03 ಡಿಸೆಂಬರ್ 2020
11 ನವೆಂಬರ್ 2020
10ನೇ ತರಗತಿ ಕನ್ನಡ ಗದ್ಯ-01-ಶಬರಿ-ವ್ಯಾಕರಣಾಂಶಗಳು
ದ್ವಿರುಕ್ತಿ
- ಮಕ್ಕಳು ಓಡಿಓಡಿ ದಣಿದರು.
- ಈಗೀಗ ಅವಳು ಚೆನ್ನಾಗಿ ಓದುತ್ತಾಳೆ.
- ದೊಡ್ಡ ದೊಡ್ಡ ಮರಗಳು ಬಿದ್ದವು.
ಈ ವಾಕ್ಯಗಳಲ್ಲಿ ಓಡಿ, ಈಗ, ದೊಡ್ಡ ಎಂಬ ಪದಗಳು ಎರಡೆರಡು ಬಾರಿ ಪ್ರಯೋಗವಾಗಿರುವುದನ್ನು ಗಮನಿಸಬಹುದು;
ಉದಾ:
ಆಧಿಕ್ಯದಲ್ಲಿ - ದೊಡ್ಡದೊಡ್ಡ, ಹೆಚ್ಚುಹೆಚ್ಚು.
ಪ್ರತಿಯೊಂದು - ಮನೆಮನೆಗಳಲ್ಲಿ, ಕೇರಿಕೇರಿಗಳನ್ನು.
ಸಂಭ್ರಮದಲ್ಲಿ - ಅಗೋಅಗೋ, ಬನ್ನಿಬನ್ನಿ.
ಆಶ್ಚರ್ಯದಲ್ಲಿ - ಅಬ್ಬಬ್ಬಾ, ಅಹಹಾ.
ಆಕ್ಷೇಪದಲ್ಲಿ - ಬೇಡಬೇಡ, ನಡೆನಡೆ.
ನಿ?ಧದಲ್ಲಿ - ಸಾಕುಸಾಕು
ಒಪ್ಪಿಗೆಯಲ್ಲಿ - ಹೌದ್ಹೌದು, ಆಗಲಿ ಆಗಲಿ, ಇರಲಿ ಇರಲಿ.
ಅವಸರದಲ್ಲಿ - ಓಡುಓಡು, ನಡೆನಡೆ.
ಇವುಗಳಲ್ಲದೆ ಇನ್ನೂ ಕೆಲವು ವಿಶೇಷ ರೂಪಗಳು ಇವೆ.
ಮೊದಲುಮೊದಲು - ಮೊತ್ತಮೊದಲು / ಮೊಟ್ಟಮೊದಲು
ಕಡೆಗೆಕಡೆಗೆ - ಕಟ್ಟಕಡೆಗೆ / ಕಡೆಕಡೆಗೆ
ನಡುವೆನಡುವೆ - ನಟ್ಟನಡುವೆ / ನಡುನಡುವೆ
ಬಯಲುಬಯಲು - ಬಟ್ಟಬಯಲು
ತುದಿತುದಿ - ತುತ್ತತುದಿ
ಕೊನೆಗೆಕೊನೆಗೆ - ಕೊನೆಕೊನೆಗೆ
ಮೆಲ್ಲನೆಮೆಲ್ಲನೆ - ಮೆಲ್ಲಮೆಲ್ಲನೆ
* ಮೊದಲ ಪದಕ್ಕೆ ಮಾತ್ರ ಅರ್ಥವಿರುವಂತಹವು : (ಪ್ರತಿಧ್ವನಿ ಶಬ್ದಗಳು/ಮಾತಿಗೊಂದು ಗೀತು) ಕಾಫಿಗೀಫಿ, ಹುಳಹುಪ್ಪಡಿ, ದೇವರುಗೀವರು, ಹಣಗಿಣ, ಪುಸ್ತಕಗಿಸ್ತಕ ಇತ್ಯಾದಿ.
10ನೇ ತರಗತಿ ಕನ್ನಡ ಗದ್ಯ-01-ಶಬರಿ-ಭಾಷಾಭ್ಯಾಸ
೧. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
ಕನ್ನಡ ಸಂಧಿಗಳು: ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ
ಲೋಪ - ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ.
ಆಗಮ - ಕೈಯನ್ನು, ಮಳೆಯಿಂದ, ಶಾಲೆಯಲ್ಲಿ, ಮರವನ್ನು, ಮಗುವಿಗೆ.
ಆದೇಶ - ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು.
೨. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ.
ಸುರಾಸುರ = ಸುರ + ಅಸುರ - ಸವರ್ಣಧೀರ್ಘಸಂಧಿ
೨. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನಸಂಧಿ
೩. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ದ್ವಿರುಕ್ತಿ
೪. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ತ್ವಸಂಧಿ
ಇ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
೨. ಮನಸಿದ್ದರೆ ಮಾರ್ಗ.
10ನೇ ತರಗತಿ ಕನ್ನಡ ಗದ್ಯ-01-ಶಬರಿ-ಟಿಪ್ಪಣಿಗಳು
ಶಬರಿ ನಾಟಕದಲ್ಲಿರುವ ಹೆಚ್ಚುವರಿ ಟಿಪ್ಪಣಿಗಳು
ಶಬರಿ : ಶಬರನ ಮಗಳು, ಶಬರನ ಮಗಳಾದ್ದರಿಂದ 'ಶಬರಿ' ಎಂಬ ಹೆಸರಾಯಿತು. ಮತಂಗ ಋಷಿಯ ಶಿಷ್ಯೆ.
ಮತಂಗ : ಒಬ್ಬ ಬ್ರಹ್ಮರ್ಷಿ. ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ. ವಾಲಿಯು ದುಂದುಭಿಯೆಂಬ ರಕ್ಕಸನನ್ನು ಕೊಂದು ಮದೋನ್ಮತ್ತನಾಗಿ ಕಳೇಬರವನ್ನು ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು. ಇದರಿಂದ ಕ್ರುದ್ಧನಾದ ಮತಂಗಮುನಿಯು "ವಾಲಿಯು ಈ ಆಶ್ರಮವನ್ನು ಪ್ರವೇಶ ಮಾಡಿದರೆ ಸಾವು ಸಂಭವಿಸಲಿ” ಎಂದು ಶಪಿಸಿದನು. ವಾಲಿಯಿಂದ ಭಯಗ್ರಸ್ತನಾಗಿದ್ದ ಸುಗ್ರೀವನು ಇಲ್ಲಿ ನೆಲೆಸಿದ್ದನು. ಶಬರಿಯು ಮತಂಗರ ಆಶ್ರಮದಲ್ಲಿದ್ದಳು.
ಭೂಮಿಜಾತೆ : ಸೀತೆ, ಭೂಮಿಯ ಮಗಳು. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಪುತ್ರಕಾಮೇಷ್ಠಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ. ಹೀಗಾಗಿ ಸೀತೆಗೆ 'ಭೂಮಿಜಾತೆ’ಯೆಂದು ಮತ್ತೊಂದು ಹೆಸರು.
ದಶರಥ : ಅಯೋಧ್ಯೆಯ ಅರಸು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಈತನ ಮಕ್ಕಳು. ಕೌಸಲ್ಯೆ, ಸುಮಿತ್ರೆ, ಕೈಕೆ ಈತನ ಮಡದಿಯರು.
ರಾಮನು ಕಾಡಿಗೆ ತೆರಳಿದ ನಂತರ ದುಃಖಿತನಾಗಿರುವ ದಶರಥ*********
ಸೌಮಿತ್ರಿ : ಲಕ್ಷ್ಮಣ, ದಶರಥನ ಎರಡನೆಯ ಮಡದಿಯಾದ ಸುಮಿತ್ರೆಯ ಮಗ ಲಕ್ಷ್ಮಣ. ಸುಮಿತ್ರೆಯ ಮಗನಾದುದರಿಂದ 'ಸೌಮಿತ್ರಿ' ಎಂದು ಈತನನ್ನು ಕರೆಯುತ್ತಾರೆ.
ದನು : ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ. ಹಿಂದಣ ಜನ್ಮದಲ್ಲಿ ವಿಶ್ವಾವಸು ಎಂಬ ಗಂಧರ್ವನಾಗಿದ್ದ. ಈತ ಸ್ಥೂಲಶಿರನೆಂಬ ಮುನಿಯನ್ನು ಅಪಮಾನಿಸಿದ್ದರಿಂದ ರಾಕ್ಷಸನಾಗಿ ಜನಿಸಿದ. ಒಮ್ಮೆ ಇಂದ್ರನ ವಜ್ರಾಯುಧದ ಪ್ರಹಾರದಿಂದ ಇವನ ಮುಖಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು. ಹಾಗಾಗಿ ಈತನಿಗೆ ಉದರಮುಖ ಎಂಬ ಹೆಸರುಬಂತು. ರಾಮಲಕ್ಷ್ಮಣರಿಂದ ಈತನಿಗೆ ಶಾಪವಿಮೋಚನೆಯಾಯ್ತು. ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಈತ ಸುಗ್ರೀವನಲ್ಲಿ ಸಖ್ಯಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ.
*****************************
ಮೇಳ : ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗ ಇವರು ರಂಗದಲ್ಲಿ ಕಾಣಿಸಿಕೊಂಡು ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಹಾಡುತ್ತಾರೆ.
*******
ಬಲವಂದು : ಪ್ರದಕ್ಷಿಣಾಕಾರವಾಗಿ (ಎಡದಿಂದ ಬಲಕ್ಕೆ) ಸುತ್ತುಬಂದು ಎಂದರ್ಥ. ದೇವರಿಗೆ, ತುಳಸಿಕಟ್ಟೆಗೆ, ಕಾಮಧೇನು, ಕಲ್ಪವೃಕ್ಷಗಳಿಗೆ, ಹೋಮಕುಂಡ ಮುಂತಾದವುಗಳಿಗೆ ಸುತ್ತುವರಿಯುವಾಗ ಅವು ನಮ್ಮ ಬಲಭಾಗದಲ್ಲಿರುವಂತೆ ಸುತ್ತುವರಿಯುತ್ತಾರೆ. ಆಗ ಅದು ಪ್ರದಕ್ಷಿಣೆಯಾಗುತ್ತದೆ. ಸುತ್ತುವರಿಯಬೇಕಾದ ವಸ್ತುವನ್ನು ಎಡಭಾಗದಲ್ಲಿರುವಂತೆ ಸುತ್ತುವರಿದರೆ (ಎಡಬಂದು) ಅದು ಅಪ್ರದಕ್ಷಿಣೆಯಾಗುತ್ತದೆ.
ಪರ್ಣಶಾಲೆ : ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿರುವ ಕುಟೀರ.
ಚಿತ್ರ ಕೃಪೆ: ಗೂಗಲ್ ಚಿತ್ರಗಳು
*******ಕನ್ನಡ ದೀವಿಗೆ******
10ನೇ ತರಗತಿ ಕನ್ನಡ ಗದ್ಯ-01-ಶಬರಿ-ಸಾರಾಂಶ
ಆಗ ರಾಮಲಕ್ಷ್ಮಣರು ಆ ಆಶ್ರಮದಲ್ಲಿ ಮತಂಗಋಷಿಗಳು ಪ್ರಭಾವವನ್ನು ನೋಡಬಯಸಿದರು. ಶಬರಿ ಅವರನ್ನು ಅಲ್ಲಿಗೆ ಕರೆದೊಯ್ದು ಋಷಿಗಳ ಮಹಿಮೆಯನ್ನು ಅವರಿಗೆ ತೋರಿಸಿದಳು. “ರಘುನಂದನ, ಜಿಂಕೆಗಳಿಂದಲೂ ಪಕ್ಷಿಗಳಿಂದಲೂ ಕೂಡಿದ ಈ ಮತಂಗವನವನ್ನು ನೋಡು. ಭಾವಿತಾತ್ಮರಾದ ನಮ್ಮ ಗುರುಗಳು ಯಜ್ಞಮಾಡುತ್ತಿದ್ದ ಈ ಸ್ಥಳವನ್ನೂ ನೋಡು. ಅವರ ತಪಃಪ್ರಭಾವದಿಂದ ಯಜ್ಞವೇದಿಗಳು ಇನ್ನೂ ಹೊಳೆಯುತ್ತಿವೆ. ಅವರು ಮರಗಳಲ್ಲಿ ಆರಹಾಕಿದ ನಾರುಮುಡಿಗಳು ಇನ್ನೂ ಹಸಿ ಹಸಿಯಾಗಿವೆ. ಅವರು ಪೂಜೆಮಾಡಿದ ಹೂಮಾಲೆ ಇನ್ನೂ ಬಾಡದಾಗಿದೆ. ಈ ವನವನ್ನೆಲ್ಲ ನೋಡಿದೆಯಲ್ಲವೆ ನೀನು? ಇನ್ನು ಅಪ್ಪಣೆಯಾದರೆ ಈ ಕಳೇಬರವನ್ನು ವಿಸರ್ಜಿಸಿ ನಾನು ಸೇವಿಸುತ್ತಿದ್ದ ಋಷಿಗಳ ಬಳಿಗೆ ಹೋಗುತ್ತೇನೆ. ”
ಶಬರಿಯ ಮಾತನ್ನು ಕೇಳಿ ರಾಮನಿಗೆ ಸಂತೋಷವಾಯಿತು. ಅಂತೆಯೆ ಆಕೆ ಮಾಡಿದ ಉಪಚಾರದಿಂದ ತೃಪ್ತಿಯೂ ಉಂಟಾಯಿತು. ಆ ಬಳಿಕ ಶಬರಿಯ ದೇಹತ್ಯಾಗಕ್ಕೆ ರಾಮನು ಅಪ್ಪಣೆ ಕೊಡಲು, ಆಕೆ ತನ್ನ ದೇಹವನ್ನೂ ಯಜ್ಞೇಶರನಿಗೆ ಅರ್ಪಿಸಿದಳು. ತತ್ಕ್ಷಣವೆ ಅಗ್ನಿಗೆ ಸಮಾನವಾದ ದಿವ್ಯದೇಹವನ್ನೂ ವಸ್ತ್ರಾಲಂಕಾರಗಳನ್ನೂ ಧರಿಸಿ ಶೋಭಿಸುತ್ತ ಪುಣ್ಯಾತ್ಮರಿರುವ ಲೋಕವನ್ನು ಕುರಿತು ತೆರಳಿದಳು.

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಕವಿಪರಿಚಯ
ಗದ್ಯ-೨ ಶಬರಿ
![]() |
| ಪುತಿನ |
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಅವರುಕ್ರಿ. ಶ. ೧೯೦೫ ರಲ್ಲಿ ಮಂಡ್ಯಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು.
![]() |
| ಪುತಿನ |
ಕವಿ ಪುತಿನ ಅವರ ಶತಮಾನದ ಮನೆ
ಪುತಿನ ಮನೆ, ಮೇಲುಕೋಟೆ




































