ನನ್ನ ಪುಟಗಳು

20 ಅಕ್ಟೋಬರ್ 2015

೦೫.ಮಗ್ಗೆಯ ಮಾಯಿದೇವ

ಮಗ್ಗೆಯ ಮಾಯಿದೇವ
      ಈತನು ಕ್ರಿ.ಶ.೧೪೩೦ರ ಸುಮಾರಿಗೆ ಜೀವಿಸಿದ್ದನು.
ಹುಟ್ಟಿದ ಊರು: ಮಲಪ್ರಭಾ ನದಿ ದಂಡೆಯ ಐಪುರ ಕ್ಷೇತ್ರ[ಹುನಗುಂದ ತಾಲೂಕಿನ ಹಿರೇಮಾಗಿ (ಮಗ್ಗೆ)]
ಇವನ ತಂದೆ: ಸಂಗಮೇಶ್ವರ.
ಐಒಳೆ (ಐಪುರಿ) ಯ ಶ್ರೀ ಸಂಗಮೇಶ್ವರ ಗುರುವಿನಲ್ಲಿ ಈತನು ಅಧ್ಯಯನ ಮಾಡಿದ.
ವಿಜಯನಗರ ಈತನ ಕಾರ್ಯ ಭೂಮಿಯಾಯಿತು.
 ಅನುಭವ ಸೂತ್ರ, ಶಿವ ಸೂತ್ರ  -ಇವು ಈತನ ಸಂಸ್ಕೃತ ಗ್ರಂಥಗಳು.
 ಶಿವಾಧವ ಶತಕ, ಶಿವಾವಲ್ಲಭ ಶತಕ, ಐಪುರೀಶ್ವರ ಶತಕ  -ಈ ಮೂರು ಶತಕಗಳು ಲಭ್ಯವಾಗಿವೆ.
 ಪ್ರಭುನೀತಿ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್ಸ್ಥಲ ಗದ್ಯ, ಶತಕತ್ರಯ  -ಈ ಕೃತಿಗಳು ಲಭ್ಯವಾಗಿಲ್ಲ. 

          ಬಸವ ಯುಗದಲ್ಲಿ ಹೆದ್ದೊರೆಯಾಗಿ ಹರಿದಿದ್ದ ತತ್ವಸಿದ್ಧಾಂತದ ವಚನ ವಾಹಿನಿ ಕೆಲಕಾಲ ಗುಪ್ತಗಾಮಿನಿಯಾಗಿ ಪ್ರವಹಿಸಿ ವಿಜಯನಗರದ ಇಮ್ಮಡಿ ಪ್ರೌಢರಾಯನ ಕಾಲದಲ್ಲಿ ಮತ್ತೆ ಬೃಹದ್ರೂಪ ತಾಳಿ ಹೊರಹೊಮ್ಮಿತು. ವೀರಶೈವ ಸಾಹಿತ್ಯದ ವಸಂತಕಾಲ ಮತ್ತೆ ಮೂಡಿ ಬಂದಿತು. ನೂರೊಂದು ವಿರಕ್ತರು ಕಾಣಿಸಿಕೊಂಡರು. ಅವರೆಲ್ಲ ಅನುಭಾವಿಗಳು ನಿಜ. ಆದರೆ ಎಲ್ಲರೂ ಸಾಹಿತ್ಯ ಸೃಷ್ಟಿಸಿದವರಲ್ಲ. ಸಾಹಿತ್ಯ ಸೃಷ್ಟಿಸಿದ ಪ್ರಮುಖರಲ್ಲಿ ಒಬ್ಬ ಮಗ್ಗೆಯ ಮಾಯಿದೇವ.

ಪರರಾರ್ತನ್ನವರಾರ್ ವಿವೇಕಿಸೆ ? ನಿಜಸ್ತ್ರೀ ಪುತ್ರ ಮಿತ್ರರ್ ಸ್ವಕೀ
ಯರೇ ? ಮಿಕ್ಕಾದವರನ್ಯರೇ ತನಗೆ ? ನಾನೇನೆಂಬೆನಿಂತಪ್ಪ ಮೂರ್ಖರನ್ ……….


ತನ್ನ ದೇಹಾದಿ ಕರಣಗಳೇ ತನಗೆ ಅನ್ಯವಾಗಿರುವಾಗ ಉಳಿದವರು ತನಗೆ ಅನ್ಯರೆಂದು ಹೇಳುವುದು ಮೂರ್ಖತನವಲ್ಲವೇ ? ಎಂದು ವಿವೇಕವನ್ನು ಎಚ್ಚರಿಸುವ ಜ್ಞಾನಿ ಈ ಮಗ್ಗೆ ಮಾಯಿದೇವ.

“ನಾನು – ನನ್ನದು, ನಾನು ಮಾಡುವವ ಎನ್ನುವಲ್ಲಿ ದುಃಖದ ಉಗಮ ನೀನು ನಿನ್ನದು, ನಿನ್ನ ಕೃತಿ ಎಂಬಲ್ಲಿ ಸುಖದ ಸೆಲೆ. ಈ ನಿರಹಂಭಾವ ನಿರಹಂಕೃತಿ ಕ್ರಿಯೆ ನೆಲೆಗೊಂಡರೆ ಇನ್ನಾವ ಜಪ ತಪ ಯೋಗ ಯಾಗಗಳೂ ಬೇಕಿಲ್ಲ ಎಂಬ ಮಾಯಿದೇವನ ಮಾತುಗಳು ಆತನು ಅದೆಂಥ ಅನುಭಾವಿ, ದಾರ್ಶನಿಕನಾಗಿದ್ದ ನೆಂಬುದಕ್ಕೆ ಸಾಕ್ಷಿ.

ಪಾಪ ಪುಣ್ಯ, ಸುಖ ದುಃಖ, ಸ್ವರ್ಗ ನರಕಗಳ ಸ್ವರೂಪ ವಿವೇಚಿಸುತ್ತ ವ್ಯಕ್ತಿಯೊಬ್ಬ ಪುಣ್ಯಾಪೇಕ್ಷೆ ಉಳ್ಳವನಾಗಿದ್ದರೆ ಈ ಎಲ್ಲ ದ್ವಂದ್ವಗಳು ಕ್ರಮವಾಗಿ ಸಂಭವಿಸುವವು. ಆದ್ದರಿಂದ ಫಲಾಪೇಕ್ಷೆಯ ಪುಣ್ಯಮಾಡಿರುವದೇ ಪಾಪದ ಪರಿಹಾರ. ಎಂಥ ತರ್ಕಬದ್ಧ ವಿಚಾರ ! ಮಾಯಿದೇವನ ವೈಚಾರಿಕ ಮಟ್ಟ ಅದೆಷ್ಟು ಎತ್ತರದ್ದು !

ಮಾಯಿದೇವ ಸಕಲ ಶಾಸ್ತ್ರಪಾರಂಗತ. ಉಭಯ ಭಾಷಾಕೋವಿದ ರಾಜಪೂಜಿತ, ವೀರಶೈವ ತತ್ವಸಿದ್ಧಾಂತ ಕುರಿತು ಗಂಭೀರ ಚಿಂತನೆ ನಡೆಸಿದ ದಾರ್ಶನಿಕ, ಶಿವಾನುಭವಿ, ಷಟಸ್ಥಲ ನಿರ್ಣಾಯಕ.
 
*******ಮಾಹಿತಿ ಕೃಪೆ: ನಮ್ಮಹುನಗುಂದ, ವಿಕಿಪೀಡಿಯಾ********

4 ಕಾಮೆಂಟ್‌ಗಳು:

  1. ಮಹಾಂತೇಶ ಕುಂಬಾರ ಹೂವಿನಹಳ್ಳಿಏಪ್ರಿಲ್ 16, 2020 ರಂದು 09:53 ಅಪರಾಹ್ನ ಸಮಯಕ್ಕೆ

    ಅತ್ತ್ಯುತ್ತಮ ಕಾರ್ಯ ಸರ್.ಮಾಹಿತಿಯ ಕಣಜ ಮರೆತು ವಿಷಯಗಳೆಲ್ಲ ನೆನಪಿಸುವ ನೆನಪಿನ ಗುಳಿಗೆಗಳಂತೆ ಮಾಹಿತಿ ಸಂಪಾದಿಸಿದ ನಿಮಗೆ ಶರಣು ಶರಣಾರ್ಥಿ.

    ಪ್ರತ್ಯುತ್ತರಅಳಿಸಿ