ನನ್ನ ಪುಟಗಳು

09 ಜನವರಿ 2021

ಜಂಗಮವಾಣಿ

ಏನ ಚಂದ ಐಯಿತಿ ಎಪ್ಪಾ ಇದು
ನೋಡಿದರೆ ಯಾರು ಬಿಡುವುದಿಲ್ಲ
ತರುತನ ಇವರಿಗೆ ಸಮಾಧಾನ ಇಲ್ಲಾ
ಊಟ ಬಿಟ್ಟರೆ ಚಿಂತೆ ಇಲ್ಲಾ ತರುವರು
ಚಾಜ೯ ಇಲ್ಲಾ ನನ್ನ ಜಂಗಮವಾಣಿ
ಪದೇ ಪದೇ ಕರೆ ಬರುತಾವು
ಹೇಳಿದರು ಕೆಳವರು ಇಲ್ಲಾ ಎಪ್ಪಾ
ಇದೊಂದು ಮಾಯವಾದ ತಲೆ೯ ಇದು
ದೂರವಿದ್ದ ಸಂಬಂಧವನ್ನು ಕೂಡಿಸುತ್ತೆ
ಕೂಡಿ ಇದ್ದ ಸಂಬಂಧವನ್ನು ದೂರ ಮಾಡುತ್ತೆ
ಏನಪ್ಪಾ ಇದರ ಲೀಲೆ ಬಲ್ಲವರು ಯಾರ
ಒಬ್ಬರೊಬ್ಬರಗೆ ಬಿಟ್ಟು ಇರಲಾರರು
ಬಿಟ್ಟು ಹೋದರು ನೆನಪು ಆಗುವುದು
ಮಾತನಾಡದಿದ್ದರೆ ಕೋಪಗೋಳ್ಳುವುದು
ಏನ ಐಯಿತಿ ಅಂತಹದು ಇದರಲ್ಲಿ
ಬಲ್ಲವರು ಯಾರೊ ಎಪ್ಪಾ ಇದರ ಲೀಲೆ
ಮಕ್ಕಳು ಬಿದ್ದರೂ ಅದರ ಗುಂಗಿನಲ್ಲಿ
ಹುಟ್ಟಿದ ಕೂಸು ಹಲೋ ಎಂದಿತು
ಮಗುವಿಗೆ ಇದು ಆಟದ ಸಾಮಗ್ರಿ ಆಯಿತು
ಫೋನ್ ನೋಡಿ ಅಳುವ ಮಗು
ಸಮಾಧಾನ ವಾಗುವುದಾಯಿತು.
ಬಡತನ ಇದ್ದರು ಬೇಕು
ಸಿರಿತನ ಇದ್ದರು ಬೇಕು
ಹೋಟ್ಟೆಗೆ ಕೂಳು ಇಲ್ಲದಿದ್ದರು ಬೇಕು
ಏನ ಎಪ್ಪಾ ಇದರ ಲೀಲೆ ಬಲ್ಲವರು ಯಾರ.
 

ರಚನೆ : ಸೂರಿ
(ಶಿವರಾಜಕುಮಾರ ಅಜ್ಜಪ್ಪ ತಳವಾರ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ