ನನ್ನ ಪುಟಗಳು

09 ಮೇ 2018

'ಯಮನ ಸೋಲು'-ದೃಶ್ಯ-4

ದೃಶ್ಯ ೪

(ಆಕಾಶ ಮಾರ್ಗ. ಯಕ್ಷ ಯಮದೂತರ ಪ್ರವೇಶ)
ದೂತ
ನನ್ನಿಂದಸಾಧ್ಯ! ನನ್ನಿಂದಸಾಧ್ಯವದು,
ಯಕ್ಷ. ಬಿರುಗಾಳಿಯಲಿ ಸಿಕ್ಕಿ ತೂರಾಡುವಾ
ತರಗೆಲೆಯ ತೆರನಾದೆ ಹದಿಬದೆಯ ಜ್ವಾಲೆಯೊಳು
ಸಿಕ್ಕಿ. ಸಾಕಪ್ಪ! ಸಾಕಿನ್ನು ! ಜೀವರನೆನಿತೊ
ಕೊಂಡೊಯ್ದೆನಾದರೂ ಈ ಪರಿಯ ಜೀವರನು
ಕಂಡಿಲ್ಲ. ಸಾಕಪ್ಪ. ಸಾಕಿನ್ನು!
ಯಕ್ಷ
(ಏನಾಯ್ತು,)
ಯಮದೂತ, ಹೇಳಬಾರದೆ ನನ್ನ ಕೂಡೆ!
ದೂತ
ಮೂರು ಸಲ ಯತ್ನಿಸಿದೆ, ಅವಳ ಬಳಿ ಇದ್ದ
ಸತ್ಯವಾನನ ಆತ್ಮವನ್ನೆಳೆಯಲೆಂದು.
ಅವಳ ಓಜೆಯ ಉರಿಯ ಸುಳಿಯಲ್ಲಿ ಬಿದ್ದು ೧೦
ಬೆಂದು ಬಾಡಿದೆನಯ್ಯ! ನನ್ನಿಂದಸಾಧ್ಯ!
ಯಕ್ಷ
ಮತ್ತೇನು ಮಾಡಬೇಕೆಂದಿರುವೆ?
ದೂತ
ಮತ್ತೇನು?
ಯಮರಾಯನಲ್ಲಿಗೇ ಓಡುವೆನು!
ಯಕ್ಷ
ಓಡು,
ಬೇಗೋಡು! ನಾನಿಲ್ಲಿಯೇ ಕಾದು ಕುಳಿತಿರುವೆ,
ನೀ ಬರುವತನಕ. ಈ ದಿಕ್ಕಿನಲ್ಲೋಡು;
ಯಮಪುರಿಗೆ ಹತ್ತಿರ. ಬೇಗೋಡು! ಓಡು!
(ಯಮದೂತನು ಹೋದ ದಿಕ್ಕಿಗೇ ನೋಡುತ್ತಾ ನಸುನಗುತ್ತಾನೆ.)
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ