ನನ್ನ ಪುಟಗಳು

09 ಜನವರಿ 2021

ಮನುಜನಾಗೋ ಮನುಜ ನೀನು

ಕಷ್ಟ ನಷ್ಟ ನೀರ ಮೇಲಿನ ಗುಳ್ಳೆ ಕಣಣ್ಣ.
ಹಂಗ್ ಬಂದು ಹಿಂಗ್ ಹೋಗೊ ಅತಿಥಿ ತಿಳಿಯಣ್ಣ.
ಬಾಡ್ಗೆ ಮನೆಯಿಂದ ಒಂದಿನ ಹೋಗೊದೇಯಣ್ಣ.
ನೀನು ತಂದಿರೋದೆನು ಇಲ್ಲಿ ಚಿಂತೆ ಬಿಡಣ್ಣ.

ಸಾವು ನೋವು ಯಾರೀಗಿಲ್ಲ ಹುಡುಕಿ ನೋಡಣ್ಣ.
ಸಾವೇ ಇಲ್ಲದ ಮನೆಯಾ ಸಾಸ್ವೆ ಸೀಕ್ಕೊದಿಲ್ಲಣ್ಣ.
ನಾಕ ನರಕ ಮೇಲೆಲ್ಲಿಲ್ಲ ಇಲ್ಲೆ ನೋಡಣ್ಣ.
ಇದ್ದಷ್ಟದಿನ ಚೆಂದಾಗ್ಬಾಳದ್ರೆ ಹೋಗೊದೆನಣ್ಣ

ಜಾತಿ ಜಾತಿ ಅಂತ  ಜಾತಿ ಜಗಳ ಯಾಕಣ್ಣ
ಎಲ್ಲ ಜಾತಿ ಮೂಲಬೇರು ಒಂದೇ ನೋಡಣ್ಣ
ಅಣ್ಣ ತಮ್ಮನಂತೆ ಕೂಡಿ ಬಾಳಬೇಕಣ್ಣ.
ಆಗ ನಿನ್ನ ಬಾಳು ಅರಳೊ ಹೂವು ಕಣಣ್ಣ.

ಬುದ್ಧ ಹೇಳಿದ ಶಾಂತಿ ಮಾರ್ಗ ಹಿಡಿದು ನೋಡಣ್ಣ.
ಗಾಂಧಿ ತಾತನ ಅಂಹಿಸೆಯ ಅಸ್ತ್ರ ಪಡಿಯಣ್ಣ.
ಕನಕ ಬಸವ ಪುರಂದರ ತತ್ವ ಅರಿಯಣ್ಣ.
ಮಾನವತೆ ಶ್ರೇಷ್ಠವದು ಪಡೆದು ತೀರಣ್ಣ.

 - ಮಾರುತಿ ಬೆಂಡ್ಲಗಟ್ಟಿ    
ಹಳೂರ ಓಣಿ, ಮುಂಡಗೋಡ
ತಾ-ಮುಂಡಗೋಡ.
ಜಿ-ಉತ್ತರ ಕನ್ನಡ.
ಪಿನ್ ಕೋಡ್-581349

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ