ನನ್ನ ಪುಟಗಳು

10 ಅಕ್ಟೋಬರ್ 2017

ಮರ ...ಮತ್ತು ಜೀರ್ಣೋದ್ಧಾರ

ಹಸಿದ ಹಕ್ಕಿಯ ಒಡಲು ತುಂಬಿದ ಹಣ್ಣು.
ಜೀರ್ಣವಾಗದೇ..
ಹಿಕ್ಕೆಯಿಂದ ಹೊರಬಿದ್ದ ಬೀಜ
ಗಿಡವಾಗಿ ಹೆಮ್ಮರವಾಗಿ ರಸ್ತೆಯ ಪಕ್ಕ
ಅರಳಿನಿಂತಿದೆ !
ನೆರಳ ಬಯಸಿ ಮೈಯೊಡ್ಡುವವರಿಗೆ,
ಆಡಿ ಹಾಡುವ ಹಕ್ಕಿಗಳಿಗೆ, ಹೀಗೆ..ಹೀಗೆ
ಮರಕ್ಕೀಗ ಧನ್ಯತೆಯ ಭಾವ !
 ಆದರೆ…
ಮರದ ಬುಡದಲ್ಲೀಗ ಗಂಟೆಯ ಸದ್ದು
ಎಂದೋ ಬಿದ್ದೇ ಇದ್ದ ಕಲ್ಲು
ಮೈ ಕೆಂಪಾಗಿಸಿ ಧಡಕ್ಕನೆ ಎದ್ದು ನಿಂತಿದೆ !
ಇನ್ನು ಮರ ಹಾಗೆಯೇ…ಜೀರ್ಣವಾಗಲಿದೆ
ಏಕೆಂದರೆ…
ಎದ್ದು ನಿಂತ ದೇವರ ಜೀರ್ಣೋದ್ಧಾರವಾಗಲಿದೆ !!
ಮುಂದೊಂದು ದಿನ ಗುಡಿಯ ಮೇಲೆ
ಹಕ್ಕಿಯ ಹಿಕ್ಕೆಗಳು ಬಿದ್ದರೆ ?
ಚರ್ಚೆಯಾಗುತ್ತಿರುವಾಗಲೇ…
ಪತ್ರಿಕೆಯಲ್ಲಿ ಸುದ್ದಿ-“ರಸ್ತೆ ಅಗಲವಾಗುತ್ತಿದೆ “
                          
ರಚನೆ:
ನಾರಾಯಣ.ಪಿ.ಭಾಗ್ವತ
ಸರಕಾರಿ.ಪ.ಪೂ.ವಿ.ಪ್ರೌಢ ಶಾಲಾ ವಿಭಾಗ, ಮಳಗಿ.

 9481861862
bhagwatmalagi@gmail.com


****************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ