ನನ್ನ ಪುಟಗಳು

20 ಅಕ್ಟೋಬರ್ 2015

೧೩.ಗುಬ್ಬಿಯ ಮಲ್ಲಣ್ಣ

ಗುಬ್ಬಿಯ ಮಲ್ಲಣ್ಣ (ಮಲ್ಲಣಾರ್ಯ ಅಲ್ಲ)
ಕಾಲ: ಕ್ರಿ.ಶ.ಸು.೧೪೭೫
ಕೃತಿಗಳು: ಗಣಭಾಷ್ಯ ರತ್ನಮಾಲೆ, ವಾತುಲ ತಂತ್ರ ಟೀಕೆ
ಈತ ಲಕ್ಕಣ್ಣ ದಂಡೇಶನ ಹಿರಿಯ ಸಮಕಾಲೀನ.

ಗುಬ್ಬಿಯ ಮಲ್ಲಣ್ಣನು ‘ಗಣಭಾಷಿತ ರತ್ನಮಾಲೆ’ ಯನ್ನು ಸಂಕಲಿಸಿ ಅದರಲ್ಲಿ ನೂರೊಂದು ಸ್ಥಲಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದರೂ ಅವನ ಸ್ಥಲವ್ಯವಸ್ಥೆ ಮುಂದಿನವರಿಗೆ ಒಪ್ಪಿಗೆಯಾದಂತೆ ಕಾಣದು. ಎಂತಲೆ ಹುಲಿಗೆರೆಯ ಮಹಲಿಂಗದೇವ ಮತ್ತು ಅವನ ಪರಂಪರೆಯವರು ಬೇರೊಂದು ರೀತಿಯ ನೂರೊಂದು ಸ್ಥಲಗಳ ವ್ಯವಸ್ಥೆ ಮಾಡಿ ಅವಕ್ಕೆ ಸೈದ್ಧಾಂತಿಕ ಮನ್ನಣೆಗಳಿಸುವಲ್ಲಿ ಯಶಸ್ವಿಯಾದರು. ವಿಜಯನಗರದವರು ಹೆಚ್ಚಾಗಿ ಕಾವ್ಯಗಳನ್ನು ರಚಿಸುವುದರತ್ತ ಗಮನ ಹರಿಸಿದರು. 

೧೬ನೇ ಶತಮಾನಕ್ಕೆ ಹಿಂದೆ ಗುಬ್ಬಿಯನ್ನು ಅಮರಗೊಂಡ ಎಂದು ಕರೆಯುತ್ತಿದ್ದರು. ಕವಿ ಮಲ್ಲಣಾರ್ಯ ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಒಮ್ಮೆ ಪುರಾಣವನ್ನು ಹೇಳುತ್ತಿದ್ದ ಕಾಲದಲ್ಲಿ, ಎರಡು ಗುಬ್ಬಿ ಹಕ್ಕಿಗಳು ಅಲ್ಲಿಗೆ ಬಂದು ಪುರಾಣವನ್ನು ಕೇಳಿ ಮಂಗಳಕಾರ್ಯದ ನಂತರ, ಅಲ್ಲಿಯೇ ಬಿದ್ದು ಮರಣಹೊಂದಿದವು. ತನ್ನ ಯೋಗದೃಷ್ಟಿಯಿಂದ ಗುಬ್ಬಿಹಕ್ಕಿಗಳ ಪೂರ್ವಜನ್ಮವೃತ್ತಾಂತವನ್ನು ತಿಳಿದು, ಕವಿಯು ಅಲ್ಲಿಯೇ ಸಮಾಧಿ ಮಾಡಿದ. ಈ ಪವಾಡದ ಕಾರಣದಿಂದ ಅಮರಗೊಂಡ ಎಂಬ ಊರು ಮುಂದೆ ಗುಬ್ಬಿ ಎಂದು ಹೆಸರಾಯಿತೆಂದು ತಿಳಿದುಬಂದಿದೆ.

***************

@

3 ಕಾಮೆಂಟ್‌ಗಳು: