ನನ್ನ ಪುಟಗಳು

09 ಜನವರಿ 2021

ಧರೆಯು ಸುಡುತಿದೆ

ಧರೆಯು ಸುಡುತಿದೆ
ಜ್ವರವು ಹೆಚ್ಹಿದೆ
ವರುಷ ವರುಷದಿ೦ದೀಚೆಗೆ

ವಿಷವ ಕಾರಲು
ನಭಕೆ ಮನುಜನು
ನದಿಯು ಸಾಗರದೊಡಲಿಗೆ

ಪ್ರಾಣಿ ಪಕ್ಷಿಯ
ಸ೦ಕುಲವಳಿದಿದೆ
ಕಾಡ ಕಡಿಯುವ ಕೃತ್ಯಕೆ

ರವಿಯ ತೀಕ್ಷ್ಣದ
ಕಿರಣ ತಡೆಯಲು
ಬಾನ ಪದರವು ಸೂತಿದೆ

ಭುವಿಯ ಧ್ರುವದೀ
ಮ೦ಜು ಕರಗಿದೆ
ಶಾ೦ತ ಸಾಗರ ಉಕ್ಕಿದೆ

ನೆರೆಯು ಬ೦ದಿದೆ
ನಾಡು ಕೊಚ್ಚಿದೆ
ಧರೆಯ ಸೆರಗದು ಜಾರಿದೆ

ವರುಣ ಕೃಪೆಯದು
ಕಡಿಮೆಯಾಗಿದೆ
ಜಲದ ಕ್ಷಾಮವು ಹೆಚ್ಚಿದೆ

ಜಲದ ಜಗಳವು
ರಾಜ್ಯ ದೇಶದ
ನಿತ್ಯ ರಗಳೆಯು ಆಗಿದೆ

ಹಸಿರು ಧರೆಯನು
ನನ್ನ ಮಗಳಿಗೆ
ಮಾಘ ಮಾಸದಿ ತೊರಿದೆ

ನೊಡಬಹುದೇ
ಬೆ೦ಕಿಯು೦ಡೆಯನೆಲ್ಲ
ಮಾಸದಿ ನಮ್ಮ ಮು೦ದಿನ ಪೀಳಿಗೆ

ಧರೆಯನುಳಿಸುವ
ಪುಣ್ಯ ಕಾರ್ಯದಿ
ಅಳಿಲ ಸೇವೆಯು ಬೇಕಿದೆ

- ಶ್ರೀನಿವಾಸ ಪ್ರಸಾದ್
ವೈಟ್ ಫೀಲ್ಡ್, ಬೆಂಗಳೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ