ನನ್ನ ಪುಟಗಳು

20 ಜನವರಿ 2018

*💥ಇಹವೇ ಪರ💥*
ಕತ್ತಲೆಯ ಕಂಬಳಿಯ
ಕಿತ್ತೊಗೆದು ಅಂಬರದ
ಮೆತ್ತೆಯನು ತೊರೆದೆದ್ದು
ತ್ವರಿತದಿಂದ...

ಹೊನ್ನೀರ ಕಡಲಲ್ಲಿ
ಚೆನ್ನ ಸ್ನಾನವ ಗೈದು,
ಚಿನ್ನದಂಬರವುಟ್ಟು
ಸಿಂಗಾರದಿ.....,

ಏಳು ತುರಗಗಳೆಳೆವ
ಬೆಳ್ಳಿ ತೇರಲಿ ಕುಳಿತು
ಎಂಟು ದಿಕ್ಕಿಗೂ ದಿವ್ಯ
ಕಾಂತಿ ಚೆಲ್ಲಿ........ ,

 "ಏಳಿರೈ ಮಕ್ಕಳೇ" ........
 ಬೆಳಗಾಯಿತೆನ್ನುತ್ತ
ಮೂಡಣದಿ ಬಂದನೋ
ಪೊಡವಿಯೊಡೆಯ!!

ಸುಧೆ ಸುರಿಯುವೀ ಹೊತ್ತು
ತೊರೆದು ನಿದ್ದೆಯ ಮತ್ತು
ಎದ್ದವನೇ ಧನ್ಯನೈ
ಕೇಳು ಜಗದಿ......,

ಮನವು ಹೂವಂತರಳಿ,
ಹಕ್ಕಿಯಂದದಿ ಹಾರಿ,
ಕುಕಿಲಾಗಿ ಕೂಗುತಲಿ
ಗಾಳಿಯೊಳು ತೇಲಿ....

ಆನಂದ ಸಂದ್ರದಲಿ
ಮುಳುಗೆದ್ದು ಮೀಯುತಿರೆ.........,
ಸ್ವರ್ಗ ಬೇರೊಂದುಂಟೆ
ಹೇಳು ಪರದಿ!!

ರಚನೆ: 
ಮಲ್ಲಿಭಾಗವತ
ಮಲ್ಲಿಭಾಗವತ ಲಕ್ಷ್ಮೀ ನರಸಿಂಹ ಪ್ರಸಾದ್
9739481252
#82, 3ನೇ ಕ್ರಾಸ್, ಎ.ಜಿ.ಬಿ ಕಾಲನಿ, 
ಮಹಾಲಕ್ಷ್ಮಿ ಬಡಾವಣೆ, 
ಬೆಂಗಳೂರು-560 086

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ