ನನ್ನ ಪುಟಗಳು

28 ಏಪ್ರಿಲ್ 2020

ಬೆಲೆಗಗ್ನಕ್ಕೆ.?!! ನನ್ನುತ್ತರ..

ಅನ್ನಬ್ರಹ್ಮನ ಗೋಳು ಯಾರರಿಯರು.. ಬೆಲೆ ಏರಿದರೆ ಕಣ್ಣೀರಿನ ವಿಡಂಬನೆ. ಮುರ್ಕಾಸಿಗೆ ಮಾರುವಾಗ ಸ್ವರ್ಗವೇ??. ಪಾನಕ ಮಜ್ಜಿಗೆ ಸಂತಸವೇ.. ಗಗನದಲಿ ರಸಗೊಬ್ಬರ ಮೌಂಟ್ ಶಿಖರದಲಿ ಕ್ರಿಮಿನಾಶಕ. ಎತ್ತಿರುಗಿದರು ಸಾಲದ ಕುಣಿಕೆ. ಸಬ್ಸಿಡಿ ಗೊಬ್ಬರೆಕ್ಕುವ ಕ್ರಿಮಿಗಳು. ವರುಣನ ಮುನಿಸು ನಿಸರ್ಗದ ರಂಪಾಟ ಕೊಚ್ಚಿದ್ದೆಚ್ಚು!!! .ಸಿಕ್ಕಿದ್ದೇ ನಾಲ್ಕಾಣೆ. ಹಾವೇಣಿಯಂತೆ ಬೆಲೆಯಾಟ. ಎಂಟಾಣೆಗೆ ನೂರೆಂಟು ಸುತ್ತ ಅಲೆಸುವ ಅಲೆಮಾರಿಗಳು. ಸಿಕ್ಕಿದ್ದಕ್ಕಿಂತ ಹೆಸರಲ್ಲಿ ಬಾಚವರೆಚ್ಚು. ಕುಟುಂಬ ರೋಧನ ಕುಣಿಕೆಯಲಿ ಯಜಮಾನ. ಸಾವಿಗೂ ಇಲ್ಲ ಕನಿಕರ ..... ನನ್ನಿ ಗೋಳಿಗೆ ನಾನೇ ಕಾರಣ????. ಬೊಬ್ಬಿಡುವ ಜಾಣಕುರುಡರೇ.? ಆಲಿಸಿ ಪರಮಾನಂದವ.. ಹರಿದರು ಮೊಣಕಾಲು, ಬಸಿದರು ರಕ್ತ, ಸುಟ್ಟರು ಒಣಕಲು ದೇಹ ಮೂಳೆಮಾಂಸವತ್ತಿಟ್ಟರು ದಾಹ ತೀರದು. ಹರ್ಕಂಗಿ ಬೆಂತೋರ್ಸಿ ನಿಲಬಿದ್ದರು ಕೆಳವ್ರರ್ ಯಾರು?..ಕ್ಷಣದ ಅನುಕಂಪ ಸತ್ತಮನಸಿಗೆ ಮುಲಾಮಂತೆ. ಮೂಳೆಮಾಂಸವ ಸವೇಸಾರು... ಫಲದ ಫಲ ಭೂಒಡಲಿಗೆ. ಆಡುವದಲ್ಲ ಮಾಡುವುದೇಚ್ಚು ಕಾಯಕದಲಿ ಶೂನ್ಯವರವು. ಕೀಳ್ಬೇಡ ...ರೈತನೆಂದು ಚುಚ್ಚದಿರು ಬೆಲೇಚ್ಚೆ0ದು. ಹರಸಿ ಹಾರೈಸು ಅನ್ನದಾತನೆಂದು. ಸಗ್ಗವು ಉಸಿರಿಸಲಿ ಅನ್ನಬ್ರಹ್ಮನ ಅನ್ನಮಹಿಮೆಯ. ಚೌಡ್ಲಾಪುರ ಸೂರಿ.✍✍
GLPS ಕೋಟೆಹಾಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ