ನನ್ನ ಪುಟಗಳು

09 ಜನವರಿ 2021

ದೀವಿಗೆಯ ಬೆಳಕಲ್ಲಿ ಅರಳಿದ ಪ್ರೀತಿ

 ಭಾರ್ಗವನಿಗೆ ಹೆಣ್ಣು ನಿಶ್ಚವಾಗಿದೆ. ಹೆಣ್ಣು ಪರವೂರಿನವಳು, ಭಾರ್ಗವನ ಊರಿನಿಂದ ಬಹಳ ದೂರವೆನಿಲ್ಲ ಭಾರ್ಗವನಿಗೆ ತಕ್ಕಂತೆ ಲಕ್ಷಣವಾದ ಹುಡುಗಿ.ಹೆಸರು ಸುಮಂಗಲ ಹೆಸರಿಗೆ ತಕ್ಕಂತೆ ಗುಣವಂತೆ, ಶೀಲವಂತೆ ,ಸಧ್ಗುಣ ಸಂಪನ್ನೆ. ನಯನಾಜುಕು ,ತಳಕುಬಳಕು ಎನನ್ನು ಅರಿಯದ ಹುಡುಗಿ ಹಳ್ಳಿಯ ಹುಡುಗಿ ಓದಲು ಬರೆಯಲು ಬಲ್ಲವಳು. ಭಾರ್ಗವ ಸರ್ಕಾರಿ ಕೆಲಸದಲ್ಲಿ ತನ್ನೂರಿನ ತಾಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಹೆಣ್ಣನ್ನು ನೋಡಿದ ತಕ್ಷಣಕ್ಕೆ ಒಪ್ಪಿಕೊಂಡ. ಸ್ವಲ್ಪ ಓದಿಕೊಂಡವಳು, ಲಕ್ಷಣವಾಗಿದ್ದಾಳೆ ,ಅವನು ಅಂದುಕೊಂಡದಕ್ಕಿಂತ  ಸುಂದರವಾಗಿದ್ದಳು, ಮನೆತನದಲ್ಲು ಚೆನ್ನಾಗಿದ್ದರು. ಹೆಣ್ಣು ನಿಶ್ಚಯವಾದ ಒಂದೊ ಎರಡೋ ತಿಂಗಳಿಗೆ ದೀಪಾವಳಿ ಹಬ್ಬ ಬಂದಿತ್ತು. ಹೋಸದಾಗಿ ಮಗಳಿಗೆ ಗಂಡು ನಿಶ್ಚಯವಾದರೆ ದೀಪಾವಳಿಯಂದು ಭಾವಿ ಅಳಿಯನ್ನು ಕರೆದು ಉಪಚರಿಸುವುದು ವಾಡಿಕೆ. "ಭೋರೆಯ ನೀರು " ಎಂಬ ಶಾಸ್ತ್ರವನ್ನು ಮಾಡಲಾಗುತ್ತದೆ. ಅಂದರೆ ಅಳಿಯ ದೀಪಾವಳಿಯ ಹಿಂದಿನ ದಿನ ಮಾಮನ ಮನೆಗೆ ಅಳಿಯ ಹೋಗಿ ಸ್ನಾನ ಮಾಡಿಕೊಂಡು ಮಡಿಬಟ್ಟೆ ಧರಿಸಬೇಕೆಂಬುದು ವಾಡಿಕೆ. ಅದರೊಟ್ಟಿಗೆ ಅವರವರ ಶಕ್ತಿಗೆ ತಕ್ಕಂತೆ ಅಳಿಯನಿಗೆ ಉಡುಗೊರೆಯ ರೂಪದಲ್ಲಿ ಬೆಳ್ಳಿ ಇಲ್ಲವೆ ಬಂಗಾರವನ್ನು ಕೋಡುತ್ತಾರೆ. ಭಾರ್ಗವನಿಗೆ ದೀಪಾವಳಿಯ ಹಬ್ಬಕ್ಕೆ ವಿಶೇಷ ಆಮಂತ್ರಣ ಬಂದಿತ್ತು. ಭಾವಿ ಪತ್ನಿಯ ಮುಖ ದರ್ಶನ ಸರಸ ,ಸಲುಗೆಯ ಆಸೆ ಉಮ್ಮಡಿಸಿ ಬಂದಿತ್ತು ,ಒಬ್ಬೊಬ್ಬನೆ ನಾಚಹತ್ತಿದ. ಈ ಮೊದಲು ಇದಾವ ಶಾಸ್ತ್ರ ,ಬೀಗರ ಮನೆಯ ಅನುಭವ ಇಲ್ಲದವನು ಮುಜುಗರದೊಂದಿಗೆ ಚಿಂತಿಸಲು ಶುರು ಮಾಡಿದ. ಹೇಗಪ್ಪ ಹೋಗೊದು ,ಅಲ್ಲಿ ಹೇಗೆ ನಡೆದುಕೊಳ್ಳಬೇಕು ರೀತಿ ರಿವಾಜು ಒಂದರ ತಳಮೇಲು ಅರಿಯೆನಲ್ಲ ಎಂದು ಚಿಂತಿಸಿದ. ಹೀಗೆ ಮಾಡಿದರೆ ಹೇಗೆ ನನ್ನ ಸ್ನೇಹಿತ ಜನಾರ್ಧನನ್ನು ನನ್ನೊಟ್ಟಿಗೆ ಕರೆದ್ಯೊದರೆ ನನಗೂ ಒಂದು ದೈರ್ಯಯಿರುವುದು ಎಂದು ಯೋಚಿಸಿದ. ಹೇಗೂ ಅವನು ನನ್ನೊಟ್ಟಿಗೆ ನನ್ನ ಕಛೇರಿಯಲ್ಲೆ ಕೆಲಸ ಮಾಡುವವನು ,ನನ್ನ ಪ್ರಾಣ ಸ್ನೇಹಿತ. ಅವನಿಗೆ ನನ್ನೊಟ್ಟಿಗೆ ರಜೆ ಇದೆಯಲ್ಲ ಎಂದು ಅವನನ್ನು ಕರೇದ. ಮೊದ ಮೊದಲು ಜನಾರ್ಧನ ಇಲ್ಲಪ್ಪ ನಿನ್ನ ಮದುವೆ ,ನಿನ್ನ ಬೀಗರು ನಾನು ಹೇಗೆ ಬರಲು ಸಾಧ್ಯ ಎಂದವನು ಇವನ ಒತ್ತಾಯ ಒತ್ತಾಸೆಗೆ ಮಣಿದು ಹೋಗಲು ಸಿದ್ಧನಾದ. ಜನಾರ್ಧನ ಮತ್ತು ಭಾರ್ಗವರಿಬ್ಬರು ಬೈಕ್ ಎರಿ ಬೀಗರ ಮನೆಯನ್ನು ತಲುಪಿದರು. ತಲುಪುವಷ್ಟೊತ್ತಿಗೆ ಸಂಜೆಯಾಗಿತ್ತು. ಬೀಗರ ಮನೆಯವರು ಇವರನ್ನು ಆದರದಿಂದ ಸ್ವಾಗತಿಸಿದರು. ಉಭಯಕುಶಲೋಪರಿ ಎಲ್ಲವು ಆದವು. ಸುಮಂಗಲನನ್ನು ಕಂಡವನೆ  ಭಾರ್ಗವ ಸಂತೋಷದಲ್ಲಿ ಹಿಗ್ಗಿದ.ಅವಳನ್ನು ಕಾಣುವ ತವಕದಲ್ಲಿ ಓಡೊಡಿ ಬಂದಿದ್ದು ಸಾರ್ಥಕವಾಯಿತೆನಿಸಿ ಅವಳನ್ನು ಕಂಡವನೆ ನಾಚಿದ, ಅವಳು ಭಾರ್ಗವನನ್ನು ಕಂಡವಳೆ ಉಪಚರಿಸಿ ಓಡಿ ಹೋಗಿ ಬಾಗಿಲ ಸಂಧಿಯಿಂದ ಇಣುಕಿ ನೋಡಿ ಲಜ್ಜೆಯಿಂದ  ನುಲಿದಳು. ಸುಮಂಗಲಳಿಗೊಬ್ಬಳು ತರಲೆ ತಂಗಿಯಿದ್ದಳು. ತರಲೆ ತಲೆಹರಟೆ ,ಶುಧ್ದ ತಲಹರಟೆ. ಒಂದು ದಿನ ಒಬ್ಬ ಪೂಜಾರಿ ಅವಸರವಸರವಾಗಿ ಸೈಕಲ್ ಏರಿ ದೇವರ ಪೂಜೆಗೆಂದು ತಡಬಡಿಸಿ ಹೋಗುತ್ತಿದ್ದ. ಈ ತರಲೆ ಏನು ಮಾಡಬೇಕು ಗೊತ್ತೆ ಆ ಪೂಜಾರಪ್ಪನ ತಡೆದು ವಿಳಾಸ ಕೇಳುವ ರೀತಿ ಮಾತನಾಡಿಸಿ ಎಲ್ಲ ಸ್ನೇಹಿತೆಯರೊಂದಿಗೆ ಅವನ ಪಂಚೆ ಕಸಿದುಕೊಂಡು ಅವನನ್ನಾ ಪೇಚಿಗಿಡು ಮಾಡಿದ್ದರು. ಸುಮಂಗಲನಿಗೆ ತದ್ವಿರುದ್ಧವಾದ ಗುಣದವಳು. ಕೆಟ್ಟವಳಲ್ಲ ನಯ ನಾಜುಕು ಕಡಿಮೆ, ಗಂಡುಬೀರಿ ಅನ್ನಿ.      ಇವಳ ಈ ಗುಣವೆಲ್ಲ ಮನೆಯವರಿಗೆ ಚೆನ್ನಾಗಿಯೆ ಗೊತ್ತಿತ್ತು ,ಮೊದಲೆ ಅವರಮ್ಮ ಸುಮಾಳಿಗೆ ತಾಕೀತು ಮಾಡಿಬಿಟ್ಟಿದ್ದರು. ಬಂದವರ ಮುಂದೆ ಕಪಿಚೆಷ್ಟೆ ಮಾಡಿ ನಮ್ಮ ಮರ್ಯಾದೆ ಕಳಿಬೇಡ ಅಂದಿದ್ದರು. ಇವಳೊ ಸುದ್ಧ ತರಲೆ ,ಬೇರೆಯವರಿಗೆ ತಮಾಷೆ ಮಾಡಿ ಮಜಾ ತೋಗೊಳೊ ಕಪಿ ಮುಂಡಡೆ. ಭಾರ್ಗವ ಮತ್ತು ಜನಾರ್ದನ ಇಬ್ಬರು ಬೀಗರ ಆಮಂತ್ರಣದಂತೆ ಬಂದು ಸೇರಿದ್ದರು. ಒಳಗಿಂದಲೆ ಅವರಿಬ್ಬರನ್ನು ನೋಡಿದವಳೆ ಇವರಿಗೆ ಹೇಗಾದರು ಗೊಳ್ಯೋಕ್ಕೊಬೇಕು ಅನಿಸಿ, ಅಕ್ಕ ಬಲಿಕಾ ಬಕರಾ ಬಂದಿದಾವೆ ನೋಡು ಇವಾಗ ಎನು ಮಾಡ್ತಿನಿ ಅಂತಾ ಅವಳ ಹತ್ತಿರ ಹೇಳಿದಳು. ಅಕ್ಕ ಇವಳನ್ನು ಕಣ್ಣು ದೊಡ್ಡದು ಮಾಡಿ ನೋಡಿದವಳೆ ಲೆ ಕೋತಿ ಇವರನ್ನಾದರು ಬೀಡೆ ಮಾರಾಯ್ತಿ ಅಂದಳು. ಬೀಡ್ತಿನಿ ಬಿಡ್ತಿನಿ ಸ್ವಲ್ಪ ರುಚಿ ತೋರಿಸಿ ಬಿಡ್ತಿನಿ ಅಂದಳು. ಇವಳ ಸ್ವಭಾವ ಅವಳ ಅಕ್ಕನಿಗೆ ಚೆನ್ನಾಗೆ ತಿಳಿದಿದ್ದರಿಂದ ಇವಳಿಗೆ ಎನೆ ಹೇಳಿದರು ಅಷ್ಟೆ ಅವಳ ಹಠ ಬೀಡುವವಳಲ್ಲ ಎಂದು ಸುಮ್ಮನಾದಳು. ಹೋರಗೆ ಹೋದವಳೆ ಭಾವ ಹೇಗಿದ್ದಿರಿ ಎಂದು ಮಾತನಾಡಿಸಿ.ಜನಾರ್ಧನಿಗೆ ಇವರು ಯಾರು ಭಾವ ಮೊದಲು ನೋಡಿಯೆ ಇಲ್ಲವಲ್ಲ ಎಂದಳು. ಇವನು ನನ್ನ ಸ್ನೇಹಿತ ನನ್ನೊಟ್ಟಿಗೆ ಕೆಲಸ ಮಾಡುತ್ತಾನೆ ಎಂದ. ನೋಡಲು ಚೆನ್ನಾಗಿದ್ದ ಜನಾರ್ಧನ ಓಳ್ಳೆ ಮೈಕಟ್ಟು, ಕಾಂತಿಯ ಮುಖಕ್ಕೆ ಕನ್ನಡ ಹೊಂದುವಂತೆ ಇದ್ದ. ಕನ್ನಡಕದಲ್ಲಿ ಸುಂದರವಾಗಿ ಕಾಣುತ್ತಿದ್ದ. ಸುಮಾ ಭಾವನಿಗೆ ಕಾಡಿಸುವುದು ಬೇಡ. ಈ ಬಲಿಕಾ ಬಕ್ರಾ ನ ಕಾಡಿಸಿದರೆ ಹೇಗಿರುತ್ತೆ ಎಂದು ಯೋಚಿಸಿ ಒಳಗೆ ಹೋದವಳೆ. ತಿಂಡಿ ಎಲ್ಲ ತಂದು ತಗೋಳಿ ಭಾವ ಎಂದಳು. ಭಾರ್ಗವ ಬೇಡ ಎಂದರು ಕೇಳದೆ ತಗೋಳಿ ನಿವು ಇನ್ನು ಮುಂದೆ ಬರುವುದು ಇದ್ದೆ ಇದೆ ,ಆದರೆ ಇವರು ಬರಬೇಕಲ್ಲ ನೀವು ಹೀಗೆ ಹೇಳಿದರೆ ಅವರು ಮುಜುಗರ ಪಡುವುದಿಲ್ಲವೆ ಎಂದು ತಿಂಡಿ ತಂದು ಇಟ್ಟಳು. ತಿಂಡಿ ತಟ್ಟೆ ತೆಗೆದುಕೊಳ್ಳುವಾಗ ಭಾವ ,ಭಾವ ಇದು ಅವರಿಗೆ ಇದು ನಿಮಗೆ ಎಂದು ತಟ್ಟೆ ಬದಲಿಸಿ ಕೊಟ್ಟಳು. ಕಪಿ ಅವಳು ಎನು ಮಾಡಿಯಾಳು ಊಹಿಸಿಕೊಂಡರಾ. ಜನಾರ್ಧನನಿಗೆ ಉಪ್ಪು ಹೆಚ್ಚಿಗೆಯೆ ಹಾಕಿ ಕೊಟ್ಟಿದ್ದಳು. ಪಾಪಾ ಜನ್ನಿ ಭಾರ್ಗವನ ಮುಖ ನೋಡಿ ಸುಮ್ಮನೆ ಹೊಟ್ಟೆಗಿಳಿಸಿದ. ಅವಳು ಇವ ಮುಖ ಕಿವುಚುವುದ ನೋಡಿ ,ನಗುತ್ತಿದ್ದಳು. ಜನ್ನಿ ಕಥೆ ಬೇಡ ಹೇಳಿ. ಎನು ಮಾಡಲಾಗದೆ ಸುಮ್ಮನೆ ತಿಂದ. ಇಷ್ಟಕ್ಕೆ ಬೇಡಬೇಕಲ್ಲ ಇವಳು. ತಿಂಡಿ ತಿಂದ ತಕ್ಷಣ ಓಡಿ ಹೋಗಿ  ಕಾಫಿ ತಂದಳು. ಜನ್ನಿ ಈ ಸಾರಿ ಅವಳು ಕೋಡುದನ್ನು ಕುಡಿಯುವುದು ಬೇಡ. ಭಾರ್ಗವನಿಗು ಇವಳ ಚೆಷ್ಟೆ ತಿಳಿಯಲಿ ಎಂದು ಭಾರ್ಗವನಿಗೆ ಕೊಟ್ಟ ಕಾಫಿ ಲೋಟ ತೆಗೆದುಕೊಂಡ. ತಲೆಹರಟೆಗೆ ಇದು ಚೆನ್ನಾಗಿ ಗೋತ್ತಿದ್ದರಿಂದ ಮೊದಲೆ ಭಾರ್ಗವನಿಗೆ ಖಾರದ ಕಾಫಿ ಕೊಟ್ಟಿದ್ದಳು, ಆದರೆ ಅದನ್ನು ಜನ್ನಿ ಕಿತ್ತುಕೊಂಡು ಕುಡಿದ. ಮತ್ತೆ ಅವನ ಪಾಲಿಗೆ ಖಾರದ ಕಾಫಿ ಸೀಗಬೇಕೆ. ಜನ್ನಿಗೆ ಈಗ ಅರ್ಥವಾಯಿತು ಇವಳು ಬೇಕಂತಲೆ ಇದನ್ನು ಮಾಡುತ್ತೀರುವಳೆಂದು. ಮಾಡುತ್ತೆನೆ ನಿನಗೆ ,ನನಗೆ ಖಾರದ ಕಾಫಿ ಕೋಡುತ್ತಿಯಾ ಎಂದು ಮನಸಿನಲ್ಲೆ ಕೋಪ ತೋರಿಸಿದ. ರಾತ್ರಿ ಊಟದ ಸಮಯವಾಯಿತು. ಸುಮಂಗಲ ಮತ್ತು ಅವರಮ್ಮ ಇಬ್ಬರಿಗು ಉಪಚರಿಸಿದ ಕಾರಣ ಜನಾರ್ಧನ ಕಪಿಯಿಂದ ಉಳಿದ ಇಲ್ಲವಾದರೆ ಇನ್ನೆನನ್ನೊ ಮಾಡುವಳಿದ್ದಳೋ ತಲೆಹರಟೆ. ಇಷ್ಟಕ್ಕೆ ನಿಟ್ಟುಸಿರು ಬಿಟ್ಟು ಸಮಾಧಾನದಿಂದ ಊಟ ಮಾಡಿದ ಜನ್ನಿ. ರಾತ್ರಿ ನಡೇದ ವಿಷಯವನ್ನೆಲ್ಲ ಭಾರ್ಗವನಿಗೆ ತಿಳಿಸಿದ. ಭಾರ್ಗವ ಅವನಿಗೆ ಸ್ವಾರಿ ಕಣೋ ತಪ್ಪುತಿಳಿಬೇಡ್ವೊ ,ಅವಳಿಗೆ ಸ್ವಲ್ಪ ತಿರುವು ಸಡಿಲ ಅಂದರೆ ಲೂಸು ಅಂತ ಮ್ಯಾನೇಜ್ ಮಾಡಿದ. ರಾತ್ರಿ ಕಳೆದು ಬೆಳಗಾಯಿತು ಇಬ್ಬರು ಎದ್ದು ನಿತ್ಯ ಕರ್ಮ ಮುಗಿಸಿದರು. ಭಾವಿ ಮದುಮಗ ಶಾಸ್ತ್ರದ ಪ್ರಕಾರ ಸ್ನಾನ ಮುಗಿಸಿ ಹೋರಬಂದು ಮಡಿಬಟ್ಟೆ ಧರಿಸಿದ. ಇನ್ನು ಜನ್ನಿ ಸರದಿ ಎಲ್ಲಾದರು ಎಡವಟ್ಟು ಇದಾಳಾ ಎಂದು ನೋಡಿ ಸ್ನಾನದ ಮನೆ ಹೊಕ್ಕ. ಅವನು ಹುಡುಕುತ್ತಿರುವುದು ಇವಳು ಕಂಡು ನಗುತ್ತ ,ನಿನಗೆ ರಾತ್ರಿ ಕೊಟ್ಟಿರೊ ಕರೆಂಟ್ ಶಾಕ್ ಕಡಿಮೆಯಾಯಿತು ಮತ್ತೆ ಕೋಡುವೆ ಎಂದು ನಿರ್ಧರಿಸಿದಳು. ಅವನು ಸ್ನಾನದ ಮನೆ ಹೊಕ್ಕಿದ ತಕ್ಷಣ , ಕಾಲ ಗೆಜ್ಜೆ ತೆಗೆದಿಟ್ಟು ಅವನನ್ನು ಹಿಂಬಾಲಿಸಿ ಗಂಡಸಿನ ಧ್ವನಿಯಲ್ಲಿ ಅವಳ ಅಣ್ಣನ ಹಾಗೆ, ಜನಾರ್ಧನರವರೆ ಸೀಗೆ ಕಾಯಿ ತಲೆಗೆ ಓಳ್ಳೆದು ತಗೋಳಿ ಎಂದಳು. ಅವನು ತಿರುಗಿ ಕೂತು ಸ್ನಾನ ಮಾಡುತ್ತಿದ್ದರಿಂದ ಇವಳೆ ಎನ್ನುವುದು ಗೊತ್ತಾಗಲಿಲ್ಲ. ಇಟ್ಟು ಬೀಡಿ ಎಂದ . ಇವಳು ಸರಿ ಸರಿ ಎಂದು ಇಟ್ಟಳು. ಪಾಪದ ಪಾಪಿ ಜನ್ನಿ ಹಳೆ ಕನ್ನಡ ಸಾಂಗ್ ಹೇಳತಾ ಸೀಗೆ ಪುಡಿ ಅಂತಾ ತಿಳಿದು. ಕೆಂಪು ಖಾರದ ಪುಡಿ,ಹಸಿಮೆಣಸಿನ ಚೆಟ್ನಿನಾ ಮೈಗೆ ,ಕಣ್ಣಿಗೆಲ್ಲಾ ಹಚ್ಚಕೊಂಡು ಬೀಡೊದೆ. ಆಮೇಲೆ ನೋಡಿ ಪಜೀತಿ ಹಾಡು ಅಷ್ಟೆ ಅಲ್ಲ ಕುಣಿತಾ ಹಾಕೋಕೆ ಶುರು ಮಾಡದಾ. ಇವಳು ಇವನ ಪಜೀತಿ ಕಂಡು ಜೋರಾಗಿ ನಗುತ್ತ ನಿಂತಳು. ಮುಚ್ಚಿದ ಕಣ್ಣಲ್ಲೆ ,, ರೀ ಪ್ಲಿಸ್ ರೀ ನೀರು ಕೋಡಿ ಅಂದ. ಅವಳು ಇಲ್ಲ ನಿನ್ನ ಅವತಾರ ಚೆನ್ನಾಗಿದೆ ಎಂದು ನಗುತ್ತಾ ನಿಂತಳು. ಕಣ್ಣುರಿ ಸಂಕಟ ನೋಡಿ ,ಇವಳು ನೀರು ಕೊಡುವ ಹಾಗೆ ಕಾಣಿಸಲಿಲ್ಲ. ಕಣ್ಣು ಮುಚ್ಚೆ ಅವಳನ್ನು ಹುಡುಕಿದ. ಇವಳೊ ಘಾಟಿ ಸೀಗಬೇಕಲ್ಲ ,ಸತಾಯಿಸಿದಳು. ನೀರಿನ ಬಕೇಟ್ ಕೈಲಿ ಹಿಡಿದು ಗೋಳಾಡಿಸಿದಳು. ಕಣ್ಣುರಿ ತಾಳದೆ ಅವಳನ್ನು ಹುಡುಕಿದ, ಒಮ್ಮೆಲೆ ಸೊಂಟ ಕೈಗೆ ಸಿಕ್ಕಿತು. ಇವಳಿಗೆ ಒಮ್ಮೆಲೆ ನಾಚಿಕೆ ಲಜ್ಜೆ ಉಂಬಳಿಸಿ ಓಡಿ ಹೋಗಲು ಪ್ರಯತ್ನಿಸಿದಳು. ಬಚ್ಚಲಿನ ಜಾರಿಕೆಗೆ ಜಾರಿ ದೊಪ್ಪೆಂದು ಅವನ ಎದೆಯ ಮೇಲೆ ಬಿದ್ದಳು. ಅವನಿಗು ಇದು ಹಿತವೆನಿಸಿತು. ಸ್ವಲ್ಪ ಹೊತ್ತು ಇಬ್ಬರು ಅದೆ ಭಂಗಿಯಲ್ಲಿದ್ದರು. ಖಾರದ ಉರಿಯಲ್ಲು ಇವಳ ಆಲಿಂಗನ ಮುದನೀಡುತ್ತಿತ್ತು. ಒಮ್ಮೆಲೆ ಎಚ್ಚೆತ್ತ ಜನ್ನಿ ಉರಿ ಉರಿ ಎಂದ. ಅವಳು ಸಹ ಎಚ್ಚೆತ್ತು ನಾಚಿಕೆಯಿಂದ ಸುತ್ತಣ ತಿರುಗಿ ನೋಡಿದವಳೆ ಅವರಿಬ್ಬರು ಇದ್ದ ಪರಿಸ್ಥಿತಿ ನೋಡಿ ಮತ್ತೆ ನಾಚಿ. ತಾನೆ ಕಣ್ಣಿಗೆ ನೀರು ಹಾಕಿದಳು. ಅವನು ಮೆಲ್ಲನೆ ಕಣ್ಣು ಬಿಟ್ಟಾಗ ಎನಾಯಿತೊ ಅವಳಿಗೆ ಅವನನ್ನು ಪದೆ ಪದೆ ತಿರುಗಿ ನೋಡುತ್ತ ನಾಚಿಕೆಯಿಂದ ಮನೆಯೊಳಗೆ ಓಡಿದಳು. ಅವನಿಗು ಅವಳದೆ ಗುಂಗು ಹಿಡಿದಿತ್ತು ,ಅವಳ ಸೊಂಟಕ್ಕೆ ಕೈ ಹಾಕಿದ್ದನ್ನು ನೆನೆದು ನಾಚಿ ಬೇಗ ಬೇಗ ಸ್ನಾನ ಮುಗಿಸಿ ಹೋರಗೆ ನಡೆದ. ನಡೆದ ವಿಷಯ ಯಾವುದನ್ನು ಭಾರ್ಗವನಿಗೆ ತಿಳಿಸದೆ ಸುಮ್ಮನಾದ. ಇಬ್ಬರ ತಿಂಡಿಯು ಮುಗಿಯಿತು, ಹಬ್ಬಕ್ಕೆ ತರ ತಲನಾದ ಖಾದ್ಯಗಳನ್ನು ಮಾಡಿದ್ದರು, ಇಬ್ಬರು ಚೆನ್ನಾಗೆ ಸವಿದರು. ಸುಮಾ ಆ ದಿನ ನಾಚಿಕೆಯಿಂದ ಲೆ ಅಕ್ಕ ಸೀರೆ ಉಡಿಸೆ ಎಂದಳು. ಈ ಗಂಡುಬಿರಿನಾ ಹೀಗೆ ಕೇಳ್ತಿರೊದು ! ಅಂತಾ ಆಶ್ಟರ್ಯದಿಂದ ಹುಬ್ಬೆರಿಸಿದಳು ಸುಮಂಗಲಾ. ಇವಳು ದೀಪಾವಳಿ ಅಲ್ವೆನೆ ಉಡಿಸೆ ಎಂದು ಪಿಡಿಸಿ ಸೀರೆಯುಟ್ಟು ಹೋರಗೆ ಬಂದಳು. ಎಲ್ಲರು ಇವಳ ವೇಷ ನೋಡಿ ಬಾಯ್ಬಿಟ್ಟರು. ಆದರೆ ಜನ್ನಿಗೆ ಇದರ ಒಳರ್ಥ ಚೇನ್ನಾಗೆ ಗೊತ್ತಿತ್ತು. ಅವಳು ಇವನ್ನು ನೋಡಿ ನಾಚೊದು ,ಓಡೊದು ಕೈಗೆ  ಸೀಗದೆ ಪೀಡಿಸೋದು ಮಾಡೋಕೆ ಶುರು ಮಾಡಿದಳು. ಸಂಜೆ ಹೊತ್ತು ಎಲ್ಲರು ದೀಪಾ ಹಚ್ಚಿ ಹಬ್ಬ ಆಚರಿಸ್ತಾ ಇದ್ದರು. ಭಾರ್ಗವ ಭಾವಿ ಹೆಂಡತಿಯಾಗೊಳ ಜೋತೆ ದೀಪಾ ಹಚ್ತಾಯಿದ್ರೆ .ಜನ್ನಿ ಸುಮ್ನೆ ಕೂತಿದ್ದ. ಸುಮಾ ಅವನ ಕರೆದು ಬನ್ನಿ ನಾನು ದೀಪಕ್ಕೆ ಎಣ್ಣೆ ಹಾಕ್ತಿನಿ ನೀವು ಅವನೆಲ್ಲ ಹೊತ್ತಿಸಿ ಎಂದು ಕರೆದಳು. ಇಬ್ಬರು ಒಬ್ಬರಿಗೊಬ್ಬರು ಸೋತೆ ಹೋಗಿದ್ದರು. ಅದು ಪ್ರೀತಿ ಎಂದು ಇಬ್ಬರಿಗು ಅರಿವಾಗಿದ್ದು ದೀಪ ಹಚ್ಚುವಾಗ. ದೀವಿಗೆಗೆ ಎಣ್ಣೆ ಹಾಕುತ್ತಿದ್ಧ ಸುಮಾಳ ಎರಡು ಕೈ ಎಣ್ಣೆ ಮುಳುಗಿದ್ದವು. ಬೇಕಂತಲೆ ಹೋರಗೆ ದೀಪ ಹಚ್ಚದೆ ನಡುಮನೆಯಲ್ಲಿ ದೀಪ ಹಚ್ಚಲು ಬಂದಳು ,ಅವಳ ಉದ್ಧೇಶ ಏಕಾಂತದಲ್ಲಿ ಇಬ್ಬರು ಮಾತನಾಡುವುದಿರಬೇಕು. ದೀಪಕ್ಕೆ ಎಣ್ಣೆ ಹಾಕುತ್ತಿದ್ದವಳ ಸೀರೆಯ ನೇರಿಗೆ ಜಾರಿ ಹೋಯಿತು. ಮೊದಲೆ ಸೀರೆಯುಡಲು ಬರುವುದಿಲ್ಲ, ಎರಡು ಕೈ ಎಣ್ಣೆ ಮುಳುಗಿವೆ ,ಸೀರೆ ಎಣ್ಣೆ ತಾಗಿಸಿದರೆ ಅಕ್ಕನ ಕೈಯಲ್ಲಿ ಸಹಸ್ರನಾಮ ಖಂಡಿತಾ ತಪ್ಪಲ್ಲ. ದೀಪ ಹಚ್ಚುತ್ತಿದ್ದ ಜನ್ನಿಗೆ ಇದರ ಪರಿವೆ ಇರಲಿಲ್ಲ,ಒಂದು ದೀಪವನ್ನು ಕೈಯಲ್ಲಿ ಹೀಡಿದು ಉಳಿದ ದೀಪಗಳನ್ನು ಅಂಟಿಸುತ್ತಿದ್ದ. ಅಷ್ಟರಲ್ಲೆ ಕರೆಂಟ್ ಹೋಗಬೇಕೆ, ದೀಪವನ್ನು ಅವಳ ಮುಂದೆ ಮಾಡಿ ಹಿಡಿದವನೆ ದೀಪದ ಬೆಳಕಿಗೆ ಅವಳ ಮುಖವನ್ನು ಕಂಡ. ಅವಳ ಮುಖದ ಕಳವಳ ಕಂಡ ಎನಾಯಿತೆಂದು ದೀಪದ ಬೆಳಕಿನಲ್ಲಿ ಸನ್ನೆ ಮಾಡಿದ . ಸುಮಾ ಕೆಳಗೆ ನೋಡು ನನ್ನ ಕೈಯೆಲ್ಲ ಎಣ್ಣೆ ಮುಳುಗಿದೆ ಎಂದಳು. ಅವನು ಅಷ್ಟೆತಾನೆ ಎಂದು ಹಿಡಿದ ದೀಪವನ್ನು ಅವಳ ಕೈಗೆ ಕೊಟ್ಟು ಸೀರೆಯ ನೆರಿಗೆಗಳನ್ನು ಮುಡಿಚಿ ಸೊಂಟಕ್ಕೆ ಸಿಕ್ಕಿಸಿದ. ಅವಳು ಒಮ್ಮೆಲೆ ಪುಳಕಗೊಂಡವಳಂತೆ ಅವನನ್ನು ತಬ್ಬಿಹಿಡಿದಳು. ಅವನು ಅವಳ ಬಾಹುಬಂಧನದಲ್ಲಿ ಒಂದಾದ. ಮುಂದೆ ಎಲ್ಲರನ್ನು ಒಪ್ಪಿಸಿ ಭಾರ್ಗವನ ಮದುವೆ ಮಹೂರ್ತದಲ್ಲೆ ಸಮಾ ಮತ್ತು ಜನಾರ್ಧನ. ಸುಮಂಗಲಾ ಮತ್ತು ಭಾರ್ಗವ ಮದ್ವೆಯಾದರು.

ಮಾರುತಿ ಬೆಂಡ್ಲಗಟ್ಟಿ
ಹಳೂರ ಓಣಿ ಮುಂಡಗೋಡ, 
ತಾ-ಮುಂಡಗೋಡ. ಜಿ
-ಉತ್ತರ ಕನ್ನಡ. ಪಿನ್ ಕೊಡ್-581349 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ