ನನ್ನ ಪುಟಗಳು

23 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ವೃಕ್ಷಸಾಕ್ಷಿ - ಟಿಪ್ಪಣಿಗಳು

* ನಿಜ ಜನ್ಮಭೂಮಿ : ಹುಟ್ಟೂರು, ಸ್ವಂತ ಊರು

* ಬಹಿರುದ್ಯಾನ : ಬಹಿರ್ ಎಂದರೆ ಹೊರಗೆ, ಬಹಿರುದ್ಯಾನ ಎಂದರೆ ಊರಿನ ಹೊರಗಿರುವ ಉದ್ಯಾನವನ

* ತನ್ನ ಮನದನ್ನ : ತನ್ನ ಮನಸ್ಸಿನಂತೆಯೇ ಯೋಚಿಸುವನು, ಹಿತೈಷಿ

* ಅತಿಕುಟಿಲ ಮನಂ : ಬಹಳ ಮೋಸದ ಮನಸ್ಸು

* ಧನಲುಬ್ಧತೆ : ಹಣದ ದುರಾಸೆ, ಹಣದ ಲೋಭತನ

* ತಸ್ಕರಸ್ಯಾನೃತಂಬಲಂ : ತಸ್ಕರಸ್ಯ + ಅನೃತಂ + ಬಲಂ, ಅಂದರೆ "ಕಳ್ಳನಿಗೆ ಸುಳ್ಳೇ ಬಲ" ಎಂದರ್ಥ

* ತತ್ಕೂರ್ಮೆಗಿಡಲ್ನುಡಿದು  : ತತ್ + ಕೂರ್ಮೆ+ಕಿಡಲ್ + ನುಡಿದು, ತತ್ = ಆ, ಕೂರ್ಮೆ = ಪ್ರೀತಿ, ಕಿಡಲ್= ಕೆಡಲು,      ಅಂದರೆ ಅವರಿಬ್ಬರ ಸ್ನೇಹ ಕೆಡುವಂತೆ ಮಾತನಾಡಿ ಎಂದರ್ಥ.

* ಧರ್ಮಾಧಿಕರಣರು : ಧರ್ಮವನ್ನು ಹೇಳುವವರು ಅಂದರೆ ನ್ಯಾಯ ತೀರ್ಮಾನ ಮಾಡುವವರು

* ತತ್ಪ್ರಪಂಚ / ತದ್ವೃತ್ತಾಂತ  : ತತ್ + ಪ್ರಪಂಚ, ತತ್ = ಆ/ಅಲ್ಲಿನ, ಪ್ರಪಂಚ = ಸಂಗತಿ, ವಿಚಾರ, ವೃತ್ತಾಂತ ; ಆದ್ದರಿಂದ 'ಅತ್ತಿ ನಡೆದ ಸಂಗತಿ'

* ಸುಕೃತದುಷ್ಕೃತಗಳು : ಸುಕೃತ = ಒಳ್ಳೆಯ ಕೆಲಸ, ದುಷ್ಕೃತ = ಕೆಟ್ಟ ಕೆಲಸ

* ಪರಮಗಹನ : ಬಹಳ ಗಂಭೀರವಾದ, ಬಹಳ ಕಷ್ಟಕರವಾದ, ತಿಳಿಯಲು ಬಹಳ ಕಷ್ಟಕರವಾದ

* ಕಟ್ಟೇಕಾಂತ : ಬಹಳ ಏಕಾಂತ, ಬಹಳ ಗುಟ್ಟಾದ ಮತ್ತು ಯಾರೂ ಇಲ್ಲದ ಸ್ಥಳ

* ವಚನ : ಮಾತು 

* ಪರಧನಹರಣ : ಪರ = ಬೇರೆಯವರ,   ಧನ = ಹಣ, ಸಂಪತ್ತು,   ಹರಣ = ಕಳ್ಳತನ, ಅಂದರೆ "ಬೇರೆಯವರ ಹಣ ಅಥವಾ ಸಂಪತ್ತನ್ನು ಕದಿಯುವುದು.

* ವಿಶ್ವಾಸಘಾತುಕ : ನಂಬಿಕೆ ದ್ರೋಹ

* ಸ್ವಾಮಿದ್ರೋಹ :  ಸ್ವಾಮಿ ಎಂದರೆ ಒಡೆಯ; ಆದ್ದರಿಂದ ಡೆಯನಿಗೆ ಮಾಡುವ ದ್ರೋಹ

* ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ :  ಪೞು = ಕೆಟ್ಟ, ಮೋಸದ, ಬಗೆ= ಮನಸ್ಸು, ಆಲೋಚನೆ, ಅೞಿ = ನಾಶಮಾಡು. ಆದ್ದರಿಂದ - ನಿನ್ನ ಕೆಟ್ಟ ಆಲೋಚನೆಗಳು ನಮ್ಮ ಕುಲವನ್ನೆಲ್ಲ ನಾಶ ಮಾಡುವ ಯೋಚನೆಯಾಗಿದೆ.

* ಅಪರಗಿರಿ : ಅಪರ = ಪಶ್ಚಿಮ, ಗಿರಿ = ಬೆಟ್ಟ; ಆಂದರೆ  ಪಶ್ಚಿಮ ಬೆಟ್ಟ

* ಉದಾತ್ತನಭೋವಿಭಾಗ : ಉದಾತ್ತ = ಉನ್ನತ, ವಿಶಾಲ;  ನಭ = ಆಕಾಶ;   ಆದ್ದರಿಂದ - "ವಿಶಾಲವಾದ ಆಕಾಶದ ವಿಭಾಗ

* ದಿಙ್ಮುಖ :  ದಿಕ್ಕಿನ ಮುಂಭಾಗ, ದಿಗಂತ

* ಅಖಿಲ ದೃಷ್ಟಿಪಥ : ಅಖಿಲ = ಸಮಗ್ರ, ವಿಶಾಲ;  ದೃಷ್ಟಿಪಥ = ನೋಟ,  ಅಂದರೆ ವಿಶಾಲವಾದ ನೋಟ, ನೋಡುವವರೆಗೂ

* ಭೃಂಗೋದರ : ಭೃಂಗ = ದುಂಬಿ,  ಉದರ = ಹೊಟ್ಟೆ, ದುಂಬಿಯ ಹೊಟ್ಟೆ

* ಪ್ರಕರಾಂಜನ ಪುಂಜ : ಪ್ರಕರ = ಗಾಢವಾದ;  ಅಂಜನ= ಕಪ್ಪು;  ಪುಂಜ = ಗೊಂಚಲು, ರಾಶಿ; ಅಂದರೆ - ಬಹಳ ಗಾಢವಾದ ಕಪ್ಪಿನ ರಾಶಿ (ಕಡುಗಪ್ಪು)

* ಅಷ್ಟವಿಧಾರ್ಚನೆ : ಅಕ್ಷತೆ, ಜಲ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲಗಳಿಂದ ಕೂಡಿದ ಎಂಟು ಬಗೆಯ ಅರ್ಚನೆ 

* ಯಕ್ಷಾದಿ ದಿವ್ಯ ದೇವತೆಗಳು : ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ಅಪ್ಸರ, ಖೇಚರ ಮಂತಾದ ಶ್ರೇಷ್ಠವಾದ ದೇವತೆಗಳು

* ಧರ್ಮಶ್ರವಣ : ಧಾರ್ಮಿಕ ಪ್ರವಚನ, ಧರ್ಮದ ಮಾತುಗಳು

* ಬಲವಂದು : ದೇವಾಲಯವೇ ಮೊದಲಾದ ಪವಿತ್ರ ಸ್ಥಳಗಳಲ್ಲಿ ಬಲಭಾಗದಿಂದ ಪ್ರದಕ್ಷಿಣೆ ಹಾಕುವುದು.

* ಹುಸಿಯದ ಬೇಹಾರಿಯೇ ಇಲ್ಲ :  ಸುಳ್ಳು ಹೇಳದಿರುವ ವ್ಯಾಪಾರಿಯೇ ಇಲ್ಲ.

* ಕಂಠಗತಪ್ರಾಣ ಉಸಿರುಗಟ್ಟಿದ ಸ್ಥಿತಿ, ಮೂರ್ಛಾಸ್ಥಿತಿ, 


********





4 ಕಾಮೆಂಟ್‌ಗಳು: