ನನ್ನ ಪುಟಗಳು

04 ನವೆಂಬರ್ 2017

ಮಾನವ ಕೃತ್ಯ

ಮೂಡಣದಿ ಬಾನು ರಂಗೇರುತಿರುವಾಗ
ಅರುಣನ ದರ್ಶನವು ಸೂರ್ಯನ ಜೊತೆಗಾಗ
ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು
ಬರಿಗಣ್ಣಿಗಿದುವೆ ಬರಿಯ ಬೆಳಕಾಗಿಹುದು ||ಪ||

ಮೌನದಿಂ ಜೀವಿಗಳು ಎಚ್ಚತ್ತುಕೊಂಡಿರಲು
ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು
ಮಾನವನ ದಿನಚರಿಯು ಮನದಿ ಬುಗಿಲೆದ್ದಿಹುದು
ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||1||

ರಾತ್ರಿ ಮೌನದಿ ಕಳೆದು ಚೀರಾಟದೆಡೆಗಳಲಿ
ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ
ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ
ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ ||2||

ಕರ್ತೃ:-
ಚರಣ್ ರಾಜ್ ಯಡಾಡಿ
8904502305
ಶಾನುಭೋಗರಬೆಟ್ಟು ಯಡಾಡಿ ಮತ್ಯಾಡಿ ಅಂಚೆ
 ಕುಂದಾಪುರ ತಾಲೂಕು 
ಉಡುಪಿ ಜಿಲ್ಲೆ 576222
charanrajk.30@gmail.com 


*****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ