ನನ್ನ ಪುಟಗಳು

10 ಅಕ್ಟೋಬರ್ 2017

ರವಿಯ ಹಾರೈಕೆ ಮನುಜನಿಗೆ

ರವಿ ತಾನ್ ಮೂಡಿತು
ಮೂಡಣದೊಳಗೆ,
ಪ್ರಕಾಶಿಸಿತು ತಾನ್ ಪ್ರಜ್ವಲಿಸಿತು
ತನ್ನೊಳಗಿನ ಕಿರಣಗಳಿಂದೆಮಗೆ,
ಆಸ್ಪಂದಿಸಿತು ತಾನ್ ಆಸ್ವಾದಿಸಿತು
ವಸುಂಧರೆಯೊಡನೆ,
ಬಡಿದೆಬ್ಬಿಸಿತು ತಾನ್ ಸ್ಪರ್ಶಿಸಿತು ನಿಸರ್ಗದ ಮಡಿಲೊಳಗಿರುವ
ಸಕಲಜೀವರಾಶಿಗಳೊಡನೆ,
               ನಿನ್ನ ವೈಖರಿಯ ಸೊಬಗನು ಬಣ್ಣಿಸಲು ನಾನ್
               ಸರಿಸಾಟಿಯಲ್ಲ,
               ನಿನ್ನ ಋಣದ ಭಾರವನು ತೀರಿಸಲು ಜನ್ಮ ಜನ್ಮಾಂತರಗಳನ್
               ಎತ್ತಿ ಬಂದರು ತೀರಿಸಲಾಗುವುದಿಲ್ಲ,
               ಪೇಳ್ ರವಿಯೇ ಪೇಳ್
               ನಿನ್ನ ಋಣ ಭಾರವ ತಿರಿಸುವುದಾದರು ಹೇಗೆ?
               ಪೇಳ್ವೆನು ನಾನು ಆಲೈಸು ಹೀಗೆ,
ನನ್ನ ಉದರದೊಳು ಅಗಾಧ ಉಷ್ಣಕಿರಣಗಳಿಟ್ಟು ಕೊಂಡು
ಪರರ ಅಭ್ಯುದಯಕ್ಕಾಗಿ ಉರ್ಮಿಗೆ ನೀಡುತ,
ಸಕಲರ ರಕ್ಷಕನಾಗಿದ್ದುಕೊಂಡು
ಸರ್ವರನು ಸಲಹುತ,
ಸರ್ವಾಂತರ್ಯಾಮಿಯಾಗಿ ಬಾಳುತ್ತಿದ್ದೇನೆ
ಅದೇ ನನ್ನ ಜೀವಿತದ ಸಾರ್ಥಕತೆ
                 ಮಾನಸನಾದ ನೀನು ನಿನ್ನೊಳಗಿನ ಸ್ವಾರ್ಥ ಅಹಮಿಕೆಯ ಕೂಪದಿಂದ
                 ಮನದ ಮಲಿನವನು ಮಸಣಕ್ಕೆ ಸಾಗಿಸುತ ನೀನು,
                 ನಿನ್ನ ತನು ಮನವು ಈ ಮನ್ವಂತರದ, ಮಾನಧನ, ಮಾನವೀಯ ಮೌಲ್ಯಗಳಿಂದ
                 ಮಹಾಹರನ ಮೃಢ ಭಕ್ತಿಯ ಶರಣನಾಗು ನೀನು,
                 ಪರರ ಬದುಕಿಗೆ, ಪರ ಜೀವಿಗೆ ಸಹಾಯಿಸುವ ಸರದಾರನಾಗು
                 ಅದೇ ನಿನ್ನ ಬದುಕಿನ ಸಾರ್ಥಕತೆ
                 ಇದೇ ನಿನಗೆ ನನ್ನ ಹಾರೃಕೆ..

ಮಬ್ಬು ಗತ್ತಲು
ಮನುಕುಲದ ಮಂಕಾದ ಮೈಮನವು
ಮುಲುಕು ಮರುಕವನು ಆಲೈಸಿತು ನಸುಗತ್ತಲು
ತಂಪಾದ ಮಾರುತ ಇಂಪಾದ ಮಂಜುಳವ
ಮೊರಹು ಮೋಹಿಸಿತು ಮಾನಿಷನ ತನುಮನವಲು
ಕೃತ್ಯಗಳಿಂದ ಮಲ್ಮಶಗೊಂಡಿರುವ
ಮನಃಪೂರ್ವಕಂ ಮಂಕರಿಸಲು
ಮೇಳೈಸಿ ಗಾಢ ನಿದ್ರಾದೇವಿಗೆ ವರಿಸುವ
ಮೊದಲು ಸೊಂಪಾಗಿ ಚೈತನ್ಯಕರಿಸಲು
ಸಹಾಯಿಸಿತು ಮಬ್ಬುಗತ್ತಲಿನ ಈ ವಾಯು ವಿಹಾರವ
ನಿನಗೆ ಮನಂಗಳ್ ಮೌನದಿಂ
ಅನುದಿನವು ಅನುಕ್ಷಣವು ಕಾತರದಿಂದ ಕಾಯುತಿಹಲು
ನಿವೇದಿಸುತ ನಿನಗೆ ನನ್ನ ಸಫಲತೆಯ ನಮನಂ....

ಶಬ್ದಗಳ ಅರ್ಥ:-
ಮುಲುಕು-ನರಳಾಟ, ಮರುಕ- ಬೇಗುದಿ, ನೋವು, ಮಾರುತ- ಗಾಳಿ, ಮಂಜುಳ- ಮಧುರವಾದ, ಮೊರಹು- ದುಂಬಿಯ ಝೆಂಕಾರ, ಮೋಹಿಸುತ- ಮೈಮರೆ, ಕೃತ್ಯ-ಕೆಲಸ, ಮಲ್ಮಷ- ಮನಸ್ಸಿನೊಳಗೆ ಕಲ್ಮಶಗೊಂಡಿರುವ ಗುಣಗಳು,
ಮಬ್ಬು- ನಸುಗತ್ತಲು, ಮನಃಪೂರ್ವಕಂ-ಮನಸ್ಸಪೂರ್ತಿಯಾಗಿ, ಮಂಕರಿಸು- ಆವರಿಸು, ಮರುಳುಗೊಳ್ಳು, ಮೇಳೈಸು- ಜೊತೆಗೂಡಿಸು, ವರಿಸು- ಒಪ್ಪಿಸು, ಮನಂಗಳ್- ಮನಸ್ಸನ್ನು ಆಕರ್ಷಿಸು, ಸಫಲತೆ- ಸಾರ್ಥಕತೆ.

ರಚನೆ:
    ಸುಮಲತಾ ಟಿ ಎಸ್
    ಕನ್ನಡ ಶಿಕ್ಷಕರು,
    ಕುಮದ್ವತಿ ರೆಸಿಡೆನ್ಸಿಯಲ್ ಸೆಂಟ್ರಲ್ ಸ್ಕೂಲ್,
    ಶಿಕಾರಿಪುರ


*********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ