ನನ್ನ ಪುಟಗಳು

14 ಸೆಪ್ಟೆಂಬರ್ 2019

🌑ಮನಮುಗಿಲು🌕


ನಮ್ಮ ಮನಗಳಂತೆ ಅದೋ
ಕಪ್ಪು ಕವಿದಿದೆ ಮುಗಿಲಿಗೆ
ಮಬ್ಬು ಹರಿದು ಬೆಳಕು ಸುರಿದು
ರವಿಯು ಬರುವನು ಹಗಲಿಗೆ

ಬರವಸೆ ಎಂಬ ಊರುಗೋಲು
ನಮಗೀಗ ಆಸರೆ
ಇಂದಲ್ಲದೆ ನಾಳೆ
ಒಳ್ಳೆ ಘಳಿಗೆ ನಮ್ಮ ಕೈಸೆರೆ

ನಂಬಿ ನಾವು ಬಾಳಬೇಕು
ಒಳ್ಳೆ ದಿನಗಳ ಅರಸುತ
ನ್ಯಾಯ ನೀತಿಗಳ ನಂಬಿ
ಸತ್ಯ ದಾರಿಯಲ್ಲಿ ನಡೆಯುತ

ಮಬ್ಬು ಹರಿದು ಬಾನ್ಬೆಳಗಬೇಕು
ಇಂದಲ್ಲ ನಾಳೆ ಶಶಿ ಕಿರಣ
ನಾಳೆಗಳಲ್ಲಿ ನಂಬಿಕೆ ಇಟ್ಟು
ಜೋಡುಹೆಜ್ಜೆ ಹಾಕಿ ನಡೆಯೋಣ

ಬಡತನವಿದ್ದರೇನು ಗೆಳತಿ
ಸಾಂಗತ್ಯಕಿಲ್ಲ ಯಾವ ಕೊರತೆ
ಅರಿತು ಬೆರೆತು ಒಂದುಗೂಡಿದ
ಮನೆಯೇನಿಜ ಸಂಪತ್ತಿನೊರತೆ

ನಾನು ನೀನೇ ನೀನು ನಾನೇ
ಏಕವಾಗಿರೆ ಮೈಮನ
ಬೇಕೆಂಬುದೆ ಬೇಡ ಬೇಡ 
ಒಂದೇ ಮನದ ಹೊರತು ಬೇರೇನ

ಉಪ್ಪು ಕಡಲಂತ ಬದುಕು
ಎಲ್ಲ ನದಿಗಳ ಅಪ್ಪುತ
ಸೊಪ್ಪು ಬೇಡ ಸೋಲು ಬೇಡ
ತಿದ್ದಿ ತೀಡಿ ತಪ್ಪುಗಳ ಒಪ್ಪುತ

ಒಳಿತು ಕೆಡಕು ಏನೇ ಇರಲಿ
ನಾನಿರುವೆ ನಿನ್ನ ಜೊತೆ
ಬಾಳ ಹಾದಿಯಲ್ಲಿ 
ಹೆಜ್ಜೆ ಬೆಸೆಯೋಣ ಜೊತೆ ಜೊತೆ

- ಜ್ಯೋತಿ ಬಸವರಾಜ ದೇವಣಗಾವ
  ಯಾದಗಿರಿ
  ಶಹಾಪುರ
  ಗೋಗಿ(ಕೆ)
   9964528373

********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ