ನನ್ನ ಪುಟಗಳು

ಕ್ರಿಯಾಪದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕ್ರಿಯಾಪದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ವ್ಯಾಕರಣಾಂಶಗಳು : ಕ್ರಿಯಾಪದ ಮತ್ತು ವಿಭಕ್ತಿ ಪ್ರತ್ಯಯಗಳು

ನಿಮಗೆ ಬೇಕಾದ ವ್ಯಾಕರಣದ ಮೇಲೆ ಕ್ಲಿಕ್ ಮಾಡಿ 

*******************
*******************

ಕೆಳಗೆ ಕೊಟ್ಟಿರುವ ಹೇಳಿಕೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆ:
೧. ಸಕರ್ಮಕ ಧಾತುಗಳು ಮೇಲೆ ‘ಅಲ್ಪಡು’ ಪ್ರತ್ಯಯ ಸೇರಿ ಆಗುವ ಕ್ರಿಯಾಪದದ ಪ್ರಯೋಗ  :    
ಎ) ಕರ್ತರಿ
ಬಿ) ಕರ್ಮಣಿ
ಸಿ) ವಿದ್ಯರ್ಥಕ
ಡಿ) ನಿಷೇಧಾರ್ಥಕ

೨. ಈ ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ :
ಎ) ಮಾಡನು
ಬಿ) ಓದರು
ಸಿ) ಮಾಡಿಯಾನು
ಡಿ) ಮಾಡಲಿ

೩. ಇಲ್ಲಿರುವ ಕ್ರಿಯಾರೂಪಗಳಲ್ಲಿ ಸಂಭವನಾರ್ಥಕ ಕ್ರಿಯಾಪದ :
ಎ) ತಿಂದಾರು
ಬಿ) ಓದನು
ಸಿ) ಮಾಡನು
ಡಿ) ಕೇಳಲಿ

೪. ‘ ಬಿರುಗಾಳಿಗೆ ಹೊಯ್ದಾಡುವ ಹಡಗನು ಎಚ್ಚರಲಿ ಮುನ್ನಡೆಸೋಣ’ ಇಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ :                  ಎ) ಪ್ರಥಮಾ
ಬಿ) ದ್ವಿತೀಯಾ
ಸಿ) ತೃತೀಯಾ
ಡಿ) ಚತುರ್ಥಿ

೫. ‘ಕಲುಷಿತವಾದೀ ನದೀಜಲಗಳಿಗೆ ಮುಂಗಾರಿನ ಮಳೆಯಾಗೋಣ’ ಈ ವಾಕ್ಯದಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯ ಹೊಂದಿರುವ ಪದ :
ಎ) ಕಲುಷಿತವಾದೀ
ಬಿ) ನದೀಜಲಗಳಿಗೆ  
ಸಿ) ಮುಂಗಾರಿನ  
ಡಿ) ಮಳೆಯಾಗೋಣ

೬. ‘ಹೊಸ ಎಚ್ಚರದೊಳು ಬದುಕೋಣ’ ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ :                    
ಎ) ಪಂಚಮೀ
ಬಿ) ಷಷ್ಠಿ
ಸಿ) ಸಪ್ತಮಿ
ಡಿ) ತೃತೀಯ

೭. ಒಂದು ವಿಭಕ್ತಿ ಪ್ರತ್ಯಯಕ್ಕೆ ಬದಲಾಗಿ ಬೇರೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವುದನ್ನು ಹೀಗೆನ್ನುತ್ತಾರೆ:                           
ಎ) ವಚನ ಪಲ್ಲಟ
ಬಿ) ವಿಭಕ್ತಿ ಪಲ್ಲಟ
ಸಿ) ವಿಭಕ್ತಿ ಪ್ರಸಾರ   
ಡಿ) ಅಧ್ಯಾಹಾರ

೮. ದ್ವಿತೀಯಾ ವಿಭಕ್ತಿ ಪ್ರತ್ಯಯದಲ್ಲಿರುವ ಕಾರಕಾರ್ಥ :
ಎ) ಕರ್ತ್ರರ್ಥ
ಬಿ) ಕರಣಾರ್ಥ
ಸಿ) ಕರ್ಮಾರ್ಥ  
ಡಿ) ಸಂಪ್ರದಾನ

೯. ದೆಸೆಯಿಂದ, ಅತ್ತಣಿಂ-  ಈ ಪ್ರತ್ಯಯಗಳನ್ನು ಹೊಂದಿರುವ ವಿಭಕ್ತಿ :                            
ಎ) ಪಂಚಮೀ
ಬಿ) ಷಷ್ಠಿ
ಸಿ) ಸಪ್ತಮಿ
ಡಿ) ತೃತೀಯ

೧೦. ‘ನಿಲ್ಲಿಸು’ ಪದದಲ್ಲಿರುವ ಧಾತು :    
ಎ) ನಿಲ್ಲಿ
ಬಿ) ಇಸು
ಸಿ) ನಿಲ್   
ಡಿ) ನಿಲ್ಲು

೧೧. ‘ಕಲುಷಿತ’ ಪದದ ಸಮಾನಾರ್ಥಕ ಪದ :                                          
ಎ) ಮಲಿನ
ಬಿ) ಕಲಕಿದ
ಸಿ) ಕಲಸಿದ
ಡಿ) ಸ್ವಚ್ಚವಾದ

೧೨. ‘ಕಾಡುಮೇಡು’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.                                   
ಎ) ದ್ವಿರುಕ್ತಿ
ಬಿ) ಜೋಡುನುಡಿ  
ಸಿ) ಅನುಕರಣಾವ್ಯಯ    
ಡಿ) ನುಡಿಗಟ್ಟು

೧೩. ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ- ಇಲ್ಲಿ ಗೆರೆ ಎಳೆದ ಪದವು ಈ ವ್ಯಾಕರಣಾಂಶವಾಗಿದೆ :
ಎ) ದ್ವಿರುಕ್ತಿ
ಬಿ) ಜೋಡುನುಡಿ  
ಸಿ) ಅನುಕರಣಾವ್ಯಯ      
ಡಿ) ನುಡಿಗಟ್ಟು

೧೪. ‘ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ’ ಈ ವಾಕ್ಯದಲ್ಲಿರುವ ಅಲಂಕಾರ :                       ಎ) ಉಪಮಾ
ಬಿ) ರೂಪಕ
ಸಿ) ಉತ್ಪ್ರೇಕ್ಷೆ
ಡಿ) ದೃಷ್ಟಾಂತ

೧೫. ಅಡ್ಡಗೋಡೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.                                      
ಎ) ಅಂಶಿ
ಬಿ) ಕರ್ಮಧಾರಯ
ಸಿ) ಕ್ರಿಯಾ
ಡಿ) ತತ್ಪುರುಷ

೧೬. ‘ಮುಂಗಾರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ಅಂಶಿ
ಬಿ) ಕರ್ಮಧಾರಯ
ಸಿ) ಕ್ರಿಯಾ
ಡಿ) ತತ್ಪುರುಷ

[ಉತ್ತರಗಳು :   ೧. ಬಿ) ಕರ್ಮಣಿ  ೨. ಡಿ) ಮಾಡಲಿ  ೩. ಎ) ತಿಂದಾರು. ೪.  ಡಿ) ಚತುರ್ಥಿ   ೫. ಸಿ) ಮುಂಗಾರಿನ 
           ೬. ಸಿ) ಸಪ್ತಮಿ  ೭. ಬಿ) ವಿಭಕ್ತಿ ಪಲ್ಲಟ  ೮.  ಸಿ) ಕರ್ಮಾರ್ಥ  ೯. ಎ) ಪಂಚಮೀ   ೧೦. ಡಿ) ನಿಲ್ಲು
          ೧೧. ಎ) ಮಲಿನ   ೧೨. ಬಿ) ಜೋಡುನುಡಿ   ೧೩. ಡಿ) ನುಡಿಗಟ್ಟು   ೧೪. ಬಿ) ರೂಪಕ   ೧೫. ಎ)ಕರ್ಮಧಾರಯಸಮಾಸ  ೧೬.  ಅಂಶಿಸಮಾಸ ]


ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ :

೧. ಮಾಡಲಿ         : ವಿದ್ಯರ್ಥಕ          : :  ಮಾಡನು           : __________  
೨. ಓದರು            : ನಿಷೇಧಾರ್ಥಕ      : :  ಓದಿಯಾರು        : __________  
೩. ಹಡಗನು         : ಪ್ರಥಮಾ ವಿಭಕ್ತಿ    : :  ಮನುಜರ          : __________
೪. ಭಯದಿಂದ        : ತೃತೀಯಾ ವಿಭಕ್ತಿ : :  ಎಚ್ಚರದೊಳು        : __________
೫. ಷಷ್ಠಿ ವಿಭಕ್ತಿ  : ಸಂಬಂಧಕಾರಕ  : :  ಚತುರ್ಥಿ ವಿಭಕ್ತಿ    : __________
೬. ಪ್ರಥಮಾ ವಿಭಕ್ತಿ : ಕರ್ತೃಕಾರಕ      : :  ಸಪ್ತಮಿ ವಿಭಕ್ತಿ      : __________
೭. ಅವನು ಮಲಗಿದನು : ಅಕರ್ಮಕ     : :  ಮನೆಯನ್ನು ಕಟ್ಟು : __________  

[ಉತ್ತರಗಳು :   ೧.ನಿಷೇಧಾರ್ಥಕ  ೨.ಸಂಭವನಾರ್ಥಕ  ೩.ಷಷ್ಠಿ ವಿಭಕ್ತಿ   ೪.ಸಪ್ತಮಿ ವಿಭಕ್ತಿ   ೫.ಸಂಪ್ರದಾನ  
೬.ಅಧಿಕರಣ  ೭.ಸಕರ್ಮಕ ]

********

12 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ವ್ಯಾಕರಣ: ಕಾಲ

ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ. 

ಒಮ್ಮೊಮ್ಮೆ = ಒಮ್ಮೆ + ಒಮ್ಮೆ - ಲೋಪಸಂಧಿ

ಜಾಗವನ್ನು = ಜಾಗ + ಅನ್ನು - ಆಗಮಸಂಧಿ

ಅತ್ಯಾದರ = ಅತಿ + ಆದರ - ಯಣ್‌ಸಂಧಿ

ವಾಚನಾಲಯ = ವಾಚನ + ಆಲಯ - ಸವರ್ಣದೀರ್ಘಸಂಧಿ

ಸಂಗ್ರಹಾಲಯ = ಸಂಗ್ರಹ + ಆಲಯ - ಸವರ್ಣದೀರ್ಘಸಂಧಿ 

ಓಣಿಯಲ್ಲಿ = ಓಣಿ + ಅಲ್ಲಿ - ಆಗಮಸಂಧಿ


ಕಾಲ

ಕನ್ನಡದಲ್ಲಿ ಪ್ರಮುಖವಾಗಿ ಮೂರು ಕಾಲಗಳಿವೆ.

೧) ಭೂತಕಾಲ 

೨) ವರ್ತಮಾನಕಾಲ : ನಡೆಯುತ್ತಿರುವ, ಶೀಘ್ರದಲ್ಲೇ ನಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.

೩) ಭವಿಷ್ಯತ್‌ಕಾಲ : ಮುಂದೆ ನಡಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.


೧) ಭೂತಕಾಲ : ಇದು ನಡೆದು ಹೋದ ಕ್ರಿಯೆಯನ್ನು ಸೂಚಿಸುತ್ತದೆ.

    ಉದಾ: "ಮರದಿಂದ ಎಲೆಗಳು ಉದುರಿದವು." ಈ ವಾಕ್ಯದಲ್ಲಿ ಕ್ರಿಯೆ ಮುಗಿದಿರುವುದನ್ನು ಕಾಣಬಹುದು.

    ಧಾತುಗಳಿಗೆ "ದ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ಭೂತಕಾಲವಾಗುತ್ತದೆ. 

[ಕೆಲವೊಮ್ಮೆ ಪ್ರಥಮ ಪುರುಷ-ನಪುಂಸಕ ಲಿಂಗದಲ್ಲಿ ಕಾಲಸೂಚಕ ಪ್ರತ್ಯಯ ಲೋಪವಾಗಿರುತ್ತದೆ. ಅದನ್ನು ಅರ್ಥದ ಮೂಲಕ ಗ್ರಹಿಸಿ ಅದು ಯಾವಕಾಲವೆಂಬುದನ್ನು ತಿಳಿಯಬೇಕು. ಉದಾ: ಕೋತಿ ಮರವನ್ನು ಏರಿತು. ಇಲ್ಲಿ ಏರಿತು ಎಂಬ ಪದದಲ್ಲಿ "ದ" ಪ್ರತ್ಯಯ ಇಲ್ಲದಿದ್ದರೂ ಅದು ಭೂತಕಾಲವಾಗುತ್ತದೆ]

೨) ವರ್ತಮಾನಕಾಲ : ಇದು ನಡೆಯುತ್ತಿರುವ, ಶೀಘ್ರದಲ್ಲೇ ನಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.

    ಉದಾ: "ಮರದಿಂದ ಎಲೆಗಳು ಉದುರುತ್ತವೆ ಅಥವಾ ಉದುರುತ್ತಿವೆ." ಈ ವಾಕ್ಯದಲ್ಲಿ ಕ್ರಿಯೆ ಮುಗಿದಿಲ್ಲದಿರುವುದನ್ನು ಕಾಣಬಹುದು.

    ಧಾತುಗಳಿಗೆ "ಉತ್ತ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ವರ್ತಮಾನಕಾಲವಾಗುತ್ತದೆ. 

೩) ಭವಿಷ್ಯತ್‌ಕಾಲ : ಮುಂದೆ ನಡಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.

ಉದಾ: "ಮರದಿಂದ ಎಲೆಗಳು ಉದುವವು." ಈ ವಾಕ್ಯದಲ್ಲಿ ಕ್ರಿಯೆ ಮುಂದೆಂದೋ ನಡೆಯುತ್ತದೆ ಎಂಬ ಅರ್ಥವನ್ನು ಕಾಣಬಹುದು.

    ಧಾತುಗಳಿಗೆ "ವ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ  ಭವಿಷ್ಯತ್‌ಕಾಲವಾಗುತ್ತದೆ. 

ಧಾತುಗಳಿಗೆ ಕಾಲಸೂಚಕದ ಜೊತೆಗೆ ಆಖ್ಯಾತ ಪ್ರತ್ಯಯಗಳು ಸೇರಿದಾಗ ಪುರುಷವಾಚಕಗಳಿಗೆ ಅನುಗುಣವಾಗಿ ಬೇರೆಬೇರೆ ರೂಪಗಳನ್ನು ಹೊಂದುತ್ತವೆ. 


ಕ್ರಿಯಾಪದ, ಧಾತು, ಆಖ್ಯಾತ ಪ್ರತ್ಯಯ, ಕ್ರಿಯಾರೂಪಗಳು ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ

>>>ಇಲ್ಲಿ ಕ್ಲಿಕ್ ಮಾಡಿ<<<


****************************