ನನ್ನ ಪುಟಗಳು

02 ಅಕ್ಟೋಬರ್ 2015

ಜಗದ್ದಳ ಸೋಮನಾಥ



ಜಗದ್ದಳ ಸೋಮನಾಥ 
ಈತನ ಕಾಲಕ್ರಿ.. ೧೧೫೦.

ಈತನು `ಕರ್ನಾಟಕ ಕಲ್ಯಾಣಕಾರಕ' ಎಂಬ ಒಂದು ವೈದ್ಯಗ್ರಂಥವನ್ನು ರಚಿಸಿದ್ದಾನೆ. ಇದು ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ.

ಇವನಿಗೆ `ವಿಚಿತ್ರ ಕವಿ' ಎಂಬ ಬಿರುದು ಇದೆ.
ಇವನು ಶಾಸ್ತ್ರಕಾರನಾದರೂ ಒಳ್ಳೆಯ ಪದವಿನ್ಯಾಸ ಕೌಶಲವನ್ನು ಪಡೆದಿದ್ದ ಸಮರ್ಥಕವಿ.

ಪೂಜ್ಯಪಾದರು ವಿರಚಿಸಿದ ಸಂಸ್ಕೃತ ಗ್ರಂಥಕ್ಕೆ ಕನ್ನಡ ಭಾಷಾಂತರವಾದ `ಕರ್ಣಾಟಕ ಕಲ್ಯಾಣಕಾರಕ'ವು ವೃತ್ತಕಂದಗಳಲ್ಲಿ ರಚಿತವಾಗಿದೆ.

`ಕರ್ಣಾಟಕ ಕಲ್ಯಾಣಕಾರಕ' ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ. ನಾನಾ ರೋಗಗಳ ಸ್ವರೂಪ, ನಿಧಾನ ಕ್ರಮ ಮತ್ತು ಚಿಕಿತ್ಸಾ ವಿಧಾನಗಳನ್ನು ಕವಿ ಇದರಲ್ಲಿ ಹೇಳಿದ್ದಾನೆ.

ಕವಿ ಜೈನನಾದ್ದರಿಂದ ಕೃತಿಯಲ್ಲಿ ಮದ್ಯ, ಮಧು, ಮಾಂಸ ವರ್ಜಿತವಾದ ಔಷಧಿಗಳನ್ನು ಮಾತ್ರ ಹೇಳಿದ್ದಾನೆ. ಅತಿಸಾರ, ಗುಲ್ಮ ರೋಗ ಮೊದಲಾದ ಹಲವು ವ್ಯಾಧಿಗಳ ವಿಷಯವನ್ನು ಸೋಮನಾಥ ವಿಸ್ತಾರವಾಗಿ ನಿರೂಪಿಸಿದ್ದಾನೆ.

ಜೊತೆಗೆ ಚರಕ,ವಾಗ್ಬಟ, ಸಿದ್ಧಸಾರ ಮೊದಲಾದ ಗ್ರಂಥಗಳಿಂದ ವಿಷಯಗಳನ್ನು ಆರಿಸಿ ಸೇರಿಸಲಾಗಿದೆ ಎಂದೂ, ಅಭಯಚಂದ್ರ ಸಿದ್ಧಾಂತಿ ಹಾಗೂ ಸುಮನೋಬಾಣರು ತನ್ನ ಗ್ರಂಥವನ್ನು ಪರಿಷ್ಕರಿಸಿದರೆಂದೂ, ಇದರಲ್ಲಿ ಹೇಳಲ್ಪಟ್ಟಿರುವ ಚಿಕತ್ಸೆಗಳು ಮದ್ಯ, ಮಾಂಸ, ಮಧು ವರ್ಜಿತವಾದವುಗಳೆಂದೂ ಪ್ರಶಂಶಿಸಿಕೊಂಡಿದ್ದಾನೆ. 
ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಈ ಗ್ರಂಥದ ತಾಳಪತ್ರದ ಪ್ರತಿಯೊಂದಿದೆ. ಇದು ೩೩ ಅಧ್ಯಾಯವುಳ್ಳ ಮಧ್ಯಮ ಪ್ರಮಾಣದ ಗ್ರಂಥ. ಕೆಲವು ಕಡೆ ಗ್ರಂಥಾಪಾತವಿದ್ದು ವಾಕ್ಯ ದೋಷಗಳೂ ಸಾಕಷ್ಟಿವೆ. ಪದ್ಯರೂಪವಾಗಿರುವ ಈ ಗ್ರಂಥ ಕನ್ನಡದ ವೈದ್ಯಗ್ರಂಥಗಳ ಪೈಕಿ ಮೊದಲನೆಯದು ಎಂದು ಪ್ರಮುಖ ಸ್ಥಾನವನ್ನು ಹೊಂದಿದೆ.

1 ಕಾಮೆಂಟ್‌: