ನನ್ನ ಪುಟಗಳು

08 ನವೆಂಬರ್ 2013

ಲೇಖನ ಚಿಹ್ನೆಗಳು

                                                         ಲೇಖನ ಚಿಹ್ನೆಗಳು                         ಕೃಪೆ-ಬರಹ ಅಂತರ್ಜಾಲ
ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು.
ವಿರಾಮ ಚಿಹ್ನೆಗಳು ಓದುಗನಿಗೆಂದು ಲೇಖಕನು ನೀಡುವ ಮಾರ್ಗದರ್ಶನ ಎಂದು ತಿಳಿಯಬೇಕು. ಓದುಗನು ಒಂದು ಲೇಖನವನ್ನು ಓದುವಾಗ ಕೆಲವು ಕಡೆ ಸ್ವಲ್ಪ ತಡೆದು ಓದುತ್ತಾನೆ. ಆಗ ಓದಿದ ವಾಕ್ಯದ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ. ಒಂದೊಂದು ವಿರಾಮ ಚಿಹ್ನೆಗೂ ಒಂದು ಅರ್ಥವಿದೆ. ಅದನ್ನು ಉಪಯೋಗಿಸುವಾಗ ಲೇಖಕನು ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತಾನೆ. ಆದುದರಿಂದ ಈ ಚಿಹ್ನೆಗಳ ಬಗ್ಗೆ ವಿವರವಾಗಿ ತಿಳಿವಳಿಕೆ ಹೊಂದಿರುವುದು, ಲೇಖಕನ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ದೃಷ್ಟಿಯಿಂದ ವಿರಾಮ ಚಿಹ್ನೆಗಳನ್ನೂ ಅವುಗಳನ್ನೂ ಉಪಯೋಗಿಸುವ ಬಗೆಯನ್ನೂ ಕುರಿತು ವಿವರಣೆಯನ್ನು ನೀಡಲಾಗಿದೆ.
ಲೇಖನ ಚಿಹ್ನೆಗಳು ಹೀಗಿವೆ:

ಚಿಹ್ನೆಯ ಹೆಸರುಚಿಹ್ನೆ
೧.ಪೂರ್ಣವಿರಾಮ.
೨.ಅರ್ಧವಿರಾಮ;
೩.ಅಲ್ಪ ವಿರಾಮ,
೪.ವಿವರಣಸೂಚಿ:
೫.ಕಂಸ ಅಥವಾ ಆವರಣ( ) ಅಥವಾ - --
೬.ಪ್ರಶ್ನಾರ್ಥಕ ಚಿಹ್ನೆ?
೭.ಆಶ್ಚರ್ಯ ಸೂಚಕ ಚಿಹ್ನೆ!
೮.ಉದ್ಧಾರ ಸೂಚಕ ಚಿಹ್ನೆ“ ” ಅಥವಾ ‘ ’
ಇವುಗಳ ಬಗ್ಗೆ, ಇವುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ತಿಳಿದುಕೊಳ್ಳೋಣ.
ಪೂರ್ಣವಿರಾಮ ಇದು- .
ಒಂದು ವಾಕ್ಯವು ಪೂರೈಸಿದಾಗ ಆ ವಾಕ್ಯದ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸುತ್ತಾರೆ. ಪ್ರತಿಯೊಂದು ವಾಕ್ಯವಾದ ಮೇಲೆಯೂ ಇದನ್ನು ಉಪಯೋಗಿಸುತ್ತಾರೆ. ಅಂದರೆ ಒಂದು ಅಭಿಪ್ರಾಯ ಆ ವಾಕ್ಯದಲ್ಲಿ ಪೂರ್ತಿಯಾಗಿ ಹೇಳಲಾಗಿದೆ ಎಂದು ಅರ್ಥ. ಆ ವಾಕ್ಯಗಳು ಹೇಳಿಕೆ ಆಗಿರಬಹುದು; ವಿನಂತಿ, ಪ್ರಾರ್ಥನೆ ಆಗಿರಬಹುದು.

ಉದಾ:
೧. ಕನ್ನಡಭಾಷೆಯು ತುಂಬ ಪ್ರಾಚೀನವಾದ ಭಾಷೆ.
೨. ನಾನು ನಿಮಗೆ ಒಂದು ಪತ್ರವನ್ನು ಬರೆಯಬಹುದೆ.
೩. ನನ್ನಿಂದ ನಿಮಗೆ ತೊಂದರೆಯಾಗಿಲ್ಲ, ತಾನೆ.
ಈ ವಾಕ್ಯಗಳಲ್ಲಿ ಮೊದಲನೆಯದು ಒಂದು ಹೇಳಿಕೆ. ಎರಡನೆಯ ಮತ್ತು ಮೂರನೆಯ ವಾಕ್ಯಗಳು ಪ್ರಶ್ನೆಯಂತೆ ಇವೆ. ಆದರೂ, ಆ ವಾಕ್ಯಗಳು ಒಂದು ರೀತಿಯಾಗಿ ವಿನಂತಿ ಮಾಡುತ್ತಿರುವುದು ಕಂಡುಬರುತ್ತದೆ. ಅಂಥ ವಾಕ್ಯಗಳೂ ಹೇಳಿಕೆಗೆ ಸಮಾನವೆಂದು ಗಣಿಸಬಹುದು.
ಎಲ್ಲ ಸಂಕ್ಷಿಪ್ತಗಳ (abbreviations) ಮುಂದೆ ಪೂರ್ಣ ವಿರಾಮವನ್ನು ಹಾಕಬೇಕು.

ಉದಾ: ಡಾ. ಯು.ಎಸ್.ಎ., ಕ.ಸಾ.ಪ.
ಕುವೆಂಪು, ಪು.ತಿ.ನ. ವ್ಯಕ್ತಿಗಳ ಸಂಕ್ಷಿಪ್ತ ನಾಮವನ್ನು ಉಪಯೋಗಿಸುವಾಗ ಅವರು ಹೇಗೆ ಬರೆಯುತ್ತಿದ್ದರೋ ಹಾಗೆಯೇ ಬರೆಯಬೇಕು.
ಬರಹದಲ್ಲಿ ಯಾವುದಾದರೂ ಭಾಗವನ್ನು ಬಿಟ್ಟಿದ್ದರೆ ಅದನ್ನು ಮೂರು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (...)
ಬೇರೊಬ್ಬರ ವಾಕ್ಯಗಳನ್ನು ಉದ್ಧಾರ ಮಾಡಿ ಕೊನೆಯಲ್ಲಿ ಸ್ವಲ್ಪ ಭಾಗವನ್ನು ಬಿಟ್ಟಿದ್ದರೆ ಅದನ್ನು ನಾಲ್ಕು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (....)
* * * * *
ಅರ್ಧ ವಿರಾಮ ಇದು- ;
ಎರಡು ಸಂಪೂರ್ಣ ವಾಕ್ಯಗಳು ಬೇರೆಬೇರೆಯವೇ ಆಗಿದ್ದರೂ ಅವುಗಳಿಗೆ ಸಂಬಂಧ ಇದ್ದರೆ ಅವುಗಳ ನಡುವೆ ಅರ್ಧವಿರಾಮವನ್ನು ಉಪಯೋಗಿಸಬೇಕು.

ಉದಾ:
೧) ಧರ್ಮದ ಸ್ವರೂಪ ಬಹು ಸೂಕ್ಷ ವಾದದ್ದು; ಅದನ್ನು ಮಹಾತ್ಮರೂ ತಿಳಿಯುವುದು ಕಷ್ಟ.
೨) ಒಂದು ಸಂಗತಿಯೇನೋ ನಿಶ್ಚಯ; ಈ ಕಾಲಕ್ಕೆ ಕೊನೆಗಾಲ ಒದಗಿದೆ; ಅದಕ್ಕೇ ಈ ಕೌರವರು ಲೋಭ ಮೋಹಗಳಿಗೆ ವಶರಾಗಿದ್ದಾರೆ.
ಎರಡನೆಯ ವಾಕ್ಯದಲ್ಲಿ ಮೂರು ಉಪವಾಕ್ಯಗಳಿದ್ದರೂ ಎಲ್ಲಕ್ಕೂ ಸಂಬಂಧವಿರುವುದು ಸ್ಪಷ್ಟ.
ಎರಡು ವಾಕ್ಯಗಳಿಗೆ ಸಂಬಂಧವಿದ್ದು ಎರಡನೆಯ ವಾಕ್ಯವು ಹೀಗೆ, ಆಮೇಲೆ, ಅಲ್ಲದೆ, ಪರಿಣಾಮವಾಗಿ, ಕೊನೆಗೆ, ಇನ್ನು ಮುಂದೆ, ಬಳಿಕ, ಆದರೆ, ಈ ರೀತಿಯಲ್ಲಿ ಎಂಬಂಥ ಶಬ್ದಗಳಿಂದ ಮೊದಲಾದರೆ ಅಂಥ ಕಡೆಗಳಲ್ಲಿ ಮೊದಲ ವಾಕ್ಯದ ಕೊನೆಯಲ್ಲಿ ಅರ್ಧವಿರಾಮ ಚಿಹ್ನೆಯನ್ನು ಹಾಕಬೇಕು.
ಉದಾ: ನನ್ನ ರಕ್ಷಣೆಯಲ್ಲಿ ದನದ ಮಂದೆ ಬೆಳೆಯುತ್ತಿದೆ; ರೋಗರಹಿತವಾಗಿರುತ್ತದೆ; ಅಲ್ಲದೆ ನಾನು ಒಳ್ಳೆಯ ಜಾತಿಯ ಹೋರಿಗಳ ಲಕ್ಷಣವನ್ನು ಬಲ್ಲೆ.
ಈ ಉದಾಹರಣೆಯಲ್ಲಿ ಎರಡೂ ಬಗೆಯ ವಾಕ್ಯಗಳಿರುವುದನ್ನು ಕಾಣಬಹುದು.
ಈ ವಿರಾಮ ಚಿಹ್ನೆಯ ಬಗ್ಗೆ ಒಂದು ಎಚ್ಚರಿಕೆಯನ್ನು ನೀಡಬೇಕು. ಇದನ್ನು ಅತಿಯಾಗಿ ಉಪಯೋಗಿಸುವದರಿಂದ ಶೈಲಿಯಲ್ಲಿ ಕೊಂಚ ಬೇಸರ ತರುವ ಗುಣ ಕೂಡಿಬಿಡುತ್ತವೆ.
* * * * *
ಅಲ್ಪ ವಿರಾಮ ಇದು- ,
ವಿರಾಮ ಚಿಹ್ನೆಗಳಲ್ಲೆಲ್ಲ ಅತ್ಯಂತವಾಗಿ ಉಪಯೋಗವಾಗುವ ಚಿಹ್ನೆ ಇದು --, . ಇದನ್ನು ಎಲ್ಲೆಲ್ಲಿ ಉಪಯೋಗಿಸಬೇಕು ಎಂಬುದನ್ನು ವಿವರವಾಗಿ ತಿಳಿದಿದ್ದರೆ ಒಳ್ಳೆಯದು.
ಒಂದು ವಾಕ್ಯವು ದೀರ್ಘವಾಗಿದ್ದು ಅಧೀನವಾಕ್ಯವು ಪ್ರಾರಂಭದಲ್ಲಿ ಬಂದರೆ ಆ ಅಧೀನವಾಕ್ಯವಾದ ಕೂಡಲೆ ಒಂದು ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಶಂಕರನು ಕ್ಷಮಿಸಿ, ಅರ್ಜುನನಿಂದ ಕಿತ್ತುಕೊಂಡಿದ್ದ ಅಕ್ಷಯ ಬಾಣಗಳನ್ನೂ ಗಾಂಡೀವವನ್ನೂ ಹಿಂತಿರುಗಿಕೊಟ್ಟು, ಅವನ ಅಪೇಕ್ಷೆಯಂತೆ ತನ್ನಲ್ಲಿದ್ದ ಪಾಶು ಪತಾಸ್ತ್ರವನ್ನು ಕೊಟ್ಟನು. (ವಚನ ಭಾರತ - ೧೨೭).
ಅಧೀನವಾಕ್ಯವು ಹೃದಯದಿಂದ ಕೊನೆಯಾಗಿ ವಾಕ್ಯವು ಮುಂದುವರಿದರೆ, ಹೃದಯದ ಬಳಿಕ ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಆ ಬೀದಿಯಲ್ಲಿ ಮನೆಯ ಸಂಖ್ಯೆಯನ್ನು ಗುರುತಿಸಿ, ಆ ಮನೆಯ ಬಳಿಗೆ ಬಂದನು.
ವಾಕ್ಯವು ಆದರೆ, ಮತ್ತೆ, ಆದ್ದರಿಂದ, ಹೀಗೆ, ಮುಂತಾದ ಶಬ್ದಗಳಿಂದ ಮೊದಲಾದರೆ ಆ ಶಬ್ದಗಳಿಂದ ಬಳಿಕ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಅವನೇನೋ ಬುದ್ಧಿವಂತನೆ; ಆದರೆ, ಸೋಮಾರಿ.
ವಾಕ್ಯವು ವಿವರಣಾತ್ಮಕ ನುಡಿಗಟ್ಟುಗಳಿಂದ ಪ್ರಾರಂಭವಾದರೆ, ಆಗ ಅಲ್ಪವಿರಾಮವಿರಬೇಕು, ಆ ನುಡಿಗಟ್ಟುಗಳು ಮುಂದೆ. (ನ್ಯಾಯಾಲಯವು ಹೇಳಿರುವಂತೆ, ಮನುಸೂಚಿಸುವರಂತೆ ರಾಮಾಯಣದಲ್ಲಿರುವಂತೆ, ಪುರಾಣಗಳು ತಿಳಿಸುವಂತೆ - ಇತ್ಯಾದಿ ನುಡಿಗಟ್ಟುಗಳನ್ನು ನೆನೆಯಬಹುದು)

ಉದಾ: ವಕೀಲರು ವಿವರಿಸಿರುವಂತೆ, ಆತನು ಕಣ್ಣಾರೆ ನೋಡಿರಲಾರ; ಏಕೆಂದರೆ, ಅವನು ಕುರುಡ.
ವಾಕ್ಯದ ಯಾವುದಾದರೂ ಮುಖ್ಯವಾಕ್ಯಕ್ಕೆ ಸಂಬಂಧ ಹೊಂದಿರದಿದ್ದರೆ ಆಗ ಆ ಸಂಬಂಧ ಹೊಂದಿರದ ನುಡಿಗಟ್ಟಿನ ಹಿಂದೆ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ಶ್ರೀರಾಮರಾಯರು, ನನ್ನ ಸೋದರಮಾವ ಮಹಾ ಶ್ರೀಮಂತರು; ಊರಿನ ದೇವಸ್ಥಾನಕ್ಕೆ ಅವರೇ ಧರ್ಮದರ್ಶಿ.
ಅನೇಕ ಶಬ್ದಗಳು, ನುಡಿಗಟ್ಟುಗಳು ಒಂದೇ ವಾಕ್ಯದಲ್ಲಿ ಬಂದರೆ ಅವುಗಳಲ್ಲಿ ಕೊನೆಯದನ್ನು ಬಿಟ್ಟು ಮಿಕ್ಕವುಗಳಾದ ಮೇಲೆ ಅಲ್ಪ ವಿರಾಮವಿರಬೇಕು.

ಉದಾ: ದಯಾನಂದರು ಉದಾರಿ, ಧರ್ಮಿಷ್ಠ, ವಿದ್ಯಾವಂತ, ಅಭಿಮಾನಿ, ಸಮರ್ಥ ಮತ್ತು ವಿವೇಕಿ.
ಈ ದಿನ ಸ್ನೇಹಿತರು ಬರುತ್ತಾರೆ; ಊಟಕ್ಕೆ ಅನ್ನ, ಸಾರು, ಹಪ್ಪಳ, ಸಂಡಿಗೆ, ಒಬ್ಬಟ್ಟು ಮತ್ತು ಕಾಯ್ಗಡುಬು-- ಇಷ್ಟನ್ನೂ ತಯಾರಿಸಿರಬೇಕು. ಹೀಗೆಯೇ ದ್ವಂದ್ವ ಶಬ್ದಗಳು ಜೊತೆಯಾಗಿ ಬಂದರೂ ವಾಕ್ಯದಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ವಿದ್ಯಾಭ್ಯಾಸದಲ್ಲಿ ಅಕ್ಷರ ಮತ್ತೆ ಕಾಗುಣಿತ, ವ್ಯಾಕರಣ ಮತ್ತು ಛಂದಸ್ಸು, ಪದ್ಯ ಮತ್ತು ಗದ್ಯ ಇವುಗಳನ್ನು ಯಾವಾಗಲೂ ಜೊತೆಯಾಗಿಯೇ ಕಲಿಯಬೇಕು.
ತಾರೀಕು, ತಿಂಗಳು, ವರ್ಷ ಇವುಗಳನ್ನು ಬರೆಯುವಾಗ ಪ್ರತಿಯೊಂದರ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ೧೫, ಏಪ್ರಿಲ್, ೨೦೦೫, ಶುಕ್ರವಾರ, ಈ ನನ್ನ ಮನೆಯ ಗೃಹಪ್ರವೇಶವಾಯಿತು.
ಉದ್ಧಾರಮಾಡಿದ ವಾಕ್ಯಗಳ ಹೀಗೆ ಅಲ್ಪವಿರಾಮವಿರಬೇಕು.

ಉದಾ: ವಿದ್ಯಾರ್ಥಿಗೆ ಉಪಾಧ್ಯಾಯರು ಹೇಳಿದರು, “ನೀನು ಮೂರ್ಖ; ಆದರೆ, ಸಿರಿವಂತ; ಆದ್ದರಿಂದ, ನಿನ್ನನ್ನು ಕ್ಷಮಿಸಿದ್ದೇನೆ.”
ಆಶ್ಚರ್ಯಸೂಚಕ ಉದ್ಗಾರಗಳ ಮುಂದೆ ಅಲ್ಪವಿರಾಮವಿರಬೇಕು.

ಉದಾ: ಆಹಾ, ಏನು ನೋಟ! ಏನು ಊಟ! ಅಬ್ಬಾ, ಎಂಥ ದೊಡ್ಡ ಸಭೆ!
ವ್ಯಕ್ತಿಯ ಸದರಿಗಳನ್ನು ತಿಳಿಸುವಾಗ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಶ್ರೀ ಗೋಪಾಲರಾಯರು ಎಂ.ಎ., ಬಿ.ಎಲ್.
ಅಂಕಿಗಳನ್ನು ಬರೆಯುವಾಗ ಸಾವಿರವನ್ನು ಸೂಚಿಸುವ ಅಂಕಿಯ ಮುಂದೆ
1,117 20,636 1,81,000
ವಿಳಾಸಗಳನ್ನು ಬರೆಯುವಾಗ ಯಾವ ವಿರಾಮ ಚಿಹ್ನೆಗಳನ್ನೂ ಉಪಯೋಗಿಸಬೇಕಾಗಿಲ್ಲ.
ಶ್ರೀ ಸಂತಾನ ಗೋಪಾಲಕೃಷ್ಣರಾಯರು
೩೭, ಪಾತಾಳಮ್ಮ ಬೀದಿ
ಜಯನಗರ ೫೬೦ ೦೭೦
ಭಾಷೆಯಲ್ಲಿ ಎಲ್ಲ ಬಗೆಯ ವಾಕ್ಯಗಳನ್ನೂ ಉದಾಹರಣೆಗಳ ಮೂಲಕ ತೋರಿಸಲಾಗುವುದಿಲ್ಲ. ಈ ಮಾದರಿಗಳಿಂದ ವಾಕ್ಯಗಳಲ್ಲಿ ಓದುಗರು ಎಲ್ಲಿ ಸ್ವಲ್ಪ ನಿಲ್ಲಿಸಿ ಓದಬೇಕು ಎನ್ನಿಸುತ್ತದೆಯೋ ಅದನ್ನು ಗಮನಿಸಿ ಅಲ್ಪ ವಿರಾಮವನ್ನು ಉಪಯೋಗಿಸಬೇಕು.
* * * * *
ವಿವರಣ ಸೂಚಿ ಇದು- : (ಕೆಲವು ವೇಳೆ ಇದನ್ನು :- ಎಂದೂ ಬರೆಯುವುದುಂಟು) ಒಂದು ವಾಕ್ಯದಲ್ಲಿ : ಈ ಚಿಹ್ನೆಯು ಬರಬೇಕಾದರೆ ವಾಕ್ಯದ ವಾಚನಕ್ಕೆ ಹೆಚ್ಚಾದ ತಡೆ ಬಂದಿದೆ ಎಂದು ಅರ್ಥ. ಈ ಕಡೆಗೆ ಕಾರಣಗಳನ್ನು ವಿವರವಾಗಿ ತಿಳಿಯೋಣ.
ಒಂದು ವಾಕ್ಯದಲ್ಲಿ ವಸ್ತುಗಳ ಪಟ್ಟಿ ಅರ್ಥ ವಿವರಗಳ ಪಟ್ಟಿ ಬಂದರೆ ಆಗ : ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನನಗೆ ಈ ಮುಂದೆ ತಿಳಿಸಿರುವವುಗಳನ್ನು ಕಳುಹಿಸಿ: ನಾಲ್ಕು ಗಡಿಯಾರಗಳು, ಹದಿನೈದು ಕತ್ತರಿಗಳು, ಮೂವತ್ತು, ಚಾಕುಗಳು ಮತ್ತು ಒಂದು ಡಜನ್ ಉಳಿಗಳು.
ಇನ್ನೊಂದು ವಾಕ್ಯ.
ನೀನು ಈ ದಿನ ಮಾಡಬೇಕಾದ ಕೆಲಸಗಳು: ಬ್ಯಾಂಕಿಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಔಷಧಗಳನ್ನು ಕೊಳ್ಳುವುದು ಮತ್ತು ಅಂಚೆಯ ಪತ್ರಗಳನ್ನು ಅಂಚೆಯ ಪೆಟ್ಟಿಗೆಗೆ ಹಾಕುವುದು.
ವ್ಯವಹಾರದ ಪತ್ರಗಳಲ್ಲಿ ವ್ಯಕ್ತಿಯ, ಸಂಸ್ಥೆಯ ಹೆಸರನ್ನೂ ಬರೆದ ಬಳಿಕ
ಮಾನ್ಯ ಪ್ರಿನ್ಸಿಪಾಲರೇ:
ಸ್ನೇಹದ, ಸಾಂಸಾರಿಕವಾದ ಪತ್ರಗಳಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.
ಪ್ರಿಯ ಗೆಳೆಯ,
ಪ್ರಿಯ ಗೆಳತಿ,
ಕಾಲ, ಅಂಕೆ, ಸಂದರ್ಭಗಳನ್ನು ತಿಳಿಸುವಾಗ ಭಾಗಗಳನ್ನು ಬೇರ್ಪಡಿಸಬೇಕಾದರೆ

ಉದಾ: ಗಂಟೆ ೧೦:೩೦, ಅಧ್ಯಾಯ X : ಭಾಗ ೬, ಅಲಂಕಾರ ೧೫ : ಉದಾ ೬
* * * * *
ಕಂಸ ಅಥವಾ ಆವರಣ ಚಿಹ್ನೆ ಇದು- ( )
ಕೆಲವು ವೇಳೆ ( ) ಕಂಸಗಳ ಬದಲು ಹೀಗೆ ಕಿರು ಅಡ್ಡ ಗೀಟುಗಳನ್ನು ಉಪಯೋಗಿಸುತ್ತಾರೆ. ಇಂಗ್ಲಿಷಿನಲ್ಲೂ parentheses ಎಂದು ಕರೆಯುವ ಇದನ್ನು ವಾಕ್ಯಗಳಲ್ಲಿ ವ್ಯಾಕರಣದ ಬಾಂಧವ್ಯವಿಲ್ಲದ ಭಾಗಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.

ಉದಾ: ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.
ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).
ಮಾನವರು ಗರ್ವಿಷ್ಠರಾದರೆ - ನಾವೆಲ್ಲರೂ ಗರ್ವಿಷ್ಠರೆ - ಸ್ನೇಹವು ವರ್ಧಿಸಲಾರದು.
ಇಂಥ ಸಂದರ್ಭಗಳಲ್ಲಿ ಬೇರೆಯ ವಾಕ್ಯಗಳನ್ನು ಬರೆಯುವುದೇ ಲೇಸು. ಅರ್ಥ ಸರಳವಾಗಿ ತಿಳಿಯಬರುತ್ತದೆ.
* * * * *
ಪ್ರಶ್ನಾರ್ಥಕ ಚಿಹ್ನೆ ಇದು- ?
ಎಲ್ಲ ಪ್ರಶ್ನೆಗಳ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಹೆಸರೇನು?
ಆ ಪೆಟ್ಟಿಗೆಯಲ್ಲಿ ಏನಿದೆ?
ನಿಮ್ಮ ತಂದೆ ಊರಿನಲ್ಲಿದ್ದಾರೆಯೆ?
ಇಂದು ಶಾಲೆಯನ್ನು ಏಕೆ ಮುಚ್ಚಿದ್ದಾರೆ?
ವಾಕ್ಯದಲ್ಲಿ ಅನೇಕ ಪ್ರಶ್ನೆಗಳಿದ್ದರೆ ಎಲ್ಲ ಪ್ರಶ್ನೆಗಳಿಗೂ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಗೆಳೆಯ ಆರೋಗ್ಯವೆ? ಊರಿನಲ್ಲಿ ಹಾಗೆಯೇ ಶಾಲೆಗೆ ಹೋಗುತ್ತಿದ್ದಾನೆಯೇ?
* * * * *
ಆಶ್ಚರ್ಯಸೂಚಕ ಚಿಹ್ನೆ ಇದು- !
ಇದನ್ನು ಆಶ್ಚರ್ಯ, ಭಾವುಕತೆ, ಅನುಕಂಪ, ಆಜ್ಞೆ, ಉದ್ವೇಗ ಮುಂತಾದ ಭಾವನೆಗಳನ್ನು ತಿಳಿಸುವ ಉದ್ಗಾರಗಳ ಮುಂದೆ ಉಪಯೋಗಿಸಬೇಕು.

ಉದಾ:
ಆ ಹಳದಿ ಹೂಗಳ ಮರವನ್ನು ನೋಡು!
ನಿನ್ನ ವೇಷವನ್ನು ನೋಡುವುದು ಕಷ್ಟ!
ಓ! ಮರ ಉರುಳಿಹೋಯಿತು.
ರಸೀತಿಯನ್ನು ಇಂದೇ ಹಿಂದಿರುಗಿಸು!
ಅವನ ಮಾತನ್ನು ನಂಬಬಹುದೇ!
ಆ ಮಾತಿನ ಅರ್ಥ ತಿಳಿಯಿತೆ!
* * * * *
ಉದ್ಧಾರ ಸೂಚಕ ಚಿಹ್ನೆ ಇದು- “ ” ಅಥವಾ ‘ ’.
ಮತ್ತೊಬ್ಬರು ಆಡಿದ ಮಾತುಗಳೆಂದು ತಿಳಿಸಬೇಕಾದಾಗ ಆ ಮಾತುಗಳನ್ನು ಉದ್ಧಾರ ಚಿಹ್ನೆಗಳ ಒಳಗೆ ಬರೆಯಬೇಕು. (ಈ ಚಿಹ್ನೆಯನ್ನು 'ಬಕಗ್ರೀವ' ಎಂದು ಕೆಲವರು ಕರೆಯುತ್ತಾರೆ.)

ಉದಾ: ಸಚಿವರು ಹೇಳಿದರು: “ಆಗಲಿ, ನಿಮ್ಮ ಶಾಲೆಯ ಕಟ್ಟಡಕ್ಕೆ ತಗಲುವ ವೆಚ್ಚದಲ್ಲಿ ಅರ್ಧವನ್ನು ಊರಿನವರು ಕೂಡಿಸುವುದಾದರೆ ನಾನು ಸರಕಾರದಿಂದ ಮಿಕ್ಕ ಅರ್ಧವನ್ನು ಕೊಡಿಸುತ್ತೇನೆ.”
ಈ ವಾಕ್ಯದ ಮೊದಲ ಭಾಗವನ್ನು ಕೊನೆಯಲ್ಲಿ --ಎಂದು ಸಚಿವರು ಹೇಳಿದರು, ಎಂದು ಬೇಕಾದರೆ ಬರೆಯಬಹುದು.
ಗ್ರಂಥಗಳ ಹೆಸರು, ಕವನಗಳ ಹೆಸರು, ಅಧ್ಯಾಯಗಳ ಹೆಸರು ಮುಂತಾದುವನ್ನು ಈ ಬಿಟ್ಟವುಗಳಲ್ಲಿ ಸೂಚಿಸಬಹುದು. “ಮಂದ್ರ” ಎಂಬ ಕಾದಂಬರಿ. “ಕಲ್ಕಿ” ಎಂಬ ಕವನ. “ವಿಗಡವಿಕ್ರಮರಾಯ” ಎಂಬ ನಾಟಕ.
ಗ್ರಾಮ್ಯ ಶಬ್ದಗಳನ್ನು ಈ ಚಿಹ್ನೆಯಿಂದ ತೋರಿಸಬಹುದು.

ಉದಾ: ‘ಸೂಳೆಮಗನೆ’, ಎಂದು ಬೈದವನನ್ನು ‘ಸಂಭಾವ್ಯ’, ಎಂದು ಕರೆಯಬಹುದೆ?
ದೀರ್ಘವಾದ ವಾಕ್ಯಗಳನ್ನು ತಿಳಿಸಬೇಕಾದಾಗ ಅವುಗಳನ್ನು ; ಚಿಹ್ನೆಯಿಂದ ಗುರುತಿಸುವುದು ಒಳ್ಳೆಯದು.
ಈ ಉದಾರಸೂಚಕಗಳ ನಡುವೆ ಒಂದು ಸಂಪೂರ್ಣ ವಾಕ್ಯ ಬಂದರೆ ಆ ವಾಕ್ಯಕ್ಕೆ ಸಂಬಂಧಿಸಿದಂತೆ ಅದರ ಅಂತ್ಯದಲ್ಲಿ ಬರುವ ವಿರಾಮ ಚಿಹ್ನೆಗಳನ್ನು ಬರೆದ ಮೇಲೆ ಉದ್ಧಾರಕ ಚಿಹ್ನೆಯನ್ನು ಹಾಕಬೇಕು.
ಉದಾ:
“ಈ ಶಬ್ದವು ಆ ಗ್ರಂಥದಲ್ಲಿ ಪ್ರಯೋಗವಾಗಿಲ್ಲ.”
“ನೀನೇನು ಮಹಾಪುರುಷನೋ!”
“ನಿನ್ನ ಮದುವೆ ಯಾವಾಗ?”
ಮೇಲೆ ತಿಳಿಸಿದ ಚಿಹ್ನೆಗಳು ತುಂಬ ಪ್ರಚಾರದಲ್ಲಿ ಇರುವ ಚಿಹ್ನೆಗಳು. ಆದರೆ, ಇವಲ್ಲದೆ ಗಣಿತಶಾಸ್ತ್ರದ ಕೆಲವು ಚಿಹ್ನೆಗಳನ್ನು ಭಾಷೆಯ ಸಂಬಂಧದಲ್ಲಿಯೇ ಉಪಯೋಗಿಸುತ್ತಾರೆ. ಅವು ವಿರಾಮ ಚಿಹ್ನೆಗಳಲ್ಲ. ಅವುಗಳಿಗೆ ಬೇರೆ ಅರ್ಥಗಳಿವೆ. ಅವುಗಳ ವಿವರಗಳು ಮುಂದೆ ಇವೆ:
* * * * *
+ ಇದು plus ಚಿಹ್ನೆ.
ಕನ್ನಡದಲ್ಲಿ ವ್ಯಾಕರಣದ ಪಾಠಮಾಡುವಾಗ ರಾಮ + ಅನ್ನು = ರಾಮನನ್ನು ಎಂದು ಹೇಳುತ್ತಾರೆ. ಈ ವಾಕ್ಯದಲ್ಲಿ ಒಂದು plus ಚಿಹ್ನೆ, ಇನ್ನೊಂದು equals ಚಿಹ್ನೆ. ಅದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಅಧ್ಯಾಪಕರು plus ಮತ್ತು equals ಎಂದೇ ಉಪಯೋಗಿಸುತ್ತಾರೆ. + ಇದು ಸಂಕಲನ ಚಿಹ್ನೆ. ವ್ಯಾಕರಣ ಪಾಠ ಮಾಡುವಾಗ ‘ಜೊತೆಗೆ’ ಎಂಬುದಾಗಿ ಉಪಯೋಗಿಸಬಹುದು.
ರಾಮ ‘ಜೊತೆಗೆ’ ಅನ್ನು ಎಂಬುದು ರಾಮನನ್ನು ಎಂದಾಗುತ್ತದೆ. ಈ ವಾಕ್ಯ ದೊಡ್ಡದಾಗುವುದರಿಂದ ಅಧ್ಯಾಪಕರು ರಾಮ plus ಅದು equals ರಾಮನನ್ನು ಎಂದೇ ಹೇಳುತ್ತಾರೆ. ಆದ್ದರಿಂದ +, = ಈ ಚಿಹ್ನೆಗಳನ್ನು ನಾವು ಉಪಯೋಗಿಸಬೇಕು.
* * * * *
<, > ಎಂಬ ಎರಡು ಬೇರೆ ಚಿಹ್ನೆಗಳಿವೆ. ಇವುಗಳನ್ನು ಉಪಯೋಗಿಸುವ ಸಂದರ್ಭವನ್ನು ನೋಡಿ:
ಪರ್ವ > ಹಬ್ಬ
ಸ್ವರ್ಗ > ಸಗ್ಗ
ಬೇಹಾರ < ವ್ಯಾಪಾರ
ಬೇಸಾಯ < ವ್ಯವಸಾಯ
ಹೀಗೆ ಬರೆದರೆ ಹಬ್ಬ ಎಂಬ ಶಬ್ದ ಪರ್ವ ಶಬ್ದದಿಂದ ಬಂದಿದೆ ಎಂದು ಅರ್ಥ. ಮೊದಲನೆಯ ಶಬ್ದ ಪರ್ವ-ಸಂಸ್ಕೃತ. ಅದರಿಂದ ಬಂದ ಹಬ್ಬ ತದ್ಭವ. ವ್ಯಾಪಾರ ಎನ್ನುವ ಶಬ್ದ ಬೇಹಾರ ಎಂದು ಪಡೆಯುತ್ತದೆ. ಆಗ ನಾವು ಬೇಹಾರ < ವ್ಯಾಪಾರ ಎಂದು ತಿಳಿಸಬಹುದು. ಬೇಸಾಯ < ವ್ಯವಸಾಯ ಎಂದು ಬರೆಯಬಹುದು. ಈ ಚಿಹ್ನೆ > ಇದು ಯಾವ ಶಬ್ದದಿಂದ ಬಂದಿದೆ ಎಂದೂ; ಈ ಚಿಹ್ನೆ < ಯಾವ ಶಬ್ದ ಮೂಲ ಎಂದು ಅರ್ಥ ಮಾಡಿಕೊಳ್ಳಬೇಕು.
ನಿಘಂಟುಗಳಿಂದ ಶಬ್ದದ ವ್ಯುತ್ಪತ್ತಿಯನ್ನು ತಿಳಿಸುವಾಗ ಈ ಚಿಹ್ನೆಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿದಿದ್ದಾರೆ ಒಳ್ಳೆಯದು.

ಕೃದಂತ-ತದ್ಧಿತಾಂತ

ಕೃದಂತ-ತದ್ಧಿತಾಂತ

ಕೃದಂತ (ಕೃನ್ನಾಮ)


ನಾಮಪ್ರಕೃತಿಗಳು ನಾಲ್ಕು ಪ್ರಕಾರಗಳೆಂದು ತಿಳಿದಿರುವಿರಿ.
(೧) ಸಹಜನಾಮಪ್ರಕೃತಿಗಳು
(೨) ಕೃದಂತಗಳು
(೩) ತದ್ಧಿತಾಂತಗಳು
(೪) ಸಮಾಸಗಳು – ಎಂದೇ ಆ ನಾಲ್ಕುವಿಧವಾದ ನಾಮಪ್ರಕೃತಿಗಳು.
ಸಹಜನಾಮಪ್ರಕೃತಿಗಳೆಂದರೇನು? ಅವು ನಾಮವಿಭಕ್ತಿಪ್ರತ್ಯಯ ಸೇರಿ, ನಾಮಪದಗಳಾಗು ವಿಕೆ, ಅವುಗಳ ಲಿಂಗ, ವಚನಾದಿಗಳ ಬಗೆಗೂ, ಸಮಾಸವೆಂದರೇನು? ಅವುಗಳ ಪ್ರಕಾರಗಳ ಬಗೆಗೂ ಹಿಂದಿನ ಪ್ರಕರಣಗಳಲ್ಲಿ ತಿಳಿದಿದ್ದೀರಿ.  ಈಗ ಕೃದಂತ, ತದ್ಧಿತಾಂತಗಳೆಂದರೇನೆಂಬ ಬಗೆಗೆ ತಿಳಿಯಿರಿ.
ಮೊದಲು ಕೃದಂತಪ್ರಕರಣದಲ್ಲಿ ಕೃದಂತಗಳ ಬಗೆಗೂ, ಅನಂತರ ತದ್ಧಿತಾಂತ ಪ್ರಕರಣದಲ್ಲಿ ತದ್ಧಿತಾಂತಗಳ ಬಗೆಗೂ ವಿವರಗಳನ್ನು ನೋಡಿರಿ.
ಧಾತು - ಕ್ರಿಯಾಪದ - ಕೃದಂತ ನಾಮಪ್ರಕೃತಿ - ಕೃದಂತ ನಾಮಪದ
(೧) ಮಾಡು - ಮಾಡಿದನು - ಮಾಡಿದ - ಮಾಡಿದವನು, ಮಾಡಿದವನನ್ನು, ಮಾಡಿದವನಿಂದ -ಇತ್ಯಾದಿ
(೨) ಹೋಗು - ಹೋಗುವನು - ಹೋಗುವ - ಹೋಗುವವನು, ಹೋಗುವವನನ್ನು, ಹೋಗುವವನಿಂದ -ಇತ್ಯಾದಿ
(೩) ತಿನ್ನು - ತಿನ್ನುತ್ತಾನೆ - ತಿನ್ನುವ - ತಿನ್ನುವವನು, ತಿನ್ನುವವನನ್ನು, ತಿನ್ನುವವನಿಗೆ, ತಿನ್ನುವವನಲ್ಲಿ -ಇತ್ಯಾದಿ
(೪) ಬರೆ - ಬರೆಯುವನು - ಬರೆಯುವ - ಬರೆಯುವವನು, ಬರೆಯುವವನನ್ನು -ಇತ್ಯಾದಿ

ಮೇಲಿನ ನಾಲ್ಕು ಉದಾಹರಣೆಗಳಲ್ಲಿ-ಮಾಡು, ಹೋಗು, ತಿನ್ನು, ಬರೆ-ಈ ನಾಲ್ಕು ಧಾತುಗಳು-ಮಾಡಿದನು, ಹೋಗುವನು, ತಿನ್ನುತ್ತಾನೆ, ಬರೆಯುವನು ಈ ನಾಲ್ಕು ರೀತಿಯ ಕ್ರಿಯಾಪದಗಳಾಗಿವೆ.  ಇವು ಕ್ರಿಯಾಪದಗಳಾಗುವ ರೀತಿಯನ್ನು ಹಿಂದಿನ ಕ್ರಿಯಾಪದ ಪ್ರಕರಣದಲ್ಲಿ ತಿಳಿದಿದ್ದೀರಿ.  ಅವುಗಳ ಮುಂದಿರುವ ಮಾಡಿದ, ಹೋಗುವ, ತಿನ್ನುವ, ಬರೆಯುವ- ಇವು ಕ್ರಮವಾಗಿ – ಮಾಡು+ದ+ಅ=ಮಾಡಿದ, ಹೋಗು+ವ+ಅ=ಹೋಗುವ, ತಿನ್ನು+ವ+ಅ=ತಿನ್ನುವ, ಬರೆ+ಉವ+ಅ=ಬರೆಯುವ – ಹೀಗಾಗಿವೆ.  ಇವು ಎಲ್ಲಾ ಕಡೆಗೂ ಕೊನೆಯಲ್ಲಿ ಅ ಎಂಬ ಪ್ರತ್ಯಯವನ್ನೂ ಮಧ್ಯದಲ್ಲಿ ದ, ವ, ಉವ ಇತ್ಯಾದಿ ಪ್ರತ್ಯಯಗಳನ್ನೂ ಹೊಂದಿವೆ.  ಧಾತುಗಳು ಹೀಗೆ – ಮಾಡಿದ, ಹೋಗುವ, ತಿನ್ನುವ, ಬರೆಯುವ – ಇತ್ಯಾದಿ ರೂಪ ಪಡೆದ ಮೇಲೆ ಧಾತುವಿನಿಂದ ಹುಟ್ಟಿದ ನಾಮಪ್ರಕೃತಿಗಳೆನಿಸಿದವು.  ಅಥವಾ ಕೃದಂತನಾಮ ಪ್ರಕೃತಿಗಳೆನಿಸಿದವು.  ಇನ್ನು ಇವುಗಳ ಮೇಲೆ-ಉ, ಅನ್ನು, ಇಂದ, ಗೆ, ಇಗೆ, ಕ್ಕೆ, ಅಕ್ಕೆ, ದೆಸೆಯಿಂದ, ಅ, ಅಲ್ಲಿ – ಇತ್ಯಾದಿ ಸಪ್ತ ವಿಧವಾದ ನಾಮವಿಭಕ್ತಿಪ್ರತ್ಯಯಗಳೂ ಸೇರಿ ಕೃದಂತನಾಮಪದಗಳೆನಿಸುತ್ತವೆ.  ಇಂಥವನ್ನೇ ನಾವು ಸಾಧಿತ ನಾಮಗಳು ಎನ್ನುತ್ತೇವೆ.  ಮೇಲಿನ ಉದಾಹರಣೆಗಳಲ್ಲಿ ಕೊನೆಯಲ್ಲಿ ಬಂದಿರುವ ಅ ಎಂಬುದೇ ಕೃತ್‌ಪ್ರತ್ಯಯ.  ಇಂಥ ಕೃತ್‌ಪ್ರತ್ಯಯವನ್ನು ಅಂತದಲ್ಲಿ ಉಳ್ಳದ್ದೇ ಕೃದಂತ.  ಮಧ್ಯದಲ್ಲಿ ಬಂದಿರುವ ದ, ವ, ಉವಗಳು ಕಾಲವನ್ನು ಸೂಚಿಸುವ ಪ್ರತ್ಯಯಗಳು.  ಇವಕ್ಕೆ ಕಾಲಸೂಚಕ ಪ್ರತ್ಯಯಗಳೆನ್ನುವರು.  ಹಾಗಾದರೆ ಕೃದಂತವೆಂದರೇನು? ಎಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೮೬) ಕೃದಂತ:- ಧಾತುಗಳಿಗೆ ಕೃತ್ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು. ಇವಕ್ಕೆ ಕೃನ್ನಾಮಗಳೆಂದೂ ಹೆಸರು.
ಕೃದಂತಗಳು - ಕೃದಂತನಾಮ (ಕೃನ್ನಾಮ), ಕೃದಂತ ಭಾವನಾಮ, ಕೃದಂತಾವ್ಯಯ ಗಳೆಂದು ಮೂರು ವಿಧ.
ಉದಾಹರಣೆಗೆ:-
ಕೃದಂತನಾಮ ಕೃದಂತಭಾವನಾಮ ಕೃದಂತಾವ್ಯಯ
ಮಾಡಿದ ಮಾಟ ಮಾಡಿ
ತಿನ್ನುವ ತಿನ್ನುವಿಕೆ ತಿಂದು
ನಡೆಯುವ ನಡೆತ ನಡೆಯುತ್ತ
ಹೋಗದ ಹೋಗುವಿಕೆ ಹೋಗಲು

() ಕೃದಂತ ನಾಮಗಳು
(೮೭) ಕೃದಂತನಾಮಗಳು:- ಧಾತುಗಳಿಗೆ ಕರ್ತೃ ಮೊದಲಾದ ಅರ್ಥಗಳಲ್ಲಿ ಸಾಮಾನ್ಯವಾಗಿ ಎಂಬ ಕೃತ್ಪ್ರತ್ಯಯವು ಬರುವುದು. ಆಗ ಧಾತುವಿಗೂ ಕೃತ್ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನ, ಭವಿಷ್ಯತ್ಕಾಲಗಳಲ್ಲಿ ಉವ ಎಂಬ ಕಾಲಸೂಚಕ ಪ್ರತ್ಯಯಗಳೂ, ಭೂತಕಾಲದಲ್ಲಿ ಎಂಬ ಕಾಲಸೂಚಕ ಪ್ರತ್ಯಯವೂ, ನಿಷೇಧಾರ್ಥದಲ್ಲಿ ಅದ ಎಂಬುದೂ ಆಗಮಗಳಾಗುತ್ತವೆ. ಇವನ್ನೇ ಕೃದಂತನಾಮಗಳೆ ನ್ನುವರು.
ಇವು ನಾಮಪ್ರಕೃತಿಗಳೆನಿಸಿದ್ದರಿಂದ ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳಾಗುವುವು.
ಉದಾಹರಣೆಗೆ:-
(i) ವರ್ತಮಾನ ಕೃದಂತಕ್ಕೆ-
ಮಾಡು + + = ಮಾಡುವ
ತಿನ್ನು + + = ತಿನ್ನುವ
ಬರೆ + ಉವ + = ಬರೆಯುವ

ಇದರಂತೆ-ಹೋಗುವ, ಬರುವ, ತಿನ್ನುವ, ನೋಡುವ, ಓಡುವ, ನಡೆಯುವ, ಕಾಣುವ, ಕೊಡುವ[1].
(ii) ಭೂತ ಕೃದಂತಕ್ಕೆ-
ಮಾಡು + + = ಮಾಡಿದ
ತಿನ್ನು + + = ತಿಂದ
ಹೋಗು + + = ಹೋದ

ಇದರಂತೆ ಬರೆದ, ನೋಡಿದ, ನಡೆದ, ಕಂಡ, ಕರೆದ-ಇತ್ಯಾದಿ.
(iii) ನಿಷೇಧ ಕೃದಂತಕ್ಕೆ-
ಮಾಡು + ಅದ + = ಮಾಡದ
ತಿನ್ನು + ಅದ + = ತಿನ್ನದ

ಇದರಂತೆ ಹೋಗದ, ಬರದ, ನೋಡದ, ನುಡಿಯದ, ಬರೆಯದ-ಇತ್ಯಾದಿ.
ಮೇಲೆ ಹೇಳಿದ ವರ್ತಮಾನ, ಭವಿಷ್ಯತ್, ಭೂತ, ನಿಷೇಧಾರ್ಥ ಕೃದಂತನಾಮಗಳೆಲ್ಲ ಈಗ ನಾಮವಿಭಕ್ತಿಪ್ರತ್ಯಯ ಹತ್ತಲು ಸಿದ್ಧವಾದವು. ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಆಗುವ ವ್ಯಾಕರಣ ವಿಶೇಷಗಳನ್ನು ಈ ಕೆಳಗೆ ನೋಡಿರಿ.
(i) ಪುಲ್ಲಿಂಗದಲ್ಲಿ-
ಕೃದಂತ ನಾಮಪದಗಳು
ಮಾಡುವ ಮಾಡುವ + ಅವನು + = ಮಾಡುವವನು

ಮಾಡುವ + ಅವರು + = ಮಾಡುವವರು

ಮಾಡುವ + ಅವನು + ಅನ್ನು = ಮಾಡುವವನನ್ನು

ಮಾಡಿದ + ಅವನು + = ಮಾಡಿದವನು (ಏ.ವ.)

ಮಾಡಿದ + ಅವರು + = ಮಾಡಿದವರು (ಬ.ವ.)

ಮಾಡಿದ + ಅವರು + ಇಂದ = ಮಾಡಿದವರಿಂದ (ಬ.ವ.)

ಮಾಡದ + ಅವನು + = ಮಾಡದವನು (ಏ.ವ.)

ಮಾಡದ + ಅವನು + ಅಲ್ಲಿ = ಮಾಡದವನಲ್ಲಿ (ಏ.ವ.)

ಮಾಡದ + ಅವರು + ಅಲ್ಲಿ = ಮಾಡದವರಲ್ಲಿ (ಬ.ವ.)









(ii) ಸ್ತ್ರೀಲಿಂಗದಲ್ಲಿ-
ಕೃದಂತ ನಾಮಪದಗಳು
ಬರೆದ ಬರೆದ + ಅವಳು + = ಬರೆದವಳು (ಏ.ವ.)

ಬರೆದ + ಅವಳು + ಅನ್ನು = ಬರೆದವಳನ್ನು (ಏ.ವ.)

ಬರೆದ + ಅವರು + ಇಂದ = ಬರೆದವರಿಂದ (ಬ.ವ.)

ಬರೆದ + ಅವಳು + ಇಗೆ = ಬರೆದವಳಿಗೆ (ಏ.ವ.)

ಬರೆದ + ಅವರು + ಇಗೆ = ಬರೆದವರಿಗೆ (ಬ.ವ.)

ಬರೆದ + ಅವಳು + ಅಲ್ಲಿ = ಬರೆದವಳಲ್ಲಿ (ಏ.ವ.)

ಬರೆದ + ಅವಳು + = ಬರೆದವಳೇ (ಏ.ವ.)

ತಿನ್ನದ + ಅವಳು + = ತಿನ್ನದವಳು

ತಿನ್ನದ + ಅವರು + ಅನ್ನು = ತಿನ್ನದವರನ್ನು

ತಿನ್ನದ + ಅವಳು + ಇಂದ = ತಿನ್ನದವಳಿಂದ

(iii) ನಪುಂಸಕಲಿಂಗದಲ್ಲಿ-
ಕೃದಂತ ನಾಮಪದಗಳು
ಹೋಗುವ ಹೋಗುವ + ಉದು + = ಹೋಗುವುದು


ಹೋಗುವ + ಉದು + ಅನ್ನು = ಹೋಗುವುದನ್ನು


ಹೋಗುವ + ಉವು + ಅನ್ನು = ಹೋಗುವುವನ್ನು


ಹೋಗುವ + ಉದು + ಅರು + ಇಂದ = ಹೋಗುವುದರಿಂದ

ಹೋಗುವ + ಉದು + ಅಕ್ಕೆ = ಹೋಗುವುದಕ್ಕೆ


ಹೋಗುವ + ಉದು + ಅರು + ಅಲ್ಲಿ = ಹೋಗುವುದರಲ್ಲಿ

ಹೋಗುವ + ಉವು + ಗಳು + ಅಲ್ಲಿ = ಹೋಗುವುವುಗಳಲ್ಲಿ
(ಅವು)

ಹೋಗುವವುಗಳಲ್ಲಿ

ಹೋದ + ಉದು + ಅನ್ನು = ಹೋದುದನ್ನು


ಹೋದ + ಉವು + ಗಳು + ಇಂದ = ಹೋದುವುಗಳಿಂದ
- ಇತ್ಯಾದಿ
ಮೇಲೆ ಹೇಳಿದ ಉದಾಹರಣೆಗಳನ್ನೆಲ್ಲ ನೋಡಿದರೆ ಕೃದಂತಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಕೃದಂತಕ್ಕೂ, ನಾಮವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ಪುಲ್ಲಿಂಗ ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.
ಸ್ತ್ರೀಲಿಂಗದ ಏಕವಚನದಲ್ಲಿ ಅವಳು ಬಹುವಚನದಲ್ಲಿ ಅವರು ಎಂಬ ಸರ್ವನಾಮ ಬರುತ್ತವೆ.
ನಪುಂಸಕಲಿಂಗದ ಏಕವಚನದಲ್ಲಿ ಉದು (ಅದು) ಮತ್ತು ಬಹುವಚನದಲ್ಲಿ ಉವು (ಅವು) ಎಂಬ ಸರ್ವನಾಮಗಳು ಬರುತ್ತವೆ[2].
() ಇದುವರೆಗೆ ತಿಳಿಸಿದ ಕೃದಂತನಾಮಗಳು ನಾಮಪದಗಳನ್ನು ವಿಶೇಷಿಸುತ್ತವೆ.
(i) ವರ್ತಮಾನಭವಿಷ್ಯತ್ ಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡುವ ಕೆಲಸ
ಹಾಡುವ ಪದ
ನೋಡುವ ಕಾರ‍್ಯ
ತಿನ್ನುವ ಪದಾರ್ಥ – ಇತ್ಯಾದಿ.

(ii) ಭೂತಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡಿದ ಕೆಲಸ
ಹಾಡಿದ ಪದ
ನೋಡಿದ ಕಾರ‍್ಯ
ತಿಂದ ಪದಾರ್ಥ – ಇತ್ಯಾದಿ.

(iii) ನಿಷೇಧಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡದ ಕೆಲಸ
ಹಾಡದ ಪದ
ನೋಡದ ಕಾರ‍್ಯ
ತಿನ್ನದ ಪದಾರ್ಥ – ಇತ್ಯಾದಿ.

() ಕೃದಂತಭಾವನಾಮಗಳು (ಭಾವಕೃದಂತ)
(i) ಆತನ ಓಟ ಚೆನ್ನಾಗಿತ್ತು
(ii) ಅದರ ನೆನಪು ಇಲ್ಲ
(iii) ಗಡಿಗೆಯ ಮಾಟ ಸೊಗಸು
(iv) ಇದರ ಕೊರೆತ ಹಸನಾಗಿದೆ
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಓಟ, ಮಾಟ, ನೆನಪು, ಕೊರೆತ-ಈ ಶಬ್ದಗಳನ್ನು ಗಮನಿಸಿರಿ.
ಓಡುವ ರೀತಿಯೇ ಓಟ – ಓಡು + .
ಮಾಡಿರುವ ರೀತಿಯೇ ಮಾಟ – ಮಾಡು + .
ನೆನೆಯುವ ರೀತಿಯೇ ನೆನಪು – ನೆನೆ + ಅಪು.
ಕೊರೆದಿರುವಿಕೆಯೇ ಕೊರೆತ – ಕೊರೆ +.
ಇವೆಲ್ಲ ಕ್ರಿಯೆಯ ಭಾವವನ್ನು ತಿಳಿಸುತ್ತದೆ.  ಆದುದರಿಂದ ಇವನ್ನು ಕೃದಂತ ಭಾವನಾಮಗಳು ಅಥವಾ ಭಾವಕೃದಂತಗಳು ಎನ್ನುತ್ತಾರೆ.

(೮೮) ಕೃದಂತಭಾವನಾಮಗಳು-ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಧಾತು + ಭಾವಾರ್ಥದಲ್ಲಿ ಕೃತ್ಪ್ರತ್ಯಯ = ಕೃದಂತ ಭಾವನಾಮ - ಇದರಂತೆ ಇರುವ  ಇತರ ರೂಪಗಳು
ಮಾಡು + ವುದು[3] = ಮಾಡುವುದು - ನೋಡುವುದು, ತಿನ್ನುವುದು
ತಿನ್ನು + ಇಕೆ = ತಿನ್ನುವಿಕೆ - ನೋಡುವಿಕೆ, ಬರೆಯುವಿಕೆ, ಕೊರೆಯುವಿಕೆ
ಅಂಜು + ಇಕೆ = ಅಂಜಿಕೆ - ನಂಬಿಕೆ, ಹೊಗಳಿಕೆ,  ತೆಗಳಿಕೆ, ಆಳಿಕೆ,  ನಾಚಿಕೆ, ಬಳಲಿಕೆ, ಕಲಿಕೆ
ಉಡು + ಇಗೆ = ಉಡಿಗೆ - ತೊಡಿಗೆ, ಅಡಿಗೆ,  ಮುತ್ತಿಗೆ, ಹಾಸಿಗೆ, ಏಳಿಗೆ
ಉಡು + ಗೆ = ಉಡುಗೆ - ತೊಡುಗೆ, ನಂಬುಗೆ, ಹೊಲಿಗೆ, ಏಳ್ಗೆ
ಬರು + ಅವು = ಬರವು - ಸೆಳವು, ಮರವು, ಒಲವು, ಕಳವು, ತೆರವು
ಸಾ + ವು = ಸಾವು - ನೋವು, ಮೇವು,  ದಣಿವು, ಅರಿವು
ಕೊರೆ + = ಕೊರೆತ - ಸೆಳೆತ, ಕಟೆತ, ಇರಿತ,  ತಿವಿತ, ಕುಣಿತ, ಒಗೆತ
ಓಡು + = ಓಟ - ಮಾಟ, ಕೂಟ, ನೋಟ, ಆಟ, ಕಾಟ
ನಡೆ + ವಳಿ = ನಡೆವಳಿ - ನುಡಿವಳಿ, ಸಲುವಳಿ, ಹಿಡಿವಳಿ, ಕೂಡುವಳಿ, ಮುಗಿವಳಿ
ಕಾ + ಪು = ಕಾಪು - ಮೇಪು, ತೀರ್ಪು, ತಿಳಿಪು, ಹೊಳೆಪು, ನೆನೆಪು,
ಹೊಳೆ + ಅಪು = ಹೊಳಪು - ನೆನಪು
ಮುಗ್ಗು + ಅಲು = ಮುಗ್ಗಲು - ಒಣಗಲು, ಜಾರಲು,






ಬಿಕ್ಕಲು, ಒಕ್ಕಲು
ನಗು + = ನಗೆ - ಹೊರೆ
ಬೆರೆ + ಅಕೆ = ಬೆರಕೆ - ಮೊಳಕೆ
ಬೆಳೆ + ವಳಿಕೆ = ಬೆಳೆವಳಿಕೆ - ತಿಳಿವಳಿಕೆ, ನಡೆವಳಿಕೆ
ಮೆರೆ + ವಣಿಗೆ = ಮೆರೆವಣಿಗೆ - ಬೆಳವಣಿಗೆ, ಬರೆವಣಿಗೆ
ಅಳೆ + ಅತೆ = ಅಳತೆ - ನಡತೆ
ಮುಳಿ + ಸು = ಮುಳಿಸು - ತೊಳೆಸು, ಮುನಿಸು
ಮುರಿ + ಅಕು = ಮುರಕು - ಹರಕು
ನಡುಗು + ಉಕ = ನಡುಕ - ಮುರುಕ
ಒಪ್ಪು + ಇತ = ಒಪ್ಪಿತ - ತಪ್ಪಿತ

(೧) ಕೆಲವು ಧಾತುಗಳು ಅಲ್ಪಸ್ವಲ್ಪ ವ್ಯತ್ಯಾಸದಿಂದ ಭಾವಕೃದಂತ (ಭಾವನಾಮ)ಗಳಾಗುವುವು.
ಧಾತು ಭಾವಕೃದಂತ ನಾಮಪದ
ಕಿಡು ಕೇಡು ಕೇಡನ್ನು, ಕೇಡಿನಿಂದ.
ಬಿಡು ಬೀಡು ಬೀಡನ್ನು, ಬೀಡಿನಿಂದ, ಬೀಡಿಗೆ.
ಪಡು ಪಾಡು ಪಾಡನ್ನು, ಪಾಡಿನಿಂದ, ಪಾಡಿಗೆ.

(೨) ಕೆಲವು ಧಾತುಗಳು ಇದ್ದ ರೂಪದಲ್ಲಿಯೇ ಭಾವಕೃದಂತ (ಕೃದಂತ ಭಾವನಾಮ) ಗಳಾಗುವುವು.
ಧಾತು ಭಾವಕೃದಂತ ನಾಮಪದ
ನಡೆ ನಡೆ ನಡೆಯನ್ನು, ನಡೆಯಿಂದ
ನುಡಿ ನುಡಿ ನುಡಿಯು, ನುಡಿಯನ್ನು, ನುಡಿಯಿಂದ, ನುಡಿಗೆ-ಇತ್ಯಾದಿ
ಓದು ಓದು ಓದು, ಓದನ್ನು, ಓದಿನಿಂದ, ಓದಿನಲ್ಲಿ-ಇತ್ಯಾದಿ
ಕಟ್ಟು ಕಟ್ಟು ಕಟ್ಟು, ಕಟ್ಟನ್ನು, ಕಟ್ಟಿನಿಂದ, ಕಟ್ಟಿಗೆ, ಕಟ್ಟಿನಲ್ಲಿ
ಅಂಟು ಅಂಟು ಅಂಟನ್ನು, ಅಂಟಿನ ದೆಸೆಯಿಂದ, ಅಂಟಿನಲ್ಲಿ
ಹಿಡಿ ಹಿಡಿ ಹಿಡಿಯನ್ನು, ಹಿಡಿಯಿಂದ
ಉರಿ ಉರಿ ಉರಿಯನ್ನು, ಉರಿಯಿಂದ
ಹೇರು ಹೇರು ಹೇರನ್ನು, ಹೇರಿನಿಂದ, ಹೇರಿನಲ್ಲಿ
ಉಗುಳು ಉಗುಳು ಉಗುಳನ್ನು, ಉಗುಳಿನ, ಉಗುಳಿನಲ್ಲಿ
ಹುಟ್ಟು ಹುಟ್ಟು ಹುಟ್ಟನ್ನು, ಹುಟ್ಟಿನ, ಹುಟ್ಟಿನಲ್ಲಿ
ಚಿಗುರು ಚಿಗುರು ಚಿಗುರನ್ನು, ಚಿಗುರಿನಲ್ಲಿ
ಬೆಳೆ ಬೆಳೆ ಬೆಳೆಯನ್ನು, ಬೆಳೆಯಲ್ಲಿ
ಸವಿ ಸವಿ ಸವಿಯನ್ನು, ಸವಿಯಲ್ಲಿ
ಗುದ್ದು ಗುದ್ದು ಗುದ್ದನ್ನು, ಗುದ್ದಿನಲ್ಲಿ
ಬದುಕು ಬದುಕು ಬದುಕನ್ನು, ಬದುಕಿನಲ್ಲಿ

(೩) ಹಳಗನ್ನಡದ ಕೆಲವು ಕೃದಂತ ಭಾವನಾಮಗಳು ಹೊಸಗನ್ನಡದಲ್ಲಿ ರೂಪಾಂತರ ಹೊಂದುತ್ತವೆ.
ಏಳ್ಗೆ-ಏಳಿಗೆ, ಸಲ್ಗೆ-ಸಲಿಗೆ, ಕಾಣ್ಕೆ-ಕಾಣಿಕೆ, ಒಲ್ಮೆ-ಒಲುಮೆ, ಪೂಣ್ಕೆ-ಪೂಣಿಕೆ – ಇತ್ಯಾದಿ.
() ಕೃದಾಂತಾವ್ಯಯಗಳು (ಅವ್ಯಯಕೃದಂತ)
ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂಥ ಶಬ್ದ ರೂಪಗಳೇ ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳು. ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ.
(೧) ರಾಮನು ಉಣ್ಣದೆ ಮಲಗಿದನು.
(೨) ಮಳೆ ಬರಲು ಕರೆ ತುಂಬಿತು.
(೩) ಅವನು ಬರುತ್ತ ತಿಂದನು.
(೪) ಅದನ್ನು ಬರೆದು ಕಳುಹಿಸಿದನು.
(೫) ಅಲ್ಲಿಗೆ ಹೋಗಲಿಕ್ಕೆ ತಡವಾಯಿತು.
ಮೇಲಿನ ವಾಕ್ಯಗಳಲ್ಲಿ ದಪ್ಪಕ್ಷರ ಶಬ್ದಗಳಾದ ಉಣ್ಣದೆ, ಬರಲು, ಬರುತ್ತ, ಬರೆದು, ಹೋಗಲಿಕ್ಕೆ-ಮುಂತಾದವುಗಳು ಉಣ್ಣು+ಅದೆ, ಬರು+ಅಲು, ಬರು+ಉತ್ತ, ಬರೆ+ದು, ಹೋಗು+ಅಲಿಕ್ಕೆ-ಹೀಗೆ ಧಾತುಗಳ ಮೇಲೆ-ಅದೆ, ಅಲು, ಉತ್ತ, ದು, ಅಲಿಕ್ಕೆ-ಇತ್ಯಾದಿ ಪ್ರತ್ಯಯಗಳು ಬಂದು ಆದ ಶಬ್ದರೂಪಗಳು.  ಇವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಗಳಲ್ಲೂ, ಏಕವಚನ ಬಹುವಚನಗಳಲ್ಲೂ ಒಂದೇ ರೂಪವಾಗಿರುತ್ತವೆ.  ಅಲ್ಲದೆ ಇವುಗಳ ಮೇಲೆ ಇನ್ನಾವ ವಿಭಕ್ತಿಪ್ರತ್ಯಯಗಳೂ ಬರುವುದಿಲ್ಲ.  ಆದ್ದರಿಂದ-ಇಂಥ ಶಬ್ದಗಳು ಅವ್ಯಯದ[4] ಗುಣವನ್ನು ಪಡೆದವು.  ಆದ್ದರಿಂದಲೇ ಇವುಗಳನ್ನು ಅವ್ಯಯಕೃದಂತಗಳು ಅಥವಾ ಕೃದಂತಾವ್ಯಯಗಳು ಎನ್ನುವರು.  ಕೆಳಗಿನ ಸೂತ್ರವನ್ನು ಗಮನಿಸಿರಿ.
(೮೯) ಧಾತುಗಳ ಮೇಲೆ ಉತ, ಉತ್ತ, ಅದೆ, ದರೆ, ಅಲು, ಅಲಿಕ್ಕೆ, , , ದು-ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.
ಇವು ಪೂರ್ಣಕ್ರಿಯಾರ್ಥವನ್ನು ಕೊಡದೆ, ಇನ್ನೊಂದು ಕ್ರಿಯೆಯನ್ನಪೇಕ್ಷಿಸುವುದರಿಂದ ಇವನ್ನು ಅಪೂರ್ಣಕ್ರಿಯೆ ಅಥವಾ ನ್ಯೂನಕ್ರಿಯೆಗಳೆಂದು ಕರೆಯುವರು.
() ರಾಮನು ಉಣ್ಣುತ್ತಾ ಮಾತಾಡಿದನು.
ಎಂಬ ಈ ವಾಕ್ಯದಲ್ಲಿ ರಾಮನೆಂಬ ಕರ್ತೃವು ಉಣ್ಣುವ ಮತ್ತು ಮಾತನಾಡುವ ಕ್ರಿಯೆಗಳೆರಡನ್ನೂ ಮಾಡಿದನಾದ್ದರಿಂದ ಇಂಥವು ಏಕಕರ್ತೃಕ ಕ್ರಿಯೆಗಳು.
() ಮಳೆ ಬರಲು ಕೆರೆ ತುಂಬಿತು.
ಎಂಬ ಈ ವಾಕ್ಯದಲ್ಲಿ ಬರಲು ಎಂಬ ಕ್ರಿಯೆಗೆ ಮಳೆಯೂ, ತುಂಬುವ ಕ್ರಿಯೆಗೆ ಕೆರೆಯೂ ಕರ್ತೃಗಳಾದ್ದರಿಂದ ಇವೆರಡೂ ಕ್ರಿಯೆಗೆ ಬೇರೆ ಬೇರೆ ಕರ್ತೃಗಳು ಇದ್ದಹಾಗಾಯಿತು.  ಇಂಥವನ್ನು ಭಿನ್ನಕರ್ತೃಗಳು ಎನ್ನುತ್ತಾರೆ.
ಉದಾಹರಣೆಗೆ:
ಪ್ರತ್ಯಯಗಳು - ಧಾತು + ಪ್ರತ್ಯಯ = ಅವ್ಯಯಕೃದಂತ
ಉತ - ಮಾಡು + ಉತ = ಮಾಡುತ, ಇದರಂತೆ ನೋಡುತ, ಮಾರುತ, ಬರುತ
ಉತ್ತ[5] - ತಿನ್ನು + ಉತ್ತ = ತಿನ್ನುತ್ತ, ಇದರಂತೆ ನೋಡುತ್ತ, ನಡೆಯುತ್ತ, ಬರುತ್ತ
ಅದೆ - ಮಾಡು + ಅದೆ = ಮಾಡದೆ, ಇದರಂತೆ ನೋಡದೆ, ತಿನ್ನದೆ, ಬರೆಯದೆ
ಅಲು - ಬರು + ಅಲು = ಬರಲು, ಇದರಂತೆ ತಿನ್ನಲು, ಉಣ್ಣಲು, ನೋಡಲು, ನುಡಿಯಲು, ಬರೆಯಲು
ಅಲಿಕ್ಕೆ - ತಿನ್ನು + ಅಲಿಕ್ಕೆ = ತಿನ್ನಲಿಕ್ಕೆ, ಇದರಂತೆ ಮಾಡಲಿಕ್ಕೆ, ತಿಳಿಯಲಿಕ್ಕೆ, ಬರಲಿಕ್ಕೆ, ನಡೆಯಲಿಕ್ಕೆ
- ಹೇಳು + = ಹೇಳ[6], ಇದರಂತೆ ಮಾಡ, ನೋಡ, ನುಡಿಯ
- ಮಾಡು + = ಮಾಡಿ, ಇದರಂತೆ ಹೇಳಿ, ಕೇಳಿ, ನೋಡಿ
ದು - ತಿನ್ನು + ದು = ತಿಂದು, ಇದರಂತೆ ನುಡಿದು, ನಡೆದು, ಕರೆದು, ಬರೆದು
ಈಗ ಏಕಕರ್ತೃಕ ಕೃದಂತಾವ್ಯಯಗಳು ಮತ್ತು ಭಿನ್ನಕರ್ತೃಕ ಕೃದಂತಾವ್ಯಯಗಳಲ್ಲಿ ಯಾವ ಯಾವ ಪ್ರತ್ಯಯಗಳು ಬರುತ್ತವೆಂಬುದರ ವ್ಯವಸ್ಥೆಯನ್ನು ನೋಡಿರಿ.
() ಏಕಕರ್ತೃಕ ಕೃದಂತಾವ್ಯಯಗಳು.
(i) ಒಂದು ಕರ್ತೃವಿನಿಂದ ಎರಡು ಕ್ರಿಯೆಗಳು ನಡೆದಾಗ ಮೊದಲು ಹೇಳುವ ಕ್ರಿಯೆಯಲ್ಲಿ ಭೂತಕಾಲ ತೋರಿದರೆ ದು ಅಥವಾ ಇ ಪ್ರತ್ಯಯಗಳು ಬರುತ್ತವೆ.
[7](ಅ) ಅದನ್ನು ತಿಂದು ಹೋದನು (ತಿನ್ನು+ದು=ತಿಂದು)
83(ಆ) ಆ ಕೆಲಸವನ್ನು ಮಾಡಿ ಬಂದೆನು (ಮಾಡು+ಇ=ಮಾಡಿ)
-ಇಲ್ಲಿ ತಿಂದು, ಮಾಡಿ ಎಂಬುವೆರಡೂ ಮೊದಲ ಕ್ರಿಯೆಗಳು ಮುಗಿದು ಹೋದ (ಭೂತ) ಕಾಲವನ್ನು ತೋರಿಸುತ್ತವಾದ್ದರಿಂದ, ದು, ಇ ಪ್ರತ್ಯಯಗಳು ಬಂದಿವೆ.

(ii) ಒಂದೇ ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಮೊದಲನೆಯ ಕ್ರಿಯೆಯ ಮೇಲೆ ಉತ್ತ (ಉತ್ತಾ) ಪ್ರತ್ಯಯವೂ, ನಿಷೇಧ ತೋರಿದರೆ ಅದೇ ಪ್ರತ್ಯಯವೂ ಬರುವುವು.
(ಅ) ಅವನು ಉಣ್ಣುತ್ತ ಮಾತನಾಡಿದನು (ಏಕಕಾಲದಲ್ಲಿ ನಡೆದ ಕ್ರಿಯೆಗಳು)
(ಆ) ಅವನು ಉಣ್ಣದೆ ಹೋದನು (ನಿಷೇಧ)
-ಇಲ್ಲಿ ಮೊದಲ ವಾಕ್ಯದಲ್ಲಿ ಮಾತನಾಡುವ ಕ್ರಿಯೆ, ಉಣ್ಣುವ ಕ್ರಿಯೆಗಳು ಒಬ್ಬನಿಂದಲೇ ಏಕಕಾಲದಲ್ಲಿ ಆಗಿವೆ.  ಆದ್ದರಿಂದ ಉತ್ತ ಎಂಬುದೂ, ಎರಡನೆಯ ವಾಕ್ಯದಲ್ಲಿ ನಿಷೇಧ ಕ್ರಿಯೆ, ಹೋಗುವ ಕ್ರಿಯೆಗಳೆರಡೂ ಒಬ್ಬ ಕರ್ತೃವಿನಿಂದ ನಡೆದಿವೆ.  ಆದ್ದರಿಂದ ಅದೆ ಎಂಬುದು ಮೊದಲ ಕ್ರಿಯೆಯ ಮೇಲೆ ಬಂದಿದೆ.
(iii) ಒಂದು ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಪ್ರಯೋಜನ ತೋರಿದರೆ ಅಲು ಅಲಿಕ್ಕೆ ಪ್ರತ್ಯಯಗಳು ಮೊದಲನೆಯ ಕ್ರಿಯೆಯ ಮೇಲೆ ಬರುತ್ತವೆ.
(ಅ) ಅವನು ತಿನ್ನಲು ಹೋದನು (ಪ್ರಯೋಜನ)
(ಆ) ಅವನು ತಿನ್ನಲಿಕ್ಕೆ ಹೋದನು (    “    )
-ಮೇಲಿನ ಎರಡೂ ವಾಕ್ಯಗಳಲ್ಲಿ ಹೋಗುವ ಕ್ರಿಯೆಯು ತಿನ್ನುವ ಪ್ರಯೋಜನಕ್ಕಾಗಿ.  ಆದ್ದರಿಂದ ಮೊದಲ ಕ್ರಿಯೆಯ ಮೇಲೆ ಅಲು, ಅಲಿಕ್ಕೆ ಪ್ರತ್ಯಯಗಳು ಬಂದಿವೆ.

() ಭಿನ್ನಕರ್ತೃಕ ಕೃದಂತಾವ್ಯಯಗಳು
(i) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳುಂಟಾದಾಗ ಕಾರಣ ತೋರುವಾಗ ಅಲು ಮತ್ತು ದು ಪ್ರತ್ಯಯಗಳು ಮೊದಲ ಕ್ರಿಯೆಯ ಮೇಲೆ ಬರುತ್ತವೆ.
ಉದಾಹರಣೆಗೆ:
(ಅ) ಹೊಲ ಬೆಳೆಯಲು ರೈತನು ಸುಖ ಹೊಂದಿದನು.
(ಆ) ಹೊಲ ಬೆಳೆದು ರೈತನಿಗೆ ಸುಖ ಬಂದಿತು.
(ii) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳು ಏಕ ಕಾಲದಲ್ಲಿ ತೋರಿದರೆ ಉತ್ತ, ದು, ಅದೆ ಪ್ರತ್ಯಯಗಳು ಬಂದಾಗ ಅವುಗಳ ಮುಂದೆ ಇರಲು ಇರಲಾಗಿ ಎಂಬುವು ಸೇರುವುವು.
ಉದಾಹರಣೆಗೆ:
(ಅ) ಅವನು ಬರುತ್ತಿರಲು ಎಲ್ಲರೂ ಓಡಿದರು.
(ಆ) ಅವನು ಬರುತ್ತಿರಲಾಗಿ ಎಲ್ಲರೂ ಓಡಿದರು.
(ಇ) ಅವನು ಬರದಿರಲು ನಾವು ಮನೆಗೆ ಹೋದೆವು.
(ಈ) ಅವನು ಬರದಿರಲಾಗಿ ನಾವು ಮನೆಗೆ ಹೋದೆವು.
(ಉ) ಅವನು ಬಂದಿರಲು ನಾವೇಕೆ ಬರಬಾರದು.
(ಊ) ಅವನು ಬಂದಿರಲಾಗಿ ನಾವೇಕೆ ಬರಬಾರದು.
(iii) ಎರಡು ಕ್ರಿಯೆಗಳು ಬೇರೆ ಬೇರೆ ಕರ್ತೃಗಳಿಂದ ನಡೆದಾಗ ಪಕ್ಷಾರ್ಥ ತೋರಿದರೆ ದರೆ ಎಂಬುದೂ, ಭಾವಾರ್ಥ ತೋರಿದರೆ ಅ ಎಂಬುದೂ ಬರುವುವು.
ಉದಾಹರಣೆಗೆ:
(೧) ಪಕ್ಷಾರ್ಥಕ್ಕೆ
(ಅ) ಮಳೆ ಬಂದರೆ, ಕರೆ ತುಂಬುವುದು.
(ಆ) ನೀವು ಬಂದರೆ ನಾವು ಬರುತ್ತೇವೆ.
(೨) ಭಾವಾರ್ಥಕ್ಕೆ
(ಅ) ಅವನು ನನ್ನನ್ನು ಹೋಗ ಹೇಳಿದನು. (ಹೋಗು+ಅ=ಹೋಗ)
(ಆ) ಅವನಿಗೆ ಅಲ್ಲಿ ಮಾಡ ಕೆಲಸವಿಲ್ಲ.  (ಮಾಡು+ಅ=ಮಾಡ)
ಮೇಲಿನ ವಾಕ್ಯಗಳಲ್ಲಿನ ‘ಮಾಡ’ ‘ಹೋಗ’ ಇವು ಭಾವಾರ್ಥಕ ಕ್ರಿಯೆಗಳೆಂದು ತಿಳಿಯಬೇಕು.

[1] ವರ್ತಮಾನ ಮತ್ತು ಭವಿಷ್ಯತ್ ಕೃದಂತಗಳು ಒಂದೇ ರೂಪವಾಗಿರುತ್ತವೆ.  ಇವೆರಡು ಕೃದಂತಗಳಲ್ಲೂ ಕಾಲಸೂಚಕ ಪ್ರತ್ಯಯ ಒಂದೇ ತೆರನಾಗಿರುತ್ತದೆ.  ಕೆಲವರು ವರ್ತಮಾನ ಕೃದಂತಗಳೇ ಇರುವುದಿಲ್ಲ ಎಂದೂ ಹೇಳುವುದುಂಟು.
[2] ನಪುಂಸಕಲಿಂಗದಲ್ಲಿ-ಹೋಗುವುದರಿಂದ-ಇತ್ಯಾದಿಗಳಿಗೆ ಪ್ರತಿಯಾಗಿ ಹೋಗುವಂತಹುದರಿಂದ, ನಡೆಯುವಂಥಾದ್ದರಿಂದ, ತಿನ್ನುವವುಗಳಿಂದ ಎಂಬುದಕ್ಕೆ ತಿನ್ನುವಂತಹವುಗಳಿಂದ, ತಿನ್ನುವಂಥವುಗಳಿಂದ-ಇತ್ಯಾದಿಯಾಗಿ ಹೊಸಗನ್ನಡದಲ್ಲಿ ಉಪಯೋಗಿಸುವುದುಂಟು.  ನಡೆಯುವುದನ್ನು, ನಡೆಯುವದನ್ನು-ಹೀಗೆ ಎರಡು ರೂಪಗಳ ಪ್ರಯೋಗವೂ ರೂಢಿಯಲ್ಲುಂಟು.  ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.
[3] ಸಾಮಾನ್ಯವಾಗಿ ಎಲ್ಲ ಧಾತುಗಳ ಮೇಲೂ ಭಾವಾರ್ಥದಲ್ಲಿ ವುದು, ವಿಕೆ – ಎಂಬ ಪ್ರತ್ಯಯಗಳು ಬರುತ್ತವೆ.  ವಿಕೆ ಪ್ರತ್ಯಯಕ್ಕೆ ಪ್ರತಿಯಾಗಿ ಕೆಲವರು ಇಕೆ ಬರುತ್ತದೆಂದು ಹೇಳಿ ನೋಡುವಿಕೆ (ನೋಡು+ವ್+ಇಕೆ=ನೋಡುವಿಕೆ) ಇತ್ಯಾದಿ ರೂಪಗಳು ಆಗುತ್ತವೆನ್ನುತ್ತಾರೆ.  ಆದರೆ ಇವೆರಡೂ ಪ್ರತ್ಯಯಗಳು ಬೇರೆಬೇರೆಯೇ ಆಗಿವೆ.
[4] ಅವ್ಯಯ ಎಂದರೆ ಲಿಂಗ, ವಚನ, ವಿಭಕ್ತಿಗಳಿಂದ ವ್ಯತ್ಯಾಸವಾಗದ ಶಬ್ದರೂಪ.  ಇವುಗಳ ವಿಷಯವನ್ನು ಮುಂದೆ ತಿಳಿಯುತ್ತೀರಿ.
[5] ಉತ್ತ ಪ್ರತ್ಯಯವನ್ನು ಹೊಸಗನ್ನಡದಲ್ಲಿ ಕೆಲವರು ಉತ್ತಾ ಎಂದು ಹೇಳಿ ಹೋಗುತ್ತಾ, ಬರುತ್ತಾ, ತಿನ್ನುತ್ತಾ ಇತ್ಯಾದಿಯಾಗಿ ಕೃದಂತಾವ್ಯಯಗಳನ್ನು ಬಳಸುವುದುಂಟು.
[6] ಹೇಳ ಬಂದನು, ಹೇಳ ಬಂದಳು, ಮಾಡ ಬಂದಳು, ನುಡಿಯ ಬಂದನು, ನುಡಿಯ ಬಂದಿತು-ಇತ್ಯಾದಿಗಳು ಈ ಶಬ್ದಗಳು ಬಂದ ವಾಕ್ಯಗಳು.
[7] ಮಾಡಿ, ತಿಂದು, ನೋಡಿ, ನೀಡಿ, ಉಂಡು, ಕೊಟ್ಟು ಇವೆಲ್ಲ ಭೂತನ್ಯೂನಗಳು.
------------------------------------------------------------------------------------

 ತದ್ಧಿತಾಂತಗಳು (ತದ್ಧಿತ+ಅಂತ)
‘ತದ್ಧಿತ ಎಂಬ ಹೆಸರಿನ ಪ್ರತ್ಯಯವನ್ನು ಅಂತದಲ್ಲಿ ಉಳ್ಳುದೇ ತದ್ಧಿತಾಂತವೆನಿಸುವುದು.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ.
(೧) ಮೋಸವನ್ನು ಮಾಡುವವನು ಇದ್ದಾನೆ.
(೨) ಅಲ್ಲಿ ಕನ್ನಡವನ್ನು ಬಲ್ಲವರು ಬಹಳ ಜನರಿದ್ದರು.
(೩) ಹಾವನ್ನು ಆಡಿಸುವವನು ಬಂದನು.
(೪) ಮಡಿಯನ್ನು ಮಾಡುವವನು ಇನ್ನೂ ಬಂದಿಲ್ಲ.
ಮೇಲಿನ ನಾಲ್ಕು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಎರಡೆರಡು ನಾಮಪದಗಳನ್ನು ಸೇರಿಸಿ ಅದೇ ಅರ್ಥಬರುವಂತೆ ಒಂದು ಪದವನ್ನಾಗಿ ಸಮಾಸದ ಹಾಗೆ ಮಾಡಬಹುದು.  ಹೀಗೆ ನಾವು ಸಂಕ್ಷೇಪಗೊಳಿಸಿ ಹೇಳಿದಾಗ ಕಾಲ, ಶ್ರಮ, ಧ್ವನಿ ಮೊದಲಾದವುಗಳ ಉಳಿತಾಯವಾಗುವುದು.  ಹಾಗಾದರೆ ಆ ಪದಗಳನ್ನು ಯಾವ ಕ್ರಮದಿಂದ ಕೂಡಿಸುತ್ತೇವೆ?  ಇತ್ಯಾದಿಗಳ ಬಗೆಗೆ ಕೆಳಗೆ ನೋಡಿರಿ.
(೧) ಮೋಸವನ್ನು ಮಾಡುವವನು-ಎಂಬಲ್ಲಿ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬರ್ಥದಲ್ಲಿ ‘ಗಾರ ಪ್ರತ್ಯಯ ಸೇರಿಸಿ ಮೋಸವನ್ನು+ಗಾರ ಮಾಡುತ್ತೇವೆ.  ಒಂದೇ ಪ್ರಕೃತಿಯ ಮೇಲೆ ಎರಡು ಪ್ರತ್ಯಯ ಸೇರುವುದಿಲ್ಲ.  ಅನ್ನು ಎಂಬ ಪ್ರತ್ಯಯ ತೆಗೆದು-ಮೋಸ+ಗಾರ=ಮೋಸಗಾರ ಹೀಗೆ ಒಂದು ಹೊಸ ರೂಪ ಸಿದ್ಧವಾಯಿತು.  ಇಲ್ಲಿ ‘ಗಾರ’ ಎಂಬುದೇ ತದ್ಧಿತಪ್ರತ್ಯಯ.
(೨) ಕನ್ನಡವನ್ನು ಬಲ್ಲವನು-ಎಂಬಲ್ಲಿ ಕನ್ನಡವನ್ನು ಎಂಬುದರ ಮೇಲೆ ಬಲ್ಲವನು ಎಂಬರ್ಥದಲ್ಲಿ ‘ಇಗ’ ಪ್ರತ್ಯಯ ಸೇರಿದಾಗ ಕನ್ನಡವನ್ನು+ಇಗ=ಕನ್ನಡ+ಇಗ=ಕನ್ನಡಿಗ ಎಂಬ ರೂಪ ಸಿದ್ಧವಾಯಿತು.  ಇಲ್ಲಿ ‘ಇಗ’ ಎಂಬುದೇ ‘ತದ್ಧಿತ ಪ್ರತ್ಯಯ’.
(೩) ಹಾವನ್ನು ಆಡಿಸುವವನು-ಎಂಬಲ್ಲಿ ಹಾವನ್ನು ಎಂಬ ಪದದ ಮೇಲೆ ‘ಆಡಿಸುವವನು’ ಎಂಬರ್ಥದಲ್ಲಿ ‘ಆಡಿಗ’ ಎಂಬ ತದ್ಧಿತ ಪ್ರತ್ಯಯ ಬಂದು ಹಾವನ್ನು+ಆಡಿಗ=ಹಾವು+ಆಡಿಗ= ಹಾವಾಡಿಗ ಎಂಬ ರೂಪ ಸಿದ್ಧವಾಯಿತು.
(೪) ಮಡಿಯನ್ನು ಮಾಡುವವನು-ಎಂಬಲ್ಲಿ ಮಾಡುವವನು’ ಎಂಬರ್ಥದಲ್ಲಿ ವಳ (ವಾಳ) ಎಂಬ ಪ್ರತ್ಯಯವು ಬಂದು ಮಡಿಯನ್ನು+ವಳ=ಮಡಿ+ವಳ=ಮಡಿವಳ ಎಂಬ ರೂಪವಾಯಿತು.
ಮೋಸವನ್ನು-ಮಾಡುವವನೆಂಬರ್ಥದಲ್ಲಿ-ಗಾರ.
ಕನ್ನಡವನ್ನು-ಬಲ್ಲವನು ಎಂಬರ್ಥದಲ್ಲಿ-ಇಗ.
ಹಾವನ್ನು-ಆಡಿಸುವವನು ಎಂಬರ್ಥದಲ್ಲಿ-ಆಡಿಗ.
ಮಡಿಯನ್ನು-ಮಾಡುವವನು ಎಂಬರ್ಥದಲ್ಲಿ-ವಳ.
ಹೀಗೆ ಹಲವಾರು ಅರ್ಥಗಳಲ್ಲಿ-ಗಾರ, ಇಗ, ಆಡಿಗ, ವಳ-ಎಂಬ ಪ್ರತ್ಯಯಗಳು ನಾಮಪದಗಳ ಮೇಲೆ ಬಂದು ಹೋಸ ಬಗೆಯ ಪ್ರಕೃತಿಗಳಾಗುವುವು. ಇಲ್ಲಿ ಬಂದಿರುವ ಇಂಥ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆನ್ನುವರು. ಇಂಥ ತದ್ಧಿತ ಪ್ರತ್ಯಯಗಳನ್ನು ಅಂತದಲ್ಲಿ ಉಳ್ಳ ಶಬ್ದರೂಪವೇ ತದ್ಧಿತಾಂತ’ವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೯೦) ತದ್ಧಿತಾಂತ-ನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿ-ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವುವು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.  ಇವುಗಳಲ್ಲಿ – () ತದ್ಧಿತಾಂತ ನಾಮ () ತದ್ಧಿತಾಂತ ಭಾವನಾಮ () ತದ್ಧಿತಾಂತಾವ್ಯಯಗಳೆಂದು ಮೂರು ಬಗೆ.
() ತದ್ಧಿತಾಂತ ನಾಮಗಳು
ನಾಮಪದಗಳ ಮೇಲೆ ಗಾರ, ಕಾರ, ಇಗ, ವಂತ ಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ನಾಮಗಳಾಗುವ ಬಗೆಯನ್ನು ಗಮನಿಸಿರಿ.
ಉದಾಹರಣೆಗೆ:
ತದ್ಧಿತ ಪ್ರತ್ಯಯ - ನಾಮಪದ + ಅರ್ಥ = ತದ್ಧಿತ ಪ್ರತ್ಯಯ - ತದ್ಧಿತಾಂತ ನಾಮ
ಗಾರ - ಮಾಲೆಯನ್ನು + ಕಟ್ಟುವವನು = ಗಾರ - ಮಾಲೆಗಾರ
ಬಳೆಯನ್ನು + ಮಾರುವವನು = ಗಾರ - ಬಳೆಗಾರ
ಮೋಸವನ್ನು + ಮಾಡುವವನು = ಗಾರ - ಮೋಸಗಾರ
ಪಾಲನ್ನು + ಹೊಂದುವವನು = ಗಾರ - ಪಾಲುಗಾರ
ಛಲವನ್ನು + ಹೊಂದಿದವನು = ಗಾರ - ಛಲಗಾರ
ಕಾರ - ಓಲೆಯನ್ನು + ತರುವವನು = ಕಾರ - ಓಲೆಕಾರ
ಕೋಲನ್ನು + ಹಿಡಿಯುವವನು = ಕಾರ - ಕೋಲುಕಾರ
ಕೈದನ್ನು + ಹಿಡಿದಿರುವವನು = ಕಾರ - ಕೈದುಕಾರ
ಇಗ - ಕನ್ನಡವನ್ನು + ಬಲ್ಲವನು = ಇಗ - ಕನ್ನಡಿಗ
ಲೆಕ್ಕವನ್ನು + ಬಲ್ಲವನು = ಇಗ - ಲೆಕ್ಕಿಗ
ಚೆನ್ನನ್ನು + ಉಳ್ಳುವ = ಇಗ - ಚೆನ್ನಿಗ
ಗಂದವನ್ನು + ಮಾರುವವನು = ಇಗ - ಗಂದಿಗ
ಗಾಣವನ್ನು + ಆಡಿಸುವವನು = ಇಗ - ಗಾಣಿಗ
ವಂತ - ಹಣವನ್ನು + ಉಳ್ಳವನು = ವಂತ - ಹಣವಂತ
ಸಿರಿಯನ್ನು + ಉಳ್ಳವನು = ವಂತ - ಸಿರಿವಂತ
ವಳ - ಮಡಿಯನ್ನು + ಮಾಡುವವನು = ವಳ - ಮಡಿವಳ
= (ವಾಳ) - ಮಡಿವಾಳ

ಹಡಪವನ್ನು + ಆಚರಿಸುವವನು = ವಳ - ಹಡಪವಳ
ಆಡಿಗ - ಹಾವನ್ನು + ಆಡಿಸುವವನು = ಆಡಿಗ - ಹಾವಾಡಿಗ

ಹೂವನ್ನು + ಕಟ್ಟುವವನು = ಆಡಿಗ - ಹೂವಾಡಿಗ
ಇಕ - ಕರಿಯದನ್ನು (ಬಣ್ಣವನ್ನು) + ಉಳ್ಳವನು = ಇಕ - ಕರಿಕ

ಬಿಳಿಯದನ್ನು(ಬಣ್ಣವನ್ನು) + ಉಳ್ಳವನು = ಇಕ - ಬಿಳಿಕ
ಆಳಿ - ಮಾತನ್ನು + ಹೆಚ್ಚು ಆಡುವ ಸ್ವಭಾವವುಳ್ಳವನು = ಆಳಿ - ಮಾತಾಳಿ

ಓದನ್ನು + ಹೆಚ್ಚು ಆಚರಿಸುವವನು = ಆಳಿ - ಓದಾಳಿ
ಆಳಿ - ಜೂದನ್ನು + ಆಡುವವನು = ಆಳಿ - ಜೂದಾಳಿ
ಗುಳಿ - ಲಂಚವನ್ನು + ತೆಗೆದುಕೊಳ್ಳುವವನು = ಗುಳಿ - ಲಂಚಗುಳಿ
ಅನೆಯ - ಹತ್ತು + ಸಂಖ್ಯೆಯನ್ನುಳ್ಳುದು = ಅನೆಯ - ಹತ್ತನೆಯ

ಒಂದು + ಸಂಖ್ಯೆಯನ್ನುಳ್ಳುದು = ಅನೆಯ - ಒಂದನೆಯ
ಆರ - ಕುಂಬವನ್ನು + ಮಾಡುವವನು = ಆರ - ಕುಂಬಾರ[1]

ಕಮ್ಮವನ್ನು + ಆಚರಿಸುವವನು = ಆರ - ಕಮ್ಮಾರ[1]
ಇದರ ಹಾಗೆಯೆ ಉಳಿದ ಕಡೆಗೆ ಬೇರೆ ಬೇರೆ ಪ್ರತ್ಯಯಗಳು ಬಂದು ತದ್ಧಿತಾಂತಗಳಾಗುತ್ತ ವೆಂದು ತಿಳಿಯಬೇಕು.

ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
(೯೧) ಸ್ತ್ರೀಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, , ಇತ್ಯಾದಿ ತದ್ಧಿತ ಪ್ರತ್ಯಯಗಳು ಬಂದು ಸ್ತ್ರೀಲಿಂಗದ ತದ್ಧಿತಾಂತಗಳು ಸಿದ್ಧಿಸುವುವು.
ಉದಾಹರಣೆಗೆ:
ಇತಿ – ಬೀಗಿತಿ, ಬ್ರಾಹ್ಮಣಿತಿ
ಇತ್ತಿ - ಒಕ್ಕಲಗಿತ್ತಿ, ಹೂವಾಡಗಿತ್ತಿ
ಗಿತ್ತಿ – ನಾಯಿಂದಗಿತ್ತಿ, ಅಗಸಗಿತ್ತಿ
ತಿ – ಗೊಲ್ಲತಿ, ವಡ್ಡತಿ, ಮಾಲೆಗಾರ‍್ತಿ
– ಅರಸಿ, ಅಣುಗಿ
– ಕಳ್ಳೆ, ಜಾಣೆ, ಗುಣವಂತೆ,  ಇತ್ಯಾದಿ-

() ತದ್ಧಿತಾಂತ ಭಾವನಾಮಗಳು
(ಅ) ಬಡತನ ಸಿರಿತನಗಳು ಸ್ಥಿರವಲ್ಲ.
(ಆ) ಊರ ಗೌಡಿಕೆ ರಾಮಣ್ಣನದು.
(ಇ) ನಮಗೆ ಅದೊಂದು ಹಿರಿಮೆ.
ಈ ಮೇಲಿನ ಮೂರು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಬಡತನ, ಸಿರಿತನ, ಗೌಡಿಕೆ, ಹಿರಿಮೆ-ಈ ಶಬ್ದಗಳನ್ನು ಯೋಚಿಸಿ ನೋಡಿದರೆ-ಬಡವನ ಭಾವವೇ-ಬಡತನ; ಸಿರಿವಂತನ ಭಾವವೇ-ಸಿರಿತನ; ಗೌಡನ ಭಾವವೇ-ಗೌಡಿಕೆ; ಹಿರಿಯದರ ಭಾವವೇ-‘ಹಿರಿತನ’ ಎಂದು ಅರ್ಥವಾಗುವುದು.  ಇಲ್ಲಿ ಬಂದಿರುವ ತನ, ಇಕೆ, ಮೆ-ಪ್ರತ್ಯಯಗಳು ಭಾವಾರ್ಥದಲ್ಲಿ ಬಡವನ, ಸಿರಿವಂತನ, ಗೌಡನ, ಹಿರಿಯದರ – ಇತ್ಯಾದಿ ನಾಮಪದಗಳ ಮೇಲೆ ಬಂದಿವೆ ಎಂಬುದನ್ನು ಕೆಳಗೆ ಗಮನಿಸಿರಿ.
ಬಡವ-ಬಡತನ (ಬಡವನ ಭಾವ-ತನ)
ಸಿರಿ  – ಸಿರಿತನ (ಸಿರಿ ಉಳ್ಳವನ ಭಾವ-ತನ)
ಗೌಡ-ಗೌಡಿಕೆ (ಗೌಡನ ಭಾವ-ಇಕೆ)
ಹಿರಿದು-ಹಿರಿಮೆ (ಹಿರಿದರ ಭಾವ-ಮೆ)
ಸಾಮಾನ್ಯವಾಗಿ ಈ ಪ್ರತ್ಯಯಗಳೆಲ್ಲ ಷಷ್ಠೀವಿಭಕ್ತ್ಯಂತಗಳಾದ ನಾಮಪದಗಳ ಮೇಲೆ ಬಂದಿವೆ. ಆದುದರಿಂದ ಈ ಬಗೆಗೆ ಸೂತ್ರವನ್ನು ಹೀಗೆ ಹೇಳಬಹುದು.

(೯೨) ತದ್ಧಿತಾಂತಭಾವನಾಮಗಳು-ಸಾಮಾನ್ಯವಾಗಿ ಷಷ್ಠೀವಿಭಕ್ತ್ಯಾಂತಗಳಾದ ನಾಮಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆ - ಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿ ತದ್ಧಿತಾಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಪ್ರತ್ಯಯ - ನಾಮಪದ - ಭಾವಾರ್ಥದಲ್ಲಿ ಪ್ರತ್ಯಯ - ತದ್ಧಿತಾಂತ ಭಾವನಾಮ
ತನ - ದೊಡ್ಡವನ (ಭಾವ) - ತನ - ದೊಡ್ಡತನ
ಜಾಣನ (ಭಾವ) - ತನ - ಜಾಣತನ; ಇದರಂತೆ ದಡ್ಡತನ, ಚಿಕ್ಕತನ, ಸಣ್ಣತನ, ಹುಡುಗತನ, ಕಿರಿತನ, ಕಳ್ಳತನ, ಕೆಟ್ಟತನ, ಸೋಮಾರಿತನ,  -ಇತ್ಯಾದಿ
ಇಕೆ - ಬ್ರಾಹ್ಮಣನ (ಭಾವ) - ಇಕೆ - ಬ್ರಾಹ್ಮಣಿಕೆ
ಚಲುವಿನ (ಭಾವ) - ಇಕೆ - ಚಲುವಿಕೆ; ಇದರಂತೆ  ಗೌಡಿಕೆ, ಉನ್ನತಿಕೆ, ತಳವಾರಿಕೆ, -ಇತ್ಯಾದಿ
- ಕಿವುಡನ (ಭಾವ) - - ಕಿವುಡು
ಕುಳ್ಳನ (ಭಾವ) - - ಕುಳ್ಳು; ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ.
ಪು - ಬಿಳಿದರ (ಭಾವ) - ಪು - ಬಿಳುಪು[2]
ಕರಿದರ (ಭಾವ) - ಪು - ಕಪ್ಪು[2]
ಇನಿದರ (ಭಾವ) - ಪು - ಇಂಪು
ತಣ್ಣನೆಯದರ (ಭಾವ) - ಪು - ತಂಪು[2]
ನುಣ್ಣನೆಯದರ (ಭಾವ) - ಪು - ನುಣುಪು[2]
ಮೆ - ಜಾಣನ (ಭಾವ) - ಮೆ - ಜಾಣ್ಮೆ
ಜಾಣೆಯ (ಭಾವ) - ಮೆ - ಜಾಣ್ಮೆ
ಕೂರಿತ್ತರ (ಭಾವ) - ಮೆ - ಕೂರ‍್ಮೆ
ಪಿರಿದರ (ಭಾವ) - ಮೆ - ಪೆರ‍್ಮೆ
ಹಿರಿದರ (ಭಾವ) - ಮೆ - ಹಿರಿಮೆ

() ತದ್ಧಿತಾಂತಾವ್ಯಯಗಳು
(ಅ) ಅವನು ರಾಮನಂತೆ ಕಾಣುವನು
(ಆ) ಊರವರೆಗೆ ನಡೆದನು
(ಇ) ಮನೆಯತನಕ ಕಳಿಸು
(ಉ) ಅವನಿಗೋಸುಗ ಬಂದೆನು
(ಊ) ಅವನಿಗಿಂತ ಚಿಕ್ಕವನು
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ರಾಮನಂತೆ, ಊರವರೆಗೆ, ಮನೆಯತನಕ, ಅವನಿಗೋಸುಗ, ಅವನಿಗಿಂತ – ಇತ್ಯಾದಿ ಪದಗಳನ್ನು ಬಿಡಿಸಿದರೆ ರಾಮನ+ಅಂತೆ, ಊರ+ವರಗೆ, ಮನೆಯ+ತನಕ, ಅವನಿಗೆ+ಓಸುಗ, ಅವನಿಗೆ+ಇಂತ-ಹೀಗಾಗುವುವು.  ಇಲ್ಲಿ ಬಂದಿರುವ ಅಂತೆ, ವರೆಗೆ, ತನಕ, ಓಸುಗ, ಇಂತ – ಇತ್ಯಾದಿ ಪ್ರತ್ಯಯಗಳು ನಾಮ ಪದಗಳ ಮುಂದೆ ಸೇರುವುವು.  ಆಗ ನಾಮಪದಗಳಲ್ಲಿರುವ , , , ಗೆ, ಗೆ – ಈ ನಾಮವಿಭಕ್ತಿಪ್ರತ್ಯಯಗಳು ಲೋಪವಾಗುವುದಿಲ್ಲ.  ಇಂಥ ಪದಗಳನ್ನು ತದ್ಧಿತಾಂತಾವ್ಯಯಗಳೆಂದು ಕರೆಯುವುದು ವಾಡಿಕೆ.

(೯೩) ನಾಮಪದಗಳ ಮುಂದೆ ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರೆಗೆ, ಮಟ್ಟಿಗೆ, ಓಸ್ಕರ, ಇಂತ, ಆಗಿ, ಓಸುಗ-ಇತ್ಯಾದಿ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳೆನಿಸುವುವು.
ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.
ಉದಾಹರಣೆಗೆ:
ಅಂತೆ - ರಾಮನಂತೆ, ಚಂದ್ರನಂತೆ, ಭೀಮನಂತೆ, ಅವನಂತೆ
ವೊಲ್ - ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್
ವೊಲು - ರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು
ವೋಲು - ಮನೆಯವೋಲು, ಅವನವೋಲು, ಚಂದ್ರನವೋಲು
ವೋಲ್ - ಮನೆಯವೋಲ್, ಅವನವೋಲ್, ಚಂದ್ರನವೋಲ್
ತನಕ - ಮನೆಯತನಕ, ಊರತನಕ, ಅಲ್ಲಿಯತನಕ
ವರೆಗೆ - ಊರವರೆಗೆ, ಚಂದ್ರನವರೆಗೆ
ಮಟ್ಟಿಗೆ - ಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ
ಓಸ್ಕರ - ಅವನಿಗೋಸ್ಕರ, ರಾಮನಿಗೋಸ್ಕರ
ಸಲುವಾಗಿ - ನನ್ನ ಸಲುವಾಗಿ, ನಿನ್ನ ಸಲುವಾಗಿ
ಇಂತ - ಅವನಿಗಿಂತ, ಇವನಿಗಿಂತ
ಆಗಿ - ಅವನಿಗಾಗಿ, ನನಗಾಗಿ, ನಿನಗಾಗಿ
ಓಸುಗ - ರಾಮನಿಗೋಸುಗ, ಕಳ್ಳನಿಗೋಸುಗ

[1] ಕುಂಭಕಾರ, ಕರ್ಮಕಾರ-ಎಂಬ ಸಂಸ್ಕೃತ ಪದಗಳು ತದ್ಭವವಾಗಿ, ಕುಂಬಾರ, ಕಮ್ಮಾರ ಪದಗಳು ಸಿದ್ಧಿಸಿದೆ ಎಂಬುದು ಕೆಲವರ ಮತ.  ಆದರೆ ಹಳಗನ್ನಡದಲ್ಲಿ ಆರ ಪ್ರತ್ಯಯ ಬಂದು ಕುಂಬರ, ಕಮ್ಮರ ಎಂದಾದ ಈ ಶಬ್ದಗಳು ಹೊಸಗನ್ನಡದಲ್ಲಿ ಕುಂಬಾರ, ಕಮ್ಮಾರ-ಎಂದು ಆದುವೆಂದು ತಿಳಿಯುವುದು ಯುಕ್ತ.
[2] ಹಳಗನ್ನಡದಲ್ಲಿ ಇವುಗಳ ರೂಪಗಳು ಬೆಳ್ಪು, ಕರ್ಪು, ತುಣ್ಪು, ನುಣ್ಪು-ಇತ್ಯಾದಿಯಾಗಿ ಆಗುವುವು.

ವರ್ಣಮಾಲೆ ಮತ್ತು ಧ್ವನ್ಯಂಗಗಳು

ಕನ್ನಡ ವರ್ಣಮಾಲೆ
        ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.
  • ಸ್ವರಗಳು ಮತ್ತು ಸಂಧ್ಯಕ್ಷರಗಳು (13)
  • ಯೋಗವಾಹಕಗಳು (2)
  • ವ್ಯಂಜನಗಳು (34)
ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ.
ಅವುಗಳೆಂದರೆ:-
      ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು.
* ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  
-ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6)
* ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ (ಒಟ್ಟು 7)
[ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವುದರಿಂದ ಇದು ಹ್ರಸ್ವಸ್ವರ ವಾಗಿದೆ. ಹಾಗೆಯೇ ಎಂಬ ಅಕ್ಷರವನ್ನು ಉಚ್ಚರಿಸಲು ಹ್ರಸ್ವಸ್ವರದ ಎರಡರಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಇದು ಧೀರ್ಘಸ್ವರವಾಗಿದೆ]
* ಸಂಧ್ಯಕ್ಷರಗಳು:-  ಐ  ಔ (ಒಟ್ಟು 2)
[ಸೂಚನೆ:- ಮತ್ತು ಅಕ್ಷರಗಳು ಧೀರ್ಘಸ್ವರಗಳೂ ಸಂಧ್ಯಕ್ಷರಗಳೂ ಆಗಿವೆ ಎಂಬುದನ್ನು ಮರೆಯದಿರಿ]

ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ ಉಚ್ಚಾರಣೆಯನ್ನು ಹೊಂದಿಲ್ಲದ ಹಾಗೂ ಸ್ವರ ಅಥವಾ ವ್ಯಂಜನಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ ಅಕ್ಷರಗಳನ್ನು 'ಯೋಗವಾಹಕಗಳು' ಎಂದು ಕರೆಯಲಾಗುತ್ತದೆ.
 ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ. ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.

    ಅಂ ಮತ್ತು ಅಃ  ಇವುಗಳನ್ನು ಕ್ರಮವಾಗಿ 'ಅನುಸ್ವರ' ಮತ್ತು 'ವಿಸರ್ಗ' ಎಂದು ಕರೆಯಲಾಗುತ್ತದೆ.
 1) ಅನುಸ್ವಾರ:- (ಅಂ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ '0' ಮಾತ್ರ ಅನುಸ್ವರವಾಗಿದೆ.
 2) ವಿಸರ್ಗ:- (ಅಃ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ ಎರಡು ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.
[ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ.  ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.]

ವ್ಯಂಜನಗಳು:- (ಒಟ್ಟು-34)  - ಸ್ವರಗಳ ಸಹಾಯದಿಂದ ಮಾತ್ರ ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುವ 34 ಅಕ್ಷರಗಳ ಗುಂಪಿಗೆ 'ವ್ಯಂಜನಗಳು' ಎಂದು ಕರೆಯಲಾಗುತ್ತದೆ. 
         ಇವುಗಳನ್ನು 'ವರ್ಗೀಯವ್ಯಂಜನಗಳು' ಮತ್ತು 'ಅವರ್ಗೀಯ ವ್ಯಂಜನಗಳು' ಎಂದು ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ.
   1)  ವರ್ಗೀಯವ್ಯಂಜನಗಳು-(25):- ವ್ಯವಸ್ಥಿತವಾಗಿ ಜೋಡಿಸಿ, 5 ವರ್ಗಗಳಾಗಿ ವರ್ಗೀಕರಿಸಲಾಗಿರುವ 'ಕ' ಇಂದ 'ಮ' ವರೆಗಿನ 25 ಅಕ್ಷರಗಳನ್ನು 'ವರ್ಗೀಯ ವ್ಯಂಜನಗಳು' ಎಂದು ಕರೆಯಲಾಗುತ್ತದೆ. ಅವುಗಳೆಂದರೆ..
                           ಕ್ ಖ್ ಗ್ ಘ್ ಙ್
                           ಚ್ ಛ್ ಜ್ ಝ್ ಞ್
                           ಟ್ ಠ್ ಡ್ ಢ್
                           ತ್ ಥ್ ದ್ ಧ್ ನ್
                           ಪ್ ಫ್ ಬ್ ಭ್ ಮ್                           

        ಈ ಮೇಲಿನ ಅಕ್ಷರಗಳನ್ನು ನೋಡಿದಿರಲ್ಲ! ಇವುಗಳನ್ನು ಕ-ವರ್ಗ, ಚ-ವರ್ಗ, ಟ-ವರ್ಗ, ತ-ವರ್ಗ  ಮತ್ತು ಪ-ವರ್ಗ ಎಂದು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ಇಂದ ವರೆಗಿನ ಅಕ್ಷರಗಳನ್ನು ಮತ್ತೆ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ..
  • ಅಲ್ಪಪ್ರಾಣಾಕ್ಷರಗಳು  (10) :- ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅಲ್ಪಪ್ರಾಣಾಕ್ಷರಗಳು'.   
       ಅವುಗಳೆಂದರೆ :    ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್
  • ಮಹಾಪ್ರಾಣಾಕ್ಷರಗಳು  (10) :- ಹೆಚ್ಚು ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಮಹಾಪ್ರಾಣಾಕ್ಷರಗಳು'. 
       ಅವುಗಳೆಂದರೆ:    ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್
  • ಅನುನಾಸಿಕಾಕ್ಷರಗಳು  (5) :- ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅನುನಾಸಿಕಾಕ್ಷರಗಳು'. 
       ಅವುಗಳೆಂದರೆ:    ಙ್, ಞ್, ಣ್, ನ್, ಮ್
[ಟಿಪ್ಪಣಿ:- ಈ ಐದು ಅನುನಾಸಿಕಾಕ್ಷರಗಳು ಆಯಾ ವರ್ಗದ  ಅಕ್ಷರಗಳ ಹಿಂದೆ ನಿಂತು ಬಿಂದು (ಅನುಸ್ವಾರ) ವಾಗಿ  ಕಾರ್ಯನಿರ್ವಹಿಸುತ್ತವೆ.  
ಉದಾ:- 'ಕ' ವರ್ಗದಲ್ಲಿ :- ಅಙ್ಗಳ = ಅಂಗಳ,  ಪಙ್ಕಜ = ಪಂಕಜ,  ಸಙ್ಘ = ಸಂಘ
             'ಚ' ವರ್ಗದಲ್ಲಿ:- ಅಞ್ಚೆ = ಅಂಚೆ,  ಪಞ್ಜರ = ಪಂಜರ,  ಇಞ್ಚರ = ಇಂಚರ
             'ಟ' ವರ್ಗದಲ್ಲಿ:- ಗಣ್ಟೆ = ಗಂಟೆ,  ಹಿಣ್ಡು = ಹಿಂಡು,  ಅಣ್ಟು = ಅಂಟು
             'ತ' ವರ್ಗದಲ್ಲಿ:- ಸನ್ತಸ = ಸಂತಸ, ಆನನ್ದ = ಆನಂದ, ಬನ್ಧನ = ಬಂಧನ
             'ಪ' ವರ್ಗದಲ್ಲಿ:- ಪಮ್ಪ = ಪಂಪ,  ತಮ್ಬಾಕು = ತಂಬಾಕು,  ಶಮ್ಭು = ಶಂಭು, 
ನಿಮಗಿದು ವಿಚಿತ್ರ ಎನುಸುತ್ತಿದೆಯೆ. ಹೌದು, ಪೂರ್ವದ ಹಳೆಗನ್ನಡದಲ್ಲಿ (ಸು.6-7ನೇ ಶತಮಾನದಿಂದ  ಹಿಂದೆ) ಕನ್ನಡ ಭಾಷೆಯಲ್ಲಿ ಬಿಂದುವಿನ(ಅನುಸ್ವಾರ/ಸೊನ್ನೆ) ಬಲಕೆ ಇರಲಿಲ್ಲ. ಕನ್ನಡದ ಮೊಟ್ಟಮೊದಲ ಶಾಸನವಾದ 'ಹಲ್ಮಿಡಿ ಶಾಸನದಲ್ಲಿ  ನಾವು ಈ ರೂಪದ ಪದಗಳನ್ನು ಕಾಣಬಹುದು.
 ತಡವೇಕೆ ನೀವೂ ಕೂಡ  ಸೊನ್ನೆಯನ್ನು ಬಳಸದೆ ಪದಗಳನ್ನು ರಚಿಸಿ. ಆನಂದಿಸಿ]

ಧ್ವನ್ಯಂಗಗಳು ಮತ್ತು ಉಚ್ಚಾರಣೆ   [ಕೃಪೆ: ಪ್ರೊ.ಜಿ.ವೆಂಕಟಸುಬ್ಬಯ್ಯರವರ ಪ್ರಿಸಂ ಕನ್ನಡ ಕನ್ನಡ ನಿಘಂಟು]
ನಾವು ಮಾತನಾಡುವಾಗ ನಮ್ಮ ಧ್ವನಿಯು ಹುಟ್ಟುವುದು ಹೇಗೆ ಎಂಬುದನ್ನು ನಾವು ತಿಳಿದಿರಬೇಕು. ಇದನ್ನು ಕುರಿತು ನಮ್ಮ ವೈಯಾಕರಣರು ಏನು ಹೇಳಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಕನ್ನಡದ ವ್ಯಾಕರಣಕಾರರಲ್ಲಿ ಪ್ರಮುಖನಾದ ಕೇಶಿರಾಜನು (ಕ್ರಿ. ಶ. ೧೩ನೆಯ ಶತಮಾನ) ಈ ಬಗ್ಗೆ ಒಂದು ಸೂತ್ರವನ್ನು ರಚಿಸಿದ್ದಾನೆ.
ಅನುಕೂಲ ಪವನನಿಂ ಜೀ
ವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂ
ಗಿನವೋಲ್ ಶಬ್ದದ್ರವ್ಯಂ
ಜನಿಯಿಸುಗುಂ ಶ್ವೇತಮದಱಕಾರ್ಯಂ ಶಬ್ದಂ

ಮಾತನಾಡಬೇಕೆಂಬ ವ್ಯಕ್ತಿಯ ಅಪೇಕ್ಷೆಯಂತೆ ಅನುಕೂಲವಾದ ಗಾಳಿಯ ಸಹಾಯದಿಂದ ನಾಭಿಮೂಲದಲ್ಲಿ ಕಹಳೆಯ ಅಕಾರದಲ್ಲಿ ಶಬ್ದವೆಂಬ ದ್ರವ್ಯವು ಹುಟ್ಟುತ್ತದೆ. ಅದರ ಬಣ್ಣ ಬಿಳಿ. ಆ ದ್ರವ್ಯದ ಕಾರ್‍ಯವೇ ಶಬ್ದ (ಜೈನರು ಶಬ್ದಕ್ಕೆ ದ್ರವ್ಯತ್ವವನ್ನೂ ಧವಳವರ್ಣವನ್ನೂ ಆರೋಪಿಸುತ್ತಾರೆ). ಇದರ ಜೊತೆಗೆ ಕೇಶಿರಾಜನು ಮತ್ತೂ ಒಂದು ಸೂತ್ರವನ್ನು ಸೇರಿಸಿದ್ದಾನೆ.
ತನು ವಾದ್ಯಂ ನಾಲಗೆ ವಾ
ದನದಂಡಂ ಕರ್ತೃವಾತ್ಮನವನ ಮನೋವೃ
ತ್ತಿನಿಮಿತ್ತಮಾಗಿ ಶಬ್ದಂ
ಜನಿಯಿಸುಗುಂ ಧವಳವರ್ಣಮಕ್ಷರರೂಪಂ

ದೇಹವೇ ವಾದ್ಯ. ನಾಲಗೆ ಬಾಜನೆ ಮಾಡುವ ಅಂದರೆ ವಾದ್ಯವನ್ನು ನುಡಿಸುವ ಕುಡುಹು (ದಂಡ). ಬಾಜಿಸುವವನು ಆತ್ಮ. ಅವನ ಮನಸ್ಸಿನ ಅಪೇಕ್ಷೆಯಂತೆ ಶಬ್ದವು ಬಿಳಿಯ ಬಣ್ಣದಿಂದ ಅಕ್ಷರದ ರೂಪದಲ್ಲಿ ಉತ್ಪತ್ತಿಯಾಗುತ್ತದೆ.

ಇದು ಆರುನೂರು ವರ್ಷಗಳ ಹಿಂದಿನ ಮಾತು. ಈ ನಾಲ್ಕಾರು ಶತಮಾನಗಳಲ್ಲಿ ಶರೀರಶಾಸ್ತ್ರದ ವಿಜ್ಞಾನಿಗಳು ಬಹುವಾಗಿ ಸಂಶೋಧನೆಗಳನ್ನು ನಡೆಸಿ ಈ ಬಗ್ಗೆ ಖಚಿತವಾದ ವಿವರಗಳನ್ನು ನಿರೂಪಿಸಿದ್ದಾರೆ. ಸಂಗೀತ, ನಾಟಕಾಭಿನಯ, ಭಾಷಣ ಮುಂತಾದ ಎಲ್ಲ ಕ್ರಿಯೆಗಳಿಗೂ ಬೇರೆ ಬೇರೆ ಸಿದ್ಧತೆಗಳು ಬೇಕಾದರೂ ಮೂಲಭೂತವಾಗಿ ಧ್ವನಿನಿರ್ಮಾಣ ಎಂಬುದರ ಕ್ರಿಯೆ ಒಂದೇ. ಧ್ವನಿ ನಿರ್ಮಾಣದಲ್ಲಿ ಕೆಲವು ಅಂಗಗಳು ಸಂಬಂಧ ಹೊಂದಿರುವುದನ್ನು ಅರಿತರೆ ಆಯಾ ಕ್ಷೇತ್ರದ ಸಾಧನೆಯಲ್ಲಿ ತುಂಬ ಸಹಾಯ ಒದಗುತ್ತದೆ.
ಶ್ವಾಸಕೋಶವೂ ವಪೆಯೂ ಶ್ವಾಸ ನಿಯಂತ್ರಣದಲ್ಲಿ ಸಹಾಯ ಮಾಡುವ ಅಂಗಗಳು. ಉಸಿರಿನಿಂದ ಧ್ವನಿಯು ಉತ್ಪತ್ತಿಯಾಗುತ್ತದೆ. ತುಂಬು ಉಸಿರಿನ‌ಉಚ್ಛ್ವಾಸ ನಿಶ್ವಾಸಗಳಿಂದ ಉತ್ತಮವಾದ ಧ್ವನಿ ನಿರ್ಮಾಣವು ಸಾಧ್ಯ. ಇದನ್ನು ನಾವು ನಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರಬೇಕು.
ಇಲ್ಲಿರುವ ಎರಡು ಚಿತ್ರಗಳ ಸಹಾಯದಿಂದ ಧ್ವನಿ ನಿರ್ಮಾಣದ ಮತ್ತು ಅಕ್ಷರಗಳು ಉತ್ಪತ್ತಿಯಾಗುವ ಸ್ಥಾನಗಳ ಪರಿಚಯವನ್ನು ನಾವು ಮಾಡಿಕೊಳ್ಳಬಹುದು. ಮೊದಲು ಆಯಾ ಅಂಗಗಳನ್ನು ಸಂಖ್ಯೆಯ ಸಹಾಯದಿಂದ ಗುರುತಿಸಿಕೊಳ್ಳಿ.
ವಪೆಯ ತಳಹದಿಯ ಮೇಲೆ ಗಾಳಿಯ ಸ್ತಂಭವು (Column) ಸ್ಥಾಪಿತವಾಗಿರುತ್ತದೆ. ಆ ಗಾಳಿಯು ನಮ್ಮ ಧ್ವನ್ಯಂಗಗಳ ಬಳಿಗೆ ಬರಬೇಕಾದರೆ ಈ ವಪೆಯು ಮೇಲಕ್ಕೆ ಚಲಿಸಬೇಕು. ನಾವು ಉಸಿರನ್ನು ಒಳಕ್ಕೆ ಎಳೆದುಕೊಂಡಾಗ ನಮ್ಮ ಹೊಟ್ಟೆಯ ಪಕ್ಕೆಗಳು ದೊಡ್ಡವಾಗುತ್ತವೆ. ಗುಮ್ಮಟಾಕಾರದ ವಪೆಯು (Diaphram) ಸಮತಳವಾಗುತ್ತದೆ. ಅಂದರೆ ಸಪಾಟಾಗುತ್ತದೆ. ನಾವು ಉಸಿರು ಬಿಟ್ಟಾಗ ವಪೆಯು ಹಿಂದಿನ ಆಕಾರಕ್ಕೆ ಬರುತ್ತದೆ. ಅಂದರೆ ಸಡಿಲಗೊಂಡ ವಪೆಯು ಮೇಲೆದ್ದು ಕೋಶದ ಉಸಿರನ್ನು ಹೊರಕ್ಕೆ ನೂಕುತ್ತದೆ. ಹೀಗೆ ಹೊರಕ್ಕೆ ತಳ್ಳಿದ ಗಾಳಿಯೇ ಧ್ವನಿಯ ನಿರ್ಮಾಣಕ್ಕೆ ಕಾರಣ.
ಗಾಳಿಯು ಮೇಲಕ್ಕೆ ಹೊರಟು ಧ್ವನಿ ತಂತುಗಳನ್ನು ವಿರಳಗೊಳಿಸಿ ಅವುಗಳ ನಡುವೆ ಮೇಲಕ್ಕೆ ನುಗ್ಗುತ್ತದೆ. ಗಾಳಿಯ ಚಲನೆ ಮತ್ತು ಘೋಷ ತಂತುಗಳ ಸ್ಥಿತಿಸ್ಥಾಪಕತ್ವ (Elasticity) ಇವುಗಳಿಂದ ಧ್ವನಿ ತಂತುಗಳು ಕಂಪಿಸುತ್ತವೆ. ಈ ಕಂಪನವೇ ಶಬ್ದ ನಿರ್ಮಾಣ. ಗಾಳಿಯಿಂದ ತುಂಬಿದ ಬಲೂನಿನ ಬಾಯಿಯನ್ನು ತೆರೆದಾಗ ಧ್ವನಿ ಹೇಗೆ ಉಂಟಾಗುತ್ತದೆ ಎಂಬುದನ್ನು ಗಮನಿಸಿ. ಹಾಗೆಯೇ ಮಾತಿನ ಧ್ವನಿಯೂ ಉಂಟಾಗುತ್ತದೆ. ಈಗ ಆ ಗಾಳಿಯೂ ಉಂಟಾಗುತ್ತದೆ. ಈಗ ಆ ಗಾಳಿಯು ಮುಂದುವರಿದು ಗಂಟಲು, ಬಾಯಿ, ಮೂಗುಗಳ ಮೂಲಕ ಹೊರಹೊಮ್ಮಿ ಮಾತನಾಡುವವನ ಸುತ್ತ ಗಾಳಿಯ ಒತ್ತಡದ ವ್ಯತ್ಯಾಸವನ್ನುಂಟುಮಾಡುತ್ತದೆ. ಈ ಒತ್ತಡದ ವ್ಯತ್ಯಾಸವನ್ನೇ ಧ್ವನಿತರಂಗಗಳು ಎನ್ನುತ್ತಾರೆ. ಅವು ಕೇಳುವವರ ಕಿವಿಗೆ ತಗುಲಿ ಧ್ವನಿಯು ಅನುಭವಕ್ಕೆ ಬರುತ್ತದೆ.

ಧ್ವನ್ಯಂಗಗಳು ಎಂದರೆ ಧ್ವನಿಯನ್ನು ನಿರ್ಮಾಣ ಮಾಡುವ ಅಂಗಗಳು ಎಂದು ಅರ್ಥ. ಮೊದಲು ಈ ಚಿತ್ರದಲ್ಲಿರುವ ಸ್ಥಾನಗಳನ್ನು ಗುರುತಿಸಿ. ಬಾಯಿ ಒಂದು ಕುಹರ. ಅದರ ಒಳಭಾಗದಲ್ಲಿರುವ ಚಲಿಸುವ ಅಂಗಗಳು ಆಕ್ರಮಿಸುವ ಸ್ಥಳಗಳನ್ನು ಅನುಸರಿಸಿ ಬಾಯಿಯ ಆಕಾರವು ಬದಲಾಗುತ್ತದೆ. ಈ ವ್ಯತ್ಯಾಸವು ಉಚ್ಚಾರವಾಗುವ ಶಬ್ದದ ಕಾಕು (Tone)ವನ್ನು ಬದಲು ಮಾಡಬಹುದು. ಅವೇ ನಿರ್ದಿಷ್ಟವಾದ ಧ್ವನಿಯನ್ನೂ ಉಂಟು ಮಾಡಬಹುದು (Produce or Articulate). ಈ ಅಂಗಗಳು ಹೀಗಿವೆ. ನಂಗಿಲು (Uvula), ಮೃದುತಾಲು (Soft Palate), ಕಠಿನತಾಲು (Hard Palate), ಹಲ್ಲುಗಳು (Teeth), ನಾಲಿಗೆ (Tongue), ತುಟಿಗಳು (Lips), ಮೂಗು (Nose), ಅಲ್ಲದೆ ನಾಸಾಕುಹರ (Nasal Passage) ಮತ್ತು ಬಟವೆಗಳು (Sinuses) ಶ್ವಾಸನಿಗ್ರಹಕ್ಕೂ, ಧ್ವನಿಯ ಅನುರಣನಕ್ಕೂ ಸಹಾಯಕವಾಗುತ್ತವೆ.
ಧ್ವನಿಯನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಬಹು ಸಂಕೀರ್ಣವಾದ ಕಾರ್ಯ. ಕೊರಳಿನ ಮಾಂಸಖಂಡಗಳ ಬಿಗಿಯು ಗಂಟಲಿನ ಮೇಲೆ ಪ್ರಭಾವವನ್ನು ಬೀರಬಹುದು. ಕೆಳಗಿನ ದವಡೆಯ ಚಲನೆ, ಮುಖದ ಕೆಲವು ಮಾಂಸಖಂಡಗಳು ಕೂಡ ಬಾಯಿಯ ಆಕಾರವನ್ನು ಬದಲಿಸಬಹುದು. ಇದರಿಂದ ಹೊರಡುವ ಧ್ವನಿಯು ಬದಲಾಗುತ್ತದೆ. ದೇಹದ ಮೇಲ್ಭಾಗವು ಕಂಪಿಸುತ್ತದೆ. ತಲೆಯ ಮತ್ತು ಎದೆಯ ಮೂಳೆಗಳು ಧ್ವನಿವರ್ಧಕಗಳಾಗಬಹುದು.
ಧ್ವನಿಯನ್ನು ಪ್ರಭಾವಯುತವಾಗಿ ಉಪಯೋಗಿಸುವ ಎಲ್ಲರೂ ಆ ಅಂಗಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥರಾಗಿರುತ್ತಾರೆ. ಅವರಿಂದ ಭಾಷೆಯ ನಿರ್ದಿಷ್ಟವಾದ ಮತ್ತು ಸ್ಪಷ್ಟವಾದ ಪ್ರಯೋಗ ಸಾಧ್ಯ. ಭಾವಾವೇಗ, ವಿಶೇಷಾರ್ಥಗಳುಳ್ಳ ಶಬ್ದಗಳ ಪ್ರಯೋಗ ಇವುಗಳನ್ನು ಗಮನಿಸಿದರೆ ಈ ಸಾಮರ್ಥ್ಯ ಎಷ್ಟು ಪ್ರೌಢವಾದುದು ಎಂದು ತಿಳಿದುಬರುತ್ತದೆ.
ಕನ್ನಡದ ಅಕ್ಷರಗಳನ್ನು ಉಚ್ಚಾರಣೆ ಮಾಡುವಾಗ ನಡೆಯುವ ಕ್ರಿಯೆಯನ್ನು ಸ್ವಲ್ಪ ವಿವರವಾಗಿ ತಿಳಿಯೋಣ.

ಈ ಚಿತ್ರಗಳ ವಿವರವನ್ನು ಸಂಖ್ಯೆಗಳ ಸಹಾಯದಿಂದ ಗುರುತಿಸಿಕೊಳ್ಳಿ.
ಕನ್ನಡ ಅಕ್ಷರಗಳು ಇರುವ ಪಟ್ಟಿಯನ್ನು ಪರಿಶೀಲಿಸಿ. ಕನ್ನಡದ ಅಕ್ಷರಗಳನ್ನು ಅವು ಹುಟ್ಟುವ ಸ್ಥಾನಗಳನ್ನು ಗಮನಿಸಿ ಐದು ವಿಧವಾಗಿ ವಿಂಗಡಿಸಿದ್ದಾರೆ.
೧. ಕಂಠ್ಯ, ೨. ತಾಲವ್ಯ ೩. ಮೂರ್ಧನ್ಯ, ೪. ದಂತ್ಯ, ೫. ಓಷ್ಠ್ಯ.
ಮೃದು, ಕರ್ಕಶ ಎಂದರೇನು? ಅಕ್ಷರಗಳು ಬಾಯಿಯಲ್ಲಿ ಉಚ್ಚಾರವಾಗುತ್ತವೆ. ಬಾಯಿಯ ಮೇಲ್ಭಾಗವನ್ನು ಅಂಗಳು ಅಥವಾ ಅಟ್ಟ ಎಂದು ಕರೆಯುತ್ತಾರೆ. ಆಂಗಳು ಇರುವ ಆಟ್ಟದ ಮುಂಭಾಗ ಮಾತ್ರ ನಾಲಿಗೆಯು ತಗಲುವಂತೆ ಉಚ್ಚಾರವಾಗುವ ಅಕ್ಷರಗಳು ಮೃದು. ಉದಾ. ದ, ಧ, ಣ ಇತ್ಯಾದಿಗಳು. ಅಂಗಳ ಮೇಲ್ಭಾಗಕ್ಕೆ ನಾಲಿಗೆಯು ತಗುಲದೆ ಉಚ್ಚಾರವಾಗುವ ಅಕ್ಷರಗಳು ಕರ್ಕಶ ವರ್ಣಗಳು. ಉದಾ: ಕ, ಬ, ಟ, ಡ ಇತ್ಯಾದಿಗಳು.
ಕಂಠ ಎಂದರೆ ಗಂಟಲು. ಅದರಲ್ಲಿ ಉಚ್ಚಾರಗೊಳ್ಳುವ ಅಕ್ಷರಗಳು ಕಂಠ್ಯಗಳು. ತಾಲು ಎಂದರೆ ಅಂಗಳು. ಅಲ್ಲಿ ಉಚ್ಚಾರವಾಗುವ ಅಕ್ಷರಗಳು ತಾಲವ್ಯಗಳು. ಮೂರ್ಧ ಎಂದರೆ ನೆತ್ತಿ. ಅಂಗಳಿನ ಮಧ್ಯಭಾಗ. ಅಲ್ಲಿ ಹುಟ್ಟುವ ಅಕ್ಷರಗಳು ಮೂರ್ಧನ್ಯಗಳು. ದಂತ ಎಂದರೆ ಹಲ್ಲು. ಹಲ್ಲಿನ ಬಳಿ ಉಚ್ಚಾರವಾಗುವ ಅಕ್ಷರಗಳು ದಂತ್ಯಗಳು. ಓಷ್ಠ ಎಂದರೆ ತುಟಿ. ತುಟಿಗಳಲ್ಲಿ ಉಚ್ಚಾರವಾಗುವ ಅಕ್ಷರಗಳು ಓಷ್ಠ್ಯಗಳು. ಈಗ ಅಕ್ಷರಗಳ ಪಟ್ಟಿಯನ್ನು ನೋಡಿ. ಕನ್ನಡದ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದನ್ನು ಬೇರೆ ಬೇರೆಯಾಗಿ ಅಲ್ಲಿ ತೋರಿಸಿದೆ. ಇದು ನಿಧಾನವಾಗಿ ಪ್ರತಿಯೊಂದು ಅಕ್ಷರವನ್ನೂ ಉಚ್ಚರಿಸಿ ಅದು ಹುಟ್ಟುವ ಸ್ಥಳವನ್ನು ಗುರುತಿಸುವ ಒಂದು ಪ್ರಯೋಗ. ಬೇಗ ಆಗುವ ಕೆಲಸವಲ್ಲ. ಕೆಲವು ಅಕ್ಷರಗಳು ಎರಡು ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳ ಉಚ್ಚಾರಣೆಗೆ ಎರಡು ಅಂಗಗಳ ಸಹಾಯವೂ ಬೇಕು ಎಂದು ಅರ್ಥ. ನಮ್ಮ ಭಾಷೆಯಲ್ಲಿಲ್ಲದ ಎಷ್ಟೋ ಧ್ವನಿಗಳು ಪ್ರಪಂಚದ ಇತರ ಭಾಷೆಗಳಲ್ಲಿ ಇವೆ. ಇವೆಲ್ಲವನ್ನೂ ಗುರುತಿಸುವುದಕ್ಕೆ ಭಾಷಾ ಶಾಸ್ತ್ರಜ್ಞರು The International Phonetic Alphabet ಎಂಬ ವರ್ಣಮಾಲೆಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಕ್ರಮೇಣ ತಿಳಿದುಕೊಳ್ಳಬಹುದು.
ಕೆಲವು ಪಾರಿಭಾಷಿಕ ಶಬ್ದಗಳ ವಿವರಣೆ:
ಅ. ಊಷ್ಮವರ್ಣ : ಊಷ್ಮ ಎಂದರೆ ಉಷ್ಣ, ಕಾವು ಎಂದರ್ಥ. ಶ. ಷ. ಸ.—ಈ‌ ಅಕ್ಷರಗಳ ಉಚ್ಚಾರದಲ್ಲಿ ಸ್ವಲ್ಪ ಉಷ್ಣ ನಿರ್ಮಾಣವಿದೆ ಎಂಬರ್ಥದ ಶಬ್ದ ಇದು. ಇಂಗ್ಲಿಷಿನಲ್ಲಿ ಇಂಥ ವ್ಯಂಜನಗಳನ್ನು Sibilants ಎಂದು ಕರೆಯುತ್ತಾರೆ. ಇವುಗಳಿಗೆ Whistling consonants ಎಂದೂ ಹೆಸರಿದೆ. ಅಂಗಳು ಮತ್ತು ನಾಲಗೆಗಳ ನಡುವೆ ನುಗ್ಗುವ ಗಾಳಿ ಶಿಲ್ಪಿಯ ಹಾಗೆ ಶಬ್ದವನ್ನುಂಟುಮಾಡಬಹುದು—ತುಂಬ ಗಟ್ಟಿಯಾಗಿ ಉಚ್ಚರಿಸಿದರೆ.
ಆ. ಅಂತಸ್ಥವರ್ಣಗಳು : ಯ, ರ, ಲ, ವ ಅಕ್ಷರಗಳಿಗೆ ಈ ಹ³†ಸರಿವೆ. ಇಂಗ್ಲಿಷಿನಲ್ಲಿ ಇವನ್ನು Semi vovels ಎಂದು ಕರೆಯುತ್ತಾರೆ. ಇದು ವ್ಯಂಜನವೂ ಸ್ವರವೂ ಆಗಬಹುದಾದ ಗುಣಗಳನ್ನು ಹೊಂದಿವೆ ಎಂದರ್ಥ.
ಇ. ಧ್ವನಿಪೆಟ್ಟಿಗೆ, Voice Box : ಶ್ವಾಸನಾಳದ ಮೇಲು ತುದಿ ಇದು. Adams Apple ಎನ್ನುವ ಸಾಮಾನ್ಯ ಹೆಸರು ಇದಕ್ಕೆ ಇದೆ. ಕನ್ನಡದ ಮೆಟ್ರೆ. ಇದರಲ್ಲಿ ಧ್ವನಿತಂತುಗಳು ಅಥವಾ ಘೋಷ ತಂತುಗಳು ಇವೆ. Larynx ಎನ್ನುವುದು ಪಾರಿಭಾಷಿಕ ಹೆಸರು. ಇದು ಧ್ವನಿ ತಂತುಗಳನ್ನು ರಕ್ಷಿಸುತ್ತದೆ. ಹೀಗೆ ಇತರ ವಿವರಗಳನ್ನು ತಿಳಿದು ಬರಹದಲ್ಲಿ ಇಟ್ಟುಕೊಂಡಿರಬೇಕು.
ಮಹಾಪ್ರಾಣಗಳ ಉಚ್ಚಾರಣೆಯನ್ನು ಮಾಧ್ಯಮಿಕ ಶಾಲೆಯಿಂದಲೇ ಕಲಿಸಬೇಕು. ಮಹಾಪ್ರಾಣಗಳು ಎಂದರೆ ಖ ಘ ಛ ಝ ಠ ಢ ಥ ಧ ಫ ಭ ಮತ್ತು ಹ. ಈ ಹನ್ನೊಂದು ಅಕ್ಷರಗಳ ಜೊತೆಗೆ ಶ ಷ ಸ ಎಂಬ ಅಕ್ಷರಗಳನ್ನು ಉಚ್ಚಾರ ಮಾಡುವುದನ್ನು ವಿಶೇಷ ಗಮನವಿಟ್ಟು ಹೇಳಿಕೊಡಬೇಕು.
ಅಕ್ಷರಗಳ ಉತ್ಪತ್ತಿ ಸ್ಥಾನಗಳನ್ನು ಚಿತ್ರಗಳ ಮೂಲಕ ವಿವರಿಸಿದ ಮೇಲೆ ಅಧ್ಯಾಪಕರು ಈ ಅಕ್ಷರಗಳನ್ನು ತಾವೇ ಅನೇಕ ಸಲ ಉಚ್ಚರಿಸಬೇಕು. ಬಳಿಕ ಮಹಾಪ್ರಾಣಗಳು ಬರುವ, ಅಲ್ಪಪ್ರಾಣಗಳು ಬರುವ ಎರಡು ಅಥವಾ ಮೂರು ಅಕ್ಷರಗಳ ಶಬ್ದಗಳನ್ನು ಆರಿಸಿ ಒಂದೊಂದು ಜೊತೆಯನ್ನೂ ಒಂದಾದ ಮೇಲೆ ಮತ್ತೊಂದರಂತೆ ಒಟ್ಟು ತರಗತಿಯೇ ಉಚ್ಚರಿಸುವಂತೆ DRILL ಮಾಡಿಸಬೇಕು. ಇದು DRILL ಪಾಠ. DRILL ಎಂದರೆ ಒಂದೇ ಕಾರ್‍ಯವನ್ನು ಅನೇಕ ಸಲ ಮಾಡಿಸಿ ತರಬೇತು ಕೊಡುವುದು ಎಂದು ಅರ್ಥ. ಭರತ-ಬಡವ, ಅಖಾಡ-ವಿಕಾರ, ಧನ-ದನ, ಗಾಢ-ಬಾಡ ಇತ್ಯಾದಿ ಆರಿಸಬೇಕು.
ಭರತ ಎಂಬುದನ್ನು ತರಗತಿಯ ಅರ್ಧಭಾಗ ಬಲಗಡೆಯವರು ಉಚ್ಚರಿಸಿದಮೇಲೆ ಬಡವ ಶಬ್ದವನ್ನು ಎಡಗಡೆಯ ಅರ್ಧಭಾಗ ಉಚ್ಚರಿಸಬೇಕು. ಅಧ್ಯಾಪಕ ಅವರೊಡನೆ ಉಚ್ಚರಿಸಬೇಕು. ಹೀಗೆ ಮಾಡಿದರೆ, ಪ್ರತಿ ದಿನ ೧೫ ನಿಮಿಷ ಈ DRILL ಮಾಡಿಸಿ ನೋಡಿ; ೧೫ ದಿನಗಳ ಬಳಿಕ ವಿದ್ಯಾರ್ಥಿಗಳು ಹೇಗೆ ಈ ವಿಚಾರದಲ್ಲಿ ಪರಿಣತರಾಗುತ್ತಾರೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ.