ನನ್ನ ಪುಟಗಳು

16 ಮಾರ್ಚ್ 2016

೨೨. ಮೂರನೆಯ ಮಂಗರಸ

ಮೂರನೆಯ ಮಂಗರಸ
ಈತನ ಕಾಲ : ಕ್ರಿ.ಶ.ಸು ೧೬ನೆಯ ಶತಮಾನ. (ಸು.೧೫೦೮)
ಚೆಂಗಾಳ್ವ ಅರಸರ ಕಾಲದಲ್ಲಿದ್ದನು. ಈತನ ಸಹೋದರ ಸಂಬಂಧಿ ಎನ್ನಲಾದ ನಂಜುಂಡನು ‘ಕುಮಾರರಾಮನ ಕಥೆ’ಯನ್ನು ಬರೆದಿದ್ದಾನೆ.
         ಮಂಗರಸಕವಿ  ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ‘ಜಯನೃಪಕಾವ್ಯ’, ‘ನೇಮಿಜಿನೇಶ ಸಂಗತಿ’, ‘ಸಮ್ಯಕ್ತ್ವ ಕೌಮುದಿ’ ಮತ್ತು ‘ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.
ಜಯನೃಪಕಾವ್ಯ, ಸೂಪಶಾಸ್ತ್ರಗಳನ್ನು ವಾರ್ಧಕ ಷಟ್ಪದಿಯಲ್ಲಿ ಬರೆದಿದ್ದಾನೆ. ಇವನ ಉಳಿದಗ್ರಂಥಗಳು ಸಾಂಗತ್ಯದಲ್ಲಿವೆ. ಜಯನೃಪಕಾವ್ಯದಲ್ಲಿ ಕಥೆಗಿಂತಲೂ ವರ್ಣನೆ ಹೆಚ್ಚು.
       [ವಿಷವೈದ್ಯಗ್ರಂಥವನ್ನು ಬರೆದ ಒಂದನೆಯ ಮಂಗರಸ (ಸು.೧೩೫೦) ಕವಿ ಮಂಗಾಭಿದಾನವೆಂಬ ನಿಘಂಟನ್ನು ಬರೆದ ಎರಡನೆಯ ಮಂಗರಸ (ಸು.೧೩೯೮)]

ಸುಪಶಾಸ್ತ್ರ ಗ್ರಂಥದಿಂದ ಒಂದು ಚರಣ: ಇದರಲ್ಲಿ ಪಾಕಶಾಸ್ತ್ರವೂ ಸರಸ್ವತಿ ಎಂದು ಸ್ತುತಿಸಲಾಗಿದೆ.

ಪರಬ್ರಹ್ಮಹೃದಯಸರಸಿರುಹೋ
ದರದೊಳಗೊಗೆದಾತನ ಸಿರಿಮೊಗದೊಳು
ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ
ಭರದಿಂ ಭವ್ಯಭುಜಂಗರನವಳೊಳ್
ನೆರಪುವ ಕೋವಿದೆ ನರಸುರವಂದಿತೆ
ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು||


******ಹೆಚ್ಚಿನ ಮಾಹಿತಿ ಕೃಪೆ: ಸಂಪದ, ಪ್ರಜಾವಾಣಿ*******

1 ಕಾಮೆಂಟ್‌: