ನನ್ನ ಪುಟಗಳು

22 ಜುಲೈ 2022

10ನೇ ತರಗತಿ ಕನ್ನಡ ಪದ್ಯ-06 ಛಲಮನೆ ಮೆಱೆವೆಂ - ಸಾರಾಂಶ (10th-Kan-Poem-6-chalamanemerevem-Saramsha)

'ಛಲಮೆನೆ ಮೆಱೆವೆಂ' ಪದ್ಯಭಾಗದ ಸಾರಾಂಶ
ಪೀಠಿಕೆಮಹಾಭರತ ಯುದ್ದದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆಭೀಷ್ಮರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕಒಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ ನೀಡುತಾರೆಆದರೆ ಸಂಧಿಮಾಡಿಕೊಳ್ಳು ಒಪ್ಪದ ದುರ್ಯೋಧನನು ತಾನು ಯುದ್ಧಮಾಡುವುದಾಗಿ ಹೇಳುತ್ತಾನೆ.
        ಸಂದರ್ಭದಲ್ಲಿ ದುರ್ಯೋಧನನು ಭೀಷ್ಮರೊಂದಿಗೆ ಮಾತನಾಡುವಾಗ ಆತನಲ್ಲಿ ಛಲಅವನ ದೃಢನಿರ್ಧಾರ ಮತ್ತು ಅವನ ಅಭಿಮಾನದ ಮಾತುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
********
ವಚನ : ಇಂಬುಕೆಯ್ವೆಯಪ್ಪೊಡೆ ಪಾಂಡವರನೊಡಂಬಡಿಸಿ ಸಂಧಿಯಂ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾೞ್ಪೆಂ ಇನ್ನುಮವರೆಮ್ಮಂದುದಂ ಇಂಬುಕೆಯ್ಯದವರ್ ಮೀಱವರಲ್ಲ ನೀನುಮೆಮ್ಮ ಪೇೞ್ದುದಂ ಮೀಱದೆ ನೆಗೞಲ್ವೇೞ್ಕುಮೆನೆ ಸುಯೋಧನಂ ಮುಗುಳ್ನಗೆ ನಕ್ಕು-
ಸಾರಾಂಶ: ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನುಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕುಎಂದು ಭೀಷ್ಮರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು-

ಕಂ|| ನಿಮಗೆ ಪೊಡೆಮಟ್ಟು ಪೋಪೀ|
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ||
ಸಮಕೊಳಿಸಲೆಂದು ಬಂದೆನೆ|
ಸಮರದೊಳೆನಗಜ್ಜ ಪೇೞಮಾವುದು ಕಜ್ಜಂ||  ||||
ಸಾರಾಂಶನಿಮಗೆ  ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆಅಜ್ಜಾಯುದ್ಧದಲ್ಲಿ ಇನ್ನು ನನ್ನ ಕಾರ್ಯವೇನೆಂಬುದನ್ನು ಹೇಳಿರಿ.

ಕಂ|| ನೆಲಕಿಱವೆನೆಂದು ಬಗೆದಿರೆ|
ಚಲಕಿಱವೆಂ ಪಾಂಡುಸುತರೊಳೀನೆಲನಿದು ಪಾ||
ೞ್ನೆಲನೆನಗೆ ದಿನಪಸುತನಂ|
ಕೊಲಿಸಿದ ನೆಲನೊಡನೆ ಮತ್ತೆ ಪುದುವಾೞ್ದಪೆನೇ||     ||||
ಸಾರಾಂಶನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು ಭೂಮಿ ನನಗೆ ಪಾಳು ಭೂಮಿದಿನಪಸುತನಾದ ಕರ್ಣನನ್ನು ಕೊಲ್ಲಿಸಿದ  ಭೂಮಿಯೊಡನೆ ನಾನು ಮತ್ತೆ ಬಾಳುವೆನೆ?

|| ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು|
ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ||
ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬೞಕ್ಕೆ ಸಂಧಿಗೆ|
ಯ್ವೊನ್ನೆಗೞ್ದಂತಕಾತ್ಮಜನೊಳೆನ್ನೞಲಾಱದೊಡಾಗದೆಂಬೆನೇ||   ||||
ಸಾರಾಂಶ: ನನ್ನ ಪ್ರೀತಿಯ ಗೆಳೆಯನನ್ನು(ಕರ್ಣನನ್ನುನನ್ನ ಪ್ರೀತಿಯ ತಮ್ಮನನ್ನು(ದುಶ್ಯಾಸನಕೊಂದ ಅರ್ಜುನ-ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾನಾನು ಸಂಧಿಯನ್ನು ಒಪ್ಪುವುದಿಲ್ಲಮೊದಲು  ಇಬ್ಬರನ್ನೂ ಕೊಲ್ಲುವೆನುಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆನನ್ನ ದುಃಖ ಆರಿದ ನಂತರ ಸಂಧಿ ಆಗುವುದಿಲ್ಲ ಎನ್ನುವೆನೇ?

ಕಂ|| ಪುಟ್ಟಿದ ನೂರ್ವರುಮೆನ್ನೊಡ|
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ||
ಪುಟ್ಟಿ ಪೊದೞ್ದುದು ಸತ್ತರ್
ಪುಟ್ಟರೆ ಪಾಂಡವರೊಳಿಱದು ಛಲಮನೆ ಮೆಱೆವೆಂ ||   ||||
ಸಾರಾಂಶ: ಹುಟ್ಟಿದ ನೂರು ಜನರೂನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು (ಯುದ್ಧದಲ್ಲಿಹೋರಾಡಿ ಸತ್ತರುಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು(ಪೊದೞ್ದುದು). ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ.

ಕಂ|| ಕಾದದಿರೆನಜ್ಜ ಪಾಂಡವ|
ರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇ||
ಣಾದೆನದಱಂದೆ ಪಾಂಡವ
ರ್ಗಾದುದು ಮೇಣಾಯ್ತು ಕೌರವಂಗವನಿತಳಂ||       ||||
ಸಾರಾಂಶ: ಅಜ್ಜನಾನು ಹೋರಾಡದೆ ಬಿಡುವುದಿಲ್ಲಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕುಆದ್ದರಿಂದ  ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು ದುರ್ಯೋಧನನು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳಿದನು.


**************



32 ಕಾಮೆಂಟ್‌ಗಳು:

  1. ನಿಮ್ಮ ಒಂದು ಮಾರ್ಗದರ್ಶನ ನಮ್ಮಂಥ ಓದುಗರ ಒಂದು ಉಪಯುಕ್ತವಾಗಿದೆ ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ