ನನ್ನ ಪುಟಗಳು

28 ನವೆಂಬರ್ 2017

ಬದುಕಿನ ಬವಣೆ - ರಂಗನಾಥ್ ಎನ್

ಪ್ರಾಚೀನತೆ ನಶಿಸಿದೆ ಮೌಲ್ಯಗಳು ಕಣ್ಮರೆಯಾಗಿವೆ,
ಮಾನವ ತನ್ನ ತನವನ್ನು ಮರೆತ್ತಿದ್ದಾನೆ,
ಅಧರ್ಮ ತಾಂಡವಾಡುತ್ತಿದೆ ಮೂಢನಂಬಿಕೆಯ ನೆಲದಲ್ಲಿ,
ಜಾತಿಯವಾದ ಹೆಚ್ಚುತ್ತಲಿದೆ ಸಂಸ್ಕಾರ ನಶಿಸಿದೆ,
ಆಚಾರ-ವಿಚಾರ ಆಧುನಿಕತೆಯ ನೆರಳಲ್ಲಿ ಮೂಲೆಗುಂಪು ಆಗಿದೆ,
ಮಾನವ ಅನಾಚಾರದಿಂದ ವರ್ತಿಸುವಂತಾಗಿದೆ.
*****
ನನಗೆ ಜನ್ಮ ಕೊಟ್ಟು ಮರುಜನ್ಮ ಪಡೆದವಳು ನೀ ಅಮ್ಮ 
ಅತ್ತಾಗ ಲಾಲಿ ಹಾಡಿ‌ ನೀ ಮಲಗಿಸಿದವಳು ನೀ ಅಮ್ಮ 
ವಾತ್ಸಲ್ಯ,ಮಮತೆ,ಪ್ರೀತಿ.ನನಗಾಗಿ ಧಾರೆ ಎರೆದವಳು ನೀ ಅಮ್ಮ. 
ಅಕ್ಷರ ಜ್ಞಾನವ ತುಂಬಿದವಳು ನೀ ಅಮ್ಮ 
ದುಃಖದಲ್ಲಿ ಸಂತೈಸಿದವಳು ನೀ ಅಮ್ಮ 
ಹಸಿದಾಗ ಉಣಬಡಿಸಿದವಳು ನೀ ಅಮ್ಮ 
ನಾ ನಕ್ಕಾಗ ನಿನ್ನ ನೋವು ಮರೆತು ನಕ್ಕವಳು ನೀ ಅಮ್ಮ.
               
                    ರಚನೆ :- ರಂಗನಾಥ ಎನ್
                              ಕನ್ನಡ ಭಾಷಾ ಶಿಕ್ಷಕರು
                              ಗುರುಬಸಮ್ಮ ವಿ.ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ
                              ದಾವಣಗೆರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ