂಜಾಬ್ ನ ರಾವಿ ನದಿ ದಡದಲ್ಲಿ
    ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ - ದೊಲ್ವೀರ್
    ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ
    ಸಿಂಡಿ ಭಾಸೆಯಲ್ಲಿ ಮೋಹನ್ಜದರೋ ಎಂದರೆ ಸತ್ತವರ ದಿಬ್ಬ.
    ಹರಪ್ಪ ನಾಗರಿಕತೆಯು ವಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.
    ಹರಪ್ಪ ವಾಪಿಸಿದ್ದ ನದಿ ಭಾಗಗಳು - ಇಂಗಿ ಹೋಗಿರುವ ಸರಸ್ವತಿ  ಮತ್ತು ಘಗ್ರ, ಹಕ್ರ ನದಿ ಬಯಲು
    ಹರಪ್ಪ ಜನರು ಒಳ ಚರಂಡಿಗಾಗಿ ಬಳಸೀದ ತಂತ್ರ - ಬಸಿಗುಂದ್ದಿ ಮತ್ತು ತೆರಪುಗಳು.
    ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದಿದ್ದು -  ಸುತ್ತ ಇಟ್ಟಿಗೆ
    ಸ್ನಾನದ ಕೊಳ ಇರುವುದು - ಮೋಹನ್ಜದರೋದಲ್ಲಿ
    ಮೋಹನ್ಜದರೋ ಸ್ನಾನದ ಕೊಳದ ಅಳತೆ - ೧೨ ಮಿ ಉದ್ದ, ೭ ಮಿ. ಅಗಲ, ೨.೫ ಮಿ ಆಳ.
    ಕ್ರೀಡಾಂಗಣ ಇರುವ ಸಿಂದು ನಾಗರಿಕತೆಯ ನಗರ - ದೊಲ್ವೀರ್
    ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ - ದೊಲ್ವೀರ್
    ಸಿಂಧು ನಾಗರೀಕತೆ ಸೇರಿರುವುದು ಕಂಚಿನಯುಗಕ್ಕೆ
    ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು - ಎಜಿಪ್ತ್ ಮತ್ತು ಮೆಸಪತೊಮಿಯ
    ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ ಬಟ್ಟೆಯನ್ನು ಬಳಸಿದವರು - ಹರಪ್ಪ ಜನರು.
    ಸಿಂದು ನಾಗರಿಕತೆ ಜನರ ಮುಕ್ಯ ಕಸಬು - ಕ್ರಷಿ ಮತ್ತು ವಾಪರ
    ಸಿಂದು ಜನತೆಯ ಆಟಿಂತ ಪ್ರಿಯವಂತ ಪ್ರಾಣಿ - ಡುಬ್ಬದ ಗುಳಿ
    ಸಿಂದು ಜನರ ಪ್ರಮುಖ ಸಾಕು ಪ್ರಾಣಿಗಳು - ದನ,ಎಮ್ಮೆ,ಆಡು,ಕುರಿ,ಕತ್ತೆ,ಬೆಕ್ಕು,ನಾಯಿ,ನವಿಲು
    ನ್ರತೈ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ ಸ್ತಳ - ಮೋಹನ್ಜದರೋ
    ಸಿಂದು ಜನರು ಧರಿಸುತ್ತಿದ್ದ ಆಭರಣಗಳು- ಕಿವಿ ಉಂಗುರ , ಕಂತಿಹಾರ, ಕೈಬಳೆ, ನಲಿಪತ್ತಿ, ತೋಳ ಬಂಡಿ

ಭೂಗೋಳ-ಸಾಮಾನ್ಯಜ್ಞಾನ

(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
Ans) ಆರ್ಯಭಟ
2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
Ans) ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ
3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
Ans) ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ
4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
Ans) ಕರ್ನಾಟಕ
5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
Ans) ಬಳ್ಳಾರಿ
6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
Ans) ಮಧ್ಯ ಪ್ರದೇಶ
7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
Ans) ಅಂಡಮಾನ್ ಮತ್ತು ನಿಕೋಬಾರ್
8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
Ans) ಹರಿಯಾಣ
9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
Ans) 1,91,791 ಚ.ಕಿ.ಮೀ.ಗಳು
10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
Ans) ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ
11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
Ans) " ಗಗನ ಚುಕ್ಕಿ " ಮತ್ತು " ಭರಚುಕ್ಕಿ"
12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
Ans) ಕನ್ನಂಬಾಡಿ ಅಣೆಕಟ್ಟು
14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
Ans) ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
15) ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
Ans) ಬೀದರ್
16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
Ans) ಚಳ್ಳಕೆರೆ (456 ಮಿ.ಮೀ)
17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
Ans) ಕರ್ನಾಟಕ
18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
Ans) ಕೊಡಗು ಜಿಲ್ಲೆಯ ನಾಗರಹೊಳೆ
19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
Ans) ಚಾಮರಾಜನಗರ
20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
Ans) ತಮಿಳುನಾಡು
(ಸಂಗ್ರಹ)

ಭಾರತದ ಭೂಗೋಳ
1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.
17. ಭಾರತದಲ್ಲಿ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ  ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ  ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ  ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ  ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು  ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ  (ಲೈನ್ ಆಪ್ ಕಂಟ್ರೋಲ್) ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ
 ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ. 

ಕನ್ನಡ ಸಾಮಾನ್ಯ ಜ್ಞಾನ

  1. ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು
  2. ಕನ್ನಡದ ರಾಷ್ಟ್ರ ಕವಿಗಳು
  3. ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು
  4. ಕನ್ನಡದ ಬಿರುದಾಂಕಿತರು
  5. ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು 
  6. ಪಂಪ ಪ್ರಶಸ್ತಿ ವಿಜೇತರು 
  7. ಕರ್ನಾಟಕದ ಪ್ರಥಮಗಳು 
  8. ಕನ್ನಡದ ಮೊದಲುಗಳು
  9. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರ ಪಟ್ಟಿ
  10. ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ 
  11. ಕರ್ನಾಟಕವನ್ನು ಆಳಿದ ರಾಜವಂಶಗಳು 
  12. ಆತ್ಮಕಥೆಗಳು

16 ಮಾರ್ಚ್ 2016

೨೪. ಗುಬ್ಬಿಯ ಮಲ್ಲಣಾರ್ಯ

ಗುಬ್ಬಿಯ ಮಲ್ಲಣಾರ್ಯ
 ವೀರಶೈವ ಕವಿಯಾದ
ಈತನ ಕಾಲ: ಕ್ರಿ.ಶ.ಸು.೧೫೧೩
ಈತನ ಕೃತಿಗಳು: 
   ೧) ಭಾವಚಿಂತಾರತ್ನ   (ವಾರ್ಧಕ ಷಟ್ಪದಿ)
   ೨) ವೀರಶೈವಾಮೃತ ಪುರಾಣ (ವಾರ್ಧಕ ಷಟ್ಪದಿ)
   ೩) ಪುರಾತನರ ರಗಳೆ  (ರಗಳೆ)



********

೨೩. ತಿಮ್ಮಣಕವಿ

ತಿಮ್ಮಣಕವಿ
ಈತನ ಕಾಲ: ಕ್ರಿ.ಶ.೧೫೦೦
ಆಶ್ರಯ: ವಿಜಯನಗರದ ಶ್ರೀಕೃಷ್ಣದೇವರಾಯ, ಅರವೀಡು ಸಂತತಿ
ಕೃತಿ: 'ಕೃಷ್ಣರಾಜ(ಯ) ಭಾರತ' (ಕರ್ಣಾಟಕ ಕೃಷ್ಣರಾಯ ಭಾರತ ಕಥಾ ಮಂಜರಿ)
ಬಿರುದು: ‘ಕರ್ಣಾಟಕ ಕವಿಕುಲ ಸಾರ್ವಭೌಮ’

[ಕುಮಾರವ್ಯಾಸನು ಮಹಾಭಾರತದ ೧೦ ಪರ್ವಗಳನ್ನು ಮಾತ್ರ ‘ಕರ್ಣಾಟಭಾರತ ಕಥಾಮಂಜರಿ’ಯಲ್ಲಿ  ಬರೆದಿದ್ದು ಉಳಿದ ೮ ಪರ್ವಗಳನ್ನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ 'ಕೃಷ್ಣರಾಜ ಭಾರತ'ಎಂಬ ಹೆಸರಿನಿಂದ ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ.]

"ಲೇಸೆನಿಸಿದ ಮೊದಲಾ ಕುಮಾರವ್ಯಾಸ ದಶಪರ್ವಗಳ ಹೇಳಿದ, ಭಾರತದ ಉಳಿದ ಪರ್ವಗಳ ನೀ ಸಕಲಜನ ಮೆಚ್ಚುವಂತೆ ಹೇಳು; ಸುರನದಿಯ ಯಮುನಾತರಂಗಿಣಿ ಬೆರೆಸಿ ಹರಿವಂದದಲಿ ಕವಿಕುಂಜರ ಕುಮಾರವ್ಯಾಸನುರುವಾಗ್ಲಹರಿಯೊಡನೀಗ ಸರಿಯೆನಿಸಿ ನೀಕೂಡಿಸೈ.." ಎಂದು ಕೃಷ್ಣದೇವರಾಯನು ಹೇಳಲಾಗಿ ತಾನು ಈ ಕೃತಿಯನ್ನು ಬರೆದುದಾಗಿ ಹೇಳಿದ್ದಾನೆ.

"ವೀರನಾರಾಯಣ ನೀ ಕವಿಯೆನಿಸಿಕೊಂಡೆ, ಕುಮಾರವ್ಯಾಸಗೊಲಿದು ಕನ್ನಡಿಸಿದೆ ಭಾರತವ"  ಎಂದಿದ್ದಾನೆ ತಿಮ್ಮಣ್ಣಕವಿ.

ಕೃತಿಯ ಮೇಲಿನ ಪ್ರಭಾವ:-  ತೆಲುಗಿನಲ್ಲಿ ‘ಕವಿಬ್ರಹ್ಮ’ ಎನಿಸಿದ ತಿಕ್ಕನನ ಮಹಾಭಾರತದ ಪ್ರಭಾವವನ್ನು ‘ಕೃಷ್ಣರಾಜ ಚರಿತೆ’ ಯ ಮೇಲೆ ಉಂಟಾಗಿದೆ.

ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ - ತಿಮ್ಮಣ್ಣಕವಿ.


************** 

೨೨. ಮೂರನೆಯ ಮಂಗರಸ

ಮೂರನೆಯ ಮಂಗರಸ
ಈತನ ಕಾಲ : ಕ್ರಿ.ಶ.ಸು ೧೬ನೆಯ ಶತಮಾನ. (ಸು.೧೫೦೮)
ಚೆಂಗಾಳ್ವ ಅರಸರ ಕಾಲದಲ್ಲಿದ್ದನು. ಈತನ ಸಹೋದರ ಸಂಬಂಧಿ ಎನ್ನಲಾದ ನಂಜುಂಡನು ‘ಕುಮಾರರಾಮನ ಕಥೆ’ಯನ್ನು ಬರೆದಿದ್ದಾನೆ.
         ಮಂಗರಸಕವಿ  ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ‘ಜಯನೃಪಕಾವ್ಯ’, ‘ನೇಮಿಜಿನೇಶ ಸಂಗತಿ’, ‘ಸಮ್ಯಕ್ತ್ವ ಕೌಮುದಿ’ ಮತ್ತು ‘ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.
ಜಯನೃಪಕಾವ್ಯ, ಸೂಪಶಾಸ್ತ್ರಗಳನ್ನು ವಾರ್ಧಕ ಷಟ್ಪದಿಯಲ್ಲಿ ಬರೆದಿದ್ದಾನೆ. ಇವನ ಉಳಿದಗ್ರಂಥಗಳು ಸಾಂಗತ್ಯದಲ್ಲಿವೆ. ಜಯನೃಪಕಾವ್ಯದಲ್ಲಿ ಕಥೆಗಿಂತಲೂ ವರ್ಣನೆ ಹೆಚ್ಚು.
       [ವಿಷವೈದ್ಯಗ್ರಂಥವನ್ನು ಬರೆದ ಒಂದನೆಯ ಮಂಗರಸ (ಸು.೧೩೫೦) ಕವಿ ಮಂಗಾಭಿದಾನವೆಂಬ ನಿಘಂಟನ್ನು ಬರೆದ ಎರಡನೆಯ ಮಂಗರಸ (ಸು.೧೩೯೮)]

ಸುಪಶಾಸ್ತ್ರ ಗ್ರಂಥದಿಂದ ಒಂದು ಚರಣ: ಇದರಲ್ಲಿ ಪಾಕಶಾಸ್ತ್ರವೂ ಸರಸ್ವತಿ ಎಂದು ಸ್ತುತಿಸಲಾಗಿದೆ.

ಪರಬ್ರಹ್ಮಹೃದಯಸರಸಿರುಹೋ
ದರದೊಳಗೊಗೆದಾತನ ಸಿರಿಮೊಗದೊಳು
ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ
ಭರದಿಂ ಭವ್ಯಭುಜಂಗರನವಳೊಳ್
ನೆರಪುವ ಕೋವಿದೆ ನರಸುರವಂದಿತೆ
ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು||


******ಹೆಚ್ಚಿನ ಮಾಹಿತಿ ಕೃಪೆ: ಸಂಪದ, ಪ್ರಜಾವಾಣಿ*******

೨೧.ನಿಜಗುಣ ಶಿವಯೋಗಿ

ನಿಜಗುಣ ಶಿವಯೋಗಿ
 
ಕಾಲ:- ಕ್ರಿ.ಶ.ಸು. ೧೫೦೦

ಸ್ಥಳ:- ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ಸುತ್ತುಮುತ್ತಿನ ಪ್ರದೇಶಕ್ಕೆ ರಾಜರಾಗಿದ್ದರೆಂದು ಊಹಿಸಲಾಗಿದೆ.
ಆರಾಧ್ಯ ದೈವ ಮತ್ತು ಅಂಕಿತ ನಾಮ: ಶಂಭುಲಿಂಗ
ಕೃತಿಗಳು:- 
ಸಪ್ತ ಋಷಿ, ಸಪ್ತಸಾಗರ, ಸಪ್ತಸ್ವರಗಳಂತೆ ನಿಜಗುಣರು ಕನ್ನಡದಲ್ಲಿ ಸಪ್ತ ಅಂದರೆ ಏಳು ಗ್ರಂಥಗಳನ್ನು ರಚಿಸಿದ್ದಾರೆ.
೧. ಕೈವಲ್ಯ ಪದ್ಧತಿ
೨. ಪರಮಾನುಭವ ಬೋಧೆ
೩. ಅನುಭವಸಾರ
೪. ಪರಮಾರ್ಥ ಗೀತೆ
೫. ಪಾರಮಾರ್ಥ ಪ್ರಕಾಶಿಕೆ
೬. ವಿವೇಕ ಚಿಂತಾಮಣಿ
೭. ಅರವತ್ಮೂರು ಪುರಾತನ ತ್ರಿವಿಧಿ

ಮತ್ತಷ್ಟು ಮಾಹಿತಿಗಳು (ಕೃಪೆ:ಕಣಜ)
          ನಿಜಗುಣರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ಸುತ್ತುಮುತ್ತಿನ ಪ್ರದೇಶಕ್ಕೆ ರಾಜರಾಗಿದ್ದರು. ಅವರು ಅಧಿಕಾರದಿಂದ ರಾಜರಾಗಿದ್ದರೂ ಶಿವಭಕ್ತರಾಗಿ, ಜಂಗಮಪ್ರೇಮಿಯಾಗಿ, ಪ್ರಜಾಪ್ರಿಯರೂ ಆಗಿದ್ದರು. ವೇದ, ಉಪನಿಷತ್ತು, ಶಾಸ್ತ್ರ, ಪುರಾಣ, ಇತಿಹಾಸ ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದರು. ನಿಜಗುಣರ ತಂದೆ-ತಾಯಿ ಯಾರು? ಅವರ ಜನಿಸಿದ್ದ ಕಾಲ ಯಾವುದು? ಅವರಿಗೆ ಹೆಂಡತಿ ಮಕ್ಕಳು ಇದ್ದರೆ? ಎನ್ನುವ ಯಾವ ಚಿವಾರವೂ ಖಚಿತವಾಗಿ ತಿಳಿದು ಬಂದಿಲ್ಲ. ಅವರು ಸನ್ಯಾಸ ಸ್ವೀಕಾರ ಮಾಡಿದ ಮೇಲೆ ರಚಿಸಿದ ಗ್ರಂಥಗಳಲ್ಲಿ ತಮ್ಮ ಮೊದಲಿನ ಜೀವನದ ಬಗ್ಗೆ ಯಾವ ವಿಷಯವನ್ನೂ ಹೇಳಿಕೊಂಡಿಲ್ಲ. ಅಲ್ಲಲ್ಲಿ ತಮ್ಮನ್ನು “ನಿಜಗುಣಯೋಗಿ, ನಿಜಗುಣಮತಿ, ಶ್ರೀಮನ್ನಿಜಗುಣ ಶಿವಯೋಗಿ, ಶ್ರೀ ನಿಜಗುಣ ಶಿವಯೋಗೀಂದ್ರ” ಇತ್ಯಾದಿಯಾಗಿ ಕರೆದುಕೊಂಡಿದ್ದಾರೆ. ಆದರೂ ಅವರು ಕನ್ನಡ ಜನಮನದಲ್ಲಿ “ನಿಜಗುಣ ಶಿವಯೋಗಿ” ಎಂದೇ ಹೆಸರಾಗಿದ್ದಾರೆ.
          ಅವರು ತಮ್ಮ “ವಿವೇಕ ಚಿಂತಾಮಣಿ” ಎನ್ನುವ ಗ್ರಂಥದ ದೀಕ್ಷಾ ಪ್ರಕರಣದಲ್ಲಿ ರೇವಣಸಿದ್ಧ, ಮರುಳ ಸಿದ್ಧ, ಏಕೋರಾಮ, ಪಂಡಿತಾರಾಧ್ಯ ಎನ್ನುವ ನಾಲ್ಕು ಜನ ಆಚಾರ್ಯರ ಹೆಸರನ್ನು ಹೇಳಿದ್ದಾರೆ. ೧೨ನೆಯ ಶತಮಾನದ ಮೊದಲಿನಿಂದಲೂ ರೇವಣಸಿದ್ಧರು ಪ್ರಸಿದ್ಧರು. ಮರುಳಸಿದ್ಧ, ಪಂಡಿತಾರಾಧ್ಯರು ಬಸವೇಶ್ವರರ ಕಾಲದಲ್ಲಿಯೇ ಇದ್ದವರು. ಏಕೋರಾಮರು ಬಸವೇಶ್ವರರಿಗಿಂತ ಹಿಂದಿನವರು. ಅಂದ ಮೇಲೆ ನಿಜಗುಣರು ೧೨ನೇಯ ಶತಮಾನದಿಂದ ಈಚೆಗಿನವರು ಇರಬೇಕು. ಹಾಗೆಯೇ ೧೬೫೦ ರಲ್ಲಿ ಷಡಕ್ಷರಿ ಕವಿಯು “ರಾಜಶೇಖರ ವಿಲಾಸ” ಎನ್ನುವ ಕಾವ್ಯದಲ್ಲಿ ನಿಜಗುಣರ ಹೆಸರು ಹೇಳಿರುವುದರಿಂದ ಅವರು ೧೬೫೦ ಕ್ಕಿಂತ ಹಿಂದಿನವರಿರಬೇಕು. ನಿಜಗುಣರ ಗ್ರಂಥಗಳನ್ನು, ಇತರರು ಅವರನ್ನು ಸ್ಮರಿಸಿರುವುದನ್ನು ಅಭ್ಯಾಸ ಮಾಡಿ ವಿದ್ವಾಂಸರು ಅವರ ಕಾಲ ೧೫ನೇ ಶತಮಾನ ಎಂದು ಊಹಿಸಿದ್ದಾರೆ.
 
ಏಳು ದೀಪಗಳು
ನಿಜಗುಣರು ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪಂಡಿತರಾಗಿದ್ದರು. ವೇದ, ಉಪನಿಷತ್ತು, ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸ ಮಾಡಿದ್ದರು. ಈಗ ಗುರುಗಳು ಅಪ್ಪಣೆ ಕೊಡಿಸಿದಂತೆ ಲೋಕಕಲ್ಯಾಣಕ್ಕಾಗಿ ತಾವು ಏನಾದರೂ ಕೆಲಸ ಮಾಡಬೇಕು. ತಮ್ಮ ಯೋಗ ಸಾಧನೆ, ಸಿದ್ಧಿಯ ಸದುಪಯೋಗ ಮಾಡಿಕೊಳ್ಳಬೇಕು. ತಮ್ಮಲ್ಲಿರುವ ಜ್ಞಾನವನ್ನು ನಾಲ್ಕು ಜನರಿಗೆ ಹಂಚಬೇಕು ಎನ್ನುವ ವಿಚಾರದಿಂದ ನಿಜಗುಣರ ಗ್ರಂಥಗಳನ್ನು ಬರೆಯಲು ಪ್ರಾರಂಭಿಸಿದರು.
ಆಗ ಅವರಿಗೆ ಹೊಳೆದ ಮೊದಲನೆಯ ವಿಚಾರವೆಂದರೆ ವೇದ, ಉಪನಿಷತ್ತುಗಳಂತಹ ಅಮೂಲ್ಯ ಗ್ರಂಥಗಳು ಸಂಸ್ಕೃತದಲ್ಲಿಯೇ ಇರುವುವು. ಸಂಸ್ಕೃತದಲ್ಲಿ ಹೆಚ್ಚಿನ ಪಾಂಡಿತ್ಯ ಇರುವವರಿಗೆ ಮಾತ್ರ ವುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಕೇವಲ ಕನ್ನಡ ಭಾಷೆಯನ್ನು ತಿಳಿದ ಸಾಮಾನ್ಯ ಜನರಿಗೆ ಇವು ಕಬ್ಬಿಣದ ಕಡಲೆಯಾಗಿರುವುವು. ಹೀಗೆ ಯೋಚಿಸಿ ಅವರು ನಾಡಿನಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ವೇದ, ಉಪನಿಷತ್ತುಗಳನ್ನು ಸಾರವನ್ನು ಕನ್ನಡದಲ್ಲಿ ಬರೆಯಬೇಕೆಂದು ನಿರ್ಧಾರ ಮಾಡಿದರು.
ನಿನ್ನಿಂದ ಕನ್ನಡ ಜನತೆಗೆ ಬಹಳ ದೊಡ್ಡ ಉಪಕಾರವಾಗಬೇಕಾಗಿದೆ
ಸಪ್ತ ಋಷಿ, ಸಪ್ತಸಾಗರ, ಸಪ್ತಸ್ವರಗಳಂತೆ ನಿಜಗುಣರು ಕನ್ನಡದಲ್ಲಿ ಸಪ್ತ ಅಂದರೆ ಏಳು ಗ್ರಂಥಗಳನ್ನು ರಚಿಸಿದ್ದಾರೆ.
೧. ಕೈವಲ್ಯ ಪದ್ಧತಿ
೨. ಪರಮಾನುಭವ ಬೋಧೆ
೩. ಅನುಭವಸಾರ
೪. ಪರಮಾರ್ಥ ಗೀತೆ
೫. ಪಾರಮಾರ್ಥ ಪ್ರಕಾಶಿಕೆ
೬. ವಿವೇಕ ಚಿಂತಾಮಣಿ
೭. ಅರವತ್ಮೂರು ಪುರಾತನ ತ್ರಿವಿಧಿ
ಇವೇ ಆ ಗ್ರಂಥಗಳು. ಜನಸಾಮಾನ್ಯರನ್ನೂ ವಿದ್ವಾಂಸರನ್ನೂ ಇವು ಆಕರ್ಷಿಸಿವೆ. ಸಾಮಾನ್ಯ ರೈತ, ಹಳ್ಳಿಯ ಗೃಹಿಣಿ, ಬಿಕ್ಷೆ ಬೇಡುವವರು, ಮುಕ್ತಿಮಾರ್ಗ ಬಯಸುವವರು, ಸ್ವಾಮಿಗಳು, ಸಾಧು-ಸಂತರು ಎಲ್ಲರೂ ನಿಜಗುಣರ ಹಾಡುಗಳನ್ನು ಹಾಡುತ್ತಾರೆ. ಹಾಡಿ ಸಂತೋಷ ಪಡುತ್ತಾರೆ. ಈ ಕನ್ನಡ ಗ್ರಂಥಗಳಲ್ಲದೆ “ದರ್ಶನಸಾರಂ” ಮತ್ತು “ಆತ್ಮತರ್ಕ ಚಿಂತಾಮಣಿ” ಎಂಬ ಎರಡು ಸಂಸ್ಕೃತ ಗ್ರಂಥಗಳನ್ನೂ ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ಆ ಗ್ರಂಥಗಳ ಪ್ರತಿಗಳು ಇರುವರೆಗೂ ಸಿಕ್ಕಿಲ್ಲ.

೧. ಕೈವಲ್ಯ ಪದ್ಧತಿ:-
      ಹುಟ್ಟಿನಿಂದಲೇ ನಿಜಗುಣರು ಕವಿಹೃದಯವುಳ್ಳವರಾಗಿದ್ದರು. ಯೋಗಸಾಧನೆ ಮಾಡುತ್ತಿದ್ದಾಗಲೇ ಅವರು ತಮ್ಮ ಅನುಭವಗಳನ್ನು ಕವಿತೆಗಳ ರೂಪದಲ್ಲಿ ಹಾಡಿಕೊಳ್ಳುತ್ತಿದ್ದರು. ಅವರಿಗೆ ಸಂಗೀತದಲ್ಲಿಯೂ ಹೆಚ್ಚಿನ ಪಾಂಡಿತ್ಯವಿತ್ತು. ಆಧ್ಯಾತ್ಮದಂತಹ ಕಠಿಣವಿಷಯದ ಬಗ್ಗೆ ಸರಳವಾದ, ಸುಂದರವಾದ, ಕನ್ನಡದಲ್ಲಿ ಕವನಗಳನ್ನು ರಚಿಸಿದರು. ಅವುಗಳಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತಕ್ಕೆ ಹೊಂದುವಂತೆ ರಾಗ, ತಾಳಗಳನ್ನು ಹಾಕಿದರು. ಎಲ್ಲರಿಗೂ ತಿಳಿಯುವಂತೆ ಸರಳ ಕನ್ನಡದಲ್ಲಿ ರಾಗಬದ್ಧವಾಗಿ ಬರೆದಿದ್ದರಿಂದ ಅವರ ಕವಿತೆಗಳು ಬಹು ಜನಪ್ರಿಯವಾದವು.
“ಕೈವಲ್ಯ” ಎಂದರೆ ಮುಕ್ತಿ, “ಪದ್ಧತಿ” ಎಂದರೆ ಮಾರ್ಗ ಎಂದು ಅರ್ಥವಾಗುತ್ತದೆ. ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿದ್ದಾರೆ. ಪರಮೇಶ್ವರನ, ಗುರುವಿನ ಸ್ತುತಿಯಿಂದ ಈ ಗ್ರಂಥ ಪ್ರಾರಂಭವಾಗುತ್ತದೆ. ತಾಯಿ ಮಗುವನ್ನು ಮರಿ, ಪಾಪು, ಬಾಳಾ, ತಮ್ಮಾ ಎಂದು ಮೊದಲಾಗಿ ಬೇರೆ ಬೇರೆ ಹೆಸರಿನಿಂದ ಕರೆದು ಸಂತೋಷಪಡುತ್ತಾಳೆ. ಅದರಂತೆ ಇಲ್ಲಿ ನಿಜಗುಣರು ಶಿವಾ, ಮಹಾದೇವ, ಶಂಕರ, ಪಾರ್ವತೀಧವ, ನೀಲಕಂಠ, ನಾಗಭೂಷಣ, ಚಂದ್ರಮೌಳಿ, ಫಾಲಾಕ್ಷ, ಪಶುಪತಿ ಮುಂತಾದ ನೂರಎಂಟು ನಾಮಾವಳಿಗಳಿಂದ ಪರಮೇಶ್ವರನನ್ನು ಸ್ತುತಿಸಿದ್ದಾರೆ. “ಉದಯ ಅಸ್ತಮಾನದೊಳು ನೂರೆಂಟು ನಾಮವನ್ನು ಪದುಳದಿಂದ ಓದಿ ಕೇಳಿದವರ್ಗೆ ಶಂಭುಲಿಂಗದ ಕರುಣದಿಂದ ಇತಿತು ಕೊರತೆಯಿಲ್ಲದೆ ಸಕಲ ಸಂಪದಗಳು ಒಂದುಗೂಡಿ ಸದಮಲ ಜ್ಞಾನ ಸದ್ಭಕ್ತಿಗಳು ಮೇಲೊದಗಿ ಕೈಸಾರುತಿಹವು ಇಹದಲ್ಲಿ ಪರದೊಳೊಂದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆತುದಿದು ಸತ್ಯ.” ಎಂದು ಈ ಸ್ತೂತ್ರ ಮುಕ್ತಾಯವಾಗುತ್ತದೆ. ಅಂದರೆ ಈ ರೀತಿಯಾಗಿ ದಿನವೂ ಬೆಳಗ್ಗೆ, ಸಂಜೆ ಈಶ್ವರನನ್ನು ಸ್ಮರಿಸಬೇಕು. ಅವರಿಗೆ ಸಕಲ ಸಂಪತ್ತುಗಳು ಸಿಕ್ಕುತ್ತವೆ. ಜ್ಞಾನ, ಭಕ್ತಿಗಳು ದೊರೆತು ಮುಕ್ತಿಯು ದೊರೆಯುತ್ತದೆ ಎಂದು ಹೇಳಿದ್ದಾರೆ. ಅದರಂತೆ ಹ್ರೀಂಕಾರಿ, ವಾಣಿ, ಕಲ್ಯಾಣಿ, ರುದ್ರಾಣಿ, ರಮೆ, ವಿಮಲೆ, ಗಿರಿಜೆ, ಸುಮತಿ, ಸುಲಲಿತೆ, ಮಹೇಶ್ವರಿ, ಮಧುಮಾತೆ ಎನ್ನುವ ಸುಂದರ ಹೆಸರುಗಳಿಂದ ಪಾರ್ವತಿಯನ್ನು ಹಾಡಿ ಹೊಗಳಿದ್ದಾರೆ.
ಈ ಕೃತಿಯಲ್ಲಿರುವ ಪ್ರಮುಖ ವಚನಗಳು

ಎಲ್ಲ ಧರ್ಮಗಳ ಸಾರ
ಯಾವ ಕಾಲಕ್ಕೂ ಎಲ್ಲರಿಗಿಂತಲೂ ಗುರುವು ದೊಡ್ಡವನು. ಅವನ ಉಪದೇಶವನ್ನು ಆಲಿಸಬೇಕು. ಅದರಂತೆ ಆಚರಿಸಿದರೆ ಮಾನವನಿಗೆ ಮುಕ್ತಿ ದೊರೆಯುತ್ತದೆ.

ಶ್ರೀಗುರು ವಚನೋಪದೇಶವನಾಲಿಸಿ
ದಾಗಳಹುದು ನರರಿಗೆ ಮುಕುತಿ
ದುರಿತ ಕರ್ಮವನೊಲ್ಲದಿರು, ಪುಣ್ಯವನೆ ಮಾಡು
ಹರನಡಿವಿಡಿ, ಶಾಂತರೊಡನಾಡು
ಕರುಣವಿರಲಿ ಜೀವರೊಳು ನೀತಿ ವಿದನಾಗು
ಪೊರೆ ಪೊರ್ದಿದರನೆಂದು ಬೆಸಸುವ
ನಿಂದಿಸಿ ನುಡಿಯದಿರಾರನು, ಮನಸಿಗೆ
ಬಂದಂತೆ ನಡೆಯದಿರಿಹದಲ್ಲಿ
ಕುಂದುವಡೆಯದಿರು ಕಾಮಾದಿಗಳನು ಜಯಿ
ಸೆಂದು ಕೈವಿಡಿದನುಗ್ರಹಿಸುವ
ಭವಮಾಲೆಗಲಸು, ಪುಸಿಯದಿರೆಡರು ಬಂದು
ಕವಿಯಲಂಜದಿರು, ಸಂಪದದೊಳು
ತವೆಮದವಳಿದಿರು ತತ್ವಸಂತತಿಯನು
ವಿವರಿಸಿ ನೊಡೆಂದು ತಿಳುಪುವ
ಳಸದಿರದ್ವೈತವನು ಬಾಹ್ಯದಲಿ,
ನಿನ್ನೊಳಗೇಕೋ ಭಾವನೆಯೊಡಗೂಡು
ತಿಳಿದು ಸಮಯ ನಿಷ್ಠೆಗಳಿ ವೇದವಿಧ ಭಕ್ತಿ
ಗಳನಗಲದಿರೆಂದುಸುರುವ
ಆರುನಾನೆಂದು ವಿಚಾರಿಸುವ, ವಿಷಯ
ಸಂಸಾರವಿದನು ಕನಸೆಂದರಿ
ಮಾರಮರ್ದನ ಶಂಭುಲಿಂಗವನೊಲಿಸಿ
ಗಂಭೀರ ಸುಖದೊಳಿರೆಂದರುಪುವ

ಕೆಟ್ಟ ಕೆಲಸವನ್ನು ಮಾಡಬೇಡ. ಪುಣ್ಯವನ್ನೇ ಮಾಡು.
ಒಳ್ಳೆಯವರೊಡನೆ ಇರು. ನೀತಿ ಮಾರ್ಗದಲ್ಲಿ ನಡೆ. ಈಶ್ವರನಿಗೆ ಶರಣುಹೋಗು. ಉಳಿದ ಜೀವಿಗಳಲ್ಲಿ ದಯೆ ತೋರು. ಕಷ್ಟಗಳು ಬಂದಾಗ ಅಂಜಬೇಡ. ಶ್ರೀಮಂತಿಕೆ ಬಂದಾಗ ಸೊಕ್ಕು ತೋರಿಸಬೇಡ. ಒಳಗೊಂದುಸ ಹೊರಗೊಂದು ಮಾತನಾಡಬೇಕು. ಒಂದೇ ರೀತಿಯಾಗಿರು. ಸಮಯನಿಷ್ಠೆ ಅಂದರೆಮತ, ಧರ್ಮಗಳಲ್ಲಿ ನಿಷ್ಥೆಯಿಂದ ಇರುವುದನ್ನು ಕಲಿ. ಇಲ್ಲಿ ಹುಟ್ಟಿ ಬಂದ “ನಾನು” ಯಾರು? ನನ್ನ ಕರ್ತವ್ಯವೇನು? ಎನ್ನುವ ಬಗ್ಗೆ ವಿಚಾರ ಮಾಡು. ಈ ರೀತಿಯಾಗಿ ನಡೆದುಕೊಂಡು ಶಂಭುಲಿಂಗನನ್ನು ಒಲಿಸಿಕೊಂಡು, ಸುಖವಾಗಿರು ಎನ್ನುತ್ತಾರೆ ನಿಜಗುಣ ಶಿವಯೋಗಿಗಳು. ಅದು ಅಂಥಿಂಥ ಸುಖವಲ್ಲ. ಗಂಭೀರ ಸುಖ. ಈ ಒಂದು ಪದ್ಯದಲ್ಲಿರುವಂತೆ ನಡೆದರೆ ಸಾಕು, ಮನುಷ್ಯನ ಜೀವನವೇ ಸಾರ್ಥಕವಾಗುತ್ತದೆ. ಎಲ್ಲ ಧರ್ಮಗಳ ಸಾರವೂ ಇದರಲ್ಲಿದೆ.

ನೋಡಲಾಗದೆ
ಶಿವನು ತಮ್ಮನ್ನು ಕರುಣೆ ತೋರಿ ನೋಡಬೇಕು.ತಮ್ಮ ಮನಸ್ಸಿನಲ್ಲಿದ್ದ ಕತ್ತಲೆಯನ್ನು ಕಳೆಯಬೇಕು ಎಂದು ನಿಜಗುಣರು ಅಂಗಲಾಚಿ ಬೇಡಿಕೊಂಡಿದ್ದಾರೆ.

ನೋಡಲಾಗದೆ ದೇವ ನೋಡಲಾಗದೆ 
ಕೂಡೆ ನಿನ್ನ ದಿಟೆ ಮೂರು 
ನಾಡೆ ಲೇಸು ಮಾಡಲೆನ್ನ........

ಶಿವನು ತನ್ನ ಮೂರು ಕಣ್ಣುಗಳನ್ನು ತೆರೆದು ತಮ್ಮನ್ನು ನೋಡಬೇಕು. ಮೂರು ಕಣ್ಣುಗಳಲ್ಲಿ ಒಂದನ್ನು ಅಗ್ನಿಗೆ, ಇನ್ನೊಂದನ್ನು ಸೂರ್ಯನಿಗೆ ಮತ್ತೊಂದನ್ನು ಚಂದ್ರನಿಗೆ ಹೋಲಿಸಿದ್ದಾರೆ. ಅಗ್ನಿಯಿಂದ ಮನದಲ್ಲಿದ್ದ ಮೋಹವೆಂಬ ಕಾಡನ್ನು ಸುಡಬೇಕು. ಹೃದಯ ಕಮಲವನ್ನು ಅರಳಿಸಲು ಸೂರ್ಯನು ಕಣ್ಣುಬಿಚ್ಚಿ ನೋಡಬೇಕು. ಹೃದಯ ಸಮುದ್ರ ಉಕ್ಕೇರಿ ಬರಲು ಚಂದ್ರನ ಕಣ್ಣಿನಿಂದ ತಂಪಾದ ಕಿರಣಗಳನ್ನು ಸುರಿಸಬೇಕು ಎಂದು ಬೇಡಿಕೊಳ್ಳುವ ಈ ಹಾಡು ಬಹಳ ಸುಂದರವಾಗಿದೆ.

ಕೋಗಿಲೆ ಚೆಲ್ವೆ ಕೋಗಿಲೆ
ಇದರಂತೆಯೇ ಮನಸ್ಸನ್ನು ಕೋಗಿಲೆಗೆ ಹೋಲಿಸಿ ಅದಕ್ಕೆ ಬುದ್ಧಿ ಮಾತು ಹೇಳಿದ್ದಾರೆ. ಇನ್ನೊಂದು ಕವಿತೆಯಲ್ಲಿ ಅದೂ ಕೂಡ ಕೋಗಿಲೆಯ ಧ್ವನಿಯಂತೆಯೇ ಮಧುರವಾಗಿದೆ.

ಕೋಗಿಲೆ ಚೆಲ್ವ ಕೋಗಿಲೆ 
ಮುದ್ದು ಕೋಗಿಲೆ ಜಾಣ ಕೋಗಿಲೆ
ಹಿಂದೆ ತಪದೋಳೀಶನೊಂದಿರುತಿರಲೆಚ್ಚು
ಬೆಂದಕಾಮನ ಬಿಟ್ಟು ಕೋಗಿಲೆ
ಬಂದು ಬೇಗದಿ ಬಾಲೇಂದುಧರದ ಕೊಡಿ
ಕುಂದದೇ ನೀ ಬಾಳು ಕೋಗಿಲೆ
ದುರುಳ ಕಂತುವಿನೊಡನಿರೆ ಲೋಕದೊಳು ನಿನ್ನ
ಪರಪುಟ್ಟನೆಂಬರು ಕೋಗಿಲೆ
ಧರೆಗೆ ಜನಕನಾದ ಗುರುಶಂಭುಲಿಂಗದ
ಚರಣ ಪಲ್ಲವ ಪಿಡಿ ಕೋಗಿಲೆ


“ಶಿವನ ತಪಸ್ಸನ್ನು ಕೆಡಿಸಲು ಹೋಗಿ ಅವನಿಂದ ಸುಟ್ಟು ಬೂದಿಯಾದ, ಋಷಿ-ಮಿನಿಗಳ ನೀತಿಗೆಡಿಸುವ, ವಿರಹಿಗಳ ಮನಸ್ಸನ್ನು ಕೊರೆಯುವ, ಕಾಮನನ್ನು ಬಿಟ್ಟು ಎಲ್ಲ ಜೀವಿಗಳನ್ನೂ ಪ್ರೀತಿಯಿಂದ ನೋಡುವ ಶಿವನನ್ನು ಕೊಡಿ ಕುಂದದಂತೆ ಬಾಳು. ಕಾಮನನ್ನು ಬಣ್ಣಿಸಿದರೆ ನಿನಗೇ ಕೇಡಲ್ಲವೇ? ಆದ್ದರಿಂದ ಪಾರ್ವತೀಪತಿಯನ್ನು ಕುರಿತು ಹಾಡು. ದುಷ್ಟನಾದ ಕಾಮನೊಡನಿದ್ದರೆ ಲೋಕದ ಜನರು ನಿನ್ನನ್ನು ಪರಪುಟ್ಟ (ಬೇರೆಯವರಿಂದ ಜೀವಿಸುವನು) ಎಂದು ಹೀಯಾಳಿಸುತ್ತಾರೆ. ಆದ್ದರಿಂದ ಅವನ ಸಂಗವನ್ನು ತೊರೆದು, ಮುದ್ದು ಕೋಗಿಲೆಯ, ಲೋಕದ ಒಡೆಯನಾದ ಗುರುಶಂಭುಲಿಂಗದ ಪಾದಗಳನ್ನು ಹಿಡಿದುಕೋ” ಎಂದು ಮನಸ್ಸಿಗೆ ಶಿವಕಾರುಣ್ಯವನ್ನು ಪಡೆಯಲು ಬೋಧಿಸಿದ್ದಾರೆ.

ದೇವರನ್ನು ತಾವು ಏನನ್ನು ಬೇಡುತ್ತೇವೆ ಎನ್ನುವುದನ್ನು ನಿಜಗುಣರು ಇನ್ನೊಂದು ಪದ್ಯದಲ್ಲಿ ಬಹಳ ಸರಳವಾಗಿ ಹೇಳಿದ್ದಾರೆ. ಸಾಮಾನ್ಯ ಮಾನವರು ಮನೆಯ್ನನೂ ಆಸ್ತಿಯನ್ನೂ, ಸಕಲಸಂಪತ್ತನ್ನೂ, ದೀರ್ಘಾಯುಷ್ಯವನ್ನೂ ಬೇಡುತ್ತಾರೆ. ಆದರೆ ಈ ಶಿವಯೋಗಿಗಳು ಏನನ್ನು ಬೇಡುತ್ತಾರೆ ನೋಡಿ:

ಬೇಡುವೆನಭವ ನಿಮ್ಮನು ಭವಭವದೊಳು
ಮಾಡೆನಗೊಲಿದು ಸುಗುಣ ಸಂತತಿಯನಿಂತು


ಎಂದು ಪದ್ಯವನ್ನು ಪ್ರಾರಂಭ ಮಾಡುತ್ತಾರೆ. ಕಷ್ಟ ಬಂದಾಗ ಧೈರ್ಯವನ್ನು ಕೊಡು. ಶ್ರೀಮಂತಿಕೆ ಇದ್ದಾಗಲೂ ವಿನಯವನ್ನು ಕೊಡು. ಯೌವನವಿದ್ದಾಗ ಕೆಟ್ಟ ದಾರಿ ಹಿಡಿಯದಂಥ ಗಟ್ಟಿಯಾದ ಮನಸ್ಸನ್ನು ಕೊಡು. ಹಿಡಿದ ಕೆಲಸವನ್ನು ಬಿಡದೆ ಮಾಡುವ ಛಲವನ್ನು ಕೊಡು. ಪ್ರಾಣಹೋದರು ಇತರರಿಗೆ ಶರಣಾಗದ ಮನವನ್ನು ಕೊಡು. ಪರಸ್ತ್ರೀಯನ್ನು ತಾಯಿಯಂತೆ ಕಾಣುವ ವಿವೇಕವನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ.
 
೨. ಪರಮಾನುಭವ ಬೋಧೆ :-
ಉಪನಿಷತ್ತುಗಳಲ್ಲಿ ಬೃಹದಾರಾಣ್ಯಕೋಪನಿಷತ್ತು ಒಂದು. ಅದರ ಎರಡನೆಯ ಅಧ್ಯಾಯದಲ್ಲಿ ಒಂದು ಕಥೆ ಬರುತ್ತದೆ. ಯಾಜ್ಞವಲ್ಕ್ಯರು ಒಬ್ಬ ಮಹಾಋಷಿಗಳು. ಅವರಿಗೆ ಒಬ್ಬರು ಹೆಂಡತಿಯರು. ದೊಡ್ಡವಳ ಹೆಸರು ಕಾತ್ಯಾಯಿನಿ. ಚಿಕ್ಕವಳ ಹೆಸರು ಮೈತ್ರೇಯಿ. ಯಾಜ್ಞವಲ್ಕ್ಯರಿಗೆ ಸಂಸಾರ ಬಿಟ್ಟು ಸನ್ಯಾಸ ತೆಗೆದುಕೊಳ್ಳಬೇಕೆನ್ನುವ ಬಯಕೆಯಾಗುತ್ತದೆ. ಆಗ ಅವರು ಇಬ್ಬರು ಹೆಂಡತಿಯರನ್ನು ಕರೆದು ತಾವು ಅಲ್ಲಿಯವರೆಗೆ ರಾಜ-ಮಹಾರಾಜರುಗಳಿಂದ ಸ್ವೀಕರಿಸಿದ ಸಂಪತ್ತನ್ನು ಎರಡು ಭಾಗ ಮಾಡಿ ಹಂಚಿ ಕೊಡುತ್ತಾರೆ. “ನೀವಿಬ್ಬರೂ ಸುಖವಾಗಿರಿ. ನಾನು ತಪಸ್ಸಿಗೆ ಹೋಗುತ್ತೇನೆ” ಎನ್ನುತ್ತಾರೆ. ಕಾತ್ಯಾಯಿನಿ ಸುಮ್ಮನೆ ಒಪ್ಪಿಕೊಳ್ಳುತ್ತಾಳೆ. ಆದರೆ ಮೈತ್ರೇಯಿಗೆ ಸಮಾಧಾನವಾಗುವುದಿಲ್ಲ. ಆಗ ಅವಳು ಪತಿ ದೇವರಿಗೆ “ಈ ಲೌಕಿಕ ಸಂಪತ್ತಿನಿಂದ ಶಾಶ್ವತವಾಗಿ ಸುಖ ಸಿಕ್ಕುವುದೇ?” ಎಂದು ಪ್ರಶ್ನೆ ಮಾಡುತ್ತಾಳೆ. ಅವರು ಇಲ್ಲವೆನ್ನುತ್ತಾರೆ. ಅದಕ್ಕೆ ಮೈತ್ರೇಯಿ, “ಹಾಗಾದರೆ ನನಗೆ ಧನದಿಂದ ಸಿಕ್ಕುವ ಅಶಾಶ್ವತ ಸುಖ ಬೇಡ, ಅಚ್ಚಳಿಯದ ಸುಖ ಬೇಕು. ಆ ಹಾದಿಯನ್ನು ತೋರಿಸಿರಿ” ಎನ್ನುತ್ತಾಳೆ. ಆಗ ಯಜ್ಞವಲ್ಕ್ಯರು ಅವಳ ಈ ಇಚ್ಛೆಗೆ ಮೆಚ್ಚಿ ಅದ್ವೈತ ವೆಂದರೇನು? ಪರಬ್ರಹ್ಮ ವಸ್ತುವೆಂದರೇನು? ಎನ್ನುವುದನ್ನು ಅವಳಿಗೆ ಬೋಧಿಸುತ್ತಾರೆ. ಅದನ್ನು ಕೇಳಿ ಮೈತ್ರೇಯಿ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳುವಳು. ಮೂಲದಲ್ಲಿ ಈ ಗ್ರಂಥವು ಸಂಸ್ಕೃತದಲ್ಲಿ ಇರುವುದರಿಂದ ನಿಜಗುಣರು ಜನಸಾಮಾನ್ಯರಿಗಾಗಿ ಇದನ್ನು ಕನ್ನಡಿಸಿರುವರು. ಅದಕ್ಕೆ “ಪರಮಾನುಭವ ಬೋಧೆ” ಎಂದು ಹೆಸರಿಟ್ಟಿರುವರು. ಪರಮ ಎಂದರೆ ಎಲ್ಲಕ್ಕೂ ಹೆಚ್ಚಿನದು, ದೊಡ್ಡದು. ಅದರ ಅನುಭವದಿಂದಲೇ ನಿಜವಾದ ಸುಖವು ಸಿಕ್ಕುವುದು. ಅದನ್ನು ಬೋಧಿಸುವುದೇ ಈ ಪುಸ್ತಕದ ತಿರುಳು.

೩. ಅನುಭವಸಾರ :-
         ಮುಕ್ತಿ ಕೋಪನಿಷತ್ತಿನ ಸಾರವನ್ನು ತಮ್ಮ “ಅನುಭವಸಾರ” ಎನ್ನುವ ಗ್ರಂಥದಲ್ಲಿ ನಿಜಗುಣರು ನಿರೂಪಿಸಿದ್ದಾರೆ. ವೇದಗಳ ಕೊನೆಯ ಭಾಗ ಉಪನಿಷತ್ತು. ಋಷಿಗಳು ಆಧ್ಯಾತ್ಮ ವಿದ್ಯೆಯನ್ನು ಉಪನಿಷತ್ತುಗಳಲ್ಲಿಯೇ ಬೋಧಿಸಿದ್ದಾರೆ. ಭಾರತೀಯರ ತತ್ವಜ್ಞಾನವು ಉಪನಿಷತ್ತಿನಿಂದಲೇ ಪ್ರಾರಂಭವಾಗುತ್ತದೆ. ಅಂಥ ತತ್ವಜ್ಞಾನದ ಅನುವಾದವನ್ನು, ಸಾರವನ್ನು ಪ್ರಥಮವಾಗಿ ಕನ್ನಡದಲ್ಲಿ ಇಳಿಸಿಕೊಟ್ಟು ನಿಜಗುಣ ಶಿವಯೋಗಿಗಳು ಕನ್ನಡಿಗರಿಗೆ ಬಹಳ ದೊಡ್ಡ ಉಪಕಾರವನ್ನು ಮಾಡಿದ್ದಾರೆ.

೪. ಪರಮಾರ್ಥಗೀತೆ :-
     ಪ್ರಸಿದ್ಧವಾದ “ಯೋಗವಾಸಿಷ್ಠ” ಎನ್ನುವ ಸಂಸ್ಕೃತ ಗ್ರಂಥದಲ್ಲಿ ಹೇಳಿದ ಆಧ್ಯಾತ್ಮದ ವಿಷಯವನ್ನೇ ತಮ್ಮ “ಪರಮಾರ್ಥಗೀತೆ” ಎನ್ನುವ ಪುಸ್ತಕದಲ್ಲಿ ಬರೆದಿದ್ದಾರೆ. ತಾನು ಯಾರು? ತನ್ನ ನಿಜವಾದ ರೂಪ ಯಾವುದು? ಈ ಸೃಷ್ಟಿ ಹೇಗೆ ಪ್ರಾರಂಭವಾಯಿತು? ಅದರ ಬಂಧನದಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವಾಗ? ಮುಂತಾದ ಶಿಷ್ಯನ ಪ್ರಶ್ನೆಗಳಿಗೆ ಗುರುವು ಸರಿಯಾದ ಉತ್ತರವನ್ನು ಕೊಟ್ಟು ಅವನ ಸಂಶವನ್ನು ಪರಿಹಾರ ಮಾಡುತ್ತಾನೆ.

. ಪಾರಮಾರ್ಥ ಪ್ರಕಾಶಿಕೆ :-
      ಚೆನ್ನಸದಾಶಿವಯೋಗಿಗಳು ಸಂಸ್ಕೃತದಲ್ಲಿ “ಶಿವಯೋಗ ಪ್ರದೀಪಿಕಾ” ಎನ್ನುವ ಗ್ರಂಥವನ್ನು ರಚಿಸಿದ್ದರು. ಇವರು ನಿಜಗುಣರ ಗುರುಗಳು ಇದ್ದಿರಬಹುದುದೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ. ಇದನ್ನು ನಿಜಗುಣರು ತಮ್ಮ ಗ್ರಂಥದಲ್ಲಿ ಖಚಿತ ಪಡಿಸಿಲ್ಲ. ಈ “ಶಿವಯೋಗ ಪ್ರದೀಪಿಕಾ” ವು ಯೋಗಶಾಸ್ತ್ರವನ್ನು ತಿಳಿಸುವ ಗ್ರಂಥ. ಇದು ನಿಜಗುಣರಿಗೆ ಬಹಳ ಉಪಯುಕ್ತವಾಗಿ ಕಂಡಿರಬೇಕು. ಆದ್ದರಿಂದ ಇದರ ಲಾಭವನ್ನು ಇತರರು ಪಡೆಯಬೇಕೆಂದು ನಿಜಗುಣರು ಇದನ್ನು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಈ ಗ್ರಂಥಕ್ಕೆ “ಪಾರಮಾರ್ಥ ಪ್ರಕಾಶಿಕೆ” ಎಂದು ಕರೆದಿದ್ದಾರೆ. ಇದು ಭಾಷಾಂತರವಾಗಿದ್ದರೂ ನಿಜಗುಣರ ಪಾಂಡಿತ್ಯ ಮತ್ತು ಅನುಭಾವಗಳಿಂದ ಸ್ವತಂತ್ರ ಗ್ರಂಥದಂತೆಯೇ ಅನ್ನಿಸುತ್ತದೆ.

೬. ವಿವೇಕ ಚಿಂತಾಮಣಿ :-
       ನಿಜಗುಣರ ವಿಚಾರಗಳು ಸುಂದರವಾಗಿರುವಂತೆ ನಿತ್ಯನೂತನವಾಗಿಯೂ ಇವೆ. ಅವರು ಪಂಡಿತರನ್ನು ತಲೆದೂಗಿಸುತ್ತಾರೆ. ಹಾಗೆಯೇ ಪಾಮರರನ್ನು ಅಂದರೆ ಕಲಿಯದವರನ್ನು ಸಮಾಧಾನಪಡಿಸುತ್ತಾರೆ. ನಿಜಗುಣರ ಗದ್ಯ ಗ್ರಂಥವಾದ “ವಿವೇಕ ಚಿಂತಾಮಣಿ” ಎನ್ನುವ ಮಹಾಗ್ರಂಥವು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲನೆಯ ವಿಶ್ವಕೋಶವೆಂದು ಹೇಳುತ್ತಾರೆ. (ವಿಶ್ವಕೋಶ ಎಂದರೆ ಎಲ್ಲ ವಿಷಯಗಳ ಬಗ್ಗೆ ತಿಳುವಳಿಕೆ ಕೊಡುವ ಗ್ರಂಥ. ಯಾವ ವಸ್ತುವನ್ನು ಕುರಿತು ನಾವು ತಿಳಿಯಬೇಕೆಂದು ಬಯಸಿದರೂ ಅದರ ವಿಷಯವನ್ನು ಹೇಳುವ ಗ್ರಂಥ.) ಅದರ‍ಲ್ಲಿ ವಿಶ್ವದಲ್ಲಿರುವ ಎಲ್ಲ ವಿಷಯಗಳ ಬಗ್ಗೆಯೂ ಪರಿಚಯವಿದೆ.  ಸ್ಮೃತಿ, ಪುರಾಣ, ಇತಿಹಾಸ, ಪುರಾತನರ ಹೇಳಿಕೆಗಳಿಂದ ಆರಿಸಿ ತೆಗೆದು, ಕೇವಲ ಕಲ್ಪನೆ ಮಾಡದೆ, ಅನುಭವಿಗಳು ಅಹುದೆನ್ನುವಂತೆ, ಎಲ್ಲದರ ತಿರುಳನ್ನು ಕೂಡಿಸಿ, ಸತ್ಯವಾದುದನ್ನು ಸಂಗ್ರಹಿಸಿ, ಅಲ್ಲಲ್ಲಿ ಚೆದುರಿಹೋದ ಬೆಲೆಯುಳ್ಳ ರತ್ನಗಳನ್ನು ಕೂಡಿಸಿ, ಸುಂದರವಾದ ಸರವನ್ನು ಪೋಣಿಸುವಂತೆ, ಜ್ಞಾನಾಪೇಕ್ಷಿಗಳಿಗೆ ಬೆಳುಗನ್ನಡದಲ್ಲಿ ವಿವೇಕ ಚಿಂತಾಮಣಿ ಎನ್ನುವ ಗ್ರಂಥದಲ್ಲಿ ರಚಿಸಿದ್ದೇನೆ ಎಂದು ಅದರಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚಿನ ಜ್ಞಾನವನ್ನು ಪಡೆಯಬಯಸುವ ಎಲ್ಲರಿಗೂ ಈ ಗ್ರಂಥವು ಕೇಳಿದ್ದನ್ನು ಕೊಡುವ ಚಿಂತಾಮಣಿಯಾಗಿದೆ. ಈ ವಿವೇಕ ಚಿಂತಾಮಣಿಯನ್ನು ಕೊಡಗಿನ ಲಿಂಗರಾಜರು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ. ಆ ಗ್ರಂಥದ ಆಧಾರದ ಮೇಲೆ ಶಾಂತಲಿಂಗ ದೇಶಿಕ ಎನ್ನುವವರು ಮರಾಠಿ ಭಾಷೆಯಲ್ಲಿಯೂ ಬರೆದಿದ್ದಾರೆ. ಅಲ್ಲದೆ ಇತರರು ತಮಿಳು, ತೆಲುಗು, ಭಾಷೆಗಳಲ್ಲಿಯೂ ಈ ಗ್ರಂಥವನ್ನು ಅನುವಾದಿಸಿದ್ದಾರೆ. ಇದರಿಂದ “ವಿವೇಕ ಚಿಂತಾಮಣಿ”ಯು ಆ ಕಾಲದಲ್ಲಿಯೇ ಎಷ್ಟೊಂದು ಜನಪ್ರಿಯವಾಗಿತ್ತು ಎನ್ನುವುದು ತಿಳಿದು ಬರುತ್ತದೆ; ಅಲ್ಲದೆ ದಕ್ಷಿಣ ಭಾರತದಲ್ಲೆಲ್ಲಾ ತುಂಬ ಪ್ರಸಿದ್ಧವಾಗಿದ್ದುದು ಕಂಡುಬರುತ್ತದೆ.

೭. ಅರವನ್ಮೂರು ಪುರಾತನರ ತ್ರಿವಿಧ :-
ಒಂಬತ್ತನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಅರುವತ್ಮೂರು ಜನ ಪುರಾತನರು ಬಾಳಿ ಬೆಳಗಿದರು. ಇವರು ಭಿನ್ನ ಭಿನ್ನ ಜಾತಿಯವರಾಗಿದ್ದು ಕುಲದ ಕಟ್ಟು ನಿಟ್ಟು ಇಲ್ಲದವರಾಗಿದ್ದರು ತಮ್ಮ ಅಗಾಧ ಭಕ್ತಿಯಿಂದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು.ಸ ದಕ್ಷಿಣ ಭಾರತದಲ್ಲಿ ಈ ಮಹಾಪುರುಷರು ತುಂಬ ಪ್ರಸಿದ್ಧರಾಗಿದ್ದಾರೆ. ಕವಿಗಳು ಸಂಸ್ಕೃತ, ತಮಿಳು, ಕನ್ನಡ ಭಾಷೆಗಳಲ್ಲಿ ಈ ಪುರಾತನರ ಚರಿತ್ರೆಗಳನ್ನು ಬರೆದಿದ್ದಾರೆ. ಈ ಅರವತ್ಮೂರು ಪುರಾತನರಲ್ಲಿ ಪ್ರತಿಯೊಬ್ಬರ ಮೇಲೆ ಮೂರು ಸಾಲಿನ ಒಂದೊಂದು ಪದ್ಯವನ್ನು ನಿಜಗುಣರು ತಮ್ಮ “ಆರವನ್ಮೂರು ಪುರಾತನರ ತ್ರಿವಿಧಿ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆ ಮೂರು ಸಾಲಿನ ಪದ್ಯ ಅಂದರೆ ತ್ರಿಪದಿಯಲ್ಲಿ ಒಟ್ಟು ಅವರ ಸಮಗ್ರ ಪರಿಚಯವನ್ನೇ ಮಾಡಿಕೊಟ್ಟಿದ್ದಾರೆ. ಅವರಲ್ಲಿ ಬೇಡರ ಕಣ್ಣಪ್ಪನನ್ನು ಕುರಿತು ಬರೆದ ಈ ಪದ್ಯವನ್ನು ಕೇಳಿ:

ಮೃಡನ ದೃಷ್ಟಿಯಲ್ಲಿ ರುಜೆಯಡರಿತೆಂದತಿ ಭೀತಿ
ವಿಡಿದು ನಿಜಲೋಚನವಿತ್ತ ಕನ್ನಪ್ಪ
ನಡಿಗಳಂ ಪೊತ್ತು ಬಿಡದಿರ್ಪೆ


  ಇಲ್ಲಿ ಮೃಡ ಎಂದರೆ ಶಿವ, ರುಜೆ ಎಂದರೆ ರೋಗ, ನಿಜಲೋಚನ ಎಂದರೆ ತನ್ನ ಕಣ್ಣುಗಳು ಎನ್ನುವುದು ಅರ್ಥವಾದರೆ ಸಾಕು. ಅಂತ ಕನ್ನಪ್ಪನ (ಕಣ್ಣಪ್ಪ) ಅಡಿಗಳನ್ನು ಹಿಡಿದು ನಿಜಗುಣರು ಕೊಂಡಾಡಿದ್ದಾರೆ.
ಒಬ್ಬ ಬೇಡ ಅಡವಿಯಲ್ಲಿ ಬೇಟೆಯಾಡಿ, ಮಾಂಸ ತಿಂದು ಜೀವಿಸುತ್ತಿದ್ದ. ಒಂದು ದಿನ ಅವನಿಗೆ ಯಾವ ಬೇಟೆಯೂ ಸಿಕ್ಕಲಿಲ್ಲ. ಹುಡುಕುತ್ತಾ ಅಡವಿಯಲ್ಲಿ ಬಹಳ ದೂರ ಹೋದಾಗ ಶಿವದೇವಾಲಯವನ್ನು ಕಂಡ. ಪೂಜಾರಿ ದೇವರ ಪೂಜೆ ಮುಗಿಸಿ ಒಂದು ಚೂರು ನೈವೇದ್ಯವನ್ನೂ ಹಸಿದ ಬೇಡನಿಗೆ ಕೊಡದೇ ಕೀಳು ಜಾತಿಯವನೆಂದು ಅವನನ್ನು ಒಳಗೆ ಕರೆದುಕೊಳ್ಳದೆ, ಗುಡಿಯ ಬಾಗಿಲು ಹಾಕಿ ಮನೆಗೆ ಹೊರಟು ಹೋದ. ಹಸಿವಿನಿಂದ ಕಂಗೆಟ್ಟ ಬೇಡ ರಾತ್ರಿ ಗುಡಿಯ ಒಳಗೆ ನುಗ್ಗಿ ತನಗೆ ತಿಳಿದಂತೆ ಶಿವಲಿಂಗದ ಪೂಜೆ ಮಾಡಿದ. ಅವನಲ್ಲಿ ಭಕ್ತಿಯಿಂದ ಉತ್ಸಾಹ ಉಕ್ಕಿ ಮತ್ತೆ ಬೇಟೆಗೆ ಹೊರಟ. ಶಿವನಿಗೆ ನೈವೇದ್ಯ ಮಾಡಲು ಮೊಲವನ್ನು ಬೇಟೆಯಾಡಿ ತಂದ. ಅವನ ಮುಗ್ಧ ಭಕ್ತಿಗೆ ಮೆಚ್ಚಿ ಶಿವ ಅದನ್ನು ಸ್ವೀಕರಿಸಿದ. ಮುಂದೆ ಇದೇ ರೀತಿ ಶಿವಲಿಂಗ ಪೂಜೆ ಮಾಡುವುದು ಅವನ ದಿನಚರಿಯಾಯಿತು. ಶಿವನಲ್ಲಿ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಅವನ ಮುಗ್ಧ ಭಕ್ತಿಗೆ ಮೆಚ್ಚಿದ ಶಿವ ಸಂತೋಷ ಪಟ್ಟ. ಆದರೆ ಅವನನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಗುರಿ ಮಾಡಲು ನಿರ್ಧರಿಸಿದ. ಒಂದು ದಿನ ನಿತ್ಯದಂತೆ ಅವನು ಗುಡಿಗೆ ಬಂದಾಗ ಶಿವಲಿಂಗ ಎಂದಿನಂತೆ ಇರಲಿಲ್ಲ. ಲಿಂಗದ ಮೇಲೆ ಅದರ ಕಣ್ಣಿರುವ ಜಾಗದಿಂದ ಕೀವು ರಕ್ತ ಸೋರುತ್ತಿತ್ತು. ಅದನ್ನು ನೋಡಿದ ಬೇಡ ಗಾಬರಿಯಾದ. ಓಡಿ ಹೋಗಿ ಪ್ರೀತಿಯಿಂದ ರಕ್ತ, ಕೀವು ಒರೆಸಿದ. ನೀರಿನಿಂದ ತೊಳೆದ. ಮತ್ತೂ ಸೋರಹತ್ತಿತ್ತು. ಅದನ್ನು ನೋಡಿ ಬೇಡನಿಗೆ ಬಹಳ ದುಃಖವಾಯಿತು. “ಅಪ್ಪಾ ನನ್ನಪ್ಪಾ ಶಿವನೇ ನಿನ್ನ ಕಣ್ಣಿಗೆ ಏನಾಯ್ತಪ್ಪಾ” ಎಂದು ಗೋಳಾಡಿದ. ಅತ್ತ, ಕರೆದ. ಇಷ್ಟು ರಕ್ತ ಸುರಿದರೆ ಇನ್ನು ತನ್ನಪ್ಪನಿಗೆ ಕಣ್ಣು ಹೇಗೆ ಕಾಣಿಸಬೇಕು? ಎನ್ನುವ ಚಿಂತೆಯಾಯಿತು ಬೇಡನಿಗೆ. ಕೂಡಲೆ ಅವನಿಗೊಂದು ವಿಚಾರ ಹೊಳೆಯಿತು. ಬಾಣದ ತುದಿಯಿಂದ ತನ್ನ ಕಣ್ಣನ್ನು ಕಿತ್ತು ಶಿವಲಿಂಗದ ಮೇಲಿಟ್ಟ. ತನ್ನೆರಡೂ ಕಣ್ಣುಗಳು ಹೋದರೂ ಸ್ವಲ್ಪವೂ ಬಾಧೆ ತೋರಿಸದೆ, ದುಃಖಪಡದೆ ತನ್ನಪ್ಪನಿಗೆ ಕಣ್ಣು ಕಾಣಿಸಿದರೆ ಸಾಕು ಎಂದು ಸಂತೋಷಪಟ್ಟ. ಅವನ ಭಕ್ತಿಯನ್ನು ನೋಡಿದ ಶಿವನಿಗೆ ಮಮತೆ ಉಕ್ಕಿ ಬಂದಿತು. ತನ್ನ ನಿಜರೂಪ ತೋರಿಸಿದ. ಕಣ್ಣುಗಳನ್ನು ತಿರುಗಿ ಕೊಟ್ಟ. ಅವನೇ ಬೇಡರ ಕಣ್ಣಪ್ಪನೆಂದು ಹೆಸರಾದ.

ನಿಜಗುಣರ ಕೃತಿಗಳಲ್ಲಿನ  ನುಡಿಮುತ್ತುಗಳು:-
       ನಿಜಗುಣ ಶಿವಯೋಗಿಗಳು ರಾಜರು, ಕವಿಗಳು, ಸಂಗೀತ ವಿಶಾರದರು, ಜ್ಞಾನಿಗಳು, ಅನುಭಾವಿಗಳು, ಸಿದ್ಧಪುರುಷರು, ಗ್ರಂಥಕಾರರು ಎಲ್ಲವೂ ಆಗಿದ್ದರು. ಈ ರೀತಿಯಾಗಿ ಎಲ್ಲ ತೇಜೋಗುಣಗಳು ಒಬ್ಬ ವ್ಯಕ್ತಿಯಲ್ಲಿಯೇ ಸಿಕ್ಕುವುದು ತುಂಬಾ ಅಪರೂಪ. ಅವರು ಅಂಥ ಮಹಾವ್ಯಕ್ತಿಗಳಾಗಿದ್ದುದರಿಂದಲೇ ನೂರಾರು ವರ್ಷಗಳು ಕಳೆದರೂ ಜನರ ನೆನಹಿನಲ್ಲಿ ಭದ್ರವಾಗಿ ನೆಲೆಸಿದ್ದಾರೆ. ಸಣ್ಣದೊಂದು ರಾಜ್ಯವನ್ನು ತ್ಯಾಗ ಮಾಡಿ ಹೋದರೂ ನಾಡಿದ ಜನತೆಯ ಹೃದಯ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ. ಅವರ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚುವ ಕೆಲವು ನುಡಿಮುತ್ತುಗಳಿವು:
ನರಜನ್ಮದಿಂದಹದೊಳು ಮಿಗಲುಂಟೇ?
ರಾಗದಿಂ ಬೇರಿನ್ನು ಭವಬೀಜಮುಂಟೇ?
ವಿಮಲ ಮಾನಸದಿಂದೆ ಶುಭತೀರ್ಥಮುಂಟೇ?
ಕರುಣದಿಂದತಿಶಯವಹ ಧರ್ಮಮುಂಟೇ?
ಕರಣ ವಿಜದಿಂದೆ ಕಲಿತನಮುಂಟೇ?
ಕಡುಲೋಬದಿಂದೆ ದುಗುಣಮನ್ಯಮುಂಟೇ?
ಅಪವಾದದಿಂ ಮರಣವಿನ್ನುಂಟೇ?
ಚಿಂತಿಸದಿರು ಸುಖದುಃಖದೆಡೆಯೊಳು.
ಜಾಣನು ಲೌಕಿಕ ಪಾರಮಾರ್ಥವೆರಡನು ಮಾಣದೆ
ಕೂಡಿ ನಡೆಸುತಿಹನು.
ಎಲ್ಲರೊಡನೆ ವೈರವಿಲ್ಲದೆ ಕೂರ್ಪುದೆ ಚಂದಮಮ.
ತಲ್ಲಣಿಸದೆ ನಿಜದಲ್ಲಿ ತಾನಿರ್ಪುದೆ ಚಂದಮಮ.
ಧರೆಯೊಳತ್ಯಧಿಕವೆನಿಪ ಶಾಂತಿಮತವನು
ಬೇಡುವೆನಭವಾ.
ದುರಿತದೊಳಧಿಕವಾವುದು? ನಿಂದೆ.
ಜೀವನವೆರಸಿದ ಮರಣವಾವುದು? ಚಿಂತೆ.
ಕೆಡುವ ಶರೀರದ ಸಫಲವಾವುದು? ಪರಹಿತ.
ಸೆವ ಜಾಗರಣವಾವುದು? ಸದ್ವಿವೇಕ.
ಸುಧಾರಸ ಧಾರೆಯಾವುದು? ಮಿಗೆ ಮೃದುವಚನ.
ಸದುಗತಿ ಯಾವುದು? ಶಂಭುಲಿಂಗ.


ನಿಜಗುಣರ ಸ್ವತಂತ್ರ ಗ್ರಂಥವಾದ “ಕೈವಲ್ಯ ಪದ್ಧತಿ”ಯ ವೈಶಿಷ್ಟ್ಯವೇನೆಂದರೆ ಅದು ಯಾವ ಮತ, ಸಿದ್ಧಾಂತ ಇಲ್ಲವೆ ಧರ್ಮವನ್ನು ದೂಷಿಸಲು ಬರೆದದ್ದಲ್ಲ. ಶಿವಾದ್ವೈತ ಪಂಥಕ್ಕೆ ಸೇರಿದ ನಿಜಗುಣರು ವೀರಶೈವ ತತ್ವಗಳನ್ನು ಅದರಲ್ಲಿ ಪ್ರತಿಪಾದಿಸಿದ್ದಾಎ. ಅವರ ಕವಿತ್ವ ಅವರೇ ಹೇಳಿರುವಂತೆ.
“ಯೋಗಿ ನಿಜಾನಂದದೊಳು ನುಡಿಸುವ ವೀಣೆ ರಾಗ ರಸದ ತರಂಗಿಣಿ” ಯಾಗಿತ್ತು. ಆ ಗ್ರಂಥದ ಕೊನೆಯಲ್ಲಿಅವರು ಬರೆದ ಈ ಸುಂದರವಾದ ಮಂಗಳ ಪದ್ಯವನ್ನು ಕೇಳಿ:
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ.
ಮಾತು ಮನಂಗಳಿಂದತ್ತತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ.
ನಮ್ಮ ನಾಡನ ಜನರ ಮನಮನದಲ್ಲಿ ನಿಜಗುಣ ಶಿವಯೋಗಿಗಳ ನಿರ್ಮಲ ಪರಂಜ್ಯೋತಿ ಸದಾಕಾಲವೂ ಬೆಳಗುತ್ತಲೇ ಇದೆ.


**********ಹೆಚ್ಚಿನ ಮಾಹಿತಿ ಕೃಪೆ- ಕಣಜ**********
 

13 ಮಾರ್ಚ್ 2016

೨೦.ಶ್ರೀಪಾದರಾಜ (ಶ್ರೀಪಾದರಾಯ)

ಶ್ರೀಪಾದರಾಜರು 
ಇವರ ಕಾಲ: ೧೩೮೯ - ೧೪೮೭
ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು.
ಇವರ ಕೀರ್ತನೆಗಳ ಅಂಕಿತ: ರಂಗವಿಠಲ

ಜೀವನ

ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
  • ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
  • ಭೂಷಣಕೆ ಭೂಷಣ
  • ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.

ಶ್ರೀಪಾದರಾಯರ ಬಗ್ಗೆ ಮತಷ್ಟು : ‘ಕಣಜ’ದಿಂದ 
ಭೌಂ…. ಭೌಂ…. ಭೌಂ…. ಭೌಂ….’
ಶಬ್ದ ಕೇಳಿ ಬಂತು. ಇದೇನು, ಈ ತರಹದ ಶಬ್ದ ಕೇಳಿ ಬರುತ್ತಿದೆ? ದನ ಕಾಯುತ್ತಿದ್ದ ಹುಡುಗರೆಲ್ಲರೂ ಅತ್ತಕಡೆಗೆ ತಿರುಗಿ ನೋಡಿದರು. ಮೇನೆಯೊಂದು ಬರುತ್ತಿತ್ತು. ಮೇನೆ ಹೊತ್ತಿದ್ದವರು ಭೌಂ…. ಭೌಂ….  ಶಬ್ದ ಮಾಡುತ್ತಿದ್ದರು. ಹಾಗೆ ಬರುತ್ತಿದ್ದ ಮೇನೆ ಇವರ ಕಡೆಗೇ ಬಂದಿತು. ಮತ್ತು ಇವರ ಮುಂದೆಯೇ ನಿಂತಿತು. ಒಳಗೆ ಕುಳಿತಿದ್ದವರು ಒಬ್ಬರು ಯತಿಗಳು. ಅವರ ದೇಹವಾದರೋ ಬಂಗಾರದಂತೆ ಮಿನುಗು ತ್ತಿತ್ತು. ಮುಖವಾದರೋ ಸೌಮ್ಯವಾಗಿ, ತೇಜಪುಂಜವಾಗಿ ಬೆಳಗುತ್ತಿತ್ತು. ಹುಡುಗರು ನೋಡುತ್ತಿದ್ದಂತೆ ಆ ಯತಿ ಗಳು ಮಾತನಾಡಿದರು :
“ಮಕ್ಕಳೇ, ಊರು ಇಲ್ಲಿಂದ ಇನ್ನೆಷ್ಟು ದೂರವಿದೆ?”
ಬಾಲಕನೊಬ್ಬ ಮುಂದೆ ಬಂದ :
“ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ನಾವು ಮೇಯಿಸುತ್ತಿರುವ ದನಗಳನ್ನು ನೋಡಿ” ಎಂದು ಉತ್ತರ ಕೊಟ್ಟ.

ಯತಿಗಳಿಗೆ ಮೆಚ್ಚುಗೆ
ಯತಿಗಳಿಗೆ ಆಶ್ಚರ್ಯವಾಯಿತು. ತಮ್ಮ ಪ್ರಶ್ನೆಗೆ ಈ ಬಾಲಕ ಕೊಟ್ಟ ಉತ್ತರವಾದರೋ ಸಾಮಾನ್ಯ ರೀತಿ ಯಲ್ಲಿರಲಿಲ್ಲ. ಹೊತ್ತನ್ನು ನೋಡಿದರು; ಆ ವೇಳೆ ಗಾಗಲೇ ಸೂರ್ಯ ಮುಳುಗುತ್ತಿದ್ದ. ಬಾಲಕರಾದರೋ ವಯಸ್ಸಿನಲ್ಲಿ ತೀರ ಚಿಕ್ಕವರು; ಅವರು ಮೇಯಿಸುತ್ತಿದ್ದ ಪ್ರಾಣಿಗಳಾದರೋ ಮಂದಗಾಮಿಗಳಾದ ದನಕರು ಗಳು. ಸೂರ್ಯ ಮುಳುಗುವ ಹೊತ್ತಿನಲ್ಲಿ ಈ ಚಿಕ್ಕ ಬಾಲಕರು, ಮಂದಗಾಮಿಗಳಾದ ದನಕರುಗಳನ್ನು ಮೇಯಿಸುತ್ತಿರಬೇಕಾದರೆ, ಊರು ತೀರ ಹತ್ತಿರ ದಲ್ಲಿಯೇ ಇರಬೇಕು;
ಈ ಉತ್ತರವನ್ನು ನೆನೆಸಿಕೊಳ್ಳುತ್ತಿ ದ್ದಂತೆ ಯತಿಗಳಿಗೆ ಹೆಚ್ಚು ಹೆಚ್ಚು ಆಶ್ಚರ್ಯವಾಗುತ್ತಿತ್ತು; ಮೆಚ್ಚುಗೆಯಾಗುತ್ತಿತ್ತು. ಎಂತಹ ಕುಶಾಗ್ರ ಬುದ್ಧಿ ಈ ಬಾಲಕನದು!
ಇದು ನಡೆದುದು ಶ್ರೀರಂಗಕ್ಷೇತ್ರದಲ್ಲಿ. ಮೇನೆ ಯಲ್ಲಿ ಕುಳಿತ ಯತಿಗಳು ಸ್ವರ್ಣವರ್ಣತೀರ್ಥರು. ಶ್ರೀರಂಗದ ಯಾತ್ರೆಗೆಂದು ಅವರು ಹೊರಟಿದ್ದರು. ‘ಸ್ವರ್ಣವರ್ಣ’ ಎಂದರೆ ಬಂಗಾರದ ಬಣ್ಣ ಎಂದು ಅರ್ಥ. ಯತಿಗಳ ಶರೀರ ಬಂಗಾರದಂತೆ ಹೊಳೆಯುತ್ತಿ ದ್ದುದರಿಂದ ಅವರಿಗೆ ‘ಸ್ವರ್ಣವರ್ಣತೀರ್ಥ’ರೆಂದೇ ಹೆಸರು ಬಂದಿತು.
‘ಯಾರೀ ಹುಡುಗ?’
ಕರ್ನಾಟಕದ ಕೊಡಗು ಸೀಮೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ, ‘ದಕ್ಷಿಣಗಂಗೆ’ ಎಂದೇ ಹೆಸರು ಪಡೆದ ಕಾವೇರಿ ತಾಯಿ ಮೂರು ಕಡೆಗಳಲ್ಲಿ ಕವಲಾಗಿ ಒಡೆದು, ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳನ್ನು ಸೃಷ್ಟಿಮಾಡಿದ್ದಾಳೆ. ಮೈಸೂರಿನ ಬಳಿಯ ಶ್ರೀರಂಗಪಟ್ಟಣವೇ ಕಾವೇರಿಯ ಆದಿರಂಗ; ಶಿವನಸಮುದ್ರವೇ ಮಧ್ಯರಂಗ; ತಮಿಳುನಾಡಿನ ತಿರುಚಿರಪಳ್ಳಿಯ ಸಮೀಪದಲ್ಲಿರುವ ಶ್ರೀರಂಗವೇ ಅಂತ್ಯರಂಗ.
ಮಕ್ಕಳನ್ನು ಮಾತನಾಡಿಸಿದ ಸ್ವರ್ಣವರ್ಣತೀರ್ಥರು ಊರನ್ನು ಪ್ರವೇಶಿಸಿದ ತಕ್ಷಣವೇ ‘ಆ ಬಾಲಕ ಯಾರಿರಬಹುದು?’ ಎಂದು ವಿಚಾರ ಮಾಡಿದರು. ಅವನ ತಂದೆ-ತಾಯಿಗಳಿಗೆ ಹೇಳಿ ಕಳುಹಿಸಿದರು.
ಹುಡುಗನ ತಂದೆ ಶೇಷಗಿರಿಯಪ್ಪ, ತಾಯಿ ಗಿರಿಯಮ್ಮ. ತುಂಬ ಬಡತನದಲ್ಲಿ ಅವರು ಜೀವನ ನಡೆಸುತ್ತಿದ್ದರು. ‘ತೋಟಂತಿಲ್ಲಾಯ’ ಮನೆತನದವರೆಂದು ಅವರಿಗೆ ಹೆಸರು, ಅಂದರೆ ತೋಟದ ಮನೆಯವರು ಎಂದರ್ಥ. ತೋಟದ ಕೆಲಸಗಳನ್ನು ಮಾಡುತ್ತಾ ಬಂದದ್ದರಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.
ಈ ದಂಪತಿಗಳಿಗೆ ಒಬ್ಬನೇ ಮಗ. ಅವನು ಹುಟ್ಟಿದ್ದು ೧೪೦೬ರಲ್ಲಿ. ಹುಟ್ಟಿದ ಹನ್ನೆರಡನೆಯ ದಿನ ಮಗನಿಗೆ ಲಕ್ಷ್ಮೀನಾರಾಯಣ ಎಂದು ನಾಮಕರಣ ಮಾಡಿದರು. ಹುಡುಗನಿಗೆ ಯೋಗ್ಯ ಶಿಕ್ಷಣ ಕೊಡಿಸಲು ತಂದೆ ತಾಯಿಗಳಿಗೆ ಅನುಕೂಲವಿಲ್ಲದಿದ್ದುದರಿಂದ ಅವನನ್ನು ದನಕಾಯಲು ಬಿಟ್ಟಿದ್ದರು.
‘ಸ್ವಾಮಿಗಳು ಕೂಡಲೇ ಬರಬೇಕೆಂದು ಕರೆ ಕಳುಹಿಸಿದ್ದಾರೆ’ ಎಂದು ಸ್ವಾಮಿಗಳ ಕಡೆಯವರು ಬಂದು ಹೇಳುತ್ತಲೇ ಹುಡುಗನ ತಂದೆತಾಯಿಗಳಿಗೆ ಹೆದರಿಕೆ ಯಾಯಿತು. ‘ಏನು ಅಚಾತುರ್ಯವಾಯಿತೋ, ಹುಡುಗ ಏನು ತಪ್ಪು ಮಾಡಿದನೋ!’ ಎಂದು ಯೋಚಿಸುತ್ತ ಸ್ವಾಮಿಗಳಿದ್ದ ಕಡೆಗೆ ಬಂದರು. ಅವರಿಗೆ ನಮಸ್ಕಾರ ಮಾಡಿದರು.
ಮಗು ನಿಮ್ಮದೇ?
“ಲಕ್ಷ್ಮೀನಾರಾಯಣ ಎನ್ನುವ ಬಾಲಕ ನಿಮ್ಮ ಮಗ ತಾನೆ?” ಎಂದು ಪ್ರಶ್ನಿಸಿದರು ಸ್ವರ್ಣವರ್ಣ ಯತಿಗಳು.
“ಹೌದು, ನಮ್ಮ ಮಗನೇ” ತಾಯ್ತಂದೆಯರು ಅಂಜುತ್ತಾ ಹೇಳಿದರು!
“ಅವನನ್ನು ನಮ್ಮ ವಶಕ್ಕೆ ಒಪ್ಪಿಸಿಕೊಡಿ. ಬಾಲಕನ ಸಮಸ್ತ ಜವಾಬ್ದಾರಿಯೂ ನಮ್ಮದಾಗಿರಲಿ” ಎಂದರು ಸ್ವರ್ಣವರ್ಣತೀರ್ಥರು.
ಶೇಷಗಿರಿಯಪ್ಪ ಮತ್ತು ಗಿರಿಯಮ್ಮನವರಿಗೆ ಇದು ಅನಿರೀಕ್ಷಿತ ಪ್ರಸಂಗವಾಗಿತ್ತು. ಅವರಿಗೆ ಒಬ್ಬನೇ ಮಗ. ಅವನನ್ನು ಸ್ವಾಮಿಗಳ ವಶಕ್ಕೆ ಒಪ್ಪಿಸಿ ದೂರ ಕಳುಹಿಸಿ ಅವನನ್ನು ಬಿಟ್ಟಿರುವುದು ಹೇಗೆ ಎಂದು ದುಃಖ. ಜತೆಗೆ ಮುಂದೆ ತಮ್ಮ ಗತಿ ಏನು ಎಂಬ ಯೋಚನೆ. ಯೋಚಿಸುತ್ತ ನಿಂತ ಆ ದಂಪತಿಗಳನ್ನು ಕುರಿತು ಸ್ವರ್ಣವರ್ಣ ಯತಿಗಳು ಹೇಳಿದರು.
“ನಿಮ್ಮ ಮಗ ಶುಭ ಲಕ್ಷಣಗಳಿಂದ ಕೂಡಿದ್ದಾನೆ. ನಮ್ಮ ದೇಶದ ಕುಲದೀಪಕನಾಗುವ ಅವನನ್ನು ದನಕಾಯಲು ಬಿಟ್ಟಿರುವಿರಲ್ಲ! ಅವನ ಬಗೆಗೆ ನೀವು ಕಳವಳವನ್ನು ಬಿಡಿ. ನಿಶ್ಚಿಂತೆಯಿಂದ ಬಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದ ಅವರು ನಡೆದ ಸಂಗತಿಯನ್ನು ವಿವರಿಸಿದರು.
ಶೇಷಗಿರಿಯಪ್ಪ-ಗಿರಿಯಮ್ಮ ಸ್ವಾಮಿಗಳಿಗೆ ನಮಸ್ಕರಿಸಿ ದರು.
“ಮಗು ನಿಮ್ಮದೇ, ನಮ್ಮದಲ್ಲ. ಅನುಗ್ರಹಿಸಬೇಕು” ಎಂದರು.
ಅಂದಿನಿಂದ ಆ ಬಾಲಕ ಸ್ವರ್ಣವರ್ಣತೀರ್ಥರ ಸಾಕುಮಗನೆನಿಸಿಕೊಂಡ. ಆಗ ಅವನ ವಯಸ್ಸು ಇನ್ನೂ ಐದು ವರ್ಷ.

ಶಿಕ್ಷಣ
ಲಕ್ಷ್ಮೀನಾರಾಯಣನನ್ನು ಜತೆಯಲ್ಲಿ ಕರೆದು ಕೊಂಡು ಗುರುಗಳು ಸಂಚಾರ ಹೊರಟರು. ಅವನಿಗೆ ಏಳನೆಯ ವರ್ಷದಲ್ಲಿ ಉಪನಯನವನ್ನು ಮಾಡಿದರು. ಮುಂದೆ ವಿದ್ಯಾಭ್ಯಾಸವನ್ನು ಕೊಡಿಸಿದರು. ಲಕ್ಷ್ಮೀನಾರಾಯಣ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಆ ಎಳೆಯ ವಯಸ್ಸಿಗೇ ಅವನ ಜ್ಞಾನ ಅಪಾರವಾಗಿತ್ತು. ಜೊತೆಗೆ ವೈರಾಗ್ಯವೂ ಅವನಲ್ಲಿ ನೆಲಸಿತ್ತು. ಗುರುಗಳಾದ ಸ್ವರ್ಣವರ್ಣತೀರ್ಥರು ತಾವೇ ಲಕ್ಷ್ಮೀ ನಾರಾಯಣನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟರು. ಅಲ್ಲಿಂದ ಮುಂದೆ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ಮುನಿ’ ಎನ್ನಿಸಿಕೊಂಡ. ಈ ತೇಜೋವಂತ ಬಾಲಮುನಿಗೆ ಇನ್ನೂ ಹೆಚ್ಚಿನ ಶಿಕ್ಷಣದ ಅಗತ್ಯವಿತ್ತು. ಆಗಿನ ಕಾಲದಲ್ಲಿ ಮಹಾ ಪಂಡಿತ ರೆನ್ನಿಸಿಕೊಂಡಿದ್ದವರು ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಭುದೇಂದ್ರತೀರ್ಥರು. ಬಾಲಮುನಿಯನ್ನು ಕರೆದು ಕೊಂಡುಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರಲ್ಲಿ ಬಿಡಲಾಯಿತು. ಸಕಲ ವೇದ ಶಾಸ್ತ್ರಗಳನ್ನೂ ಲಕ್ಷ್ಮೀ ನಾರಾಯಣ ಮುನಿ ಅಧ್ಯಯನ ಮಾಡಿ ಸಂಪೂರ್ಣ ವಾಗಿ ತಿಳಿದುಕೊಂಡ. ತರ್ಕ, ನ್ಯಾಯಗಳಲ್ಲಿ ಗಟ್ಟಿಗನಾದ.
ಶ್ರೀಪಾದರಾಜರು
ಒಮ್ಮೆ ವಿಭುದೇಂದ್ರತೀರ್ಥರು ತಮ್ಮ ಶಿಷ್ಯರೊಡನೆ ಸಂಚಾರಮಾಡುತ್ತಾ ಕೊಪ್ರ ಎಂಬ ಗ್ರಾಮಕ್ಕೆ ಬಂದರು. ಕೊಪ್ರ ಎನ್ನುವುದು ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿದೆ. ಇದೇ ಹೊತ್ತಿಗೆ ಸರಿಯಾಗಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ರಘುನಾಥ ತೀರ್ಥರು ತಾವೂ ಸಂಚಾರ ಮಾಡುತ್ತಾ ಅದೇ ಕೊಪ್ರ ಗ್ರಾಮಕ್ಕೆ ಬಂದರು. ಇಬ್ಬರು ಯತಿಗಳ ಸಮಾಗಮವಾಯಿತು. ಉಭಯ ಕುಶಲೋಪರಿಗಳು ಜರುಗಿದವು. ಶ್ರೀ ರಘುನಾಥತೀರ್ಥರ ಕಣ್ಣುಗಳು ಅಲ್ಲಿಯೇ ತೇಜಃಪುಂಜನಾಗಿ ಕಾಣಿಸುತ್ತಿದ್ದ ಬಾಲಮುನಿಯ ಮೇಲೆ ಹರಿದವು.

‘ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ದನಗಳನ್ನು ನೋಡಿ.’
“ಏನೇನು ಓದಿದ್ದೀರಿ?” ಎಂದು ಕುತೂಹಲಕ್ಕಾಗಿ ಪ್ರಶ್ನೆ ಹಾಕಿದರು. ಪ್ರಶ್ನೆ ಕೇಳಿದ್ದೆ ತಡ ಬಾಲಮುನಿ, ಮಧ್ವಾಚಾರ್ಯರ ಗ್ರಂಥಗಳನ್ನೂ ಸುಧಾ ವ್ಯಾಖ್ಯಾನ ವನ್ನೂ ನಿರರ್ಗಳವಾಗಿ ಒಪ್ಪಿಸಿದನಲ್ಲದೆ, ತನ್ನ ಶಾಸ್ತ್ರ ಪಾಂಡಿತ್ಯವನ್ನೂ ನಿವೇದನೆ ಮಾಡಿದ. ಬಾಲಕನ ಮೇಧಾಶಕ್ತಿಯನ್ನೂ ವಿದ್ಯಾಪ್ರೌಢಿಮೆಯನ್ನೂ ಕಂಡು ರಘುನಾಥತೀರ್ಥರು ತಲೆದೂಗುತ್ತಾ ಮತ್ತೆಮತ್ತೆ ಪ್ರಶಂಸೆಗಳನ್ನು ಮಾಡಲು ಆರಂಭಿಸಿದರು.
ತನಗಿಂತ ಹಿರಿಯರೂ ಜ್ಞಾನಸಂಪನ್ನರೂ ಆದ ಯತಿಗಳು ತನ್ನನ್ನು ಈ ರೀತಿ ಹೊಗಳುತ್ತಿರುವುದನ್ನು ಕಂಡು ಬಾಲಮುನಿಗೆ ತೀರಾ ಸಂಕೋಚವೆನಿಸಿತು. ವಿನಯದಿಂದ ಕೈಜೋಡಿಸಿ, “ತಾವು ಮಹಾ ಜ್ಞಾನಿಗಳು. ಮಹಾ ಸಂಸ್ಥಾನವೊಂದರ ಅಪತಿಗಳು. ನಾನೋ ಕೇವಲ ಬಾಲಸಂನ್ಯಾಸಿ. ತಾವು ಶ್ರೀಪಾದಂಗಳವರು, ನನ್ನಂಥವನ ಗುಣಕಥನ ಮಾಡಬಾರದು” ಎಂದರು.
ಶ್ರೀರಘುತೀರ್ಥರಿಗೆ ಬಾಲಸಂನ್ಯಾಸಿಯ ವಿನಯ ಸೌಜನ್ಯಗಳು ತುಂಬ ಮೆಚ್ಚುಗೆಯಾದವು. ಬಹು ಸಂತೋಷದಿಂದ,
“ನಾವು ಶ್ರೀಪಾದಂಗಳವರಾದರೆ, ನೀವು ಶ್ರೀಪಾದ ರಾಜರು” ಎಂದು ಹೇಳಿದರು.
ಅಂದಿನಿಂದ ಲಕ್ಷ್ಮೀನಾರಾಯಣ ಮುನಿ ‘ಶ್ರೀಪಾದರಾಜರು’ ಎಂದೇ ಪ್ರಖ್ಯಾತರಾದರು.
ಶ್ರೀ ವಿಭುದೇಂದ್ರತೀರ್ಥರಲ್ಲಿ ಶ್ರೀಪಾದರಾಜರ ವಿದ್ಯಾಭ್ಯಾಸ ಮುಗಿದಿತ್ತು. ಗುರುಕಾಣಿಕೆಯನ್ನು ಸಲ್ಲಿಸಿ ಶ್ರೀರಂಗದಲ್ಲಿದ್ದ ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರ ಬಳಿಗೆ ಹಿಂದಿರುಗಿದರು.

ಪೀಠ ಬೆಳಗಲು
ಸ್ವರ್ಣವರ್ಣರ ಆನಂದಕ್ಕಂತೂ ಪಾರವೇ ಇಲ್ಲ. ತಾವು ಕರೆದುಕೊಂಡು ಹೋಗಿ ಬಿಟ್ಟ ಲಕ್ಷ್ಮೀನಾರಾಯಣ ಬಾಲಮುನಿ ಇದೀಗ ‘ಶ್ರೀಪಾದರಾಜರು’ ಎಂಬ ಬಿರುದನ್ನು ಪಡೆದು ಬಂದಿದ್ದಾನೆ. ವಿದ್ಯೆ, ವಿನಯ, ವೈರಾಗ್ಯ, ಗಾಂಭೀರ್ಯಗಳ ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಸ್ವರ್ಣವರ್ಣರು ಶ್ರೀಪಾದರಾಜನನ್ನು ಕಂಡು ಉಬ್ಬಿ ಹೋದರು.
ಈ ಹೊತ್ತಿಗೆ ಅವರಿಗೂ ತುಂಬ ವಯಸ್ಸಾಗಿತ್ತು. ತಮ್ಮ ಅನಂತರ ಪೀಠಕ್ಕೆ ಬರಲು ಇಂಥ ಶಿಷ್ಯನಿಗಿಂತ ಬೇರೊಬ್ಬರುಂಟೆ! ಶ್ರೀಪಾದರಾಜರಿಗೇ ತಮ್ಮ ಸಂಸ್ಥಾನ ಸಲ್ಲತಕ್ಕದ್ದೆಂದು ಸ್ವರ್ಣವರ್ಣರು ನಿಶ್ಚಯಿಸಿಕೊಂಡರು. ಶ್ರೀಪಾದರಾಜರಿಗೇ ತಮ್ಮ ಪೀಠವನ್ನು ಅರ್ಪಿಸ ಬೇಕೆಂದು ಅವರಿಗೆ ಕನಸು ಬೇರೆ ಬಿದ್ದಿತ್ತಂತೆ.
ಸ್ವರ್ಣವರ್ಣರು ಶ್ರೀಪಾದರಾಜರ ತಂದೆತಾಯಿಗಳಿಗೆ ಹೇಳಿಕಳುಹಿಸಿದರು, ಬರಮಾಡಿಕೊಂಡರು. ತಮ್ಮ ಮನಸ್ಸಿ ನಲ್ಲಿರುವ ನಿರ್ಧಾರವನ್ನು ತಿಳಿಯಪಡಿಸಿದರು. ಎಲ್ಲರ ಒಪ್ಪಿಗೆ ಪಡೆದು ಸಂತೋಷದಿಂದ ತಮ್ಮ ಪೀಠದ ಮೇಲೆ ಶ್ರೀಪಾದರಾಜರನ್ನು ಕೂಡಿಸಿ ಪಟ್ಟಾಭಿಷೇಕ ನಡೆಸಿದರು.
ಪೀಠಕ್ಕೆ ಬಂದಾಗ ಶ್ರೀಪಾದರಾಜರಿಗೆ ವಯಸ್ಸು ಇನ್ನೂ ಹದಿನಾಲ್ಕು ವರ್ಷ. ಮುಂದೆ ಸ್ವಲ್ಪಕಾಲದಲ್ಲಿ ಸ್ವರ್ಣವರ್ಣತೀರ್ಥರು ಕಾಲವಾದರು. ಶ್ರೀರಂಗಕ್ಷೇತ್ರಕ್ಕೆ ಹೋದವರು ಇಂದಿಗೂ ಸ್ವರ್ಣವರ್ಣರ ವೃಂದಾವನ ವನ್ನು ಅಲ್ಲಿ ಕಾಣಬಹುದು.
ಎಳೆಯ ಬಾಲಕನೊಬ್ಬನಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿ, ಅವನನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡಿ ಕನ್ನಡದೇಶ ಮತ್ತು ಭಾಷೆಗೆ ಶ್ರೀಪಾದರಾಜನೆಂಬ ಮಹಿಮಾನ್ವಿತನನ್ನು ಕೊಟ್ಟ ಶ್ರೇಯಸ್ಸು ಸ್ವರ್ಣವರ್ಣ ತೀರ್ಥರಿಗೆ ಸಲ್ಲುತ್ತದೆ.

ದಾಸಸಾಹಿತ್ಯದ ಅರುಣೋದಯ
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ, ವಿದ್ವತ್ತುಗಳಿಂದ ಶೋಭಿಸುತ್ತಾ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚನೆ ಮಾಡಿದರು. ಕರ್ನಾಟಕದ ನೆಲದಲ್ಲಿ ಧರ್ಮಜಾಗೃತಿ ಯನ್ನು ಉಂಟುಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ತಾಳಗಳನ್ನು ಹಾಕುತ್ತಾ ನರ್ತನ ಮಾಡಿದರು. ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಭಗವನ್ನಾಮ ಸಂಗೀತ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ‘ಶ್ರೀಪಾದ ರಾಜರಿಂದ ದಾಸಸಾಹಿತ್ಯದ ಅರುಣೋದಯ’ ಎಂದೇ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರೆಯಲಾಗಿದೆ.
ನಮ್ಮ ಭರತಖಂಡದಲ್ಲಿ ಭಕ್ತಿಮಾರ್ಗವೆನ್ನುವುದು ಬಹು ದೊಡ್ಡ ಸಂಪ್ರದಾಯ. ನಮ್ಮ ಕರ್ನಾಟಕ ಭೂಮಿ ಯಲ್ಲಿಯೇ ಅದು ಜನಿಸಿತ್ತೆನ್ನುವುದು ನಮಗೆಲ್ಲ ಹೆಮ್ಮೆ. ಮಧ್ವಾಚಾರ್ಯರು ಇದರ ಆದಿ ಪ್ರವರ್ತಕರು. ಅವರನ್ನೇ ಗುರುವಾಗಿಟ್ಟುಕೊಂಡು ವೈಷ್ಣವ ದಾಸಪಂಥ ಕರ್ನಾಟಕದಲ್ಲೆಲ್ಲ ಭಕ್ತಿ ಪ್ರಚಾರ ಮಾಡಿತು. ಇದರ ಪ್ರಭಾವ ಉತ್ತರದ ಬಂಗಾಳ ದೇಶದವರೆಗೂ ವ್ಯಾಪಿಸಿತು. ಭಕ್ತಿ ಸಂಪ್ರದಾಯ ಎಂದರೇನು? ಭಗವಂತನಲ್ಲಿ ಗಾಢವಾದ ಪ್ರೇಮವೇ ಭಕ್ತಿ. ಹೃದಯದಲ್ಲಿ ಉಕ್ಕಿ ಬರುವಂತಹ ಭಾವನಾಲಹರಿಗಳನ್ನು ಯಾವ ಮುಚ್ಚು ಮರೆಯಿಲ್ಲದೆಯೇ ಭಗವಂತನಲ್ಲಿ ತೋಡಿಕೊಳ್ಳ ಲಾಗುತ್ತದೆ. ಅತ್ಯುತ್ಕಟ ಭಾವನೆಗಳು, ಸರಳವಾದ ಹೃದಯ, ಪ್ರೇಮ ಪುರಸ್ಸರವಾದ ಮಾತುಗಳು – ಇವು ಭಕ್ತಿಮಾರ್ಗದವರ ಲಕ್ಷಣ. ಈ ಭಕ್ತಿ ಸಂಪ್ರದಾಯ ನಮ್ಮ ಕನ್ನಡ ದೇಶದಲ್ಲಿ ೧೩ರಿಂದ ೧೮ನೆಯ ಶತಮಾನ ಗಳವರೆಗೂ ತುಂಬು ಪ್ರವಾಹದಂತೆ ಹರಿ ಯಿತು. ಲೋಕ ಕಲ್ಯಾಣದೃಷ್ಟಿಯೇ ಇವರದು. ಇವರನ್ನು ‘ದಾಸಕೂಟದವರು’ ಎಂದು ಕರೆಯ ಲಾಯಿತು. ಇವರ ಕೃತಿಗಳನ್ನೆಲ್ಲ ‘ದಾಸಸಾಹಿತ್ಯ’ ಎಂದು ಹೇಳಲಾಯಿತು. ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಬಹಳ ಹಿಂದಿನವರು. ತ್ಯಾಗರಾಜರ ತಾಯಿ ತಮ್ಮ ಮನೆಯಲ್ಲಿ ಪುರಂದರರ ಕೀರ್ತನೆಗಳನ್ನು ಹಾಡುತ್ತಿದ್ದರಂತೆ. ಪುರಂದರದಾಸರಿ ಗಿಂತಲೂ ಹೆಚ್ಚು ಹಿಂದಿನವರು ಶ್ರೀಪಾದರಾಜರು.
ನಮಸ್ತೇ ಶ್ರೀಪಾದರಾಜಾಯ
ನಮಸ್ತೇ ವ್ಯಾಸಯೋಗಿನೇ |
ನಮಃ ಪುರಂದರಾರ್ಯಾಯ
ವಿಜಯಾರ್ಯಾ ಯತೇ ನಮಃ ||
ಎಂದೇ ಶ್ರೀಪಾದರಾಜರಿಗೆ ಆದ್ಯಪಟ್ಟವನ್ನು ಕಟ್ಟಲಾ ಗಿದೆ. ದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು – ಹೀಗೆ ಇವರೆಲ್ಲರಿಗೂ ಗುರು ಸಮಾನರಾಗಿ ಇರತಕ್ಕವರು ಶ್ರೀಪಾದರಾಜರು. ದಾಸ ಸಾಹಿತ್ಯದ ಪಿತಾಮಹರೆಂದೇ ಅವರನ್ನು ಕರೆಯಲಾಗಿದೆ.

ತಿಳಿಗನ್ನಡದಲ್ಲಿ ಕೃತಿಗಳು
ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರ ಜತೆಯಲ್ಲಿ ಹಲವು ವರ್ಷಗಳ ಕಾಲವೇ ಶ್ರೀಪಾದರಾಜರು ತಮಿಳು ದೇಶದ ಶ್ರೀರಂಗದಲ್ಲಿ ಇದ್ದರಷ್ಟೆ. ತಮಿಳರು ಶ್ರೀವೈಷ್ಣವ ಪ್ರಬಂಧಗಳನ್ನು ತಮ್ಮ ತಾಯಿನುಡಿಯಾದ ತಮಿಳು ಭಾಷೆಯಲ್ಲಿಯೇ ಅಕ್ಕರೆಯಿಂದ ಸಂಗೀತ ಸಾಹಿತ್ಯಬದ್ಧವಾಗಿ ರಚಿಸುತ್ತಿದ್ದುದನ್ನೂ ಹಾಡುತ್ತಿದ್ದುದನ್ನೂ ಶ್ರೀಪಾದರಾಜರು ಕಂಡಿದ್ದರು. ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃಭಾಷೆಗಿಂತ ಬೇರೆ ಸಾಧನವೇ ಇಲ್ಲವೆಂಬುದನ್ನು ಅವರು ಅರಿತಿ ದ್ದರು. ಶ್ರೀವೈಷ್ಣವ ಪ್ರಬಂಧಗಳಂತೆಯೇ ತಮ್ಮ ಸ್ವಭಾಷೆ ಕನ್ನಡ ದಲ್ಲಿಯೂ ಕೃತಿರಚನೆಗಳನ್ನು ಮಾಡಬೇಕೆಂದು ಶ್ರೀಪಾದ ರಾಜರು ನಿರ್ಧರಿಸಿದರು. ಅದುವರೆಗೂ ದೊಡ್ಡದೊಡ್ಡ ವಿಷಯಗಳನ್ನು ಹೇಳಬೇಕಾದರೆ ಸಂಸ್ಕೃತ ಭಾಷೆಯೊಂದೇ ಯೋಗ್ಯತೆಯುಳ್ಳದ್ದೆಂದು ಪಂಡಿತರೂ ಸಾಹಿತ್ಯ ರಚನ ಕಾರರೂ ನಂಬಿದ್ದರು. ಆದರೆ ಶ್ರೀಪಾದರಾಜರು ತಾವು ಸಂಸ್ಕೃತದಲ್ಲಿ ಘನ ಪಂಡಿತರಾಗಿದ್ದರೂ ‘ವಾಗ್ವಜ್ರ’ ಎಂಬ ತಮ್ಮ ಕೃತಿಯನ್ನು ಸಂಸ್ಕೃತ ಭಾಷೆಯಲ್ಲೆ ರಚಿಸಿದ್ದರೂ ಚತುಶ್ಶಾಸ್ತ್ರಗಳನ್ನು ಓದಿದವರಾಗಿದ್ದರೂ ತಮ್ಮ ಅಂತರಂಗದ ಭಾವನಾಲಹರಿಗಳಿಗೆ, ಭಗವಂತನ ಭಕ್ತಿಗೆ ತಮ್ಮ ತಾಯ್ನುಡಿಯಾದ ಕನ್ನಡವೇ ಯೋಗ್ಯ, ಸರ್ವಶ್ರೇಷ್ಠ ವೆಂದು ತಿಳಿದರು. ತಮ್ಮ ಮಾತೃಭಾಷೆಗೆ ಶ್ರೀಪಾದರಾಜರು ಸಲ್ಲಿಸಿದಂತಹ ಗೌರವ, ಮಹತ್ವದ ಕಾಣಿಕೆ ಇದು. ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಕನ್ನಡ ಭಾಷೆಗೆ ಅವರು ಸಲ್ಲಿಸಿದಂತಹ ಈ ಪ್ರೀತಿ ಅಭಿಮಾನಗಳಿಂದ.
ಶ್ರೀಪಾದರಾಜರು ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರು ಕಾಲವಾದ ಮೇಲೆ ಶ್ರೀರಂಗ ದಿಂದ ನೇರವಾಗಿ ಮುಳಬಾಗಲು ಮಠಕ್ಕೆ ಬಂದರು. ಮುಳಬಾಗಲು ಕೋಲಾರ ಜಿಲ್ಲೆಯಲ್ಲಿದೆ. ಅಂದು ಈ ಮುಳಬಾಗಲು ಸಾಳ್ವ ನರಸಿಂಹನ ರಾಜ್ಯಾಕಾರಕ್ಕೆ ಸೇರಿತ್ತು. ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬ ರಾಗಿದ್ದ ಪದ್ಮನಾಭತೀರ್ಥ ಎಂಬವರು ಈ ಮುಳ ಬಾಗಲು ಮಠವನ್ನು ಸ್ಥಾಪಿಸಿದವರು. ಶ್ರೀಪಾದರಾಜರ ಗುರುಗಳಾಗಿದ್ದ ಸ್ವರ್ಣವರ್ಣತೀರ್ಥರು ಈ ಮಠದ ಯತಿಗಳಲ್ಲಿ ಎಂಟನೆಯವರಾಗಿದ್ದರು. ಮುಂದೆ ಮುಳ ಬಾಗಲು ಮಠವೇ ಶ್ರೀಪಾದರಾಜರ ಸಮಸ್ತ ಕಾರ್ಯ ಕ್ಷೇತ್ರವಾಯಿತು. ಉನ್ನತ ವಿದ್ಯಾಪೀಠವೊಂದನ್ನು ಅವರು ಇಲ್ಲಿ ಸ್ಥಾಪನೆ ಮಾಡಿದರು. ತತ್ತ್ವಶಾಸ್ತ್ರ, ಸಂಗೀತ ಶಾಸ್ತ್ರ, ನೃತ್ಯ ಶಾಸ್ತ್ರಗಳನ್ನು ಶ್ರೀಪಾದರಾಜರು ಚೆನ್ನಾಗಿ ಬಲ್ಲವ ರಾಗಿದ್ದರು. ಸಂಸ್ಕೃತ ವಿದ್ಯಾಭ್ಯಾಸಕ್ಕೂ ಸಂಗೀತ ಕಲಾ ಭ್ಯಾಸಕ್ಕೂ ಮುಳಬಾಗಿಲು ಪ್ರಸಿದ್ಧ ಕೇಂದ್ರವಾಯಿತು.

ವ್ಯಾಸಯೋಗಿಗಳು
ಈ ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು – ವ್ಯಾಸತೀರ್ಥರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ ೫೪ ವರ್ಷ ವಯಸ್ಸು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.
ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯ ದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡು ತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ತನ್ನ ಭಾಷೆಯಲ್ಲಿಯೇ ತನ್ನನ್ನು ಮಾತ ನಾಡಿಸಿದ್ದು ಸರ್ಪಕ್ಕೆ ಸಂತೋಷವಾಯಿತಂತೆ. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ :
‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’ ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಸಿದರು. ಈ ಶಿಷ್ಯನೋ ಮಹಾಮೇಧಾವಿ. ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜ ರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. ಬ್ರಹ್ಮಣ್ಯತೀರ್ಥರ ಸಾಕುಮಗ ನಲ್ಲವೇ ವ್ಯಾಸರಾಜರು? ಶಿಷ್ಯನ ಮೇಲೆ ಶ್ರೀಪಾದರಾಜ ರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವನು ನನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳು ವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ  ವ್ಯಾಸರಾಜರದು.

ಸಂಪುಟದಲ್ಲಿ ಮೋಹಕ ವೇಣುಗೋಪಾಲ ಮೂರ್ತಿ

ವೇಣುಗೋಪಾಲನ ದರ್ಶನ
ಒಮ್ಮೆ ಹೀಗಾಯಿತು: ಗುರು-ಶಿಷ್ಯರು ಜತೆಗೂಡಿ ಸಂಚಾರ ಕೈಗೊಂಡಿದ್ದಾಗ ಪಂಢರಾಪುರದ ಭೀಮಾ ನದಿಯ ತೀರದಲ್ಲಿ ಬಹುಕಾಲದಿಂದ ಮರಳಿನಲ್ಲಿ ಹೂತು ಹೋಗಿದ್ದ ವಿಗ್ರಹಗಳಿದ್ದ ಎರಡು ಸಂಪುಟಗಳು ದೊರೆತವು. ಹಾಗೆ ಹೂತಿರುವುದು ಶ್ರೀಪಾದರಾಜರಿಗೆ ಕನಸಿನಲ್ಲಿ ಕಂಡಂತಾಯಿತಂತೆ. ಆ ಸ್ಥಳದಲ್ಲಿ ಹುಡುಕಿ ನೋಡಿದಾಗ ಎರಡು ಸಂಪುಟಗಳು ಕಣ್ಣಿಗೆ ಕಂಡವು. ಅವುಗಳಲ್ಲಿ ಒಂದು ಸಂಪುಟವನ್ನೇನೋ ಕೂಡಲೆ ತೆರೆಯಲು ಸಾಧ್ಯವಾಯಿತು. ಅದರೊಳಗೆ ‘ರಂಗವಿಠಲ’ ಮೂರ್ತಿಯಿತ್ತು. ಇನ್ನೊಂದು ಸಂಪುಟವನ್ನು ತೆರೆಯಲು ಯತ್ನಿಸಿದಾಗ, ಏನು ಮಾಡಿದರೂ ಅದು ಬರಲಿಲ್ಲ. ಅದನ್ನು ಹಾಗೆಯೇ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಒಮ್ಮೆ ಗುರು ಶ್ರೀಪಾದರಾಜರಿಗೆ ದೇಹಾಲಸ್ಯದ ಕಾರಣದಿಂದಾಗಿ ಪೂಜೆಮಾಡಲು ಸಾಧ್ಯವಾಗದೆ, ಆ ದಿನದ ಪೂಜೆಯನ್ನು ಶಿಷ್ಯ ವ್ಯಾಸರಾಜರಿಗೆ ಒಪ್ಪಿಸಿದರು. ವ್ಯಾಸರಾಜರಿಗೋ ಅದೊಂದು ಅಪೂರ್ವ ಸುಸಂ, ಅಗಾಧ ಸಂತೋಷ. ಎಲ್ಲ ದೇವತಾ ವಿಗ್ರಹಗಳನ್ನೂ ಪೂಜೆಗೆ ಅನುಗೊಳಿಸಿ, ಅದುವರೆಗೂ ತೆರೆಯಲು ಬಾರದಿದ್ದ, ಭೀಮಾನದೀ ತೀರದಲ್ಲಿ ದೊರಕಿದ್ದ ಸಂಪುಟವನ್ನು ತೆರೆಯಲು ಹೋದಾಗ ಅದು ತಟಕ್ಕನೆ ಬಾಯ್ದೆರೆದುಕೊಂಡಿತು. ಸಂಪುಟದ ಒಳಗೆ ನೋಡಿದರೆ ಮೋಹಕ ವೇಣು ಗೋಪಾಲ ಮೂರ್ತಿ. ತುಟಿಗೆ ಕೊಳಲಿಟ್ಟು, ಕಾಲಿಗೆ ಗೆಜ್ಜೆಕಟ್ಟಿ ಝಣತ್ಕಾರ ಮಾಡುತ್ತಾ ತ್ರಿಭಂಗಿಯಲ್ಲಿ ನಿಂತು ನೃತ್ಯ ಮಾಡುತ್ತಿದ್ದಾನೆ. ಕೊಳಲ ಇಂಪಾದ ನಾದ ಎಲ್ಲೆಡೆಗೂ ತುಂಬಿಕೊಂಡಿದೆ. ವ್ಯಾಸರಾಜರ ಮೈ ಜುಮ್ಮೆಂದಿತು. ಆ ದಿವ್ಯ ಮೂರ್ತಿಯ ಗೆಜ್ಜೆ ಶಬ್ದದಲ್ಲಿ, ವೇಣುನಾದದಲ್ಲಿ ಮೈಮರೆತು, ಅಲ್ಲಿಯೇ ಕೈಗೆ ಸಿಕ್ಕಿದ ಎರಡು ಸಾಲಿಗ್ರಾಮಗಳನ್ನು ಎತ್ತಿಕೊಂಡು ತಾಳ ಹಾಕುತ್ತಾ, ಕುಣಿಯಲಾರಂಭಿಸಿದರು. ವೇಣುಗೋಪಾಲ ಬಲಗಾಲಿನ ಮೇಲೆ ಎಡಗಾಲನ್ನಿಟ್ಟು ಅಪೂರ್ವ ಭಂಗಿಯಲ್ಲಿ ಕುಣಿಯುತ್ತಿದ್ದ. ಭಕ್ತಿಯ ಉನ್ಮಾದದಲ್ಲಿ ವ್ಯಾಸರಾಜರು ಕುಣಿದರು… ಕುಣಿದರು. ಕುಣಿಯು ತ್ತಲೇ ಇದ್ದರು. ಇದನ್ನು ಕಂಡ ಇನ್ನಿತರ ಶಿಷ್ಯರು ಕೂಡಲೇ ಶ್ರೀಪಾದರಾಜರ ಬಳಿಗೆ ಓಡಿಹೋದರು; ನಡೆಯುತ್ತಿರುವುದನ್ನು ತಿಳಿಸಿದರು. ಗುರುಗಳು ಓಡಿ ಬಂದು ನೋಡಿದರು. ಇದುವರೆಗೂ ತೆರೆಯಲಾಗದಿದ್ದ  ಸಂಪುಟ ತೆರೆದಿದೆ. ವೇಣುಗೋಪಾಲ ಕಾಲುಗೆಜ್ಜೆಗಳನ್ನು ಶಬ್ದ ಮಾಡುತ್ತಾ ಕೊಳಲ ನಾದ ಮಾಡುತ್ತಾ ಕುಣಿಯುತ್ತಿದ್ದಾನೆ. ಅವನ ಜತೆಗೆ ವ್ಯಾಸರಾಜರೂ ಕುಣಿದಾಡುತ್ತಿದ್ದಾರೆ.
“ವ್ಯಾಸರಾಜರೇ, ನೀವೇ ಧನ್ಯರು. ನಿಮ್ಮಿಂದ ನನಗೂ ವೇಣುಗೋಪಾಲನ ದಿವ್ಯದರ್ಶನವಾಯಿತು. ನಿಮಗೆ ಅನುಗ್ರಹಿತವಾದ ಈ ವೇಣುಗೋಪಾಲ ಮೂರ್ತಿಯನ್ನು ನೀವೇ ಇಟ್ಟುಕೊಂಡು ಪೂಜಿಸಿ” ಎಂದು ಶ್ರೀಪಾದರಾಜರು ಆ ವೇಣುಗೋಪಾಲ ಸಂಪುಟ ವನ್ನು ವ್ಯಾಸರಾಜರಿಗೇ ಕೊಟ್ಟುಬಿಟ್ಟರು. ಈಗಲೂ ಈ ವಿಗ್ರಹ ಕುಂದಾಪುರದ ವ್ಯಾಸರಾಜ ಮಠದಲ್ಲಿದೆ.
ಶ್ರೀಪಾದರಾಜರು ತಾವು ರಚಿಸಿದ ಉಗಾಭೋಗ ವೊಂದರಲ್ಲಿ ವ್ಯಾಸರಾಜರಿಗೆ ಕಂಡ, ವ್ಯಾಸರಾಜರಿಂದ ತಾವೂ ಕಾಣಲು ಸಾಧ್ಯವಾದ ಆ ದಿವ್ಯ ವೇಣುಗೋಪಾಲ ಮೂರ್ತಿಯನ್ನು ಈ ರೀತಿ ವರ್ಣನೆ ಮಾಡಿದ್ದಾರೆ :
ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು
ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲ
ನಿತ್ಯಪೂರ್ಣ ಮಂಗಳವಿತ್ತು ನಿತ್ಯದಿ ಕಲ್ಯಾಣವಿತ್ತು
ನಿತ್ಯ ಸಲಹೊ ವ್ಯಾಸಮುನಿ ವಂದ್ಯ ಗೋಪಿನಾಥನೆ
ತುರುಬಿನ ಮ್ಯಾಲೆ ತುರುಬಿನ ಮೊಲ್ಲೆಮಲ್ಲಿಗೆ ಕುಸುಮಗಳ ರಂಗಾ
ಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪತರುವನೆನ್ನೀ ರಂಗಾ
ಕರದಲ್ಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾ
ಸರಿಗಮಪದನಿಸ ಸನಿದಪಮಗರಿಸ ಅಧರದಲೂದುತಿರೆ ರಂಗಾ
ಸಿರಿಯರಸನು ಸಿರಿಪತಿ ರಂಗವಿಠಲ ಸರಸದಿ ವೇಣುನಾದ ಮಾಡಿದ.

ಅಹಂಕಾರಿಗಳ ತೇಜೋವಧೆ
ಶ್ರೀಪಾದರಾಜರು ಮುಂದೆ ಭಾರತದ ಪವಿತ್ರ ಕ್ಷೇತ್ರಗಳನ್ನೆಲ್ಲ ಸಂಚಾರ ಮಾಡಿದರು. ಅವರು ಹೋದ ಕಡೆಯಲ್ಲೆಲ್ಲ ವಿದ್ವತ್‌ಸಭೆಗಳು, ಚರ್ಚಾಗೋಷ್ಠಿಗಳು ನಡೆದವು. ಎಲ್ಲ ಕಡೆಯಲ್ಲೂ ಶ್ರೀಪಾದರಾಜರು ತಮ್ಮ ವಿದ್ಯಾಪ್ರೌಢಿಮೆಯನ್ನು ಮೆರೆಯಿಸಿ, ಜಯಮಾಲೆ ಗಳನ್ನು ಸಂಪಾದನೆ ಮಾಡಿದರು. ಅವರು ಕಾಶಿಗೆ ಹೋಗಿದ್ದಾಗ ಒಂದು ವಿಶೇಷ ಪ್ರಸಂಗ ನಡೆಯಿತು. ಕಾಶಿಯಲ್ಲಿನ ಕೆಲವು ವಿದ್ಯಾಂಸರು ತುಂಬ ದುರಹಂಕಾರಿಗಳಾಗಿದ್ದರು. ವಿದ್ಯಾಗರ್ವದಿಂದ ಮೆರೆಯುತ್ತಿದ್ದರು. ವಿದ್ಯೆಗೆ ವಿನಯ ಭೂಷಣ ಇದೆ ಎಂಬುದನ್ನೇ ಅವರು ಮರೆತಂತಿತ್ತು. ಶ್ರೀಪಾದರಾಜ ರನ್ನು ವಾದಕ್ಕೆ ಎಳೆದು, ಅವರ ಮುಖ ಭಂಗಮಾಡಿ, ಅವರಿಂದ ಜಯಪತ್ರ ಬರೆಸಿಕೊಳ್ಳಬೇಕು ಎಂದು ಅವರ ಹಂಚಿಕೆಯಾಗಿತ್ತು. ಶ್ರೀಪಾದರಾಜರಿಗೆ ಇದು ತಿಳಿಯಿತು. ವಾದಕ್ಕೆ ಅವರು ಹೆದರುವವರಲ್ಲ. ಆದರೆ ಕೆಲವು ಷರತ್ತುಗಳನ್ನು ಹಾಕಿದರು. ಈ ವಿದ್ವತ್ ಸಭೆ ಒಬ್ಬ ಮಹಾರಾಜರ ಸಮ್ಮುಖದಲ್ಲಿ ನಡೆಯಬೇಕು. ವಿದ್ವಾಂಸರು ಒಂದು ವೇಳೆ ವಾದದಲ್ಲಿ ಸೋತು ಹೋದದ್ದೇ ಆದರೆ ಸಂನ್ಯಾಸವನ್ನು ಸ್ವೀಕರಿಸಬೇಕು – ಇವೇ ಆ ಷರತ್ತುಗಳು. ‘ಇದೇನು ಮಹಾ’ ಎಂದು ಕೊಂಡರು ಆ ಗರ್ವಿಷ್ಠ ವಿದ್ವಾಂಸರು. ವಾದ ಪ್ರಾರಂಭ ವಾದಾಗ ನಿಮಿಷನಿಮಿಷಕ್ಕೂ ಅವರು ಸೋಲುತ್ತಾ ಬಂದು, ಕಡೆಗೆ ಪೂರ್ಣ ಪರಾಜಿತರಾದರು. ಷರತ್ತಿನಂತೆ ಕಾಶಿಯ ಈ ವಿದ್ವಾಂಸರು ಸಂನ್ಯಾಸವನ್ನು ಸ್ವೀಕಾರ ಮಾಡಬೇಕಿತ್ತು. ಹಾಗೆ ಮಾಡಲಿಲ್ಲ; ಅದಕ್ಕೆ ಬದಲು ಶ್ರೀಪಾದರಾಜರ ಮೇಲೆ ಕೆಲವು ದುಷ್ಟ ಪ್ರಯೋಗಗಳನ್ನು ಮಾಡಿದರು – ಅಂದರೆ ಅವರ ನಾಲಿಗೆಯೇ ಕಟ್ಟಿಹೋಗುವಂತೆ ಮಾಟಮದ್ದುಗಳನ್ನು ಮಾಡಿದರು. ಶ್ರೀಪಾದರಾಜರಿಗೆ ಇದು ಅರ್ಥ ವಾಯಿತು. ಕೂಡಲೇ ಹಯಗ್ರೀವ ಮಂತ್ರವನ್ನು ಉಚ್ಚಾರಣೆ ಮಾಡುತ್ತಾ ಈ ದುಷ್ಟಶಕ್ತಿಯಿಂದ ಪಾರಾದರು.

ಸಾಳ್ವ ನರಸಿಂಹನ ಉದ್ಧಾರ
ಇನ್ನೊಂದು ಮಹತ್ವದ ಪ್ರಸಂಗ ಶ್ರೀಪಾದರಾಜರ ಜೀವನದಲ್ಲಿ ನಡೆಯಿತು.
ವಿಜಯನಗರದ ದೊರೆಗಳಿಗೆ ಅನನಾಗಿದ್ದ ಸಾಳ್ವ ನರಸಿಂಹನೆಂಬ ದಂಡನಾಯಕ ಪೆನುಗೊಂಡೆ ಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಇವನಿಗೆ ಚಿತ್ತೂರು, ಉತ್ತರ ಆರ್ಕಾಟು, ಕಡಪಾಗಳ ಜತೆಗೆ ಪ್ರಸಿದ್ಧ ಕ್ಷೇತ್ರವಾದ ತಿರುಪತಿಯೂ ಸೇರಿತ್ತು. ತಿರುಪತಿಗೆ ವಿಜಯನಗರದ ಅರಸುಗಳ ಭದ್ರ ಬೆಂಬಲ ವಿದ್ದುದರಿಂದ ಸಾಳ್ವ ನರಸಿಂಹನ ಆಜ್ಞೆಯನ್ನು ತಿರುಪತಿ ಕ್ಷೇತ್ರದ ಅರ್ಚಕರು ಹೆಚ್ಚು ಗಮನಕ್ಕೆ ತಂದುಕೊಳ್ಳುತ್ತಿರ ಲಿಲ್ಲ. ತಿರುಪತಿ ಸ್ವಾಮಿಯ ಬಂಗಾರದ ವಾಹನಗಳ ಮೇಲೆ ಈ ಅರ್ಚಕರು ತಮ್ಮ ಮಕ್ಕಳನ್ನು ಕೂರಿಸಿ ಮೆರವಣಿಗೆ ಮಾಡುತ್ತಿದ್ದರು. ಸಾಳ್ವ ನರಸಿಂಹನಿಗೆ ಅರ್ಚಕರ ಈ ಬಗೆಯ ಉದ್ಧಟ ಧೋರಣೆ ಸರಿಬೀಳ ಲಿಲ್ಲ. ಅರ್ಚಕರನ್ನು ಹಲವು ಬಾರಿ ಎಚ್ಚರಿಸಿದ. ಆದರೆ ಅವರು ಎಚ್ಚೆತ್ತುಕೊಳ್ಳಲಿಲ್ಲ. ಒಂದು ಕಠಿಣವಾದ ಆಜ್ಞೆ ಯನ್ನು ಕೂಡ ಹೊರಡಿಸಿದ. (ಈ ಆಜ್ಞೆ ಕ್ರಿ.ಶ. ೧೪೬೭ ರಲ್ಲಿ ಹೊರಟಿತೆಂದು ಚರಿತ್ರಕಾರರ ರಾಬರ್ಟ್ ಸಿವೆಲ್ ಎಂಬವನು ಬರೆಯುತ್ತಾನೆ.) ಇದನ್ನು ಆ ಅರ್ಚಕರು ಅಷ್ಟು ಗಮನಕ್ಕೆ ತಂದುಕೊಳ್ಳಲೇ ಇಲ್ಲ. ಕೆಲವು ಕಾಲ ಕಳೆಯಿತು. ಒಮ್ಮೆ ತಿರುಪತಿ ದೇವರ ವಾಹನದ ಚಿನ್ನದ ಗರುಡನ ಮೇಲೆ ಅರ್ಚಕರ ಮಗನೊಬ್ಬನನ್ನು ಕೂರಿಸಿ ಮೆರವಣಿಗೆ ಮಾಡಿದರು ಎಂಬ ಸುದ್ದಿ ತಿಳಿಯಿತು. ಸಾಳ್ವ ನರಸಿಂಹನಿಗೆ ಕೋಪ ಉಕ್ಕೇರಿತು. ಕೂಡಲೇ ಹೊರಟು ಸಾಲಾಗಿ ಅರ್ಚಕರನ್ನು ತನ್ನ ಕತ್ತಿಗೆ ಬಲಿ ಕೊಟ್ಟ.
ಕೋಪದಲ್ಲಿ ಅರ್ಚಕರನ್ನು ಕೊಂದಿದ್ದೇನೋ ಆಯಿತು. ಆದರೆ ಅವನಿಗೆ ಕೊಲೆಯ ಪಾಪ ತಗಲಿ ಕೊಂಡಿತು. ಇದೇ ಪ್ರಬಲ ಚಿಂತೆಯಾಗಿ ಅವನನ್ನು ಕಾಡ ತೊಡಗಿತು. ಅದೇ ವೇಳೆಗೆ ತನ್ನ ಮಾಂಡಲಿಕದಲ್ಲಿಯೇ ಇದ್ದ ಮುಳಬಾಗಲಿನಲ್ಲಿ ಶ್ರೀಪಾದರಾಜ ಯತಿಗಳು ಇರುವುದು ಗೊತ್ತಾಯಿತು. ಒಡನೆಯೇ ಸಾಳ್ವ ನರಸಿಂಹ ಮುಳಬಾಗಲಿಗೆ ಧಾವಿಸಿ, ಶ್ರೀಪಾದರಾಜರಿಗೆ ಅಡ್ಡಬಿದ್ದು, ತನ್ನ ಪಾಪವನ್ನು ನಿವಾರಿಸಬೇಕೆಂದು ಬೇಡಿಕೊಂಡ. ಶ್ರೀಪಾದರಾಜರು ತಮ್ಮ ಯೋಗಮಹಿಮೆಯಿಂದ ಪೂಜೆಯ ಕಾಲದಲ್ಲಿ ಸಾಳ್ವ ನರಸಿಂಹನ ಮೇಲೆ ಶಂಖದಿಂದ ನೀರನ್ನು ಚಿಮುಕಿಸಿ, “ನಿನ್ನ ಪಾಪ ನಿವಾರಣೆಯಾಯಿತು ಹೋಗು” ಎಂದರು.

‘ಸುಖ ಪ್ರಾರಬ್ಧ’
ಸಾಳ್ವ ನರಸಿಂಹ ಇದನ್ನು ಮರೆಯಲಿಲ್ಲ. ಮುಂದೆ ಇವನೇ ವಿಜಯನಗರ ಸಿಂಹಾಸನವನ್ನು ಏರಿದಾಗ (ಕ್ರಿ.ಶ. ೧೪೮೫ರಿಂದ ೧೪೯೭) ಶ್ರೀಪಾದರಾಜರನ್ನು ವಿಜಯನಗರ ರಾಜಧಾನಿಗೆ ಕರೆಸಿಕೊಂಡು, ರತ್ನ ಖಚಿತ ಸಿಂಹಾಸನದ ಮೇಲೆ ಕೂರಿಸಿ, ರತ್ನಾಭಿಷೇಕವನ್ನು ನಡೆಯಿಸಿದ. ಶ್ರೀಪಾದರಾಜರು ಸಂನ್ಯಾಸಿಗಳು. ಆದರೂ ಸಿಂಹಾಸನಾರೋಹಣ ಮಾಡಿದರು. ಮೈಗೆ ಸುಗಂಧ ದ್ರವ್ಯವಗಳನ್ನು ಹಚ್ಚಿಕೊಂಡರು. ರತ್ನಖಚಿತ ಕವಚ, ಕಂಕಣ, ಕುಂಡಲಗಳನ್ನು ತೊಟ್ಟುಕೊಂಡರು. ಮುತ್ತಿನಹಾರ, ತುರಾಯಿಗಳನ್ನು ತೊಟ್ಟುಕೊಂಡರು. ಪ್ರತಿದಿನವೂ ಅರವತ್ತು ಬಗೆಯ ಭಕ್ಷ್ಯ ಭೋಜ್ಯಗಳನ್ನು ಮಾಡಿ ಅವರಿಗೆ ಬಡಿಸಲಾಗುತ್ತಿತ್ತು. ಇದೊಂದು ‘ಸುಖ ಪ್ರಾರಬ್ಧ’ ಎಂದು ಹೇಳಲಾಗಿದೆ. ಎಂದರೆ ಸಂನ್ಯಾಸಿಯಾದರೂ ಸುಖಗಳನ್ನು ಪಡುವುದು. ಇದನ್ನು ಕೇವಲ ವೈರಾಗ್ಯದ ಮನಸ್ಸಿನಿಂದ ಮಾತ್ರವೇ ಶ್ರೀಪಾದರಾಜರು ಸ್ವೀಕರಿಸುತ್ತಿದ್ದರು. ಸುಖಕ್ಕಾಗಿ ಆಸೆ ಪಡಲಿಲ್ಲ. ಈ ಭೋಗಗಳಿಂದ ಸಂತೋಷಪಡಲಿಲ್ಲ.
ಸಂನ್ಯಾಸಿಗಳು ಇಷ್ಟೆಲ್ಲ ವೈಭವ ಪಡೆಯುತ್ತಿರುವು ದನ್ನು ಕಂಡು ಕೆಲವರು ಕುಹಕಿಗಳು ಅಪಹಾಸ್ಯ ಮಾಡಿದರು. ಹೊರಗೆ ಇಷ್ಟೆಲ್ಲ ವೈಭವಗಳು, ಬಗೆ ಬಗೆಯ ಭಕ್ಷ್ಯಭೋಜ್ಯಗಳು ಇದ್ದರೂ ಶ್ರೀಪಾದರಾಜರ ಮನಸ್ಸು ಒಳಗೆ ಹೇಗಿರುತ್ತಿತ್ತು ಎಂಬುದನ್ನು ಈ ನಿಂದಕರು ತಿಳಿಯಲು ಸಾಧ್ಯವಾಗಲಿಲ್ಲ. ಈ ಸಂದರ್ಭ ದಲ್ಲಿ ಒಂದು ವಿಶೇಷ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಈ ನಿಂದೆಗಳನ್ನು ಕೇಳಿ ಶ್ರೀಪಾದರಾಜರು ತಾವು ಹಚ್ಚಿ ಕೊಳ್ಳುತ್ತಿದ್ದ ಸುಗಂಧದ್ರವ್ಯಗಳನ್ನು ಒಮ್ಮೆ ನಿಲ್ಲಿಸಿಬಿಟ್ಟರು. ಹಾಗೆ ನಿಲ್ಲಿಸಿದ್ದೆ ತಡ ಆ ಕುಹಕಿಗಳ ಮೈಯಲ್ಲೆಲ್ಲ ನಾನಾ ರೀತಿಯ ತಾಪಗಳು ತೋರಿಕೊಂಡು ಅದನ್ನು ಸಹಿಸುವುದೇ ಅವರಿಗೆ ದುಸ್ಸಾಧ್ಯವಾಯಿತು. ಶ್ರೀಪಾದರಾಜರ ಮಹಿಮೆ ತಿಳಿಯದೆ ಅಜ್ಞಾನದಿಂದ ತಾವು ನಡೆದುಕೊಂಡದ್ದಕ್ಕಾಗಿ ಅವರ ಕ್ಷಮಾಪಣೆ ಬೇಡಿದರು.

ಸಾಳ್ವ ನರಸಿಂಹ ಶ್ರೀಪಾದರಾಜರಿಗೆ ರತ್ನಾಭಿಷೇಕ ನಡೆಸಿದ.

ಇಟ್ಟಾಂಗೆ ಇರುವೆನು ಹರಿಯೆ
ಈ ಎಲ್ಲ ‘ಸುಖ ಪ್ರಾರಬ್ಧ’ಗಳನ್ನು ಅನುಭವಿಸು ವಾಗ ತಮ್ಮ ಮನಸ್ಸು ಹೇಗಿರುತ್ತಿತ್ತು, ಏತಕ್ಕಾಗಿ ಅವನ್ನೆಲ್ಲ ತಾವು ಅನುಭವಿಸಿದರು ಎನ್ನುವುದನ್ನು ಶ್ರೀಪಾದರಾಜರೇ ತಮ್ಮ ಒಂದು ಕೀರ್ತನೆಯಲ್ಲಿ ವಿವರಿಸಿದ್ದಾರೆ. ‘ದೇವರು ಹೇಗೆ ಹೇಗೆ ಇಟ್ಟಿರುತ್ತಾನೋ ಹಾಗೆಯೇ ನಾನಿರುತ್ತೇನೆ’ ಎಂಬುದು ಈ ಕೀರ್ತನೆಯ ಅರ್ಥ. ಅವನ ಕರುಣೆ ಇದ್ದರೆ ಸಣ್ಣಕ್ಕಿ ಅನ್ನ, ಬೆಣ್ಣೆಕಾಸಿದ ತುಪ್ಪ, ಚಿನ್ನದ ಹರಿವಾಣದಲ್ಲಿ ಊಟ, ಪೀತಾಂಬರ, ಜರಿಯಂಚಿನ ಶಾಲು, ಛತ್ರಚಾಮರ ಸೇವೆ, ಚಂದದ ಮಂಚ ಇವೆಲ್ಲವೂ ಲಭ್ಯವಾಗುತ್ತವೆ; ಅವನ ಕರುಣೆ ತಪ್ಪಿತೋ ಕದನ್ನ ಸಿಗುವುದೂ ಕಷ್ಟ. ಕೌಪೀನ, ಪಾದರಕ್ಷೆಗಳೂ ದೊರೆಯಲಾರವು – ಎನ್ನುತ್ತಾರೆ ಈ ಕೀರ್ತನೆಯಲ್ಲಿ ಶ್ರೀಪಾದರಾಜರು. ಆ ಕೀರ್ತನೆ ಹೀಗಿದೆ :

ಇಟ್ಹಾಂಗೆ ಇರುವೆನು ಹರಿಯೆ ಎನ್ನ ದೆರೆಯೆ   ||ಪ||
ಸಣ್ಣ ಶಾಲ್ಯೋದನ ಬೆಣ್ಣೆಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನ ಮಹಿಮ ನಿನ್ನ ಕರುಣ ತಪ್ಪಲು ಕ-
ದನ್ನಕ್ಕೆ ಬಾಯ್ ಬಿಡಿಸುವಿಯಲ್ಲೋ ಸ್ವಾಮಿ   || ೧ ||
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೊ
ಕಪಿಲಹರೇ, ನಿನ್ನ ಕೃಪೆಯು ತಪ್ಪಿದ ಮೇಲೆ
ಹೇ ಪಿನಾಕಿವಂದ್ಯ ಕೌಪೀನ ದೊರೆಯದೊ   || ೨ ||
ಚಂದ್ರಶಾಲೆ ಚಂದ್ರಕಿರಣದಿಂದೊಪ್ಪುವ
ಚಂದದ ಮಂಚದೋಳ್ ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ-
ಮಂದಿರದೊಳು ತೋಳ್ತಲೆದಿಂಬು ಮಾಡಿಸುವಿ         || ೩ ||
ನರಯಾನದೊಳು ಕ್ಷಣ ನರವರನೆನಿಸುವಿ
ವರಛತ್ರ ಚಾಮರ ಹಾಕಿಸುವಿ
ಕರುಣನಿಧೇ ನಿನ್ನ ಕರುಣ ತಪ್ಪಿದ ಮೇಲೆ
ಚರಣಭರಣ ಪಾದರಕ್ಷೆಯು ದೊರೆಯದೋ   || ೪ ||
ಗಂಗಾಜನಕ ಪಾಂಡುರಂಗ ನಿನ್ನ ಭಕುತರ
ಸಂಗವಿರಲಿ ದುಷ್ಟಸಂಗ ಬೇಡಾ
ಅಂಗನೆಯರ ಕೂಡಾ ನಂಗಬಾಣನೆ ಶಿಲ್ಕಿ
ಭಂಗವ ತರಲಾರೆ ರಂಗವಿಠಲ ಕಾಯೋ     || ೫ ||

ಭಗವಂತ ಹೇಗೆ ಇರಬೇಕೆಂದು ಹೇಳುವನೋ ಹಾಗೆ ಮಾನವ ಇರಬೇಕಾದುದು ಧರ್ಮ. ಅವನು ಸುಖ ಕೊಟ್ಟರೆ ಸಂತೋಷದಿಂದ ಸ್ವಾಗತಿಸೋಣ; ದುಃಖ ಕೊಟ್ಟರೆ ಅದನ್ನು ಸಂತೋಷದಿಂದ ತೆಗೆದುಕೊಳ್ಳೋಣ ಎನ್ನುವುದೇ ಶ್ರೀಪಾದರಾಜರ ಈ ಕೀರ್ತನೆಯ ಹಿಂದಿ ರುವ ಅರ್ಥ. ಜೀವನ ಧರ್ಮ ರಹಸ್ಯವನ್ನು ಅವರು ಚೆನ್ನಾಗಿ ಇಲ್ಲಿ ವಿಷದಪಡಿಸಿದ್ದಾರೆ. ಹೊರಗೆಲ್ಲ ವೈಭವ ಗಳಿದ್ದರೂ ಒಳಗೆ ಅವರು ದೃಢ ವೈರಾಗ್ಯವನ್ನು ಹೊಂದಿದ್ದರು.

ಕೀರ್ತನೆಗಳು
ಅವರು ಧರ್ಮಪೀಠವೊಂದರಲ್ಲಿ ಕುಳಿತಿದ್ದರು, ಮಹಾ ಮಹಿಮರಾಗಿದ್ದರು. ಮಾತ್ರವಲ್ಲ, ವಿಶೇಷವಾಗಿ ಕನ್ನಡ ನಾಡಿನಲ್ಲಿ, ಕನ್ನಡ ಭಾಷೆಯಲ್ಲಿ ಒಂದು ಹೊಸ ಬಗೆಯ ಸಾಹಿತ್ಯ ಪರಂಪರೆಯನ್ನೆ ಸೃಷ್ಟಿಸಲು ಅವರು ಆದಿಪುರುಷರಾದರು ಎನ್ನುವುದು ತುಂಬ ಮುಖ್ಯ ಸಂಗತಿ. ಕನ್ನಡದಲ್ಲಿ ಸಂಗೀತಕೃತಿ ರಚನೆಗೆ ಅವರೇ ಸೂರ್ತಿದಾಯಕರಾದರು. ಇವರಿಗೂ ಹಿಂದೆ ನರಹರಿ ತೀರ್ಥ ಎಂಬುವರಿದ್ದರು. ಅವರು ಕೂಡ ಕನ್ನಡದಲ್ಲಿ ಕೀರ್ತನೆಗಳನ್ನು ಮಾಡಿದ್ದಾರೆ. ಆದರೆ ನಮಗೆ ಸಿಕ್ಕಿರುವುದು ಕವಲ ಒಂದೋ ಎರಡೋ ಅಷ್ಟೆ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ, ಅನುಪಲ್ಲವಿಗಳನ್ನು ಇಟ್ಟುಕೊಂಡು ವ್ಯಾಪಕವಾಗಿ ಕನ್ನಡದಲ್ಲಿ ಕೃತಿ ರಚನೆ ಮಾಡಿದ ಮೊದಲ ಕೀರ್ತಿ ಶ್ರೀಪಾದರಾಜರಿಗೇ ಸಲ್ಲ ಬೇಕು. ಅದರಿಂದಲೇ ಶ್ರೀಪಾದ ರಾಜರ ಹಸರು ಅಷ್ಟೊಂದು ಗಮನಾರ್ಹವಾಗಿರುವುದು. ‘ರಂಗವಿಠ್ಠಲ’ ಎಂಬ ಅಂಕಿತವನ್ನಿಟ್ಟುಕೊಂಡು ನೂರಾರು ಕೀರ್ತನೆ ಗಳನ್ನು ಶ್ರೀಪಾದರಾಜರು ಮಾಡಿದ್ದಾರೆ. ಸರಳವಾದ ಶೈಲಿ, ಮೃದುಮೃದುವಾದ ಭಾಷೆ, ಭಕ್ತಿರಸದಿಂದ ತುಂಬಿತುಳು ಕಾಡುತ್ತಿರುವ ಅವರ ಕೀರ್ತನೆಗಳು ಕೇಳಲು ತುಂಬ ಮನೋಹರವಾಗಿರುತ್ತವೆ. ರಾಗದ ಹೆಸರುಗಳನ್ನು ಸೇರಿಸಿಕೊಂಡೇ ಅವರು ರಚಿಸಿರುವ ಕೀರ್ತನೆಯೊಂದು, ಹೇಗೆ ಸಂಗೀತದಲ್ಲಿ ಅವರ ಜ್ಞಾನ ಅಪಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಾಡಿ ಕೊಳ್ಳಲು ಈ ಕೀರ್ತನೆ ತುಂಬ ಇಂಪಾಗಿರುವುದರಿಂದ ಅದನ್ನಿಲ್ಲಿ ಕೊಡಲಾಗಿದೆ.

ಲಾಲಿ ಗೋವಿಂದ ಲಾಲಿ, ಕೌಸಲ್ಯ
ಬಾಲ ಶ್ರೀರಾಮ ಲಾಲೀ
ಲಾಲಿ ಮುನಿವಂದ್ಯಲಾಲಿ, ಜಾನಕೀ
ರಮಣ ಶ್ರೀರಾಮ ಲಾಲೀ || ಪ ||
ಪಲ್ಲವಾಧರೆಯರೆಲ್ಲ ಈ ಶಿಶುವ
ತುಲ್ಯ ವರ್ಜಿತವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಂದ ||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವಗಾಂಧಾರದಿಂದ ||

ಕಾವ್ಯಗಳು
ಕೇವಲ ಬಿಡಿ ಗೀತಗಳನ್ನೆ ಅಲ್ಲದೆ ಶ್ರೀಪಾದರಾಜರು ಗೋಪಿಗೀತಾ, ವೇಣುಗೀತಾ, ಭ್ರಮರಗೀತಾ, ಶ್ರೀ ಲಕ್ಷ್ಮೀ ನರಸಿಂಹ ಪ್ರಾರ್ದುಭಾದಂಡಕ, ರುಕ್ಮಿಣೀ-ಸತ್ಯಭಾಮ ವಿಲಾಸ ಮತ್ತು ಮಧ್ವನಾಮ ಎಂಬೆಲ್ಲ ಕನ್ನಡ ಕಾವ್ಯಗಳನ್ನು ರಚಿಸಿದ್ದಾರೆ. ತಾಯಿ ಯಶೋದೆ ಹೇಗೆ ತನ್ನ ಮಗನಾದ ಬಾಲಕೃಷ್ಣನನ್ನು ಪರಿಪರಿಯಿಂದ ಕೂಗಿರ ಬಹುದು, ತನ್ನ ತಾಯಿ ಹೃದಯದ ಪ್ರೀತಿಯನ್ನು ಹರಿಸಿರಬಹುದು ಎಂಬೆಲ್ಲ ಭಾವಗಳನ್ನು ತುಂಬಿ ಕೊಂಡು ಶ್ರೀಪಾದರಾಜರು ವಾತ್ಸಲ್ಯಭಾವದಿಂದ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಹಾಗೆಯೇ ಮಧುರ ಭಾವ, ಸಮರ್ಪಣಭಾವಗಳುಳ್ಳ ಕೀರ್ತನೆಗಳನ್ನೂ ಮಾಡಿದ್ದಾರೆ. ಒಮ್ಮೆ ದೇವರಲ್ಲಿ ದೈನ್ಯವಾಗಿ ನಡೆದು ಕೊಳ್ಳುವುದು, ಇನ್ನೊಮ್ಮೆ ದೇವರೊಡನೆ ಸರಸವಾಡು ವುದು ಮತ್ತೊಮ್ಮೆ ದೇವರನ್ನು ನಿಂದಿಸಿ ಸ್ತುತಿ ಮಾಡು ವುದು, ಇನ್ನೊಮ್ಮೆ ದೇವರ ಮಹಿಮಾತಿಶಯಗಳನ್ನು ವರ್ಣಿಸುವುದು – ಹೀಗೆ ಹತ್ತಾರು ರೀತಿ ತಮ್ಮ ಅಂತರಂಗ ಭಾವನೆಗಳನ್ನು ಶ್ರೀಪಾದರಾಜರು ತಮ್ಮ ಕೃತಿಗಳಲ್ಲಿ ತೋಡಿಕೊಂಡಿದ್ದಾರೆ. ಅನೇಕ ಉಗಾಭೋಗಗಳನ್ನು ಅವರು ರಚಿಸಿದರು. ಗೀತಗೋವಿಂದದ  ಶ್ಲೋಕಗಳನ್ನು ಸಂಗೀತ ರೂಪದಲ್ಲಿ ಕನ್ನಡದಲ್ಲಿ ವೃತ್ತನಾಮಗಳಂತೆ ಬರೆದರು. ಕಾಲಿಗೆ ಗೆಜ್ಜೆ ಕಟ್ಟಿ, ಪೂಜಾ ಸಮಯಗಳಲ್ಲಿ ಹಾಡಿಕೊಂಡು ನರ್ತಿಸುವ ಸಲುವಾಗಿಯೇ ಕೀರ್ತನೆಗಳನ್ನು ರಚಿಸಿದರು. ಕನ್ನಡ ದೇಶದಲ್ಲಿ ಗೆಜ್ಜೆ ಕಟ್ಟಿ ಹಾಡುತ್ತಾ ನರ್ತಿಸುವ ಸಂಪ್ರದಾಯ ಶ್ರೀಪಾದರಾಜರಿಂದಲೇ ಪ್ರಾರಂಭ ವಾಯಿತು. ಸಪ್ತತಾಳಗಳನ್ನು ಬಳಸಿಕೊಂಡು ಸುಳಾದಿ ಗಳನ್ನು ಮೊತ್ತಮೊದಲಿಗೆ ರಚಿಸಿದ ಕೀರ್ತಿಯೂ ಶ್ರೀಪಾದರಾಜರದೇ. ಹೀಗೆ ಹಲವು ಅಂಶಗಳಲ್ಲಿ ಅವರು ನಮ್ಮ ಕನ್ನಡ ದೇಶಕ್ಕೆ ಪ್ರಥಮ ಪುರುಷರಾಗಿದ್ದಾರೆ ಮತ್ತು ಪ್ರಾತಃಸ್ಮರಣೀಯರಾಗಿದ್ದಾರೆ.
ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳ ಬೇಕಾದರೆ ಒಂದೇ ಒಂದು ಮಾರ್ಗ. ಅದು ಸಂಗೀತ- ಗಾನ- ಇದರಿಂದ ಮಾತ್ರವೇ ದೇವರು ಸುಲಭವಾಗಿ ಒಲಿಯಲು ಸಾಧ್ಯ ಎಂದು ಶ್ರೀಪಾದರಾಜರು ನಂಬಿದ್ದರು.
ಗಾನದ ಪರಂಪರೆಯನ್ನೇ ಕರ್ನಾಟಕದಲ್ಲಿ ಪ್ರಾರಂಭ ಮಾಡಿದವರು ಶ್ರೀಪಾದರಾಜರು.
ಅವರ ಕೀರ್ತನೆಗಳು ಬರಿಯ ವೇದಾಂತವಲ್ಲ, ಕೇವಲ ಭಕ್ತಿರಸವೇ ಅಲ್ಲ, ಹೇಗೆ ಕಾವ್ಯಶಕ್ತಿಯಿಂದ ಕೂಡಿದೆ ಎನ್ನುವುದನ್ನು ಈ ಉದಾಹರಣೆಯಿಂದ ಕಾಣಬಹುದು:

ಭೂಮಿಯನ್ನು ಚಿನ್ನದ ತೊಟ್ಟಿಲು ಮಾಡಿ
ಸೋಮ ಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕು ||

ಭೂಮಿಯೇ ಒಂದು ಚಿನ್ನದ ತೊಟ್ಟಿಲಂತೆ; ಅದಕ್ಕೆ ಸೂರ್ಯ-ಚಂದ್ರರನ್ನೇ ಕಲಶವಾಗಿ ಮಾಡುವುದಂತೆ; ವೇದಗಳೆಂಬ ಜ್ಞಾನವನ್ನೇ ಸರಪಣಿಯಾಗಿ ಮಾಡುವು ದಂತೆ; ಆ ಮಹಾ ಆಕಾಶಕ್ಕೇ ಕೊಂಡಿಗಳನ್ನು ಹಾಕುವು ದಂತೆ – ಇದಕ್ಕೆ ಭೂಮಿಯೆಂಬ ಚಿನ್ನದ ತೊಟ್ಟಿಲನ್ನು ತೂಗಿ ಬಿಟ್ಟಾಗ ಚಿತ್ರ ಅದೆಷ್ಟು ಭವ್ಯ ಹಾಗೂ ಅರ್ಥವತ್ತಾದುದು ಎಂಬುದನ್ನು ನೋಡಿ.

ಮನಮುಟ್ಟುವ ಉಪದೇಶ
ಸುಲಭವಾದ ಕನ್ನಡದಲ್ಲಿ ನೆನಪಿಡಲು ಸುಲಭ ವಾಗುವಂತೆ ಸಂಗೀತದ ಸವಿ ಬೆರೆಸಿ ಜನಕ್ಕೆ ಮಾರ್ಗ ದರ್ಶನ ಮಾಡಿದರು ಶ್ರೀಪಾದರಾಜರು. ಮನುಷ್ಯ ಹುಟ್ಟಿದುದಕ್ಕೆ ತನ್ನ ಬಾಳನ್ನು ಸಾರ್ಥಕ ಮಾಡಿಕೊಳ್ಳ ಬೇಕು, ಜೀವನದಲ್ಲಿ ಯಾವುದು ನಿಜವಾಗಿ ಒಳ್ಳೆಯದು ಮತ್ತು ಮುಖ್ಯ, ಯಾವುದು ಆಕರ್ಷಕವಾಗಿ ಕಂಡರೂ ನಿಜವಾಗಿ ಕೆಟ್ಟದು ಮತ್ತು ಅಮುಖ್ಯ ಎಂಬುದನ್ನು ಒಂದು ಹಾಡಿನಲ್ಲಿ ಹೇಳಿದ್ದಾರೆ. ಬದುಕಿನಲ್ಲಿ ಏನನ್ನೂ ಮಾಡದೆ, ಹೆಂಡತಿ ಮಕ್ಕಳ ಸುಖವನ್ನೇ ಮುಖ್ಯ ಎಂದುಕೊಂಡು ದುಡಿದು ಬಾಳನ್ನು ಸವೆಸುವವರನ್ನು ವರ್ಣಿಸಿದ್ದಾರೆ.

ಕುರುಡ ನಾಯಿ ಸಂತೆಗೆ ಬಂತಂತೆ |
ಅದು ಏಕೆ ಬಂತೋ ||
ಖಂಡಸಕ್ಕರೆ ಹಿತವಲ್ಲಂತೆ ಖಂಡಾ ಎಲುಬು ಕಡಿಯಿತಂತೆ ||
ಹೆಂಡಿರುಮಕ್ಕಳ ನೆಚ್ಚಿತಂತ ಕೊಂಡು ಹೋಗುವಾದಾರಿಲ್ಲವಂತೆ ||
ನಾನಾಜನ್ಮವೆತ್ತಿತಂತೆ ಮಾನವನಾಗಿ ಪುಟ್ಟಿತಂತೆ |
ಕಾನನ ಕಾನನ ತಿರುಗಿತಂತ ತಾನು ತನ್ನ ಮರೆತಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆಯಿತಂತೆ |
ರಂಗವಿಠ್ಠಲನ ಮರೆತಿತಂತೆ ಭಂಗ ಬಹಳ ಪಟ್ಟಿತಂತೆ ||
(ಕಾನನ ಎಂದರೆ ಕಾಡು)
ಯಾರೂ ಯಾರಿಗೆ ಜೀವನದಲ್ಲಿ ಏನೇನು ಭೂಷಣ, ಒಳ್ಳೆಯದನ್ನು ಮಾಡುತ್ತದೆ, ಕೀರ್ತಿಯನ್ನು ತರುತ್ತದೆ ಎಂದು ‘ಭೂಷಣಕೆ ಭೂಷಣ ಇದು ಭೂಷಣ’ ಎಂಬ ಹಾಡಿನಲ್ಲಿ ಹೇಳಿದ್ದಾರೆ. ಅದರ ಕೆಲವು ಪಂಕ್ತಿಗಳು ಇವು :
ನಾಲಿಗೆಗೆ ಭೂಷಣ ನಾರಾಯಣ ನಾಮ |
ಕಾಲಿಗೆ ಭೂಷಣ ಹರಿಯಾತ್ರೆಯು ||
ದಾನವೇ ಭೂಷಣ ಇರುವ ಹಸ್ತಂಗಳಿಗೆ |
ಜ್ಞಾನವೇ ಭೂಷಣ ಮಾನವರಿಗೆ ||

ಶ್ರೀಪಾದರಾಜರು ತುಂಬ ತೊಂಬತ್ತೆಂಟು ವರ್ಷಗಳ ವರೆಗೆ ಬದುಕಿದ್ದರು. ಅವರು ಕಾಲವಾದದ್ದು – ಅಂದರೆ ವೃಂದಾವನ ಪ್ರವೇಶಮಾಡಿದ್ದು ೧೫೦೪ರ ಏಪ್ರಿಲ್ ೧೪ರಂದು. ಈಗಲೂ ಮುಳಬಾಗಲಿಗೆ  ಹೋದರೆ ಶ್ರೀಪಾದರಾಜರ ವೃಂದಾವನ ನರಸಿಂಹತೀರ್ಥದ ದಂಡೆಯಲ್ಲಿರುವುದು ಕಂಡು ಬರುತ್ತದೆ. ಅವರ ಹೆಸರಿನಲ್ಲಿ ಈಗಲೂ ವರ್ಷ ಕ್ಕೊಮ್ಮೆ ರಥೋತ್ಸವ ಜರಗುತ್ತದೆ. ಈ ಮಹಾತ್ಮರನ್ನು ಕನ್ನಡನಾಡು ಮರೆಯುವುದು ಸಾಧ್ಯವೇ ಇಲ್ಲ. ದಾಸ ಸಾಹಿತ್ಯವೆಂಬ ದಡಗಳಲ್ಲಿ ಸಾಹಿತ್ಯ ಸಂಗೀತಗಳನ್ನು ತುಂಬಿ ಭಕ್ತಿರಸವೆಂಬ ಪೂರ್ಣ ಪ್ರವಾಹವನ್ನೇ ಹರಿಸಲು ಕಾರಣರಾದವರು ಶ್ರೀಪಾದರಾಜರು.
ಅಗೋ, ಶ್ರೀ ವ್ಯಾಸತೀರ್ಥರು ಅವರಿಗೆ ನಮಿಸುತ್ತಿ ದ್ದಾರೆ. ಅವರ ಜೊತೆಗೆ ನಾವೂ ನಮಿಸೋಣ ಬನ್ನಿ :
ಸಿರಿಕೃಷ್ಣ ದಿವ್ಯಪಾದಾಬ್ಜ ಚಿಂತಾಲೋಲ
ವರ ಹೇಮವರ್ಣ ಮುನಿಪತಿಯ ಸುಕುಮಾರ
ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ
ಶರಣಜನ ಸುರಧೇನು ಭಕ್ತಮಂದಾರ.

ಶ್ರೀಪಾದರಾಜರ ಹಾಡುಗಳು

ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||
ಅಹಿ‌ಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||
ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ
ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||
ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು
ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||

 ++++++++

ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ||

+++++++++

ಆಡಲು ಪೋಗೊಣು ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||೧||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||೨||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ||೩||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||೪||

+++++++

( ನಾಟಿ ರಾಗ ಖಂಡಛಾಪು ತಾಳ)
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ವಣನಿಭ ಕಪೋಲಗಳಿಗೆ ಶರಣು ||೧||
ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು




*********ಮಾಹಿತಿ ಕೃಪೆ: ಸಂಪದ, ಕಣಜ, ವಿಕಿಪೀಡಿಯಾ**********







೧೯.ಸಿಂಗಿರಾಜ

ಸಿಂಗಿರಾಜ
ಈತನ ಕಾಲ: ಕ್ರಿ.ಶ.ಸು.೧೫೦೦, ವೀರಶೈವ ಕವಿ.
ಈತನು ವಾರ್ಧಕಷಟ್ಪದಿಯಲ್ಲಿ ‘ಅಮಲಬಸವಚಾರಿತ್ರ’ (ಸಿಂಗಿರಾಜಪುರಾಣ) ಎಂಬ ಕೃತಿ ರಚಿಸಿದ್ದಾನೆ.
ಈ ಕೃತಿಯು ಬಸವಣ್ಣನವರ ಚರಿತ್ರೆಯನ್ನು ಕುರಿತದ್ದಾಗಿದೆ ಮತ್ತು ಈ ಕೃತಿಯಲ್ಲಿ ಸಿಂಗಿರಾಜನು ಪುರಾಣಕ್ಕಿಂತ ವಾಸ್ತವಕ್ಕೆ ಹೆಚ್ಚು ಒತ್ತುಕೊಟ್ಟಿರುವಂತೆ ಕಂಡುಬರುತ್ತದೆ.

ಅಮಲಬಸವಚಾರಿತ್ರದ ವಿಶೇಷತೆಗಳು:
೧) ದೇವಾಲಯದ ರಂಗ ಮಂಟಪದಲ್ಲಿರುವ ನಂದಿಕೋಡುಗಳ ಮೂಲಕ ಶಿವಲಿಂಗವನ್ನು ನೋಡುವ ವಿಧಾನ ಸಿಂಗಿರಾಜ ಪುರಾಣ ಮತ್ತು ರಾಘವಾಂಕ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
೨) ಚೆನ್ನಬಸವಣ್ಣನವರ ತಂದೆಯ ಹೆಸರನ್ನು `ಅಮಲಬಸವ ಚಾರಿತ್ರ್ಯ' (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರು ಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.
೩) ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಈ ಕೃತಿಯಿಂದ ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ ರಲ್ಲಿ ರಚನೆಯಾದ ಸಿಂಗಿರಾಜನ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜನು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟನಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.  


******************* 

೧೮.ಶಿಶುಮಾಯಣ

ಶಿಶುಮಾಯಣ
ಕಾಲ: ಸು. ಕ್ರಿ.ಶ.೧೫೦೦ *
ಈತ ಜೈನಧರ್ಮೀಯ.
ಎರಡು ಕೃತಿಗಳನ್ನು ಬರೆದಿದ್ದಾನೆ. ೧) ‘ತ್ರಿಪುರ ದಹನ ಸಾಂಗತ್ಯ’, ೨) ‘ಅಂಜನಾಚರಿತ್ರೆ’

೧) ‘ತ್ರಿಪುರ ದಹನ ಸಾಂಗತ್ಯ’: ಇದು ಮುನ್ನೂರು ಪದ್ಯಗಳನ್ನೊಳಗೊಂಡಿರುವ ಚಿಕ್ಕ ಕೃತಿ. ಶೈವ ಸಂಪ್ರದಾಯದಲ್ಲಿ ಶಿವನ ಲೀಲೆಗಳಲ್ಲಿ ಕಂಡುಬರುವ ಶಿವನು ಮಾಡಿದ ತ್ರಿಪುರ ದಹನ ದ ಕಥೆಯಂತೆ ಇಲ್ಲಿ ಜೈನತತ್ವಕ್ಕನುಗುಗುಣವಾಗಿ ಜನನ-ಜರಾ-ಮರಣಗಳೆಂಬ ಮೂರು ಪುರಗಳನ್ನು ಆದೀಶ್ವರನು ಸುಟ್ಟ ವಿಷಯವನ್ನು ತೆಗೆದುಕೊಂಡು ಸಾಂಗತ್ಯದಲ್ಲಿ ಕೃತಿ ರಚಿಸಲಾಗಿದೆ.

೨) ‘ಅಂಜನಾಚರಿತ್ರೆ’:- ಇದು ೧೫ ಸಂಧಿಗಳಲ್ಲಿ ವಿಸ್ತಾರಗೊಂಡಿದ್ದು ೬೦೦೦ ಪದ್ಯಗಳನ್ನು ಹೊಂದಿರುವ ಬೃಹತ್ ಸಾಂಗತ್ಯ ಕಾವ್ಯವಾಗಿದೆ. ಇದಕ್ಕೆ ಆಕರ ರವಿಷೇಣನ ‘ಪದ್ಮಚರಿತ’ (ಜೈನರಾಮಾಯಣ). ‘ಪದ್ಮಚರಿತ’ ದಲ್ಲಿರುವ ‘ಅಂಜನಾಚರಿತ್ರೆ’ಯ ಭಾಗವನ್ನು ಮಾತ್ರ ತೆಗೆದುಕೊಂಡು ಶಿಶುಮಾಯಣನು ಬೃಹತ್ಕಾವ್ಯ ರಚಿಸಿದ್ದಾನೆ.

      ಎರಡೂ ಗ್ರಂಥಗಳ ಶೈಲಿ ಸರಳವಾಗಿದೆ. ಶಿಶುಮಾಯಣನು ತಾನು ಮಹಾನ್ ಪಂಡಿತನಲ್ಲವೆಂದೂ ಲಕ್ಷಣಜ್ಞಾನವಿಲ್ಲದವನೆಂದೂ ಹೇಳಿಕೊಂಡಿದ್ದಾನೆ. ("ಅಕ್ಷರ ಭೇದವನರಿಯದೆನಗೆ ಮತ್ತೆ ಲಕ್ಷಣಗಳು ಗೋಚರವೇ", "ಕವಿತೆಯ ಮಾರ್ಗದ ಸುವಿಚಾರಗಳ ವಿವರಿಪೊಡೇನೆಂದರಿಯೆ", "ಲಕ್ಷಣಮಿಲ್ಲದೊಡೀ ಕೃತಿಗೆ ಸಲ್ಲಕ್ಷಣಯುತೆ ಸತಿಯರೊಳು ಲಕ್ಷ್ಯವೆನಿಸುವಂಜನಾಚರಿತವನು ವಿಚಕ್ಷಣ ರೆಯ್ದೆ ಕೇಳುವುದು")

[* ಈತನ ಕಾಲವನ್ನು ೧೨೩೩ ಎಂದು ಕವಿಚರಿತಕಾರರು ಅನುಮಾನಿಸಿದ್ದರು. ಆ ಕಾರಣದಿಂದಾಗಿ ಈತನೇ ಮೊದಲ ಸಾಂಗತ್ಯಕಾರನೆಂದು ಹೇಳಲಾಗುತ್ತಿತ್ತು. ಆದರೆ ಆತನ ಕಾಲವನ್ನು ಕ್ರಿ.ಶ.ಸು.೧೫೦೦ ಕ್ಕೆ ನಿಗಧಿಪಡಿಸಿದಮೇಲೆ.  ಕ್ರಿ.ಶ.ಸು.೧೪೦೦ ರವನಾದ ದೇಪರಾಜನೇ ಮೊದಲ ಸಾಂಗತ್ಯಕಾರನೆಂದು ತೀರ್ಮಾನವಾಯಿತು]


**********