ನನ್ನ ಪುಟಗಳು

07 ಜನವರಿ 2021

ಪದ್ಯ-3 ಹಲಗಲಿಬೇಡರು - ಪ್ರಶ್ನೋತ್ತರ ಓದಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ

ಹಲಗಲಿ ಬೇಡರು ನೋಟ್ಸ್     Download 


******

************



10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ವ್ಯಾಕರಣಾಂಶಗಳು

ಕನ್ನಡದ ದೇಶ್ಯಪದಗಳು
ಅಂಗಾಂಗಗಳು : ಕೈ, ತಲೆ, ಹೊಟ್ಟೆ, ಕಾಲು, ಬೆನ್ನು ಇತ್ಯಾದಿ.
ಸಂಬಂಧವಾಚಕಗಳು : ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಮಾವ, ಬಾವ, ಅಣ್ಣ, ತಂಗಿ, ತಮ್ಮ ಇತ್ಯಾದಿ.
ಪ್ರಾಣಿಗಳು : ಇಲಿ, ಹಾವು, ಎತ್ತು, ಎಮ್ಮೆ, ದನ, ಕೋಳಿ ಇತ್ಯಾದಿ.
ಪದಾರ್ಥಗಳು : ಬಾಗಿಲು, ಉಪ್ಪು, ಹಾಲು, ಚಿಲಕ ಇತ್ಯಾದಿ.
ಸರ್ವನಾಮಗಳು : ನಾನು, ಅವನು, ನೀನು, ಅವಳು, ಅದು, ಅವು, ಅವರು ಇತ್ಯಾದಿ.
ಸಂಖ್ಯಾವಾಚಕಗಳು : ಒಂದರಿಂದ ಒಂಬೈನೂರತೊಂಬತ್ತೊಂಬತ್ತರವರೆಗಿನ ಸಂಖ್ಯೆಗಳು.
ಧಾತುಗಳು : ತಿನ್ನು, ಹೋಗು, ಕೇಳು,
ಬಿಡು ಇತ್ಯಾದಿ.
 
ಅನ್ಯದೇಶ್ಯ ಪದಗಳು
ಸಂಸ್ಕೃತವನ್ನು ಹೊರತುಪಡಿಸಿ ಇತರ ಭಾ?ಗಳಿಂದ ಕನ್ನಡ ಭಾ?ಗೆ ಬಂದಿರುವ ಪದಗಳನ್ನು ಅನ್ಯದೇಶ್ಯ ಪದಗಳು ಎಂದು ಕರೆಯಲಾಗಿದೆ. 

ಗ್ರೀಕ್ ಮತ್ತು ರೋಮನ್ ಭಾಷೆಗಳಿಂದ - ದಮ್ಮಡಿ, ದಮಡಿ, ದಮ್ಮು, ದೀನಾರ ಗದ್ಯಾಣ-ಇತ್ಯಾದಿ.
ಫಾರ್ಸಿಯಿಂದ - ಅಬಕಾರಿ, ರಸ್ತೆ, ದವಾಖಾನೆ, ಚೌಕಾಷಿ, ಅಜಮಾಯಿಸಿ, ಆಮದು, ದಲ್ಲಾಳಿ - ಇತ್ಯಾದಿ
ಅರಬ್ಬೀಯಿಂದ - ಅಮಾನತು, ಅಸಲು, ಇನಾಮು, ಕಾಯ್ದೆ, ಗಲೀಜು, ತಕರಾರು, ತರಬೇತು, ನಕಲಿ ಇತ್ಯಾದಿ
ಪೋರ್ಚ್‌ಗೀಸ್‌ನಿಂದ - ಮೇಜು, ತಂಬಾಕು, ಅನಾನಸು, ಸಾಬೂನು, ಚೊಂಬು, ಇಸ್ತ್ರಿ, ರಸೀದಿ - ಇತ್ಯಾದಿ.
ಉರ್ದುವಿನಿಂದ - ಕಿಮ್ಮತ್ತು, ತಾರೀಕು, ತಾಲೂಕು, ಅಹವಾಲು, ಇಲಾಖೆ, ದರ್ಜೆ, ಬಂದೂಕು, ರುಜು, ಶುರು, ಶಾಮೀಲು - ಇತ್ಯಾದಿ.
ಹಿಂದೂಸ್ಥಾನಿ - ಅರ್ಜಿ, ಕಚೇರಿ, ಕಾರ್ಖಾನೆ, ಸಲಾಮು, ದರ್ಬಾರು, ಕುರ್ಚಿ, ಕಾಗದ, ಹುಕುಂ - ಇತ್ಯಾದಿ.
ಇಂಗ್ಲಿಷ್‌ನಿಂದ - ಬಸ್ಸು, ಕಾರು, ಕಾಲೇಜು, ಲೈಟು, ಪೆನ್ನು - ಇತ್ಯಾದಿ.

**********

ತತ್ಸಮ-ತದ್ಭವ

ಸಂಸ್ಕೃತದಿಂದ ಕನ್ನಡಕ್ಕೆ ಸಾಕ? ಪದಗಳು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದ ಪದಗಳಲ್ಲಿ ಕೆಲವು ಅಲ್ಪಸ್ವಲ್ಪ ಬದಲಾವಣೆಗೊಂಡು ಬಂದರೆ ಇನ್ನು ಕೆಲವು ಪೂರ್ತಿ ಬದಲಾವಣೆಗೊಂಡು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದಿರುವ ಪದಗಳನ್ನು ತತ್ಸಮ-ತದ್ಭವಗಳೆಂದು ಕರೆಯುವ ರೂಢಿಯಿದೆ.

ತತ್ಸಮಗಳು : ಸಂಸ್ಕೃತದಿಂದ ಬರುವಾಗ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಪದಗಳನ್ನು ’ತತ್ಸಮ’ಗಳೆಂದು ಕರೆಯುತ್ತಾರೆ. ’ತತ್’ ಎಂದರೆ ’ಅದಕ್ಕೆ’ (ಸಂಸ್ಕೃತಕ್ಕೆ) ’ಸಮ’ ಎಂದರೆ ’ಸಮಾನ’ ಎಂದರ್ಥ. ಅಂದರೆ ಸಂಸ್ಕೃತಕ್ಕೆ ಸಮಾನವಾದದ್ದು ಎಂದರ್ಥ. ತದ್ಭವಗಳ ಸಂಸ್ಕೃತ ರೂಪವನ್ನೂ ತತ್ಸಮ ಎಂದು ಕರೆಯುತ್ತಾರೆ.

ಉದಾ : ರಾಮ, ವಸಂತ, ಸೋಮ, ಚಂದ್ರ, ಗ್ರಹ, ಸ್ತ್ರೀ, ಶ್ರೀ, ಭುವನ, ಶ್ರುತಿ, ಕಾವ್ಯ, ಪಶು – ಇತ್ಯಾದಿ.

ತದ್ಭವಗಳು : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲೀ, ಪೂರ್ಣ ವಿಕಾರವನ್ನಾಗಲೀ ಹೊಂದಿ ಬಂದಿರುವ ಪದಗಳನ್ನು ’ತದ್ಭವ’ ಎಂದು ಕರೆಯುತ್ತಾರೆ. ’ತತ್’ ಎಂದರೆ ಅದರಿಂದ, ಎಂದರೆ ಸಂಸ್ಕೃತದಿಂದ ’ಭವ’ ಎಂದರೆ ಹುಟ್ಟಿದ್ದು ಅಂದರೆ ಸಂಸ್ಕೃತದಿಂದ ಹುಟ್ಟಿದ್ದು ಎಂದರ್ಥ.

ಅಲ್ಪಸ್ವಲ್ಪ ಬದಲಾವಣೆಗೊಂಡ ತದ್ಭವರೂಪಗಳು : ಶಶಿ-ಸಸಿ, ಶಿರ-ಸಿರ, ಕಲಶ-ಕಳಸ, ಅಂಕುಶ- ಅಂಕುಸ, ?-ವರುಸ ಇತ್ಯಾದಿ

ಪೂರ್ಣ ವ್ಯತ್ಯಾಸ ಹೊಂದಿದ ತದ್ಭವರೂಪಗಳು : ದ್ಯೂತ-ಜೂಜು, ವಂಧ್ಯಾ-ಬಂಜೆ, ವಿದ್ಯಾಧರ- ಬಿಜ್ಜೋದರ, ವೈಶಾಖ-ಬೇಸಗೆ, ಕುಠಾರ-ಕೊಡಲಿ, ಪಾದುಕಾ-ಹಾವುಗೆ, ಅರ್ಕ-ಎಕ್ಕ ಇತ್ಯಾದಿ.

*************

ವ್ಯಾಕರಣಾಂಶಗಳ ಹೆಚ್ಚುವರಿ ಪ್ರಶ್ನೆಗಳು

ಪ್ರತಿ ಪ್ರಶ್ನೆಗೂ ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿರಿ.
೧. ’ವಿಲಾತಿ’ ಪದದ ಸಮಾರ್ಥಕ ಪದ :
  ಎ) ಆಯುಧ   ಬಿ) ವಿಹಾರ   ಸಿ) ವಿಲಂತಿ  ಡಿ) ವಿಲಾಯಿತಿ.
೨. ’ ಸಕ್ಕರೆ ’ ಪದದ ತದ್ಭವರೂಪ :  
  ಎ) ಸಂಕರೆ  ಬಿ) ಶರ್ಕರಾ   ಸಿ) ಶಬ್ದ  ಡಿ) ಸಂಬಂಧ
೩. ’ ಚಟೇಕಾರ ’ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ : 
  ಎ) ಕೃದಂತನಾಮ   ಬಿ) ಅವ್ಯಯ  ಸಿ) ನಾಮಪದ   ಡಿ) ತದ್ಧಿತಾಂತನಾಮ.
೪. ’ಮಂಗಳಸೂತ್ರ ’ - ಪದವು ಈ ಸಮಾಸಕ್ಕೆ ಉದಾಹರಣೆ : 
  ಎ) ದ್ವಿಗುಸಮಾಸ  ಬಿ) ಅಂಶಿಸಮಾಸ    ಸಿ) ತತ್ಪುರುಷಸಮಾಸ  ಡಿ) ದ್ವಂದ್ವಸಮಾಸ
೫. ’ ಗುಡದಾಗ ’ ಪದದ ಗ್ರಾಂಥಿಕ ರೂಪ : 
  ಎ) ಗುಡ್ಡದಲ್ಲಿ   ಬಿ) ಗುಡ್ಡದಮೇಲೆ    ಸಿ) ಗುಡ್ಡದೊಳಗೆ   ಡಿ) ಗುಡ್ಡದಕೆಳಗೆ
೬. ’ ನಡುರಾತ್ರಿ ’ ಪದವು ಈ ಸಮಾಸವಾಗಿದೆ :      
  ಎ) ಗಮಕಸಮಾಸ     ಬಿ) ಅಂಶಿಸಮಾಸ  ಸಿ) ತತ್ಪುರುಷಸಮಾಸ   ಡಿ) ಕರ್ಮಧಾರೆಯಸಮಾಸ 
೭. ’ಕಬುಲ’ ಪದದ ಅರ್ಥ : 
   ಎ) ಕಪ್ಪಕಾಣಿಕೆ  ಬಿ) ಅನುಮತಿ  ಸಿ) ಪಿತೂರಿ  ಡಿ) ಸೈನ್ಯ
೮. ’ವಿದ್ಯಾಧರ ’ ಪದದ ತದ್ಭವ ರೂಪ :
   ಎ) ವಿದ್ಯಾವಂತ  ಬಿ) ಬುದ್ಧಿವಂತ  ಸಿ) ಬಿಜ್ಜೋದರ  ಡಿ) ವಿದ್ಯೆಹೀನ
೯. ’ಅಂಕುಶ’ ಪದದ ತತ್ಸಮ ರೂಪವಿದು : 
   ಎ) ಅಂಕುಸ  ಬಿ) ಅಂಕಶ  ಸಿ) ಶೂಲ   ಡಿ) ಬರ್ಜಿ
೧೦. ’ ದಮ್ಮಡಿ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
   ಎ) ಗ್ರೀಕ್ ಮತ್ತು ರೋಮನ್ ಬಿ) ಉರ್ದು ಸಿ) ಹಿಂದೂಸ್ಥಾನಿ  ಡಿ) ಪರ್ಷಿಯನ್ 
೧೧. ’ ಅಬಕಾರಿ ’ ಪದವು ಈ ಭಾಷೆಯ ಪದವಾಗಿದೆ : 
   ಎ) ಹಿಂದೂಸ್ಥಾನಿ  ಬಿ) ಫಾರ್ಸಿ  ಸಿ) ಪೋರ್ಚಗೀಸ್  ಡಿ) ಅರಬ್ಬೀ 
೧೨. ’ ಹುಕುಂ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ : 
   ಎ) ಇಂಗ್ಲೀಷ್  ಬಿ) ಪರ್ಷಿಯನ್   ಸಿ) ಹಿಂದೂಸ್ಥಾನಿ   ಡಿ) ಉರ್ದು
೧೩. ’ ಬಂದೂಕು ’ ಪದವು ಈ ಭಾಷೆಯ ಶಬ್ದವಾಗಿದೆ : 
   ಎ) ಉರ್ದು   ಬಿ) ಪರ್ಷಿಯನ್  ಸಿ) ಅರಬ್ಬೀ    ಡಿ) ಹಿಂದೂಸ್ಥಾನಿ
 
[ಉತ್ತರಗಳು :  ೧. ಡಿ.ವಿಲಾಯಿತಿ  ೨. ಬಿ. ಶರ್ಕರಾ   ೩. ಡಿ. ತದ್ಧಿತಾಂತನಾಮ   ೪. ಸಿ. ತತ್ಪುರುಸಮಾಸ  ೫. ಎ. ಗುಡ್ಡದಲ್ಲಿ  ೬. ಬಿ.ಅಂಶಿಸಮಾಸ  ೭. ಬಿ.ಅನುಮತಿ  ೮. ಸಿ. ಬಿಜ್ಜೋದರ   ೯. ಎ.ಅಂಕುಸ  ೧೦. ಗ್ರೀಕ್ ಮತ್ತು ರೋಮನ್  ೧. ಬಿ. ಫಾರ್ಸಿ  ೧೨. ಸಿ) ಹಿಂದೂಸ್ಥಾನಿ    ೧೩. ಎ. ಉರ್ದು ]

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ : 
೧. ನಾನು, ನೀನು   : ಸರ್ವನಾಮಗಳು : :  ತಿನ್ನು - ಹೋಗು  : ______
೨. ದರ್ಬಾರು       : ಹಿಂದೂಸ್ಥಾನಿ  : :  ಅನಾನಸು    : ______
೩. ದೀನಾರ        : ಗ್ರೀಕ್      : :  ಕಾಲೇಜು    : _______
೪. ಕಲಶ          : ಕಳಸ       : :  ಶಿರ    : ______
೫. ಪಾದುಕಾ       : ಹಾವುಗೆ      : :  ವೈಶಾಖ   : ______
೬. ಕಳುವಾರೆ       : ಕಳುಹಿಸಿದ್ದಾರೆ  : :  ಇಸವಾಸ  : ______
೭. ಹತಾರ         : ದೇಶಿಯ ಪದ  : :  ಸಾಹೇಬ   : ______
೮. ಮುಂಗೈ        : ಅಂಶಿಸಮಾಸ  : :  ಮೋಸಮಾಡು  : ______
೯. ಕಾರಕೂನ       : ಗುಮಸ್ತ      : :  ಅಗಸಿ   : ______
     
  [ಉತ್ತರಗಳು  : ೧. ಧಾತುಗಳು  ೨. ಪೋರ್ಚುಗೀಸ್  ೩. ಇಂಗ್ಲೀಷ್  ೪. ಸಿರ   ೫. ಬೇಸಗೆ  ೬. ವಿಶ್ವಾಸ  ೭. ಅನ್ಯದೇಶಿಯಪದ   ೮. ಕ್ರಿಯಾಸಮಾಸ   ೯. ಹೆಬ್ಬಾಗಿಲು ]

ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ
೧. ಹಿಂಗೆ          - ಹೀಗೆ
೨. ಮ್ಯಾಗ        - ಮೇಲೆ
೩. ಕಳಿವ್ಯಾರೆ     - ಕಳುಹಿಸಿದ್ದಾರೆ.
೪. ಇಲ್ಲದ್ಹಂಗ     - ಇಲ್ಲದ ಹಾಗೆ
೫. ಇಸವಾಸ     - ವಿಶ್ವಾಸ 
೬. ಸಕ್ಕಾರಿ       - ಸಕ್ಕರೆ
೭. ಕುಂಪಣಿ       - ಕಂಪನಿ
೮. ಹೋಯ್ತ      - ಹೋಯಿತು.
೯. ಸಿಡಿದ್ಹಾಂಗ   - ಸಿಡಿದ ಹಾಗೆ.
೧೦. ಮಾಡ್ಯಾರೊ - ಮಾಡಿದರು
೧೧. ಗುಡದಾಗ   - ಗುಡ್ಡದಲ್ಲಿ
೧೨. ಬ್ಯಾಡಿರಿ   - ಬೇಡಿರಿ.
ಸಮಾಸಪದಗಳು :
೧. ಮುಂಗೈ     --  ಕೈಯ  + ಮುಂದು = ಅಂಶಿಸಮಾಸ.
೨. ನಡುರಾತ್ರಿ   --  ರಾತ್ರಿಯ + ನಡು  = ಅಂಶಿಸಮಾಸ.
೩. ಮುಂಗಾರು   --  ಕಾರಿನ + ಮುಂದು = ಅಂಶಿಸಮಾಸ.
೪. ಮಂಗಳಸೂತ್ರ  --  ಮಂಗಳದ + ಸೂತ್ರ = ತತ್ಪರುಷಸಮಾಸ.
೫. ಬುದ್ಧಿಮಾತು  --   ಬುದ್ಧಿಯ + ಮಾತು = ತತ್ಪುರಷಸಮಾಸ
೬. ಮೋಸಮಾಡು  --  ಮೋಸವನ್ನು + ಮಾಡು = ಕ್ರಿಯಾಸಮಾಸ.
೭. ಬೆನ್ಹತ್ತು      --   ಬೆನ್ನನ್ನು + ಹತ್ತು = ಕ್ರಿಯಾಸಮಾಸ. 
೮. ಐನೂರಮಂದಿ  --   ಐದುನೂರು + ಮಂದಿ = ದ್ವಿಗುಸಮಾಸ
೯. ನಾಲ್ಕುಮಂದಿ   --   ನಾಲ್ಕು + ಮಂದಿ = ದ್ವಿಗುಸಮಾಸ 
೧೦. ಹನುಮಭೀಮರಾಮ --  ಹನುಮನೂ + ಭೀಮನೂ + ರಾಮನೂ = ದ್ವಂದ್ವಸಮಾಸ.  

ತತ್ಸಮ - ತದ್ಭವ                                
೧. ದುಃಖ - ದುಗುಡ (ದುಕ್ಕ)
೨. ಸಕ್ಕರೆ  - ಶರ್ಕರಾ
೩. ರಕ್ತ  - ರಕುತ

ತದ್ಧಿತಾಂತ ನಾಮ -- ಚಟೇಕಾರ

******
******

************

10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಭಾಷಾಭ್ಯಾಸ

೧. ಪದಗಳನ್ನು ವಿಗ್ರಹಿಸಿ ಸಮಾಸ ಹೆಸರಿಸಿ.
ಮುಂಗೈ = ಕೈಯ + ಮುಂದು = ಅಂಶಿಸಮಾಸ
ನಡು ರಾತ್ರಿ = ರಾತ್ರಿಯ +ನಡುವೆ = ಅಂಶಿ ಸಮಾಸ
ಹನುಮ ಭೀಮರಾಯ = ಹನುಮನೂ + ಭೀಮನೂ + ರಾಮನೂ = ದ್ವಂದ್ವ ಸಮಾಸ
ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ

೨. ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ.
ಹೀಂಗ-ಹೀಗೆ,
ಮ್ಯಾಗ-ಮೇಲೆ,
ಕಳುವ್ಯಾರೆ-ಕಳಿಸಿದರು,
ಇಲ್ಲದಂಗ-ಇಲ್ಲದ ಹಾಗೆ,
ಇಸವಾಸ-ವಿಶ್ವಾಸ,
ಸಕ್ಕಾರಿ-ಸಕ್ಕರೆ.

೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ”ಒಳಗಿನ ಮಂದಿ ಗುಂಡು ಹೊಡೆಸಿದರೊ ಮುಂಗಾರಿ ಸಿಡಿಲು ಸಿಡಿದಾಂಗ ”.
    ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು
    ಉಪಮಾನ : ಮುಂಗಾರಿನ ಸಿಡಿಲು
    ಉಪಮಾವಾಚಕ : ಹಾಂಗ (ಹಾಗೆ)
    ಸಮಾನಧರ್ಮ : ಸಿಡಿಯುವುದು
    ಅಲಂಕಾರ : ಉಪಮಾಲಂಕಾರ
    ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

ಆ) ”ಸಿಡಿಲ ಸಿಡಿದಾಂಗ ಗುಂಡು ಸುರಿದಾವ ”.
    ಉಪಮೇಯ _ ಸುರಿದ ಗುಂಡು (ಗುಂಡು ಸುರಿಯುವುದು)
    ಉಪಮಾನ - ಸಿಡಿದ ಸಿಡಿಲು (ಸಿಡಿಲು ಸಿಡಿಯುವುದು)
    ಉಪಮಾವಾಚಕ - ಹಾಂಗ (ಹಾಗೆ)
    ಸಮಾನ ಧರ್ಮ - ಸಿಡಿಯುವುದು
    ಅಲಂಕಾರ - ಉಪಮಾಲಂಕಾರ
    ಸಮನ್ವಯ - ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

೫. ದೇಶ್ಯ ಅನ್ಯ ದೇಶ್ಯಪದಗಳನ್ನು ಗುರುತಿಸಿ.
ದೇಶ್ಯ - ಹೊತ್ತು, ಬಂಟರು, ಮುಂಗೈ, ಮುಂಗಾರು
ಅನ್ಯದೇಶ್ಯ - ಹತಾರ, ಮಸಲತ್ತು, ಹುಕುಮ, ಸಾಹೇಬ, ಕಾರಕೂನ, ಸಿಪಾಯಿ, ಕಬುಲ

*********



**************



10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಸಾರಾಂಶ

 

ಹಲಗಲಿ ಬೇಡರು (10 ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯಪಾಠ) ಲಾವಣಿ ಸಾರಾಂಶ
     ಪ್ರಸ್ತುತ ಲಾವಣಿಯಲ್ಲಿ ಹಲಗಲಿಯ ಬೇಡರು ನಡೆಸಿದ ಬಂಡಾಯದ ಪ್ರಸ್ತಾಪವೇ ಪ್ರಮುಖ ಅಂಶವಾಗಿರುವುದು. ಲಾವಣಿಕಾರ ಬೇಡರನ್ನು ಕತ್ತಿ ಹಿಡಿಯುವ ಜನ ಎಂದು ಕರೆಯಲು ಕಾರಣ ಅವರಲ್ಲಿನ ಶೂರತೆ ಮತ್ತು ಕತ್ತಿ ಹಿಡಿಯುವ ಕಾಯಕ ಅವರಿಗೆ ಅನಿವಾರ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕತ್ತಿ ಶೂರರಾದ ಹಲಗಲಿ ಬೇಡರಿಗೆ ಕತ್ತಿ ಹಿಡಿಯುವ ಸಮಯ ಸನ್ನಿಹಿತವಾಯಿತು. ಆದರೆ ಬೇಡರ ಬಂಡಾಯವು ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಯಿತು (ಮುಟ್ಟಲಿಲ್ಲ ದಡಕ). 
        ಬ್ರಿಟಿಷ್ ಸರಕಾರವು ೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯ ನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದಿತು. ಅದರಂತೆ ಎಲ್ಲ ಭಾರತೀಯರನ್ನು ಒಪ್ಪಿಸಿ ಅಥವಾ ಬೆದರಿಸಿಯಾದರೂ ಅವರ ಬಳಿಯಿರುವ ಆಯುಧ (ಹತಾರ)ಗಳನ್ನು ಕಸಿದು ಕೊಳ್ಳಬೇಕೆಂದು ಕಂಪನಿಯ ಸರ್ಕಾರ ಮುಂದಾದಾಗ ಹಲಗಲಿ ಬೇಡರು ಮುಧೋಳದ ಬಳಿ ಸೇರಿದರು. ಪೂಜೇರಿ ಹನುಮ, ಬೇಡರ ಬಾಲ, ಜಡಗರಾಮ ಮೊದಲಾದವರು ಸೇರಿ ನಾವು ನಾಲ್ವರೂ ಜೊತೆಗಿರೋಣ ಯಾವುದೇ ಕಾರಣಕ್ಕೂ ನಮ್ಮ ಬಳಿಯಿರುವ ಆಯುಧಗಳನ್ನು ಕೊಡಬಾರದು ಹತಾರಗಳು (ಆಯುಧಗಳು) ಹೋದರೆ ನಮ್ಮ ಜೀವವೇ ಹೋದಂತೆ ಎಂದು ತೀರ್ಮಾನಿಸಿದರು.
ಬೇಡರೆಲ್ಲರೂ ಕಲೆತು ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ನೀವು ಮುಂದಾಗಿ ಯುದ್ಧ ಮಾಡಿರಿ; ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ತಮ್ಮ ಮುಖಂಡರಿಗೆ ವಚನ ನೀಡಿದರು. ಕಾಯಿದೆಯನ್ನು ಜಾರಿಗೊಳಿಸಲು ಅಂದರೆ ಆಯುಧ ಕೇಳಲು ಬ್ರಿಟಿಷ್ ಅಧಿಕಾರಿ (ಸೆಟನ್ ಕರ್) ಪರವಾಗಿ ಬಂದ ಕಾರಭಾರಿಯ ಕೆನ್ನೆಗೆ ಹೊಡೆದರು. ಇದರಿಂದ ದುಃಖಿತನಾದ ಕಾರಬಾರಿ(ಕಾರಕೂನ) ಈ ವಿಷಯವನ್ನು ತನ್ನ ಸಾಹೇಬನಿಗೆ ತಿಳಿಸಿದನು. ಸಾಹೇಬ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತನ್ನ ಕೆಲವು ಜನರನ್ನು (ಅಶ್ವದಳ) ಹಲಗಲಿಗೆ ಕಳಿಸಿದಾಗ ಮುಂಗಾರಿನ ಸಿಡಿಲು ಸಿಡಿದ ಹಾಗೆ ಊರೊಳಗೆಲ್ಲ ಗುಂಡಿನ ಮಳೆಗರೆಯುತ್ತಾರೆ. (ಬೇಡರು ಆಯುಧ ಕಸಿಯಲು ಬಂದವರ ಮೇಲೆ ಗುಂಡಿನ ಮಳೆ ಸುರಿಸಿದರು) ಬಂದವರು ಬೇಡರ ಧಾಳಿಗೆ ತುತ್ತಾಗಿ ಗಾಯಗೊಂಡು ದಂಗಾಗಿ ಹಿಮ್ಮೆಟ್ಟುತ್ತಾರೆ.
ಸಾಹೇಬ ವಿಧಿಯಿಲ್ಲದೆ ತನ್ನ ಮೇಲಧಿಕಾರಿಗೆ ಕಾಗದ ಬರೆದು ದಂಡನ್ನು ಕಳಿಸುವಂತೆ ಕೋರಿದಾಗ ತರಾತುರಿಯಿಂದ ಹಲಗಲಿಗೆ ದಂಡು ಆಗಮಿಸಿತು. ಬೇಡರನ್ನು ಕಂಡ ಕಂಡಲ್ಲಿ ಹತ್ಯೆಗೈಯ್ಯಲಾಯಿತು. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಸಾಯಿಸಲಾಯಿತು ಚಟೆಕಾರ 'ಜಾಯಿತ ಸಾಹೇಬ' (ಜಿ.ಬಿ.ಸೆಟನ್ ಕರ್ದಕ್ಷಿಣ ಮಹಾರಾಷ್ಟ್ರದ ರಾಜಕೀಯ ಪ್ರತಿನಿಧಿ ಲೆಫ್ಟಿನೆಂಟ್ ಕರ್ನಲ್) ಕಾವಲು ಕಾಯುತ್ತ ಬೇಡರ ಬಿಡಾರಗಳಿಗೆ ನುಗ್ಗಿ ಬೇಡರಿಗೆ ತೊಂದರೆ ನೀಡಿದನು. ಊರಿನ ಮುಖ್ಯ ದ್ವಾರಕ್ಕೆ ಬಂದು ಹೆಬಲಕ್ ಸಾಹೇಬ (ವಿಲಿಯಂ ಹೆನ್ರಿ ಹೆವಲಾಕ್) ಬೇಡರಿಗೆ ಅನ್ಯಥಾ ಸಾಯದೇ ಆಯುಧಗಳನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಬೇಡರ ಹನುಮನಿಗೆ ಹೆಬಲಕ್ ಸಾಹೇಬನ ಮಾತಿನಲ್ಲಿ ನಂಬಿಕೆ ಮೂಡುವುದಿಲ್ಲ. ಬ್ರಿಟಿಷರು ಘಾತಕರುವಿಶ್ವಾಸಘಾತ ಮಾಡಿರುವರು ಇವರ ಮೇಲೆ ನಮಗೆ ನಂಬಿಗೆ ಇಲ್ಲ. ಇವರು ಪಿತೂರಿ ಮಾಡಿ ಮೋಸದಿಂದ ನಮ್ಮ ದೇಶ ಗೆಲ್ಲುವವರುಮುಂದೆ ನಮಗೆ ಘೋರ ವಿಪತ್ತು ಇವರಿಂದ ಕಾದಿದೆ ಎಂದು ಬಗೆದ ಜಡಗ ಬುದ್ಧಿವಾದ ಹೇಳಲು ಬಂದ ಅಧಿಕಾರಿ(ಹೆಬಲಕ್) ಯ ಮೇಲೆ ಗುಂಡು ಹಾರಿಸಿ ಕಳುಹಿಸಿದನು. ಇದರಿಂದ ಸಿಟ್ಟಾದ ಬ್ರಿಟಿಷರ ಇನ್ನೊಬ್ಬ ಅಧಿಕಾರಿ ಬೇಡರ ಊರನ್ನೇ ಲೂಟಿ ಮಾಡುವಂತೆ ತನ್ನ ಜನರಿಗೆ ಆದೇಶ ನೀಡಿದನು. ಸಿಟ್ಟಿನಿಂದ ಬ್ರಿಟಿಷರು ಒಂದೇ ಸಮನೆ ಗುಂಡಿನ ಮಳೆ ಸುರಿಸಿದರು. ಹನುಮಬಾಲಜಡಗ, ರಾಮರ ಹೋರಾಟ ವ್ಯರ್ಥವಾಯಿತು. ಎಲ್ಲೆಡೆಯೂ ರಕ್ತದ ಕಾಲುವೆ ಹರಿಯಿತು. ಆದರೆ ಬೇಡರ ಹೋರಾಟ ಫಲಕಾರಿಯಾಗದೆ ನಾಲ್ಕು ಮಂದಿ ಬೇಡರ ಮುಖಂಡರು ವೀರ ಮರಣವನ್ನು ಹೊಂದಿದರು.
ಬೇಡರ ಕೃಷಿ ಉಪಕರಣಗಳು ಆಹಾರ ಪದಾರ್ಥಗಳು ಮನೆಯಲ್ಲಿ ದಿನನಿತ್ಯ ಬಳಸುತ್ತಿದ್ದ ವಸ್ತುಗಳು, ಸ್ರೀಯರ ಮಂಗಳಸೂತ್ರಬೀಸುವ ಕಲ್ಲು ಅಂದರೆ ಹಲಗಲಿ ಬೇಡರ ಊರಿನಲ್ಲಿ ಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಬ್ರಿಟಿಷರು ದೋಚಿದರು. ಕೊನೆಗೆ ಇಡೀ ಊರಿಗೆ ಬೆಂಕಿ ಇಟ್ಟರು. ಹಲಗಲಿ ಊರು ಸುಟ್ಟು ಬೂದಿಯಾಯಿತು. ಗುರುತೇ ಸಿಗದಂತೆ ನಾಶವಾಯಿತು. ಕುರ್ತಕೋಟಿ ಕಲ್ಲೇಶನ ದಯದಿಂದ ಲಾವಣಿಕಾರ ಈ ಎಲ್ಲ ವಿಷಯಗಳನ್ನು ತಾನು ಕಂಡಷ್ಟು ವರ್ಣಿಸಿರುವುದಾಗಿ ಹೇಳಿದ್ದಾನೆ.
(ಈ  ಸಾರಂಶವನ್ನು ಮಮತಾ ಭಾಗ್ವತ ಅವರ  ಪ್ರತೀಕ್ಷಾ ದಿಂದ ತೆಗೆದುಕೊಳ್ಳಲಾಗಿದೆ)
********* 
ಹಲಗಲಿ ಭೂಪಟ (ಕೆಂಪು ಗೆರೆಯಲ್ಲಿ ಗುರುತು ಮಾಡಿದ ಭಾಗ)



ಲಾವಣಿ - ಕಿರು ಪರಿಚಯ : (ಕೃಪೆ - ಡಾ.ಪ್ರಕಾಶ ಗ.ಖಾಡೆ)   Download Here
ಕನ್ನಡ ಕಾವ್ಯಕ್ಕೆ ಜೀವ ಕಳೆ ತಂದ ಲಾವಣಿ ಪ್ರಧಾನವಾಗಿ ಶೃಂಗಾರ ಕಾವ್ಯ. ಕಾಲಾಂತರದಲ್ಲಿ ಅವುಗಳ ಜನಪ್ರಿಯತೆಯು ಸ್ಥಳೀಯ ಸಂದರ್ಭ ಮತ್ತು ಪರಿಸ್ಥಿತಿಗಳಿಗನುಗುಣವಾಗಿ ಬದಲಾದ ವಸ್ತುವಿಗೆ ಬಳಸಿಕೊಳ್ಳಬೇಕಾಯಿತು.ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು ದಕ್ಷಿಣ ಮಹಾರಾಷ್ಟ್ವೇ ಆಗಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿಯ ಲಾವಣ್ಯ ರಸಬಳ್ಳಿಯಂತೆ ಹಬ್ಬಿದೆ. ‘‘ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ’’ ಎನ್ನುತ್ತಾರೆ ವಾಮನ ಬೇಂದ್ರೆಯವರು. ಸರ್ವ ಸಾಮಾನ್ಯ ಜನತೆಯ ಮನೋರಂಜನೆಗಾಗಿ ಜನತೆಗೆ ಹಿಡಿಸುವಂತೆ ಲೌಕಿಕಪೌರಾಣಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ರಚಿಸಿದ ಕಥೆಡೋಲಕದ ತಾಳ ಹಿಡಿದುವಿಶಿಷ್ಟ ರೀತಿಯಲ್ಲಿ ಹಾಡುವ ವಿಶೇಷ ಪದ್ದತಿಯಹಾಡಲು ಸರಳತೆಯನ್ನೊಳಗೊಂಡ ಪದ್ಮಾವರ್ತನೀ ಎಂಟು ಮಾತ್ರೆಗಳ ಆವರ್ತನೆ  ಮತ್ತು ಭೃಂಗಾವರ್ತನೀ ಆರು ಮಾತ್ರೆಗಳ ಆವರ್ತನ ಉಳ್ಳ ರಚನೆಗಳೇ ಲಾವಣಿಗಳು ಎಂಬ ನಿರ್ಣಯವನ್ನು ಮರಾಠಿ ಸಾಹಿತ್ಯ ವಿಮರ್ಶಕರು ನಮೂದು ಮಾಡಿದ್ದಾರೆ. ಪೇಶವೆ ಕಾಲದ ಅನಂತರದಲ್ಲಿ 19 ಮತ್ತು 20ನೆಯ ಶತಮಾನಗಳಲ್ಲಿ ಮರಾಠಿ ಮತ್ತು ಕನ್ನಡ ಲಾವಣಿ ಸಾಹಿತ್ಯಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪವೈವಿಧ್ಯ ಪ್ರಾಪ್ತವಾಯಿತು. ಭಾರತ ಸ್ವಾತಂತ್ರ್ಯ ಆಂದೋಲನ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯೋಜನೆಗಳ ಪ್ರಚಾರಕ್ಕೆ ಬಹುವಾಗಿ ಬಳಕೆಯಾಯಿತು.

ಸರಸೋತಿ ನಿಮ್ಮ ಸ್ತುತಿ
ಸಬಾದಾಗ ಬಂದ ನಿಂತ  ನಾ ನಾಗೇಶಿ
ಚರಣಕ್ಕೆರಗಿ ಕರುಣ ಮಾಡಿ ಕೈ ಮುಗದ
ಕಾಯ ಒಡಿತೇವ ನಾವು ನಮಸ್ಕರಿಸಿ

ಶಬ್ದಸೃಷ್ಟಿಯ ಸರಸ್ವತಿಯನ್ನು ಕೈ ಮುಗಿದು ತಮ್ಮ ನಾಲುಗೆಯ ನುಡಿ ಸಾಲುಗಳಿಗೆ ಆಹ್ವಾನಿಸಿಕೊಳ್ಳುವ ಜನಪದರು ದೈವದಲ್ಲಿ ಇಟ್ಟ ನಂಬುಗೆಯಿಂದ ಸದಾ ಜಾಗೃತ ಮತ್ತು ಪವಿತ್ರ ನೆಲೆಯನ್ನು ತಮ್ಮ ಪರಿಸರದಲ್ಲಿ ಕಟ್ಟಿಕೊಳ್ಳುತ್ತಾರೆ. ಲಾವಣಿಗಳು ತೀರಾ ಆಪ್ತವಾಗುವುದು ಅವುಗಳ ಕಾವ್ಯ ಸೌಂದರ್ಯ ಮತ್ತು ಜನರಾಡುವ ಮಾತಿನ ಕಾವ್ಯ ಶಕ್ತಿಯಿಂದ. ವಾಸ್ತವ ಬದುಕಿನ ಹಲವಾರು ಮಜಲುಗಳನ್ನು ಇವು ತೆರೆದಿಡುತ್ತವೆ. ತನ್ನ ಗಂಭೀರತೆಶೃಂಗಾರಟೀಕೆಮೊನಚಾದ ಪ್ರತಿಕ್ರಿಯೆಗಳಿಂದ ನೀತಿ ಬೋಧನೆಯನ್ನು ಪ್ರಧಾನವಾಗಿಸಿಕೊಂಡಿವೆ.

ಈ ಮನಾ ಅಂಬೂದು ಉಡಾಳ ದನಾ ಹಾಕ ಮುಗದಾನಾ
ಹಗ್ಗಾ ಹಿಡಿ ಜಗ್ಗಿ ಅದು ನಡೂತೈತಿ ತಲೆಬಾಗಿ
ಸಡ್ಲ ಬಿಟ್ಟಿಂದ ಜಿಗದಾಡತೈತಿ ಟುಣ ಟುಣಾ ಅಡ್ನಾಡ ಅವಗುಣಾ
ಅಸ್ಕೋತೈತಿ ಹೋಗಿ ಕೆಡವಿತ ನಿನ್ನ ಯಮಬಾದಿನಿ

ಹರಿದಾಡುವ ಮನಸ್ಸಿಗೆ ಮುಗದಾನ ಹಾಕಿ ಕಟ್ಟಿ ಬದುಕು ರೂಪಿಸಿಕೊಳ್ಳಬೇಕೆಂದು ನೀತಿಯನ್ನು ಸಾರುವ ಲಾವಣಿಕಾರರು ತಮ್ಮ ಸ್ಥಳೀಯತಾವು ಕಂಡ ಪರಿಸರದ ವಸ್ತು ಸಂಗತಿಗಳಿಂದಲೇ ಕಾವ್ಯದ ಸೆಳಕುಗಳನ್ನು  ನೀಡುತ್ತಾರೆ.  ಲಾವಣಿಕಾರರ ಕಾವ್ಯಶ್ರೇಷ್ಠತೆ ಇರುವುದು ಅವರು ಸ್ಥಳೀಯವಾಗಿ ದೊರಕಿಸಿಕೊಳ್ಳುವ  ಉದಾಹರಣೆಗಳಲ್ಲಿ. ಅತಿ ರಂಜಿತವಲ್ಲಅತಿ ಬಿಗುವಲ್ಲದ ಮತ್ತು ಹಾಗೆಂದು ತೋರುಗೊಡುವ ಪದಪುಂಜಗಳನ್ನೂ ಸನಿಹಕ್ಕೂ ತರಸಿಕೊಳ್ಳದೆ ತಾನು ಕಂಡ ಪರಿಸರ ಸಾಮಗ್ರಿಯನ್ನು ಎತ್ತಿಕೊಳ್ಳುವುದು ಅವರ ವಿಶೇಷತೆ. ರಾಮಲಕ್ಷ್ಮಣಸೀತೆಯರ ವನವಾಸ ಪ್ರಸಂಗ ಚಿತ್ರಿತವಾಗಿರುವುದನ್ನು ಗಮನಿಸಿದಾಗ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ.

ಕಲ್ಲನಾರ ಮಡಿಯನುಟ್ಟ ಹುಲ್ಲ ಹಾಂವ ಚೇಳಿನಾಗ
ಜಲ್ಲಹತ್ತಿ ತಿರಗತಾರ ಬರಿಗಾಲಾ
ಹುಣಚಿ ಹುಲ್ಲ ಬೀಜ ತಿಂಬತಾರ ಹೆಂತಾಕಾಲಾ
ಕಾರಿಕಾಯಿ ಬಾರಿಕಾಯಿಗಳ ಹಣ ಹಂಪಲಾ
ಮನಿಯಿಲ್ಲ ಮಾರಯಿಲ್ಲ ತೋಸಿಕೊಂಡ ಒಣಗತಾರ
ಆರತಿಂಗಳಗಟ್ಲೆ ಥಂಡಿ ಮಳಿಗಾಲಾ ಬಾಸಿಗಿ ಬಿಸಿಲಾ

ಇಲ್ಲಿ ಬಳಸಿರುವ ಕಲ್ಲನಾಗರಬರಿಗಾಲಹುಣಚಿಬೀಜಕಾರಿಕಾಯಿಬಾರಿಕಾಯಿ ಮನಿಯಿಲ್ಲ ಮಾರಯಿಲ್ಲ’ ‘ತೋಸಿಗೊಂಡ ಒಣಗತಾರ’ ಥಂಡಿ.... ಹೀಗೆ ಪ್ರತಿ ಸಾಲಿನಲ್ಲಿ ಬಳಕೆಯಾದ ಆಡುಮಾತಿನ  ಗಟ್ಟಿತನದ ಪದಗಳು ಜನಪದರ ದೇಸೀ ಕಾವ್ಯದ ಭಾಷಾಸತ್ವವನ್ನು ನಿರೂಪಿಸುತ್ತವೆ.

ಲಾವಣಿಯ ಚರಿತ್ರೆ
          ಸಮಕಾಲೀನ ಸಂಗತಿ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಲಾವಣಿಗೀತ ಪ್ರಕಾರವು ಕನ್ನಡದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪರಂಪರೆಯ ಶ್ರೇಷ್ಠ ದಾಖಲೆಗಳೆನಿಸಿವೆ. 1897ರಲ್ಲಿ ಭಾರತಕ್ಕೆ ಬಂದ ಜಾನ್ ಫೇತ್‍ಪುಲ್ ಫ್ಲೀಟರು ಬಂದ ಒಂದೆರಡು ವರ್ಷಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ಆಡಳಿತಾಧಿಕಾರ ವಹಿಸಿಕೊಂಡು ಕನ್ನಡ ಕಲಿತುಆ ಕಾಲಕ್ಕೆ ಜನಪದರಲ್ಲಿ ಹಾಡಿಕೊಂಡು ಬಂದ ಲಾವಣಿಗಳಿಗೆ ಮನಸೋತು ಅವುಗಳ ಸಂಗ್ರಹಕ್ಕೆ ನಿಂತ ಕಾರಣವಾಗಿ ಬ್ರಿಟಿಷರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಚಳವಳಿ ಪ್ರಕಟವಾಗುವಂತಾಯಿತು. ಸಂಗೊಳ್ಳಿ ರಾಯಣ್ಣಹಲಗಲಿ ಬೇಡರು ಐತಿಹಾಸಿಕ ವೀರರಾಗಿ ಚಿತ್ರಿಸಿದ ಇಂಥ ಚಾರಿತ್ರಿಕ ಲಾವಣಿಗಳು. ನಿಶ್ಯಸ್ತ್ರೀಕರಣ ಕಾಯಿದೆದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆಆದಾಯ ತೆರಿಗೆ ವಿರುದ್ಧ ನಡೆದ  ಬಂಡಾಯವನ್ನು ಚಿತ್ರಿಸಿದರು. ಜೊತೆಗೆ ವಸಾಹತುಶಾಹಿ ಸ್ಥಳೀಯ ಸಂಸ್ಕøತಿಯ ಮೇಲೆ ಉಂಟುಮಾಡಿದ ಬಹುದೊಡ್ಡ ಅನ್ಯಾಕ್ರಮಣವನ್ನೂ ಕಂಡಂತೆ ಹಾಡಿ ತೋರಿಸಿದವು. ಬಾದಾಮಿ ಕೋಟೆಯನ್ನು ಕುಂಪಣಿಯವರು ಕೆಡವಿಸಿದ್ದರ ವಸ್ತುವನ್ನೊಳಗೊಂಡ ಫ್ಲೀಟರು ಸಂಗ್ರಹಿಸಿದ ಒಂದು ಪದ ಹೀಗಿದೆ.

ಕುಂಪಣಿಯವರು ಮಾಡ್ಯಾರ ಸಂವಾರ
ನಾಡಮೇಗಿನ ಜನಾ ಮರುಗಿತೋ ಮರಮರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ
ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಈ ಗಡಾ
ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ
        ಬ್ರಿಟಿಷರು ನಮ್ಮ ನಾಡನ್ನು ಅದೆಂತು ಆಕ್ರಮಿಸಿಕೊಂಡರು ಎಂಬುದನ್ನು ಬಿಡಿಸಿಡುವ ಈ ಬಗೆಯ ಲಾವಣಿಗಳು ಚರಿತ್ರೆಯನ್ನು ಬಿಚ್ಚಿಡುವಲ್ಲಿ ಪ್ರಧಾನ ದಾಖಲೆಗಳಾದವು. ಸಂಗೊಳ್ಳಿ ರಾಯಣ್ಣ, ಆದಾಯ ತೆರಿಗೆ, ಹಲಗಲಿಯ ಬೇಡರು, ಕಿತ್ತೂರ ಚೆನ್ನವ್ವನ ಸೊಸೆ, ಲಾವಣಿ ಪದಾ, ಬಾದಾಮಿ ಕಿಲೆ ಕೆಡವಿದ ಪದಾ, ಇಂಗ್ರೇಜಿ ಸಂಸ್ಥಾನದ ಮೇಲಿನ ಪದಾ ಮೊದಲಾದ ಲಾವಣಿಗಳನ್ನು ಗಮನಿಸಿದಾಗ ಅಲ್ಲಿ ಕನ್ನಡ ದೇಸೀ ಚಳವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅದಿsಕಾರಿಶಾಹಿಯ ವಿರುದ್ಧವೇ ಬಂಡೆದ್ದು ಹಾಡಿದ್ದೂ ಒಂದು ದಾಖಲಾದ ಸಂಗತಿಯಾಗುತ್ತದೆ.
        ಜನರ ನೆಮ್ಮದಿಯ ಹತಗೊಳಿಸಿ ಕುತಂತ್ರದಿಂದ ತಂದ ಅನೇಕ ಕಾಯಿದೆಗಳು ಲಾವಣಿಕಾರರ ರೋಷಕ್ಕೆ ಕಾರಣವಾದವು. ಒಂದು ಬಗೆಯಲ್ಲಿ ಜನಸಮೂಹವನ್ನು ಬ್ರಿಟಿಷ್ ವಿರೋಧಿ ನೆಲೆಯಲ್ಲಿ ಸಜ್ಜುಗೊಳಿಸಲು ಸ್ಥಳೀಯ ಈ ಹಾಡುಗಾರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಿಡಿದೆದ್ದ ಕಿಡಿಗಳಾಗುತ್ತಾರೆ. ‘ಆದಾಯ ತೆರಿಗೆ’ ಉಂಟುಮಾಡಿದ ಶೋಷಣೆಯನ್ನು ‘ಏನ ಹೇಳಲಿ ಜನ್ಮದ ಗೋಳಾ ಇಂಗ್ರಜಿ ಉಪದರ ಆದೀತ ಭಾಳಾ. ಬಡವರ ಅಳತಾರೊ ಗಳಗಳಾ ಮಾಡತಾರ ಚಿಂತಿ’ ಎಂದು ಚಿತ್ರಿಸಿದರು. ಈ ಚಿತ್ರಣದಲ್ಲಿ ‘ಬ್ರಿಟಿಷರ ದಬ್ಬಾಳಿಕೆಯ ಮತ್ತೊಂದು ಕ್ರೂರನೋಟ ಇಲ್ಲಿದೆ. ಹೀಗೆ ಸ್ಥಳೀಯ ತಲ್ಲಣ, ಕರ್ಷಣಗಳನ್ನು ಈ ಬಗೆಯಲ್ಲಿ ಕಾವ್ಯದಲ್ಲಿ ಕಟ್ಟಿಕೊಡುವ ಲಾವಣಿಕಾರರು ಮುಖ್ಯವಾಗಿ ಚರಿತ್ರಕಾರರ ಸಾಲಿನಲ್ಲಿ ನಿಂತು ತಮ್ಮ ಕಾವ್ಯದ ಸಾರ್ಥಕತೆಯನ್ನು ತೋರ್ಪಡಿಸುವುದು ಕಾಣುತ್ತೇವೆ.
            ಹುಲಕುಂದ ಲಾವಣಿಕಾರರು
    ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜನೇವರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂಧೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದ ಭೀಮಕವಿ ಎಂದೇ ಹೆಸರಾದ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ ಹಾಗೂ ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. ಹೀಗೆ ಸ್ವತಂತ್ರ ಮೇಳಗಳು ತಲೆ ಎತ್ತುವ ಮೂಲಕ ಲಾವಣಿ ಗೀತ ಸಾಹಿತ್ಯ ತನ್ನ ವ್ಯಾಪಕತೆಯನ್ನು ಪಡೆದುಕೊಂಡಿತು.
            ನಾನಾ ಮುಖಗಳಿದ್ದ ರಾಷ್ಟ್ರೀಯ ಚಳವಳಿಗೆ ಜನ ಸಾಮಾನ್ಯರನ್ನು ಸಜ್ಜುಗೊಳಿಸಲು ಈ ಲಾವಣಿಕಾರರು ಮುಂದಾಗಿರವದು ಕಂಡು ಬರುತ್ತದೆ. ಇಷ್ಟಲ್ಲದೆ ಅಸ್ಪ್ನೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಖಾದಿ ಧರಿಸುವುದು ಇತ್ಯಾದಿ ಸಂಗತಿಗಳನ್ನು ಹಳ್ಳಿಗರಿಗೆ ಮನವರಿಕೆಯಾಗುವಂತೆ ತಿಳಿಸುವಲ್ಲಿ ತಮ್ಮ ಕಾವ್ಯ ಕುಶಲತೆ ಮೆರೆದರು. ಈ ಕಾರ್ಯದಲ್ಲಿ ಕನ್ನಡದಲ್ಲಿ ಅನೇಕ ಲಾವಣಿಕಾರರು ತಮ್ಮ ಹೆಸರು, ಕೀರ್ತಿಗೆ ಆಸೆ ಮಾಡದೆ ಕಾವ್ಯ ಕಟ್ಟಿ ಹಾಡಿದರು. ತೇರದಾಳ ತುಕಾರಾಮ, ಗೋಪಾಳ ದುರದುಂಡಿ, ಮುರಗೋಡ ಕುಬ್ಬಣ್ಣ, ಹುಲಕುಂದ ಭೀಮಕವಿ, ಬಡಚಿ ಲಕ್ಷ್ಮಿಬಾಯಿ, ತುಂಗಳ ಸತ್ಯಪ್ಪ, ಪರಮಾನಂದವಾಡಿ ಮುಲ್ಲಾ, ಕುಡಚಿ ಮಲ್ಲಪ್ಪ, ಕುರ್ತಕೋಟಿ ಕಲ್ಮೇಶ, ಅಪ್ಪಾಜಿರಾವ ಮಹಾರಾಜ ಸರಕಾರ, ಪ್ರಭು, ಬಾಳಗೋಪಾಲ, ಭೀಮಸಿಂಗ, ಯೋಗಣ್ಣ, ರಾಣು ಕುಂಬಣ್ಣಾ, ಶಾಹೀರ ಭೈರಿನಾಯ್ಕ ವಸ್ತಾದಿ ಖಾಜಾಬಾಯಿ ಹನುಮಂತ, ಹುಚಮಲ್ಲಯ್ಯ, ಸಂಗಣ್ಣ ಬಸಣ್ಣ, ಸಂಗಯ್ಯ ಕರಾಡಗೆ, ಸಾತುರಾಮ, ಸಿದ್ದರಾಮ ಮುಂತಾದವರು ದೇಸೀಕಾವ್ಯವನ್ನು ಕಟ್ಟಿ ಹಾಡಿ ಹೆಸರಾದರು.
        18 ಮತ್ತು 19ನೆಯ ಶತಮಾನದಲ್ಲಿ ಉರ್ದು, ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶದಲ್ಲಿ ಮುಸ್ಲಿಂ ತತ್ತ್ವಪದಕಾರರು ಕನ್ನಡ ತತ್ತ್ವಪದ ಸಾಹಿತ್ಯಕ್ಕೆ ಸಮೃದ್ಧತೆ ತಂದಂತೆ ಕನ್ನಡ ಲಾವಣಿ ಕವಿತೆಗಳನ್ನು ಕಟ್ಟಿ ಹೆಸರಾದುದು ಗಮನಾರ್ಹವಾಗಿದೆ. ‘ಉತ್ತರ ಕರ್ನಾಟಕದ ಸಾಮಾಜಿಕ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ಗಮನಾರ್ಹವಾದುದು. ಮೊಹರಂ ಪದಗಳನ್ನು ರಚಿಸಿದ ಹಿಂದೂಗಳಿರುವಂತೆಯೇ ಲಾವಣಿ ಮತ್ತು ತತ್ತ್ವಪದಗಳನ್ನು ರಚಿಸಿರುವ ಮುಸ್ಲಿಂ ಕವಿಗಳಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ವಿಷಯ ವಸ್ತುವಿನ ಮೇಲೆ ಗಳಿಸಿಕೊಂಡಿರುವ ಪ್ರೌಢಿಮೆ ಆಗಾಧವಾದುದು. ವೇದಾಂತ ಪುರಾಣಗಳ ಬಗೆಗಿನ ನಿರರ್ಗಳ ನಿರೂಪಣೆ, ಸಮೃದ್ಧ ಪಾರಿಭಾಷಿಕ ಪದಗಳ ಬಳಕೆ ಅಚ್ಚರಿ ಮೂಡಿಸುವಂತಿವೆ ಎನ್ನುತ್ತಾರೆ ಡಾ.ಬಸವರಾಜ ಮಲಶೆಟ್ಟಿ ಅವರು. ಶಿಶುನಾಳ ಶರೀಫ(1840), ಬೀಬಿ ಇಂಗಳಗಿಯ ಶೇಕ ಮಕ್ತಮಶಾ(1850), ಹಸನಸಾಬ(1858) ಮಂಗಲಗಿ ನನ್ನ ಸಾಹೇಬ(1874), ನರೋಣಾದ ಹೈದರಲಿ(1877), ಕೋರಳ್ಳಿಯ ಮೌಲಾಲಿ (1884), ಡೋಣುರದ ಬಸುಹಸನ(1888), ಯಾದವಾಡದ ಹುಸೇನಿ(1896), ಬೀಬಿ ಇಂಗಳಗಿಯ ಲಾಳೇಶ (1896) ಮಹಮ್ಮದ ಇಮಾಮಶಾ ರಾಣಿಬೆನ್ನೂರಿನ ಸಮ್ಮದ ಸಾಹೇಬ(1899), ಬಸವನ ಬಾಗೇವಾಡಿಯ ಚಾಂದ ಹುಸೇನಿ(1900), ದೇಗಾಂವದ ಇಮಾಮಸಾಹೇಬ(1906), ಚಾಂದಕವಟೆಯ ಗುಡಲಾಲ(1906), ಸಾವಳಗಿ ನಬೀಸಾಬ(1906) ಇಂಗಳೇಶ್ವರ ಲಾಲಸಾಬ(1922) ರಾಯಬಾಗದ ಮೀರಾಸಾಹೇಬ(1922), ಹಲಸಂಗಿ ಖಾಜಾಬಾಯಿ(1924)... ಹೀಗೆ ಬೆಳವಲ ನಾಡಿನಲ್ಲಿ ಲಾವಣಿ ಕ್ಷೇತ್ರದಲ್ಲಿ ಹೆಸರಾದ ಈ ಲಾವಣಿಕರರು ಕಾವ್ಯ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯಿಂದ ಗುರುತಿಸಿಕೊಂಡಿರುತ್ತಾರೆ.
        ಆಧುನಿಕ ಕನ್ನಡ ಕಾವ್ಯವನ್ನು ರೂಪಿಸುವಲ್ಲಿ ಲಾವಣಿಗಳು ಮಹತ್ವದ ಪಾತ್ರವಹಿಸಿದವು. ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧವುಂಟು. ರಗಳೆಯ ಲಯ, ಅಂಶೀ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮರು, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಲಾವಣಿಕಾರರು, ಅನಂತರ ಭಾವಗೀತಕಾರರು ಮಾಡಿದ ರಚನೆಗಳು ಮೌಲಿಕವಾಗಿವೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿತು.
[ಈ  ಮೇಲಿನ ಮಾಹಿತಿಯನ್ನು ಡಾ.ಪ್ರಕಾಶ ಗ.ಖಾಡೆ ಯವರ ಖಾಡೆ@ಜಾನಪದ ದಿಂದ ತೆಗೆದುಕೊಳ್ಳಲಾಗಿದೆ.]
******

************

10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಟಿಪ್ಪಣಿಗಳು/ಸಮಾನಾರ್ಥಕಗಳು

ವಿಲಾತಿ - ವಿಲಾಯಿತಿ (ವಿದೇಶ)
ಹುಕುಂ - ಆದೇಶ
ಕಾರಕೂನ - ಗುಮಾಸ್ತ
ಕುಮಕಿ - ಸಹಾಯ
ಅಗಸಿ - ಹೆಬ್ಬಾಗಿಲು
ದಂಡು - ಸೈನ್ಯ
ಚರಿಗೆ - ತಂಬಿಗೆ
ಮಸಲತ್ತು - ಪಿತೂರಿ
ಹತಾರ - ಆಯುಧ
ಕಬುಲ - ಒಪ್ಪಿಗೆ, ಅನುಮತಿ.
ಚಟೆಕಾರರು - ಆಂಗ್ಲೋ ಇಂಡಿಯನ್
ಹೆಬಲಕ ಸಾಬ್ - ಹೆನ್ರಿ ಹ್ಯಾವ್‌ಲಾಕ್ ಎಂಬ ಬ್ರಿಟಿಷ್ ಅಧಿಕಾರಿ.
ಕಾರಸಾಹೇಬ - ಅಲೆಗ್ಜಾಂಡರ್ ವಿಲಿಯಂ ಕೆರ್ರೆ ಎಂಬ ಬ್ರಿಟಿಷ್ ಅಧಿಕಾರಿ.
ಕುಂಪಣಿ; ಕಂಪನಿ - ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಿಟೀಷ್ ಸರ್ಕಾರ ರಚಿಸಿದ್ದ ಆಡಳಿತಾತ್ಮಕ ಸಂಸ್ಥೆ. 


******
************