ನನ್ನ ಪುಟಗಳು

16 ಮಾರ್ಚ್ 2016

೨೩. ತಿಮ್ಮಣಕವಿ

ತಿಮ್ಮಣಕವಿ
ಈತನ ಕಾಲ: ಕ್ರಿ.ಶ.೧೫೦೦
ಆಶ್ರಯ: ವಿಜಯನಗರದ ಶ್ರೀಕೃಷ್ಣದೇವರಾಯ, ಅರವೀಡು ಸಂತತಿ
ಕೃತಿ: 'ಕೃಷ್ಣರಾಜ(ಯ) ಭಾರತ' (ಕರ್ಣಾಟಕ ಕೃಷ್ಣರಾಯ ಭಾರತ ಕಥಾ ಮಂಜರಿ)
ಬಿರುದು: ‘ಕರ್ಣಾಟಕ ಕವಿಕುಲ ಸಾರ್ವಭೌಮ’

[ಕುಮಾರವ್ಯಾಸನು ಮಹಾಭಾರತದ ೧೦ ಪರ್ವಗಳನ್ನು ಮಾತ್ರ ‘ಕರ್ಣಾಟಭಾರತ ಕಥಾಮಂಜರಿ’ಯಲ್ಲಿ  ಬರೆದಿದ್ದು ಉಳಿದ ೮ ಪರ್ವಗಳನ್ನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ 'ಕೃಷ್ಣರಾಜ ಭಾರತ'ಎಂಬ ಹೆಸರಿನಿಂದ ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ.]

"ಲೇಸೆನಿಸಿದ ಮೊದಲಾ ಕುಮಾರವ್ಯಾಸ ದಶಪರ್ವಗಳ ಹೇಳಿದ, ಭಾರತದ ಉಳಿದ ಪರ್ವಗಳ ನೀ ಸಕಲಜನ ಮೆಚ್ಚುವಂತೆ ಹೇಳು; ಸುರನದಿಯ ಯಮುನಾತರಂಗಿಣಿ ಬೆರೆಸಿ ಹರಿವಂದದಲಿ ಕವಿಕುಂಜರ ಕುಮಾರವ್ಯಾಸನುರುವಾಗ್ಲಹರಿಯೊಡನೀಗ ಸರಿಯೆನಿಸಿ ನೀಕೂಡಿಸೈ.." ಎಂದು ಕೃಷ್ಣದೇವರಾಯನು ಹೇಳಲಾಗಿ ತಾನು ಈ ಕೃತಿಯನ್ನು ಬರೆದುದಾಗಿ ಹೇಳಿದ್ದಾನೆ.

"ವೀರನಾರಾಯಣ ನೀ ಕವಿಯೆನಿಸಿಕೊಂಡೆ, ಕುಮಾರವ್ಯಾಸಗೊಲಿದು ಕನ್ನಡಿಸಿದೆ ಭಾರತವ"  ಎಂದಿದ್ದಾನೆ ತಿಮ್ಮಣ್ಣಕವಿ.

ಕೃತಿಯ ಮೇಲಿನ ಪ್ರಭಾವ:-  ತೆಲುಗಿನಲ್ಲಿ ‘ಕವಿಬ್ರಹ್ಮ’ ಎನಿಸಿದ ತಿಕ್ಕನನ ಮಹಾಭಾರತದ ಪ್ರಭಾವವನ್ನು ‘ಕೃಷ್ಣರಾಜ ಚರಿತೆ’ ಯ ಮೇಲೆ ಉಂಟಾಗಿದೆ.

ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ - ತಿಮ್ಮಣ್ಣಕವಿ.


************** 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ