ನನ್ನ ಪುಟಗಳು

20 ಅಕ್ಟೋಬರ್ 2015

೦೪.ಲಕ್ಕಣ ದಂಡೇಶ

 ಲಕ್ಕಣ ದಂಡೇಶ
ಈತನ ಕಾಲ: ಕ್ರಿ.ಶ.೧೪೨೫
ಆಶ್ರಯ : ಈತನು ಪ್ರೌಢ ದೇವರಾಯನ ಮಹಾ ದಂಡನಾಯಕನಾಗಿದ್ದನು.
ಕೃತಿ - ಶಿವತತ್ವ ಚಿಂತಾಮಣಿ,

ಶಿವತತ್ವ ಚಿಂತಾಮಣಿ:
ಇದು ವಾರ್ಧಕ ಷಟ್ಪದಿಯಲ್ಲಿದೆ. ೫೫ ಸಂಧಿಗಳನ್ನು ಹೊಂದಿದ್ದು ಸುಮಾರು ಎರಡು ಸಾವಿರಕ್ಕೂ ಅಧಿಕ ವಾರ್ಧಕ ಷಟ್ಪದಿಗಳಿಂದ ಕೂಡಿದೆ.
ಇದು ವೀರಶೈವ ಧರ್ಮಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಹಲವಾರು ತಾತ್ವಿಕ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡಿರುವ ಬೃಹತ್ ಕೃತಿಯಾಗಿದೆ.

ಇದು ಒಂದು ವಿಧದಲ್ಲಿ ವೀರಶೈವ ವಿಶ್ವಕೋಶವಾಗಿದೆ.

ಇದಲ್ಲದೆ ಲಕ್ಕಣ ದಂಡೇಶ ಕನ್ನಡದ ಚಿಣ್ಣರಿಗೆ ಬರೆದಂತಿರುವ ಪತ್ರಗುಚ್ಛ ‘ಲಕ್ಕಣ್ಣ ದಂಡೇಶನ ಓಲೆಗಳು’ ನಾಡಿನ ಗತವೈಭವವನ್ನು ಬಿಂಬಿಸಿ ಕನ್ನಡಿಗರಲ್ಲಿ ದೇಶಪ್ರೇಮವನ್ನೂ, ಸ್ವಾಭಿಮಾನವನ್ನೂ ಬಡಿದೆಬ್ಬಿಸುವಂತಿವೆ.

*****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ