ನನ್ನ ಪುಟಗಳು

13 ಸೆಪ್ಟೆಂಬರ್ 2019

ಮರೆತ ಮಾತನು ಮರಳಿ ನುಡಿಯದಿರು


ಮರೆತ ಮಾತನು ಮರಳಿ ನುಡಿಯದಿರು
ಅಂತರಂಗದ ದುಃಖವ ಅರಳಿಸಿ ನಗಿಸಿ ನೋಯಿಸಿದಿರು
ಸುಳಿಯೊಳಗೆ  ಸಿಲುಕಿರುವ ಮನವಿದು
ಮನದಿ ಮರೆತ ರಸರಹಿತ ಕ್ಷಣಗಳ
ಕೆದಕಿ ಮನ ನೋಯಿಸದಿರು

ಹಾದಿ ಬದಿಯ ‌ಅಂಗಳವು ಅಣಕಿಸುತಿವೆ
ನೊಂದ ಕ್ಷಣವ  ಮರೆತು ನಗುತಿವೆ
ನೆನಪಿನ ಬೆಂಕಿ ಮಳೆ‌ ‌ಸುರಿಸಿ ಮನ‌ ನೊಯಿಸದಿರು

ನಿನಗಾಗಿ ಕಿತ್ತ ಮುಳ್ಳಿನ ಗುಲಾಬಿ ಗಿಡದಲಿ
ಹೊಸ ಹೂ ಚಿಗುರಿದೆ ‌ಹೊಸ ಬದುಕು ಕಟ್ಟಿ
ಹಸಿರ ವನದೊಳಗೆ  ಮೆರೆಯುವಾಗ
ಹಳೆಯ ಕೆಸರ ನೆನಪಿಸಿ ಮನ ನೊಯಿಸದಿರು

ನಿನಗಾಗಿ ಬರೆದ ಓಲೆಗಳೆಲ್ಲಮೂಲೆಯ ಗೆದ್ದಲುಗಳ
ಹಸಿವಿನ‌ ದಾಹ ತಣಿಸುವಾಗ ‌ಮತ್ತದೆ ಹುಸಿ ನೆಪದಲಿ
ಹೊಸ ನೆನಪುಗಳ ಕೆದಕಿ ಮನ ನೊಯಿಸದಿರು

ನಿನಗಾಗಿ ಕಂಡಿದ್ದ  ಬಿರು ಕನಸುಗಳೆಲ್ಲ‌
ಬಸಿರಿನಲಿ ನಂಜಾಗಿವೆ ನಿನ್ನ ನೆನಪುಗಳ
ಮರೆತು  ಹೊಸ ಭರವಸೆಗಳು
ಮೊಳೆಯುವಾಗ ‌ಬರದಿಂದ ಬತ್ತಿರುವ
ಬಿರು ಬಯಕೆಗಳ ಕರೆದು ಮನ ನೊಯಿಸದಿರು...
- DIVAKARA. D
  Kothanahalli, 
  Maddur Taluk, 
  Mandya District 571419

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ