ನನ್ನ ಪುಟಗಳು

09 ಜನವರಿ 2021

ಹನಿಗವನಗಳು

(೧)

ಮಸೀದಿ
ಮಠ
ಮಂದಿರಗಳಿಗೆ ಭೇದಭಾವದ ಸೊಂಕು
ಮನುಜನ ನಾಲ್ಗೆಯಿಂದಲೆ ಅಂಟಿದೆ.ಬರಿ
ಮತಗಳಿಗಾಗಿ
ಮತಿಹೀನ ರಾಗುವ
ಮಂತ್ರಿಗಳು
ಮನುಜಮತದ ಅರಿವಿನ
ಮಾತು
ಮರೆತು
‌ಮಾನಹೀನರಾಗಿ
ಮಾನವೀಯತೆ ಇಲ್ಲದೆ
ಮನಬಂದಂತೆ ಆಳ್ವರು
ಮನುಷ್ಯತ್ವ ಕೊಂದು

 (೨)

ನಿನಗಾಗಿ
ನಾ ನಿಂದು
ಬಾನಿಗೆ ಬೆವರ ಗಂಬಳಿ
ಹೊದ್ದಿಸಿರುವೆ ಆದರು
ತಿಳಿಯಾಗಿಲ್ಲ
ತಿಳಿ ಗೆಳತಿ
ಚಳಿಗಾಳಿಗೆ
ಉಕ್ಕುವ ಹುಚ್ಚು
ಆಸೆಯು
ಹೆಚ್ಚಾಗಿದೆ.
ಒಮ್ಮೆಯಾದರೂ
ತಪ್ಪಿದ್ದರು ತಬ್ಬಿಕೊ
ತುಸು ಬಿಸಿಯಾದರು ಆದಿತು.

ಮೈಗೋರಿಯುವ ಚಳಿಗೆ
ನಿನ್ನ ಬಿಸಿ ಉಸಿರ
ತೋಳಪ್ಪುಗೆಗೆ
ನಿನ್ನ ಬಳಸುವ ಕೈಗಳಿಗೆ ಗರಿ ಬಿಚ್ಚಿ ನಿಂದಿವೆ
 

-ನಾಗರಾಜ ದೊಡನೆ
ಬಿಜಾಪುರ
ತಾ||ಮುದ್ದೇಬಿಹಾಳ 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ