ನನ್ನ ಪುಟಗಳು

10 ಅಕ್ಟೋಬರ್ 2017

ಶಾಲೆ ಬಿಟ್ಟ ಮಕ್ಕಳ ಗೀತೆ

ಯೋಗರಾಜ್ ಭಟ್ಟ ರು ಬರೆದ " ಪರಪಂಚ" ಚಿತ್ರದ ಹಾಡನ್ನು ಶಾಲೆಗೆ ಸಂಬಂಧಿಸಿ ಬದಲಾಯಿಸಿ ಬರೆದ
                                            ಶಾಲೆ ಬಿಟ್ಟ ಮಕ್ಕಳ ಗೀತೆ
 ( ಯೋಗರಾಜ ಭಟ್ಟರ ಕ್ಷಮೆ ಕೋರಿ -ಶಾಲೆ ಬಿಟ್ಟ ಮಗುವಿಗಾಗಿ ಈ ಪದ್ಯ ಸಮರ್ಪಣೆ)

ವಿದ್ಯೆಯ ಕಲಿಯದೆ ಅರ್ಧಕ್ಕೆ ಶಾಲೆಬಿಟ್ರೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ
ಎಲ್ಲಾರ್ದು ಎಸ್.ಎಸ್.ಎಲ್.ಸಿ ಪಾಸಾಗಿದೆ

ಊರ ಗೆಳೆಯರ ಖುಷಿಯ ನೋಡದ ಎಂದು ಕೇಳದ ನಗುವನ್ನು
ಶಾಲೆಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನು
ನಿಂಗಿದು ಬೇಕಿತ್ತ ಮಗನೇ,
ವಾಪಸ್ಸು ಶಾಲೆಗೋಗು ಸಿವನೆ
ಬ್ಯಾಗು ಹಿಡಿ ಸೀದಾ ನಡಿ ವಿದ್ಯೆ ಬೇಕು ಶಾಲ್ಚೆ ನಡಿ

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂತೆ ವಿದ್ಯೆಲಿ ನಿನ್ನ ಉಸಿರಿದೆ
ನಿನ್ನೂರ ಶಾಲೆಯ ದಾಖಲೆಯಲ್ಲಿ ನಿನ್ನಪ್ಪ ಬರೆಸಿಟ್ಟ ಹೆಸರಿದೆ
ಅಪ್ಪನ ಮಾತಿಗೆ ಗುರುಗಳ ಕೋಪಕೆ ಶಾಲೆಯ ಬಿಟ್ಟು ನೀ ಬಂದೆ
ಪಟ್ಟಣಕೆ ಬಂದು ಹೋಟ್ಲಲ್ಲಿ ಸೇರ್ಕೊಂಡು ಎಂಜಲು ತೆಗೆಯುವ ಕೂಸಾದೆ

ಶಾಲೆಲಿ ಸೈಕಲ್ಲೀಗ ಕೊಡ್ತಾರೊ
ಕೆನೆಹಾಲು ಎಲ್ರೂ ಕುಡಿತಾರೊ
ಮಧ್ಯಾಹ್ನ ಬಿಸಿಊಟ ಇದೆಯಂತೆ
ಶೂಗಳ  ಭಾಗ್ಯತಂದರಂತೆ
ಪ್ರತಿಭಾ ಕಾರಂಜಿಯು ಐತಂತೆ
ಸ್ಕಾಲರ್‍ಶಿಪ್ ಹಣ ಜಮಾ ಆಯ್ತಂತೆ

ಗೆಳೆಯರೆಲ್ಲರು ಹೊಂಟಾರೋ ಸಂತಸದಿಂದ ಕೂಡಿ ಕುಣಿತಾರೊ
ನಿನಗೂ ಡಿಮ್ಯಾಂಡಿದೆ ಮಗನೆ ವಾಪಸ್ಸು ಶಾಲೆಗೋಗು ಸಿವನೆ

ಬ್ಯಾಗು ಹಿಡಿ ಸೀದಾ ನಡಿ ವಿದ್ಯೆ ಬೇಕು ಶಾಲ್ಗೆ ನಡಿ .............. ( ವಿದ್ಯೆಯ ಕಲಿಯದೆ ಚರಣ)

 ಇದ್ದಕ್ಕಿದ್ದಂತೆ ಏನೇನೊ ಅನಿಸಿ ಕಣ್ಣು ತುಂಬಿಕೊಳ್ಳೋದ್ಯಾಕೆ
ಅಪ್ಪಆಮ್ಮ ಇಬ್ರು ಹತ್ರಕೂತ್ಕೊಂಡು ಅಳಬ್ಯಾಡ  ಅಂದಂಗಾಗೋದ್ಯಾಕೆ
ದಿಕ್ಕು ಗೆಟ್ಟವನು ಕಾಲಿದ್ದು ಹೆಳವ  ಎತ್ಲಾಗೆ ಹೋದರು ಒಂದೆ ನೀನು
ಶಾಲೆಗೆ ಬಂದು ವಿದ್ಯೆಯ ಕಲ್ತ್ಕೊಂಡು ಗೆಳೆಯರಂತೆ ಜಾಣ ಆಗು ನೀನು

ಚಡ್ಡಿದೋಸ್ತ್ರೆಲ್ಲ ನಿನ್ನ ಬೈತಾರೆ
ಶಾಲೆ ಬಿಟ್ಟಾ ಅಂತ ನಗ್ತಾರೆ
ಕಲಿಸಿದ ಮೇಷ್ಟ್ರು ಕರಿತವ್ರೆ
ಶಾಲೆಗೆ ಬರ್ತಿನಂತ ಕಾಯ್ತವ್ರೆ
ಅಪ್ಪಅಮ್ಮಂಗೆ ನಾಚಿಕೆಯಾಗಿ
 ಊರಾಗೆ ತಿರುಗೋದು ಕಷ್ಟಾಗಿದೆ

ಅಪ್ಪಂಗೆ ಉಸಿರೆ ಸಾಕಾಗಿದೆಅವ್ವಂಗೆ ನೆನಪೇ ನಿಂತೋಗಿದೆ
ಕಂಡೀಸನ್ ಹೀಂಗಿದೆ ಮಗನೆ ವಾಪಸ್ಸು ಶಾಲ್ಗೆ ಬಾರೋ ಸಿವನೆ

ಬ್ಯಾಗು ಹಿಡಿ ಸೀದಾ ನಡಿ ಕಣ್ಣೊರೆಸಿ ಶಾಲ್ಗೆ ನಡಿ...........( ವಿದ್ಯೆಯ ಕಲಿಯದೆ ಚರಣ)



ರಚನೆ:
ನಾರಾಯಣ.ಪಿ.ಭಾಗ್ವತ
ಸರಕಾರಿ.ಪ.ಪೂ.ವಿ.ಪ್ರೌಢ ಶಾಲಾ ವಿಭಾಗ, ಮಳಗಿ.
bhagwatmalagi@gmail.com


 
 
*******************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ