ನನ್ನ ಪುಟಗಳು

28 ಏಪ್ರಿಲ್ 2020

"ಭಕ್ತಿ ಭಾವ"

"ಭಕ್ತಿ ಭಾವ" ಭಗವಂತ ಭವ್ಯವಾದ ಭವಸಾಗರ ಆದರೆ, ಬಾಳಲ್ಲಿ ಬೆಟ್ಟದಷ್ಟು ಬವಣೆಯಿಟ್ಟ.! ಮಗದೊಮ್ಮೆ ಪರಿಹರಿಸಿಕೊಳ್ಳಲೆಂದು ತೋಳ್ಗಳಲ್ಲಿ ಬಲ ಕೊಟ್ಟು ಬದುಕುಳಿಸಿದ.! ಇವನ ನಾಮಾಂಕಿತ ಸಹಸ್ರಾರು ಆದರೆ, ಇದನ್ನರಿಯರು ಈ ನರಮಾನವರು ಅರಿಯರೇನು ಅರಿಯದಿದ್ದರೇನು ಮನುಕುಲವೆಲ್ಲಾ ಎಂದಿದ್ದರೂ ಒಂದೇ ಅಲ್ಲವೇ..? ಕ್ರಿಯಾಕರ್ತ ಸೃಜಿಸಿದ ಗೇಯದ ವರ್ಣವೊಂದೇ ವಿಭಿನ್ನ.! ಆದರೆ ಸರ್ವರಿಗೊಂದೇ ರೀತಿಯಲ್ಲಿ ಚೇತನಕ್ಕೆ ನೆತ್ತರು, ಉಸಿರಾಡಲು ಶ್ವಾಸಾಂಗವನ್ನು ಕೊಟ್ಟು ಭಿನ್ನತೆಯಲ್ಲಿ ಏಕತೆಯನ್ನು ಸಾರಿದ.! ಕಾಣದ ಸೃಷ್ಟಿಕರ್ತ ಮರೆಯಲ್ಲೆಲ್ಲೋ ನಿಂತು ಸುಖ-ದುಃಖ ಕೊಟ್ಟು ಸಂತೈಸಿದ.! ಅಧಮರನ್ನ ಅಂತ್ಯಗೊಳಿಸಿ ಪಾಮರ ಪರಮೋತ್ತಮರನ್ನ ಹಾರೈಸಿದ.! ಭಕ್ತಿ ಬೆಳಗಲಿ, ಯುಕ್ತಿ ಮೆರೆಯಲಿ ಜಾಢ್ಯ ತೊಲಗಲಿ, ಮೌಢ್ಯ ಮಣ್ಣಾಗಲಿ.! ಮಾನವೀಯತೆ ವಿಶ್ವವ್ಯಾಪಿಯಾಗಿ ಪಸರಿಸಲಿ ಸರ್ವಧರ್ಮ ಸಮನ್ವಯತೆ ವಿಶ್ವದೆಲ್ಲೆಡೆ ಮೇಳೈಸಿ ಮೊಳಗಲೀ.! ಮೊಳಗಲಿ.! ಮೊಳಗಲಿ..!
ರಚನೆ : ದೊಡ್ಡಬಸಪ್ಪ ಕರಿಗಾರ. ಬಿಗ್'ಬಿ ಇಟ್ಟಿಗಿ ಇಟ್ಟಿಗಿ (ಅಂಚೆ )
ಹೂವಿನ ಹಡಗಲಿ (ತಾಲೂಕು)
ಬಳ್ಳಾರಿ (ಜಿಲ್ಲೆ )



****************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ